AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ

Facebook Australia: ಆಸ್ಟ್ರೇಲಿಯನ್ನರಿಗೆ ಸುದ್ದಿ ಶೇರ್ ಮಾಡಲು ನಿರ್ಬಂಧಿಸಿದ ನಂತರ ಫೇಸ್​ಬುಕ್ ವಿಶ್ವದ ಗಮನಸೆಳೆದಿತ್ತು. ಇದೀಗ ಮಾಧ್ಯಮ ಸಂಸ್ಥೆಗಳು, ಆಸ್ಟ್ರೇಲಿಯಾ ಸರ್ಕಾರ ಮತ್ತು ಫೇಸ್​ಬುಕ್ ನಡುವಣ ಸಂಬಂಧ ಮತ್ತೆ ಸುಸ್ಥಿತಿಗೆ ಬಂದಿದೆ.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ
ಫೇಸ್​ಬುಕ್ ಸಂಸ್ಥಾಪಕ ಜುಕರ್​ಬರ್ಗ್​​​
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 23, 2021 | 10:36 PM

ಮೆಲ್ಬರ್ನ್:  ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ಫೇಸ್​ಬುಕ್​ ಮಂಗಳವಾರ (ಫೆ.23) ಹೇಳಿಕೆ ಬಿಡುಗಡೆ ಮಾಡಿದೆ. ತಾಂತ್ರಿಕ ಸಂಸ್ಥೆಗಳು ಸುದ್ದಿ ಬಿತ್ತರಿಸಲು ಹಣ ತೆರುವ ಕುರಿತು ಆಸ್ಟ್ರೇಲಿಯಾದ ಸರ್ಕಾರದೊಂದಿಗೆ ತಾನೊಂದು ಪರಿಷ್ಕೃತ ಕರಾರು ಮಾಡಿಕೊಂಡಿದ್ದು ಆ ದೇಶದಲ್ಲಿ ತನ್ನ ಸೇವೆಯನ್ನು ಪುನರ್​ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದೆ. ಪತ್ರಿಕೋದ್ಯಮ ಕಂಟೆಂಟ್​ ನೀಡಲು ಸುದ್ದಿಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹಣ ಪಾವತಿಸಬೇಕೆಂಬ ವಿಷಯವು ಕಳೆದ ವಾರ ಚರ್ಚೆಗೆ ಬಂದಿತ್ತು. ಪ್ರಮಾದವಶಾತ್, ಕೊವಿಡ್-19ಕ್ಕೆ ಸಂಬಂಧಿಸಿದ ಎಚ್ಚರಿಕೆಗಳೂ ಸೇರಿದಂತೆ ಸರ್ಕಾರದ ಕೆಲವು ಸುದ್ದಿ ಮತ್ತು ಪ್ರಕಟಣೆಗಳು ನಿರ್ಬಂಧಕ್ಕೊಳಗಾಗಿ ಕೋಲಾಹಲ ಉಂಟಾಗಿತ್ತು.

ಆಸ್ಟ್ರೇಲಿಯಾ ಸರ್ಕಾರದ ಮೈಲಿಗಲ್ಲು ಎನಿಸಿರುವ, ‘ದಿ ಕೋಡ್’ ಅಂತಲೂ ಕರೆಸಿಕೊಳ್ಳುವ ಮಾಧ್ಯಮ ಚೌಕಾಶಿ ಕಾನೂನುಗಳು, ಆ ದೇಶದ ಸಂಸತ್ತಿನಲ್ಲಿ ಇನ್ನೂ ಪಾಸಾಗಬೇಕಿದೆ.

ಆಸ್ಟ್ರೇಲಿಯಾ ಸರ್ಕಾರದ ಕೋಶಾಧಿಕಾರಿಯಾಗಿರುವ ಜೊಷ್ ಫ್ರೈಡೆನ್​ಬರ್ಗ್ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ಫೇಸ್​ಬುಕ್ ಸಂಸ್ಥೆಯು ಆಸ್ಟ್ರೇಲಿಯಾದೊಂದಿಗೆ ಪುನಃ ಬಾಂಧವ್ಯ ಬೆಳೆಸಿದೆ. ಫೇಸ್​ಬುಕ್​ ಪ್ಲಾಟ್​ಫಾರ್ಮ್​ನಲ್ಲಿ ಆಸ್ಟ್ರೇಲಿಯಾದ ಸುದ್ದಿಗಳನ್ನು ಪುನರ್​ಸ್ಥಾಪಿಸಲಾಗುವುದು. ಹಾಗೆಯೇ, ಫೇಸ್​ಬುಕ್​ ಅಸ್ಟ್ರೇಲಿಯಾದ ಸುದ್ದಿಸಂಸ್ಥೆಗಳೊಂದಿಗೆ ಸೌಹಾರ್ದಯುತ ವಿಚಾರ-ವಿಮರ್ಶೆಗಳನ್ನು ನಡೆಸಲು ಮತ್ತು ಸುದ್ದಿ ವಿಷಯಗಳಿಗೆ ಹಣ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರಾರುಗಳನ್ನು ಮಾಡಿಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದರು.

ಜುಕರ್​ಬರ್ಗ್ ಈ ಕುರಿತು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಫ್ರೈಡೆನಬರ್ಗ್, ‘ಫೇಸ್​ಬುಕ್ ಸುದ್ದಿ ಸಂಸ್ಥೆಗಳೊಂದಿಗೆ ಪ್ರತ್ಯೇಕವಾಗಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ’ ಎಂದು ಹೇಳಿದರು.

Josh Frydenberg

ಜೊಷ್ ಫ್ರೈಡೆನ್​ಬರ್ಗ್

ಫೇಸ್​ಬುಕ್​ನಂತೆ, ಇಂಟರ್​ನೆಟ್​ ದೈತ್ಯ ಗೂಗಲ್ ಸಹ ಮಾಧ್ಯಮ ಚೌಕಾಶಿ ಕಾನೂನಿಗೆ ಬದ್ಧತೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಫೇಸ್​ಬುಕ್ ಮತ್ತು ಗೂಗಲ್ ಸರ್ಕಾರದ ಸುಪರ್ದಿಯಿಂದಾಚೆ ಸುದ್ದಿಸಂಸ್ಥೆಗಳೊಂದಿಗೆ ವಹಿವಾಟಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರವನ್ನು ಸಂತೃಪ್ತಿಗೊಳಿಸಬಹುದಾಗಿದೆ.

‘ಇದು ಬಹಳ ಕಷ್ಟಕರವಾದ ಪ್ರಕ್ರಿಯೆ ಅಗಲಿದೆ, ಆದರೆ ಅವು ಬಹಳ ಮುಖ್ಯವಾದ ವಿಷಯಗಳಾಗಿರುವುದರಿಂದ ಕಡೆಗಣಿಸವಂತೆಯೂ ಇಲ್ಲ. ಫೇಸ್​ಬುಕ್ ವಾಣಿಜ್ಯ ಸಂಸ್ಥೆಗಳೊಂದಿಗೆ ವಿಶ್ವಾಸಾರ್ಹ ಮಾತುಕತೆಗಳನ್ನು ಆರಂಭಿಸಿದೆ’ ಎಂದು ಫ್ರೈಡೆನ್​ಬರ್ಗ್ ಹೇಳಿದರು. ಫೇಸ್​ಬುಕ್​ ಸಂಸ್ಥೆಯು ತಾನು ಹೊರಡಿಸಿರುವ ಹೇಳಿಕೆಯಲ್ಲಿ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಒಪ್ಪೊಂದವೊಂದಕ್ಕೆ ಸಹಿ ಹಾಕಿರರುವುದು ‘ತುಂಬಾ ಸಂತೋಷದಾಯಕ’ ಎಂದು ಹೇಳಿದೆ.

‘ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಾವು ನಡೆಸಿದ ಮಾತುಕತೆ ತುಂಬಾ ಖುಷಿ ನೀಡಿದೆ. ಸುದ್ದಿಸಂಸ್ಥೆಗಳಿಗೆ ನಮ್ಮ ಪ್ಲಾಟ್​ಪಾರ್ಮ್​ ನೀಡುವ ಮತ್ತು ನಾವು ಅವರಿಂದ ಪಡೆಯುವ ಕಂಟೆಂಟ್​ಗೆ ಸಂಬಂಧಿಸಿದಂತೆ ನಮಗಿದ್ದ ಆತಂಕಗಳು ದೂರವಾಗಿವೆ. ನಮ್ಮ ಹಿತಾಸಕ್ತಿ ಕಾಪಾಡುವ ಭರವಸೆಯನ್ನು ಸರ್ಕಾರ ನೀಡಿದೆ’ ಎಂದು ಫೇಸ್​ಬುಕ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಬದಲಾವಣೆಗಳ ಫಲಶ್ರುತಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮದಲ್ಲಿ ನಮ್ಮ ಬಂಡವಾಳವನ್ನು ಹೆಚ್ಚಿಸಿ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯನ್ನರಿಗೆ ನಮ್ಮ ಪ್ಲಾಟ್​​ಫಾರ್ಮ್​ನಲ್ಲಿ ಸುದ್ದಿಯನ್ನು ಪುನರ್​​ಸ್ಥಾಪಿಸುತ್ತೇವೆ’ ಎಂದು ಫೇಸ್​ಬುಕ್​ ಹೇಳಿದೆ.

ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

Published On - 9:45 pm, Tue, 23 February 21

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​