AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ

Facebook Australia: ಆಸ್ಟ್ರೇಲಿಯನ್ನರಿಗೆ ಸುದ್ದಿ ಶೇರ್ ಮಾಡಲು ನಿರ್ಬಂಧಿಸಿದ ನಂತರ ಫೇಸ್​ಬುಕ್ ವಿಶ್ವದ ಗಮನಸೆಳೆದಿತ್ತು. ಇದೀಗ ಮಾಧ್ಯಮ ಸಂಸ್ಥೆಗಳು, ಆಸ್ಟ್ರೇಲಿಯಾ ಸರ್ಕಾರ ಮತ್ತು ಫೇಸ್​ಬುಕ್ ನಡುವಣ ಸಂಬಂಧ ಮತ್ತೆ ಸುಸ್ಥಿತಿಗೆ ಬಂದಿದೆ.

ಆಸ್ಟ್ರೇಲಿಯಾ ಸರ್ಕಾರ-ಫೇಸ್​ಬುಕ್​ ಮುನಿಸು ಅಂತ್ಯ; ಮತ್ತೆ ಸುದ್ದಿ ನೀಡಲು ನಿರ್ಧರಿಸಿದ ದೈತ್ಯ ಸೋಷಿಯಲ್ ಮೀಡಿಯಾ
ಫೇಸ್​ಬುಕ್ ಸಂಸ್ಥಾಪಕ ಜುಕರ್​ಬರ್ಗ್​​​
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Feb 23, 2021 | 10:36 PM

Share

ಮೆಲ್ಬರ್ನ್:  ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ಫೇಸ್​ಬುಕ್​ ಮಂಗಳವಾರ (ಫೆ.23) ಹೇಳಿಕೆ ಬಿಡುಗಡೆ ಮಾಡಿದೆ. ತಾಂತ್ರಿಕ ಸಂಸ್ಥೆಗಳು ಸುದ್ದಿ ಬಿತ್ತರಿಸಲು ಹಣ ತೆರುವ ಕುರಿತು ಆಸ್ಟ್ರೇಲಿಯಾದ ಸರ್ಕಾರದೊಂದಿಗೆ ತಾನೊಂದು ಪರಿಷ್ಕೃತ ಕರಾರು ಮಾಡಿಕೊಂಡಿದ್ದು ಆ ದೇಶದಲ್ಲಿ ತನ್ನ ಸೇವೆಯನ್ನು ಪುನರ್​ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದೆ. ಪತ್ರಿಕೋದ್ಯಮ ಕಂಟೆಂಟ್​ ನೀಡಲು ಸುದ್ದಿಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹಣ ಪಾವತಿಸಬೇಕೆಂಬ ವಿಷಯವು ಕಳೆದ ವಾರ ಚರ್ಚೆಗೆ ಬಂದಿತ್ತು. ಪ್ರಮಾದವಶಾತ್, ಕೊವಿಡ್-19ಕ್ಕೆ ಸಂಬಂಧಿಸಿದ ಎಚ್ಚರಿಕೆಗಳೂ ಸೇರಿದಂತೆ ಸರ್ಕಾರದ ಕೆಲವು ಸುದ್ದಿ ಮತ್ತು ಪ್ರಕಟಣೆಗಳು ನಿರ್ಬಂಧಕ್ಕೊಳಗಾಗಿ ಕೋಲಾಹಲ ಉಂಟಾಗಿತ್ತು.

ಆಸ್ಟ್ರೇಲಿಯಾ ಸರ್ಕಾರದ ಮೈಲಿಗಲ್ಲು ಎನಿಸಿರುವ, ‘ದಿ ಕೋಡ್’ ಅಂತಲೂ ಕರೆಸಿಕೊಳ್ಳುವ ಮಾಧ್ಯಮ ಚೌಕಾಶಿ ಕಾನೂನುಗಳು, ಆ ದೇಶದ ಸಂಸತ್ತಿನಲ್ಲಿ ಇನ್ನೂ ಪಾಸಾಗಬೇಕಿದೆ.

ಆಸ್ಟ್ರೇಲಿಯಾ ಸರ್ಕಾರದ ಕೋಶಾಧಿಕಾರಿಯಾಗಿರುವ ಜೊಷ್ ಫ್ರೈಡೆನ್​ಬರ್ಗ್ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ಫೇಸ್​ಬುಕ್ ಸಂಸ್ಥೆಯು ಆಸ್ಟ್ರೇಲಿಯಾದೊಂದಿಗೆ ಪುನಃ ಬಾಂಧವ್ಯ ಬೆಳೆಸಿದೆ. ಫೇಸ್​ಬುಕ್​ ಪ್ಲಾಟ್​ಫಾರ್ಮ್​ನಲ್ಲಿ ಆಸ್ಟ್ರೇಲಿಯಾದ ಸುದ್ದಿಗಳನ್ನು ಪುನರ್​ಸ್ಥಾಪಿಸಲಾಗುವುದು. ಹಾಗೆಯೇ, ಫೇಸ್​ಬುಕ್​ ಅಸ್ಟ್ರೇಲಿಯಾದ ಸುದ್ದಿಸಂಸ್ಥೆಗಳೊಂದಿಗೆ ಸೌಹಾರ್ದಯುತ ವಿಚಾರ-ವಿಮರ್ಶೆಗಳನ್ನು ನಡೆಸಲು ಮತ್ತು ಸುದ್ದಿ ವಿಷಯಗಳಿಗೆ ಹಣ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರಾರುಗಳನ್ನು ಮಾಡಿಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದರು.

ಜುಕರ್​ಬರ್ಗ್ ಈ ಕುರಿತು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಫ್ರೈಡೆನಬರ್ಗ್, ‘ಫೇಸ್​ಬುಕ್ ಸುದ್ದಿ ಸಂಸ್ಥೆಗಳೊಂದಿಗೆ ಪ್ರತ್ಯೇಕವಾಗಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ’ ಎಂದು ಹೇಳಿದರು.

Josh Frydenberg

ಜೊಷ್ ಫ್ರೈಡೆನ್​ಬರ್ಗ್

ಫೇಸ್​ಬುಕ್​ನಂತೆ, ಇಂಟರ್​ನೆಟ್​ ದೈತ್ಯ ಗೂಗಲ್ ಸಹ ಮಾಧ್ಯಮ ಚೌಕಾಶಿ ಕಾನೂನಿಗೆ ಬದ್ಧತೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಫೇಸ್​ಬುಕ್ ಮತ್ತು ಗೂಗಲ್ ಸರ್ಕಾರದ ಸುಪರ್ದಿಯಿಂದಾಚೆ ಸುದ್ದಿಸಂಸ್ಥೆಗಳೊಂದಿಗೆ ವಹಿವಾಟಿಗೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರವನ್ನು ಸಂತೃಪ್ತಿಗೊಳಿಸಬಹುದಾಗಿದೆ.

‘ಇದು ಬಹಳ ಕಷ್ಟಕರವಾದ ಪ್ರಕ್ರಿಯೆ ಅಗಲಿದೆ, ಆದರೆ ಅವು ಬಹಳ ಮುಖ್ಯವಾದ ವಿಷಯಗಳಾಗಿರುವುದರಿಂದ ಕಡೆಗಣಿಸವಂತೆಯೂ ಇಲ್ಲ. ಫೇಸ್​ಬುಕ್ ವಾಣಿಜ್ಯ ಸಂಸ್ಥೆಗಳೊಂದಿಗೆ ವಿಶ್ವಾಸಾರ್ಹ ಮಾತುಕತೆಗಳನ್ನು ಆರಂಭಿಸಿದೆ’ ಎಂದು ಫ್ರೈಡೆನ್​ಬರ್ಗ್ ಹೇಳಿದರು. ಫೇಸ್​ಬುಕ್​ ಸಂಸ್ಥೆಯು ತಾನು ಹೊರಡಿಸಿರುವ ಹೇಳಿಕೆಯಲ್ಲಿ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಒಪ್ಪೊಂದವೊಂದಕ್ಕೆ ಸಹಿ ಹಾಕಿರರುವುದು ‘ತುಂಬಾ ಸಂತೋಷದಾಯಕ’ ಎಂದು ಹೇಳಿದೆ.

‘ಆಸ್ಟ್ರೇಲಿಯಾ ಸರ್ಕಾರದೊಂದಿಗೆ ನಾವು ನಡೆಸಿದ ಮಾತುಕತೆ ತುಂಬಾ ಖುಷಿ ನೀಡಿದೆ. ಸುದ್ದಿಸಂಸ್ಥೆಗಳಿಗೆ ನಮ್ಮ ಪ್ಲಾಟ್​ಪಾರ್ಮ್​ ನೀಡುವ ಮತ್ತು ನಾವು ಅವರಿಂದ ಪಡೆಯುವ ಕಂಟೆಂಟ್​ಗೆ ಸಂಬಂಧಿಸಿದಂತೆ ನಮಗಿದ್ದ ಆತಂಕಗಳು ದೂರವಾಗಿವೆ. ನಮ್ಮ ಹಿತಾಸಕ್ತಿ ಕಾಪಾಡುವ ಭರವಸೆಯನ್ನು ಸರ್ಕಾರ ನೀಡಿದೆ’ ಎಂದು ಫೇಸ್​ಬುಕ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಬದಲಾವಣೆಗಳ ಫಲಶ್ರುತಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮದಲ್ಲಿ ನಮ್ಮ ಬಂಡವಾಳವನ್ನು ಹೆಚ್ಚಿಸಿ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯನ್ನರಿಗೆ ನಮ್ಮ ಪ್ಲಾಟ್​​ಫಾರ್ಮ್​ನಲ್ಲಿ ಸುದ್ದಿಯನ್ನು ಪುನರ್​​ಸ್ಥಾಪಿಸುತ್ತೇವೆ’ ಎಂದು ಫೇಸ್​ಬುಕ್​ ಹೇಳಿದೆ.

ಇದನ್ನೂ ಓದಿ: ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

Published On - 9:45 pm, Tue, 23 February 21

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!