‘ಉಮೇಶ್ ಕತ್ತಿಯವ್ರೇ.. ನಿಮ್ಮದೇ ಒಂದು ರಾಜ್ಯ ಕಟ್ಟಿ; ಅಲ್ಲಿ ನೀವೇ ಸಿಎಂ ಆದಾಗ ಇಂಥ ತುಘಲಕ್​​ ದರ್ಬಾರ್​ ನಡೆಸಿ’

|

Updated on: Feb 15, 2021 | 9:25 PM

Siddaramaiah: ಸಚಿವ ಉಮೇಶ್​ ಕತ್ತಿಯವರೇ ನಿಮ್ಮದೇ ಒಂದು ರಾಜ್ಯ ಕಟ್ಟಿ. ನೀವೇ ಸಿಎಂ ಆದಾಗ ಇಂತಹ ತುಘಲಕ್​​ ದರ್ಬಾರ್​ ನಡೆಸಿ. ಆದರೆ, ಈಗ ಕಷ್ಟಪಟ್ಟು ಗಳಿಸಿರುವ ಮಂತ್ರಿಸ್ಥಾನದಲ್ಲಿ ಕುಳಿತು ರಾಜ್ಯದ ಜನತೆಗೆ ಒಳ್ಳೆಯದನ್ನ ಮಾಡಿ ಎಂದು ಹೇಳಿದ್ದಾರೆ.

‘ಉಮೇಶ್ ಕತ್ತಿಯವ್ರೇ.. ನಿಮ್ಮದೇ ಒಂದು ರಾಜ್ಯ ಕಟ್ಟಿ; ಅಲ್ಲಿ ನೀವೇ ಸಿಎಂ ಆದಾಗ ಇಂಥ ತುಘಲಕ್​​ ದರ್ಬಾರ್​ ನಡೆಸಿ’
ಸಿದ್ದರಾಮಯ್ಯ
Follow us on

ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ದವರು BPL ಕಾರ್ಡ್ ಹಿಂದಿರುಗಿಸಿ ಎಂಬ ಸಚಿವ ಉಮೇಶ್​ ಕತ್ತಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಟ್ವಿಟರ್​ ಮೂಲಕ ಸಚಿವರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಸಚಿವ ಉಮೇಶ್​ ಕತ್ತಿಯವರೇ ನಿಮ್ಮದೇ ಒಂದು ರಾಜ್ಯ ಕಟ್ಟಿ. ನೀವೇ ಸಿಎಂ ಆದಾಗ ಇಂತಹ ತುಘಲಕ್​​ ದರ್ಬಾರ್​ ನಡೆಸಿ. ಆದರೆ, ಈಗ ಕಷ್ಟಪಟ್ಟು ಗಳಿಸಿರುವ ಮಂತ್ರಿಸ್ಥಾನದಲ್ಲಿ ಕುಳಿತು ರಾಜ್ಯದ ಜನತೆಗೆ ಒಳ್ಳೆಯದನ್ನ ಮಾಡಿ ಎಂದು ಹೇಳಿದ್ದಾರೆ.

‘ನಿಮ್ಮ ಅಧಿಕಪ್ರಸಂಗತನದ ವಿರುದ್ಧ ಜನ ಸಿಟ್ಟಿಗೆದ್ದು ಕತ್ತಿ ಬೀಸಿದ್ರೆ’
ನಿಮ್ಮ ಅಧಿಕಪ್ರಸಂಗತನದ ವಿರುದ್ಧ ಜನ ಸಿಟ್ಟಿಗೆದ್ದು ಕತ್ತಿ ಬೀಸಿದ್ರೆ ಇದ್ದ ಕುರ್ಚಿನೂ ಬಿಡಬೇಕಾದೀತು ಎಂದು ಟ್ವೀಟ್​ ಮೂಲಕ ಉಮೇಶ್​​ ಕತ್ತಿಗೆ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಆಹಾರ ಸಚಿವ ಉಮೇಶ್ ಕತ್ತಿ ನಿನ್ನೆ ಟಿವಿ, ಫ್ರಿಡ್ಜ್, ಬೈಕ್ ಇದ್ದವರು BPL ಕಾರ್ಡ್ ಹಿಂದಿರುಗಿಸಿ ಎಂಬ ಹೇಳಿಕೆ ಕೊಟ್ಟು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ: Siddaramaiah | ನಾನು ಮೊನ್ನೆ ಟೈಲರ್​​ ಬಳಿ ನನ್ನ ಎದೆ ಚೆಕ್​ ಮಾಡಿಸಿದೆ.. ನಂದು 46 ಇಂಚಿನ ಎದೆ ಎಂದ ಸಿದ್ದರಾಮಯ್ಯ

Siddaramaiah | ಅಭಿವೃದ್ಧಿ ಕೆಲಸ ಮಾಡಿದ ನರೇಂದ್ರ ಮೋದಿ ಎಲೆಕ್ಷನ್​ನಲ್ಲಿ ಮತ್ತೆ ಸೋಲಬೇಕಾ? -ಮತ್ತೆ ಪ್ರಧಾನಿ ಮೋದಿ ಜಪ ಮಾಡಿದ ಸಿದ್ದರಾಮಯ್ಯ!

Published On - 9:21 pm, Mon, 15 February 21