AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾತ್ರೆ ಕೋಣ’ ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ […]

'ಜಾತ್ರೆ ಕೋಣ' ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್
ಸಾಧು ಶ್ರೀನಾಥ್​
|

Updated on:Oct 18, 2019 | 1:20 PM

Share

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ.

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ ಬಾರಿ ಎಲ್ಲರ ಮುಂದೆಯೂ ಹೇಳಿದ್ದಾನೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈಗ ರಮೇಶ್​ ಕಾಂಗ್ರೆಸ್​ಗೆ ಬರಲ್ಲ, ಮುಂದೆ ಬರಬಹುದು. ಸದ್ಯಕ್ಕೆ ಸಾಲ ತೀರಿಸಬೇಕು, ದುಡ್ಡು ಮಾಡಲು 3-4 ವರ್ಷ ಆಗುತ್ತೆ. ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ದುಡ್ಡು ಮಾಡೋದೆ ರಮೇಶ್ ಜಾರಕಿಹೊಳಿ‌ ಕೆಲಸ. ಬೇರೆಯವರು ಸೇವೆ‌ ಮಾಡಲು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ರಾಜಕೀಯ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.

ಜಾತ್ರೆ ಕೋಣನಂತಾಗಿದೆ ರಮೇಶನ ಪರಿಸ್ಥಿತಿ: ಜಾತ್ರೆಯಲ್ಲಿ ಕೋಣ ಕಡಿಯೋಕ್ಕೆ ಅದನ್ನು ನಾಲ್ಕಾರು ದಿನಗಳ ಕಾಲ ಸಜ್ಜಾಗಿಸುತ್ತಾರೆ. ಅದು ವೀಕ್ ಆಗ್ಲಿ ಅಂತಾ ಅದಕ್ಕೆ ಸುಣ್ಣದ ನೀರು ಕುಡಿಸುತ್ತಾರೆ. ಇಲ್ಲೂ ಅಷ್ಟೇ ರಮೇಶನಿಗೆ ಸುಣ್ಣದ ನೀರು ಕುಡಿಸುತ್ತಿದ್ದಾರೆ. ಅವನನ್ನು ವೀಕ್ ಮಾಡುತ್ತಿದ್ದಾರೆ ಎಂದೂ ಸತೀಶ್ ಇದೇ ಸಂದರ್ಭದಲ್ಲಿ ಹೇಳಿದರು.

Published On - 1:09 pm, Fri, 18 October 19

ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?