AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾತ್ರೆ ಕೋಣ’ ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ […]

'ಜಾತ್ರೆ ಕೋಣ' ರಮೇಶ್ ಜಾರಕಿಹೊಳಿ ಸಾಲಬಾಧೆ ತಾಳದೆ ಪಕ್ಷಾಂತರ: ಸತೀಶ್
ಸಾಧು ಶ್ರೀನಾಥ್​
|

Updated on:Oct 18, 2019 | 1:20 PM

Share

ಬೆಳಗಾವಿ: ಅತ್ತ ಬಡ ಬೋರೇಗೌಡ ರೈತಾಪಿ ಜನ ಸಾಲಬಾಧೆ ತಾಳದೆ ಜೀವಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪಿದ್ದರೆ ಇತ್ತ, ಹುಣಸೂರಿನಿಂದ ಹಿಡಿದು ಬೆಳಗಾವಿವರೆಗಿನ ರಾಜಕಾರಣಿಗಳು ಸ್ವತಃ ತಾವೂ ಸಾಲದ ಚಕ್ರತುಳಿತಕ್ಕೆ ಸಿಲುಕಿದಾಗ ಪಕ್ಷಾಂತರದ ಮೊರೆಹೋಗುವ ಪ್ರವೃತ್ತಿ ಕಾಣಿಸಿಕೊಳ್ಳುತ್ತಿದೆ.

ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಪೈಕಿ ಸತೀಶ್ ಜಾರಕಿಹೊಳಿ ತಮ್ಮ ಸೋದರ ರಮೇಶ್ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಸೋದರ ರಮೇಶ್, ಬಿಜೆಪಿಗೆ ಹೋಗುವ ಮುನ್ನ.. ಸಾಲ ಇದೆ. ಅದನ್ನ ತೀರಿಸಿದ್ರೆ ಕಾಂಗ್ರೆಸ್​ಗೆ ಬರುತ್ತೇನೆ. ರಮೇಶ್, ಇದನ್ನ ಅನೇಕ ಬಾರಿ ಎಲ್ಲರ ಮುಂದೆಯೂ ಹೇಳಿದ್ದಾನೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈಗ ರಮೇಶ್​ ಕಾಂಗ್ರೆಸ್​ಗೆ ಬರಲ್ಲ, ಮುಂದೆ ಬರಬಹುದು. ಸದ್ಯಕ್ಕೆ ಸಾಲ ತೀರಿಸಬೇಕು, ದುಡ್ಡು ಮಾಡಲು 3-4 ವರ್ಷ ಆಗುತ್ತೆ. ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ದುಡ್ಡು ಮಾಡೋದೆ ರಮೇಶ್ ಜಾರಕಿಹೊಳಿ‌ ಕೆಲಸ. ಬೇರೆಯವರು ಸೇವೆ‌ ಮಾಡಲು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ರಾಜಕೀಯ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.

ಜಾತ್ರೆ ಕೋಣನಂತಾಗಿದೆ ರಮೇಶನ ಪರಿಸ್ಥಿತಿ: ಜಾತ್ರೆಯಲ್ಲಿ ಕೋಣ ಕಡಿಯೋಕ್ಕೆ ಅದನ್ನು ನಾಲ್ಕಾರು ದಿನಗಳ ಕಾಲ ಸಜ್ಜಾಗಿಸುತ್ತಾರೆ. ಅದು ವೀಕ್ ಆಗ್ಲಿ ಅಂತಾ ಅದಕ್ಕೆ ಸುಣ್ಣದ ನೀರು ಕುಡಿಸುತ್ತಾರೆ. ಇಲ್ಲೂ ಅಷ್ಟೇ ರಮೇಶನಿಗೆ ಸುಣ್ಣದ ನೀರು ಕುಡಿಸುತ್ತಿದ್ದಾರೆ. ಅವನನ್ನು ವೀಕ್ ಮಾಡುತ್ತಿದ್ದಾರೆ ಎಂದೂ ಸತೀಶ್ ಇದೇ ಸಂದರ್ಭದಲ್ಲಿ ಹೇಳಿದರು.

Published On - 1:09 pm, Fri, 18 October 19

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್