ವಿಜಯಪುರ: ಕೃಷ್ಣಾ ನದಿಯನ್ನ ಉತ್ತರ ಕರ್ನಾಟಕದ ಜೀವನಾಡಿ ಅಂತಾ ಕರೆಯಬಹುದು. ಇಂತಾ ಕೃಷ್ಣಾ ನದಿಗೆ ಅಡ್ಡಲಾಗಿ ಹಲವಾರು ಅಣೆಕಟ್ಟುಗಳನ್ನ ನಿರ್ಮಿಸಲಾಗಿದೆ. ಇದ್ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿರೋ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಪ್ರಮುಖ ಅಣೆಕಟ್ಟುಗಳಲ್ಲಿ ಒಂದು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಈ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದ ಕಾರಣಕ್ಕೆ, ಅವರ ಹೆಸರನ್ನೇ ಈ ಅಣೆಕಟ್ಟೆಗೆ ಇಡಲಾಗಿದೆ.
ಈ ಬೋರ್ಡ್ ಮೂಲಕ ಶಾಸ್ತ್ರೀಜಿ ಹೆಸರು, ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಲು ನೆರವಾಗುತ್ತಿದೆ. ಇಲ್ಲಿಗೆ ಆಗಮಿಸೋ ಪ್ರವಾಸಿಗರು ಬೃಹದಾಕಾರದ ಬೋರ್ಡ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡ್ಯಾಂ ಕ್ರಸ್ಟ್ಗೇಟ್ಗಳಿಗೆ ಬಣ್ಣ ಬಣ್ಣದ ಲೈಟಿಂಗ್ ಅಳವಡಿಸಲಾಗಿದೆ. ಇದೂ ಸಹ ಪ್ರವಾಸಿಗರನ್ನು ಸೆಳೆಯುತ್ತಿದೆ.