AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SDPI ನಿಷೇಧ ವಿಚಾರದಿಂದ ಸಿದ್ದರಾಮಯ್ಯಗೆ ಯಾಕೆ ವೇದನೆ? ಪ್ರತಾಪ್‌ ಸಿಂಹ ವ್ಯಂಗ್ಯ

ಮೈಸೂರು: ರಾಜ್ಯ ಸರ್ಕಾರದ SDPI ನಿಷೇಧ ಪ್ರಸ್ತಾಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋವಾಗಿ ವೇದನೆ ಪಡುತ್ತಿರುವುದು ಆಶ್ಚರ್ಯ ತಂದಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ವ್ಯಂಗವಾಡಿದ್ದಾರೆ. ಮೈಸೂರಲ್ಲಿ ಈ ಕುರಿತು ಮಾತನಾಡಿರುವ ಪ್ರತಾಪ ಸಿಂಹ, 30 ವರ್ಷದ ಗಲಾಟೆ ಕುರಿತು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಎಸ್​ಡಿಪಿಐನ 175 ಕೇಸ್ ವಾಪಸ್​ ಪಡೆದಿದ್ದೇಕೆ? ಆಗ ಈ ವಿಚಾರ ಮರೆತು ಬಿಟ್ಟರಾ ? ಆಗ ಅವರಿಗೆ ನೆನಪು ಆಗಲಿಲ್ಲವಾ? ಎಂದು ಮಾಜಿ ಮುಖ್ಯಮಂತ್ರಿ ವಿರುದ್ದ […]

SDPI ನಿಷೇಧ ವಿಚಾರದಿಂದ ಸಿದ್ದರಾಮಯ್ಯಗೆ ಯಾಕೆ ವೇದನೆ? ಪ್ರತಾಪ್‌ ಸಿಂಹ ವ್ಯಂಗ್ಯ
ಪ್ರತಾಪ್ ಸಿಂಹ, ಸಿದ್ದರಾಮಯ್ಯ
Guru
| Updated By: ಸಾಧು ಶ್ರೀನಾಥ್​|

Updated on:Aug 20, 2020 | 1:30 PM

Share

ಮೈಸೂರು: ರಾಜ್ಯ ಸರ್ಕಾರದ SDPI ನಿಷೇಧ ಪ್ರಸ್ತಾಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋವಾಗಿ ವೇದನೆ ಪಡುತ್ತಿರುವುದು ಆಶ್ಚರ್ಯ ತಂದಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ವ್ಯಂಗವಾಡಿದ್ದಾರೆ.

ಮೈಸೂರಲ್ಲಿ ಈ ಕುರಿತು ಮಾತನಾಡಿರುವ ಪ್ರತಾಪ ಸಿಂಹ, 30 ವರ್ಷದ ಗಲಾಟೆ ಕುರಿತು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಎಸ್​ಡಿಪಿಐನ 175 ಕೇಸ್ ವಾಪಸ್​ ಪಡೆದಿದ್ದೇಕೆ? ಆಗ ಈ ವಿಚಾರ ಮರೆತು ಬಿಟ್ಟರಾ ? ಆಗ ಅವರಿಗೆ ನೆನಪು ಆಗಲಿಲ್ಲವಾ? ಎಂದು ಮಾಜಿ ಮುಖ್ಯಮಂತ್ರಿ ವಿರುದ್ದ ಹರಿಹಾಯ್ದಿದ್ದಾರೆ.

ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ವಿಚಾರ ಕೂಡಾ ತನಿಖೆಯನ್ನು 6 ರಿಂತ 8 ತಿಂಗಳು ಅಥಾವಾ ಒಂದು ವರ್ಷ ತನಿಖೆ ವಿಳಂಬ ಮಾಡುವ ಹುನ್ನಾರ. ಈ ಮೂಲಕ ವ್ಯವಸ್ಥಿತವಾಗಿ ಎಸ್‌ಡಿ‌ಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ ಎಂದು ಸಿಂಹ ಸಿದ್ದು ವಿರುದ್ದ ಕಿಡಿಕಾರಿದ್ದಾರೆ.

ಕಾಂಗ್ರೆಸ್​ನಲ್ಲಿ ದಲಿತರಿಗೆ ನಿರಂತರವಾಗಿ ಒಳ ಏಟು ಬೀಳುತ್ತಿದೆ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಸಿದ್ದರಾಮಯ್ಯ. ಶ್ರೀನಿವಾಸ್ ಪ್ರಸಾದ್, ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಮುನಿಯಪ್ಪ ಅವರನ್ನ ತುಳಿದಿದ್ದೂ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರತಾಪ್‌ ಸಿಂಹ ದಲಿತ ಕಾರ್ಡ್‌ ಉಪಯೋಗಿಸಿ ವಾಗ್ದಾಳಿ ನಡೆಸಿದ್ದಾರೆ.

ಈಗಲೂ ಅಖಂಡ ಶ್ರೀನಿವಾಸ್ ಮೂರ್ತಿಗೆ ಒತ್ತಡ ಹಾಕಿ, ಸಿದ್ದು SDPI ಛೂ ಬಿಟ್ಟು ದಲಿತರ ಮೇಲೆ ದೌರ್ಜನ್ಯ ಮಾಡಿಸಿದ್ದಾರೆ. ಸಿದ್ದರಾಮಯ್ಯ ಎಲ್ಲರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಉದ್ದೇಶ ಶುದ್ದ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಬಗ್ಗೆ ಪ್ರಸ್ತಾಪಿಸಿದ ಪ್ರತಾಪ್‌ ಸಿಂಹ, ಶಾಸಕ ಜಮೀರ್ ಕರ್ನಾಟಕದ ಒವೈಸಿ ಆಗಲು ಹೊರಟಿದ್ದಾರೆ. ಗಲಭೆ ನಡೆದ ಎಲ್ಲಾ ಕಡೆ ಜಮೀರ್ ಏಕೆ ಹೋಗುತ್ತಾರೆ? ಅವರನ್ನು ನಿಯಂತ್ರಣ ಮಾಡಲು ಕಾಂಗ್ರೆಸ್‌ಗೆ ಆಗುತ್ತಿಲ್ಲ ಎಂದು ಕಾಂಗ್ರಸ್‌ ಬಗ್ಗೆ ಕಿಡಿ ಕಾರಿದ್ದಾರೆ.

ಪುಂಡ ಮುಸಲ್ಮಾನರ ಹೆಸರು ಹೇಳದಂತೆ ಅಖಂಡ ಶ್ರೀನಿವಾಸ್‌ ಮೇಲೆ ಒತ್ತಡ ಹೇರಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸ್ಲೀಪರ್ ಸೆಲ್ ಆ್ಯಕ್ಟೀವ್ ಆಗಿದ್ದು, ಕೇರಳ ಮಾದರಿಯಲ್ಲಿ ರಾಜಕೀಯ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ. ಇದು ಎಸ್‌ಡಿಪಿಐ, ಕೆಎಫ್‌ಡಿ ಮೂಲಕ ರಾಜ್ಯಕ್ಕೆ ಕಾಲಿಟ್ಟಿದೆ. ಆದರೆ ಮಟ್ಟ ಹಾಕುವ ಬದಲು ಕಾಂಗ್ರೆಸ್‌ನವರಿಂದ ಅದರ ಪೋಷಣೆಯಾಗುತ್ತಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

Published On - 1:29 pm, Thu, 20 August 20