Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ತು ರಾಜ್ಯದ ಅಣೆಕಟ್ಟೆಗೆ ಹಾಕಿರೋ ಬೋರ್ಡ್.. ಎಲ್ಲಿ?

ವಿಜಯಪುರ: ಕೃಷ್ಣಾ ನದಿಯನ್ನ ಉತ್ತರ ಕರ್ನಾಟಕದ ಜೀವನಾಡಿ ಅಂತಾ ಕರೆಯಬಹುದು. ಇಂತಾ ಕೃಷ್ಣಾ ನದಿಗೆ ಅಡ್ಡಲಾಗಿ ಹಲವಾರು ಅಣೆಕಟ್ಟುಗಳನ್ನ ನಿರ್ಮಿಸಲಾಗಿದೆ. ಇದ್ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿರೋ ಲಾಲ್​ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಪ್ರಮುಖ ಅಣೆಕಟ್ಟುಗಳಲ್ಲಿ ಒಂದು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಈ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದ ಕಾರಣಕ್ಕೆ, ಅವರ ಹೆಸರನ್ನೇ ಈ ಅಣೆಕಟ್ಟೆಗೆ ಇಡಲಾಗಿದೆ. ಆದ್ರೆ, ಜನ ಮಾತ್ರ ಇದನ್ನ ಆಲಮಟ್ಟಿ ಡ್ಯಾಂ ಅಂತಲೇ ಕರೀತಾರೆ. […]

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ತು ರಾಜ್ಯದ ಅಣೆಕಟ್ಟೆಗೆ ಹಾಕಿರೋ ಬೋರ್ಡ್.. ಎಲ್ಲಿ?
Follow us
ಆಯೇಷಾ ಬಾನು
|

Updated on: Aug 22, 2020 | 7:35 AM

ವಿಜಯಪುರ: ಕೃಷ್ಣಾ ನದಿಯನ್ನ ಉತ್ತರ ಕರ್ನಾಟಕದ ಜೀವನಾಡಿ ಅಂತಾ ಕರೆಯಬಹುದು. ಇಂತಾ ಕೃಷ್ಣಾ ನದಿಗೆ ಅಡ್ಡಲಾಗಿ ಹಲವಾರು ಅಣೆಕಟ್ಟುಗಳನ್ನ ನಿರ್ಮಿಸಲಾಗಿದೆ. ಇದ್ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿರೋ ಲಾಲ್​ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಪ್ರಮುಖ ಅಣೆಕಟ್ಟುಗಳಲ್ಲಿ ಒಂದು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಈ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದ ಕಾರಣಕ್ಕೆ, ಅವರ ಹೆಸರನ್ನೇ ಈ ಅಣೆಕಟ್ಟೆಗೆ ಇಡಲಾಗಿದೆ.

ಆದ್ರೆ, ಜನ ಮಾತ್ರ ಇದನ್ನ ಆಲಮಟ್ಟಿ ಡ್ಯಾಂ ಅಂತಲೇ ಕರೀತಾರೆ. ಹೀಗಾಗಿ, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಡ್ಯಾಂಗೆ ದೊಡ್ಡದಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಅಂತಾ ಬೋರ್ಡ್ ಹಾಕಿಸಲು, 2013ರಲ್ಲಿ ತೀರ್ಮಾನಿಸಿದ್ರು. ಈ ಬೋರ್ಡ್​ 588 ಸ್ಕ್ವೇರ್ ಮೀಟರ್​ನಷ್ಟಿದೆ. 3 ಡಿ ಮೆಟಾಲಿಕ್ ತಂತ್ರಜ್ಞಾನದಿಂದ ಬೋರ್ಡ್ ತಯಾರಿಸಲಾಗಿದೆ. ಹೀಗೆ ತಯಾರಿಸಿರೋ ಬೋರ್ಡ್, ಲಿಮ್ಕಾ ಬುಕ್ ಆಫ್​ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದೆ.

ಈ ಬೋರ್ಡ್​ ಮೂಲಕ ಶಾಸ್ತ್ರೀಜಿ ಹೆಸರು, ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಲು ನೆರವಾಗುತ್ತಿದೆ. ಇಲ್ಲಿಗೆ ಆಗಮಿಸೋ ಪ್ರವಾಸಿಗರು ಬೃಹದಾಕಾರದ ಬೋರ್ಡ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡ್ಯಾಂ ಕ್ರಸ್ಟ್​ಗೇಟ್​ಗಳಿಗೆ ಬಣ್ಣ ಬಣ್ಣದ ಲೈಟಿಂಗ್ ಅಳವಡಿಸಲಾಗಿದೆ. ಇದೂ ಸಹ ಪ್ರವಾಸಿಗರನ್ನು ಸೆಳೆಯುತ್ತಿದೆ.

ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ ಹಾಕಿರುವ ಬೋರ್ಡ್, ಲಿಮ್ಕಾ ಬುಕ್ ಆಫ್​ ರೆಕಾರ್ಡ್ಸ್​ಗೆ ಸೇರಿರೋದು ವಿಜಯಪುರದ ಹಿರಿಮೆಗೆ ಮತ್ತೊಂದು ಗರಿ ಸೇರಿದಂತಾಗಿದೆ. ಜೊತೆಗೆ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಹೆಸರನ್ನ ಉಳಿಸೋ ಕಾರ್ಯವನ್ನ ಕೆಬಿಜೆಎನ್​ಎಲ್ ಅಧಿಕಾರಿಗಳು ಮಾಡಿರೋದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.