
ಶಿವಮೊಗ್ಗ: ವಿಜಯದಶಮಿಯ ಪ್ರಯುಕ್ತವಾಗಿ ನಗರದಲ್ಲಿ ನಡೆಯುತ್ತಿರುವ ದಸರಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ಅದ್ದೂರಿ ಚಾಲನೆ ದೊರೆಯಿತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮೆರವಣಿಗೆ ಆರಂಭವಾಯಿತು.
ದೇವರಿಗೆ ಮೊದಲು ಪ್ರಾರ್ಥನೆ ಸಲ್ಲಿಸಿದ ಸಚಿವರು ನಂತರ ಮೆರವಣಿಗೆಗೆ ಚಾಲನೆ ನೀಡಿದರು. ದಸರಾ ಮೆರವಣಿಗೆಯಲ್ಲಿ 3 ಆನೆಗಳು ಪಾಲ್ಗೊಂಡವು. ಆನೆಗಳಿಗೆ ಪುಷ್ಪವೃಷ್ಟಿಯ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.