ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು […]

ಪೀಣ್ಯಾದಲ್ಲಿ ಮಹಿಳಾ ಉದ್ಯೋಗಿಗಳು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದು ಹೀಗೆ
ಸಾಧು ಶ್ರೀನಾಥ್​

Updated on: May 04, 2020 | 2:14 PM

ಗಲಾಟೆ, ಹಿಂಸಾಚಾರದಂತಹ ಯಾವುದೇ ವಿಕೋಪ, ವ್ಯತಿರಿಕ್ತ ಸಂದರ್ಭಗಳು ಎದುರಾದಾಗ ಮೊದಲು ಅದಕ್ಕೆ ತುತ್ತಾಗುವುದೇ ಶೋಷಿತ ವರ್ಗ ಎನಿಸಿರುವ ಗಾರ್ಮೆಂಟ್ ವರ್ಕರ್ಸ್​! ಆದ್ರೆ ಪರಿಸ್ಥಿತಿ ಎಂಥದ್ದೇ ಇರಲಿ ಈ ಹೆಣ್ಮಕ್ಕಳು ತಮ್ಮ ಸಂಸಾರದ ನೊಗ ಭಾರವನ್ನು ಶಿಸ್ತುಬದ್ಧವಾಗಿ ಹೊರುತ್ತಾರೆ. ಈ ದರಿದ್ರ ಕೊರೊನಾ ಕಾಲದಲ್ಲಿಯೂ ಅಷ್ಟೇ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಭಾರೀ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅದೂ 40 ದಿನಗಳಿಂದ. ಪರಿಸ್ಥಿತಿ ಹೀರುವಾಗ ಸರ್ಕಾರ ಸ್ವಲ್ಪ ದಯೆ ತೋರಿ ಗಾರ್ಮೆಂಟ್​ಗಳು ಕೆಲಸ ಶುರು ಮಾಡಬಹುದು ಎಂದಿದ್ದೇ ತಡ, ಮಹಿಳಾ ಉದ್ಯೋಗಿಗಳು ಸಾಲುಗಟ್ಟಿ ತಮ್ಮ ಅನ್ನದಾತ ಸಂಸ್ಥೆಗಳತ್ತ ಹೆಜ್ಜೆಹಾಕಿದ್ದಾರೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾದ ಪೀಣ್ಯಾದಲ್ಲಿಯೂ ಇಂದು ಇಂತಹುದೆ ಪರಿಸ್ಥಿತಿ ಕಂಡುಬಂದಿದೆ. ಆದ್ರೆ ಇಲ್ಲಿ ಆ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಮೆರೆದಿರುವುದು ಎಲ್ಲೆಡೆ ಪ್ರಶಂಸೆಗೆ ಗುರಿಯಾಗಿದೆ. ಪ್ರಧಾನವಾಗಿ ಕೊರೊನಾ ವಿರುದ್ಧ ಸರ್ಕಾರ ಸಾರಿರುವ ಯುದ್ಧದಲ್ಲಿ ಸಾಮಾಜಿಕ ಅಂತರ, ಶುಷಿತ್ವವನ್ನು ಆದ್ಯವಾಗಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಗಾರ್ಮೆಂಟ್ ಮಹಿಳಾ ಉದ್ಯೋಗಿಗಳು ಅಷ್ಟೇ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾಪಾಡಿರುವುದನ್ನು ಕೆಳಗಿನ ದೃಶ್ಯಗಳಲ್ಲಿ ಕಾಣಬಹುದು.

Published On - 2:13 pm, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us