AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯವಿಟ್ಟು Help ಮಾಡಿ Please ಅಂತಾ ರಾಜಭವನಕ್ಕೆ ಬಂದ ಪೇಷಂಟ್​, ಕುಟುಂಬಸ್ಥರು

ಬೆಂಗಳೂರು: ರಾಜಧಾನಿಗೆ ಸೋಂಕಿನ ಸುನಾಮಿಯೇ ಬಂದು ಅಪ್ಪಳಿಸಿದಂತಾಗಿದೆ. ಎಲ್ಲೆಡೆಯೂ ಆಸ್ಪತ್ರೆಗಳಲ್ಲಿ ಕೊವಿಡ್​ ಮತ್ತು ಇತರೆ ರೋಗಿಗಳನ್ನ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ನಗರದ ಪೇಷಂಟ್​ಗಳು ಪರದಾಡುವ ಸ್ಥಿತಿ ಎದುರಾಗಿದೆ. ಅಂತೆಯೇ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬನಿಗೆ ಆಸ್ಪತ್ರೆಯಲ್ಲಿ ಅಡ್ಮಿಷನ್​ ಸಿಗದೆ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. 80 ವರ್ಷದ ವೃದ್ದನನ್ನ ಅಡ್ಮಿಟ್​ ಮಾಡಲು ಆತನ ಕುಟುಂಬಸ್ಥರ ಬೆಳಗ್ಗೆಯಿಂದ 3-4 ಆಸ್ಪತ್ರೆಗಳನ್ನ  ಸುತ್ತಾಡಿದ್ದರು. ಆದರೆ, ಯಾರು ಕೂಡ ವೃದ್ಧನನ್ನು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಮನನೊಂದ ವೃದ್ಧನ ಕುಟುಂಬಸ್ಥರು ಕೊನೆಗೆ ಆತನನ್ನ ಌಂಬುಲೆನ್ಸ್​​ನಲ್ಲೇ ರಾಜಭವನಕ್ಕೆ […]

ದಯವಿಟ್ಟು Help ಮಾಡಿ Please ಅಂತಾ ರಾಜಭವನಕ್ಕೆ ಬಂದ ಪೇಷಂಟ್​, ಕುಟುಂಬಸ್ಥರು
KUSHAL V
|

Updated on:Jul 19, 2020 | 1:10 PM

Share

ಬೆಂಗಳೂರು: ರಾಜಧಾನಿಗೆ ಸೋಂಕಿನ ಸುನಾಮಿಯೇ ಬಂದು ಅಪ್ಪಳಿಸಿದಂತಾಗಿದೆ. ಎಲ್ಲೆಡೆಯೂ ಆಸ್ಪತ್ರೆಗಳಲ್ಲಿ ಕೊವಿಡ್​ ಮತ್ತು ಇತರೆ ರೋಗಿಗಳನ್ನ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ನಗರದ ಪೇಷಂಟ್​ಗಳು ಪರದಾಡುವ ಸ್ಥಿತಿ ಎದುರಾಗಿದೆ. ಅಂತೆಯೇ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬನಿಗೆ ಆಸ್ಪತ್ರೆಯಲ್ಲಿ ಅಡ್ಮಿಷನ್​ ಸಿಗದೆ ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.

80 ವರ್ಷದ ವೃದ್ದನನ್ನ ಅಡ್ಮಿಟ್​ ಮಾಡಲು ಆತನ ಕುಟುಂಬಸ್ಥರ ಬೆಳಗ್ಗೆಯಿಂದ 3-4 ಆಸ್ಪತ್ರೆಗಳನ್ನ  ಸುತ್ತಾಡಿದ್ದರು. ಆದರೆ, ಯಾರು ಕೂಡ ವೃದ್ಧನನ್ನು ದಾಖಲಿಸಿಕೊಂಡಿರಲಿಲ್ಲ. ಇದರಿಂದ ಮನನೊಂದ ವೃದ್ಧನ ಕುಟುಂಬಸ್ಥರು ಕೊನೆಗೆ ಆತನನ್ನ ಌಂಬುಲೆನ್ಸ್​​ನಲ್ಲೇ ರಾಜಭವನಕ್ಕೆ ಕರೆತಂದರು.

ದಯಮಾಡಿ ಯಾರಾದ್ರೂ ನಮಗೆ ಸಹಾಯ ಮಾಡಿ ಎಂದು ಗೇಟ್​ ಬಳಿಯಿದ್ದ ಭದ್ರತಾ ಸಿಬ್ಬಂದಿಗೆ ಮೊರೆಯಿಟ್ಟರು. ಕೊನೆಗೆ ಇವರ ಮನವಿಗೆ ಸ್ಪಂದಿಸಿದ ರಾಜಭವನದ ಭದ್ರತಾ ಸಿಬ್ಬಂದಿ ವೃದ್ಧನನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಹೀಗಾಗಿ, ಕುಟುಂಬಸ್ಥರು ಸಂಜಯ್ ಗಾಂಧಿ ಆಸ್ಪತ್ರೆಗೆ ತೆರಳಿ ವೃದ್ಧರನ್ನು ಅಲ್ಲಿ ದಾಖಲಿಸಿದರು.

Published On - 1:08 pm, Sun, 19 July 20