AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ. ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ […]

ಕಟ್ಟು ಮಸ್ತಾಗಿ ದೇಹ ದಂಡಿಸೋಕೆ ಜಿಮ್​ಗಳು ಓಪನ್.. ನಗರದಲ್ಲಿ ಭರ್ಜರಿ ತಯಾರಿ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Jul 30, 2020 | 9:55 AM

Share

ಬೆಂಗಳೂರು: ಅನ್​ಲಾಕ್ 3.0 ನಲ್ಲಿ ಜಿಮ್‌ ತೆರೆಯಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಕೊರೊನಾ ಸಂಕಷ್ಟದಿಂದ ಬಂದ್ ಆಗಿದ್ದ ಜಿಮ್ ಬಾಗಿಲು ಈಗ ತೆರೆಯುತ್ತಿವೆ. ಜಿಮ್​ಗಳಿಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿದ್ದ‌ವರು ಮತ್ತೆ ಜಿಮ್​ಗಳಲ್ಲಿ ತಮ್ಮ ವ್ಯಾಯಾಮ ಶುರು ಮಾಡಬಹುದು. ಹೀಗಾಗಿ ಸದ್ಯ ನಗರದಲ್ಲಿ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತೆ ಕ್ರಮಗಳ ಜೊತೆ ಜಿಮ್‌ ಓಪನಿಂಗ್​ಗೆ ಭರ್ಜರಿ ತಯಾರಿ ಮಾಡ್ಕೊತಿದ್ದಾರೆ.

ಅನ್​ಲಾಕ್ ಮಾಡುದ್ರೂ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಸರ್ಕಾರದ ಕೆಲ ನಿಯಮಗಳನ್ನು ಪಾಲಿಸಲೇ ಬೇಕು. ಹಾಗಾಗಿ ಜಿಮ್​ನಲ್ಲಿ ಬ್ಯಾಚ್​ಗಳ ಮೂಲಕ ಕಡಿಮೆ ಜನ್ರು ಬರುಬಂತೆ ನೋಡಿಕೊಳ್ಳೋಕೆ ಪ್ಲಾನ್ ಮಾಡಲಾಗಿದೆ. ಜಿಮ್​ಗೆ ಬರುವವರು ಸ್ಯಾನಿಟೈಸರ್, ಮಾಸ್ಕ್ ಬಳಸುವುದು ಕಡ್ಡಾಯ. 1 ಘಂಟೆಗೆ 10 ರಿಂದ 15 ಜನ್ರಿಗೆ ಜಿಮ್ ಮಾಡೋಕೆ ಅವಕಾಶ ನೀಡಲಾಗುತ್ತೆ.

ಕೊರೊನಾ ಹೊಡೆತಕ್ಕೆ ಸಿಕ್ಕಿ ನಲುಗಿದ್ದ ಜಿಮ್ ಉದ್ಯಮ‌ ಈಗ ಚೇತರಿಸಿಕೊಳ್ಳೋಕೆ ತಯಾರಿ ನಡೆಸಿದೆ. ಇಷ್ಟು ದಿನ ಸುಮ್ಮನಿದ್ದವರು ಈಗ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ಮಾಲೀಕರು ತಮ್ಮ ಜಿಮ್​ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಸ್ವಚ್ಚ ಮಾಡಿ ಸಿದ್ದತೆ ಮಾಡಿಕೊಳ್ತಿದ್ದಾರೆ.

Published On - 8:53 am, Thu, 30 July 20

ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ