AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈ ಕಿಸಾನ್​ ಎಂದ ಲಾರಿ ಮಾಲೀಕರು; ಸೆ. 25ರಂದು ಲಾರಿ ಓಡಾಟ ಇರುತ್ತಾ, ಇಲ್ವಾ?

ಬೆಂಗಳೂರು: ಕಿಸಾನ್ ಸಂಘರ್ಷ ಸಮಿತಿ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘವು ಭಾರತ್ ಬಂದ್‌ಗೆ ಬೆಂಬಲ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದೆ. 6-6ರವರೆಗೆ 4.50 ಲಕ್ಷ ಲಾರಿಗಳ ಓಡಾಟ ಸ್ಥಗಿತ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ಸೆ. 25ರಂದು ಭಾರತ್‌ ಬಂದ್‌ಗೆ ಕರೆ ನೀಡಿದೆ. ರಾಜ್ಯ ಲಾರಿ ಮಾಲೀಕರ ಸಂಘ ರೈತರ ಜೊತೆ ಕೈ ಜೋಡಿಸಿದೆ. ಹೀಗಾಗಿ ಸೆ.25ರಂದು ರಾಜ್ಯದ 4.50 ಲಕ್ಷ ಲಾರಿಗಳ ಓಡಾಟ […]

ಜೈ ಕಿಸಾನ್​ ಎಂದ ಲಾರಿ ಮಾಲೀಕರು; ಸೆ. 25ರಂದು ಲಾರಿ ಓಡಾಟ ಇರುತ್ತಾ, ಇಲ್ವಾ?
ಆಯೇಷಾ ಬಾನು
| Edited By: |

Updated on:Sep 23, 2020 | 10:14 AM

Share

ಬೆಂಗಳೂರು: ಕಿಸಾನ್ ಸಂಘರ್ಷ ಸಮಿತಿ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘವು ಭಾರತ್ ಬಂದ್‌ಗೆ ಬೆಂಬಲ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದೆ.

6-6ರವರೆಗೆ 4.50 ಲಕ್ಷ ಲಾರಿಗಳ ಓಡಾಟ ಸ್ಥಗಿತ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ‌ ಭಾರತ ಕಿಸಾನ್ ಸಮಿತಿ ಸೆ. 25ರಂದು ಭಾರತ್‌ ಬಂದ್‌ಗೆ ಕರೆ ನೀಡಿದೆ. ರಾಜ್ಯ ಲಾರಿ ಮಾಲೀಕರ ಸಂಘ ರೈತರ ಜೊತೆ ಕೈ ಜೋಡಿಸಿದೆ. ಹೀಗಾಗಿ ಸೆ.25ರಂದು ರಾಜ್ಯದ 4.50 ಲಕ್ಷ ಲಾರಿಗಳ ಓಡಾಟ ಇರಲ್ಲ. ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಲಾರಿ ಓಡಾಟವನ್ನು ಸ್ಥಗಿತ ಮಾಡಲಾಗುತ್ತೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸ್ಪಷ್ಟಪಡಿಸಿದ್ದಾರೆ.

ಹೊರರಾಜ್ಯದಿಂದ ಬರುವ ಲಾರಿಗಳು ಗಡಿಯಲ್ಲೇ ಇರುತ್ತವೆ. ಸೆ.25ರಂದು ರಾಜ್ಯದೊಳಗೆ ಲಾರಿಗಳು ಪ್ರವೇಶ ಮಾಡಲ್ಲ. ರೈತರ ಪ್ರತಿಯೊಂದು ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಬಂದ್​ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

Published On - 10:07 am, Wed, 23 September 20