AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾತ್ರೆ ಕೋಣ’ ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ […]

'ಜಾತ್ರೆ ಕೋಣ' ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 18, 2019 | 1:20 PM

Share

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ.

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ ಬಾರಿ ಎಲ್ಲರ ಮುಂದೆಯೂ ಹೇಳಿದ್ದಾನೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈಗ ರಮೇಶ್​ ಕಾಂಗ್ರೆಸ್​ಗೆ ಬರಲ್ಲ, ಮುಂದೆ ಬರಬಹುದು. ಸದ್ಯಕ್ಕೆ ಸಾಲ ತೀರಿಸಬೇಕು, ದುಡ್ಡು ಮಾಡಲು 3-4 ವರ್ಷ ಆಗುತ್ತೆ. ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ದುಡ್ಡು ಮಾಡೋದೆ ರಮೇಶ್ ಜಾರಕಿಹೊಳಿ‌ ಕೆಲಸ. ಬೇರೆಯವರು ಸೇವೆ‌ ಮಾಡಲು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ರಾಜಕೀಯ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.

ಜಾತ್ರೆ ಕೋಣನಂತಾಗಿದೆ ರಮೇಶನ ಪರಿಸ್ಥಿತಿ: ಜಾತ್ರೆಯಲ್ಲಿ ಕೋಣ ಕಡಿಯೋಕ್ಕೆ ಅದನ್ನು ನಾಲ್ಕಾರು ದಿನಗಳ ಕಾಲ ಸಜ್ಜಾಗಿಸುತ್ತಾರೆ. ಅದು ವೀಕ್ ಆಗ್ಲಿ ಅಂತಾ ಅದಕ್ಕೆ ಸುಣ್ಣದ ನೀರು ಕುಡಿಸುತ್ತಾರೆ. ಇಲ್ಲೂ ಅಷ್ಟೇ ರಮೇಶನಿಗೆ ಸುಣ್ಣದ ನೀರು ಕುಡಿಸುತ್ತಿದ್ದಾರೆ. ಅವನನ್ನು ವೀಕ್ ಮಾಡುತ್ತಿದ್ದಾರೆ ಎಂದೂ ಸತೀಶ್ ಇದೇ ಸಂದರ್ಭದಲ್ಲಿ ಹೇಳಿದರು.

Published On - 1:09 pm, Fri, 18 October 19

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ