AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು ಮಂಗಳವಾರದ ಸದನ ಕಲಾಪ!

ಅದಕ್ಕೆ ಸಿದ್ದರಾಮಯ್ಯನವರು ಅವರ ಕಾಲದಲ್ಲಿ ಭಾರತ ಶೈನ್ ಆಗುತ್ತಿದ್ದರೆ ರೈತರು ಯಾಕೆ ಬಡತನದಲ್ಲಿದ್ದರು, ಅವರನ್ನು ಕಷ್ಟದ ಸಂಕೋಲೆಗಳಿಗೆ ಸಿಲುಕಿಸುವಂತಿದ್ದ ಮೂರು ಕೃಷಿ ವಿಧೇಯಕಗಳನ್ನು ಜಾರಿ ಮಾಡಿ ಅವರ ಬದುಕು ನರಕಮಯ ಮಾಡಬೇಕು ಎಂಬ ಹುನ್ನಾರದಲ್ಲಿದ್ದಿರಿ, ಎಂದು ಹೇಳುತ್ತಾರೆ.

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು ಮಂಗಳವಾರದ ಸದನ ಕಲಾಪ!
ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಮಾತಿನ ಸಮರ
TV9 Web
| Edited By: |

Updated on: Mar 08, 2022 | 8:11 PM

Share

ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಮಾತಿನ ಜುಗಲ್ ಬಂದಿ ನಡೆದರೆ ಹೇಗಿರುತ್ತದೆ ಅನ್ನುವುದಕ್ಕೆ ಮಂಗಳವಾರ ವಿಧಾನಸಭೆಯ (Assembly) ಕಾರ್ಯಕಲಾಪ ಸಾಕ್ಷಿಯಾಯಿತು. ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ನಡುವೆ ನಡೆದ ವಾಕ್ಸಮರದಲ್ಲಿ ಅರ್ಧಕ್ಕಿಂತ ಹೆಚ್ಚು ಮಾತುಗಳು ನಮಗೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಆದರೆ ಯಾರ ಆಡಳಿತಾವಧಿಯಲ್ಲಿ ದೇಶ ಹೆಚ್ಚು ಹಾಳಾಯಿತು ಎಂಬ ವಿಷಯದ ಮೇಲೆ ಇಬ್ಬರು ಗಣ್ಯರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಮಂತ್ರಿಯಾಗಿದ್ದಾಗ ಇಂಡಿಯಾ ಶೈನಿಂಗ್ ಘೋಷವಾಕ್ಯದೊಂದಿಗೆ ದೇಶದೆಲ್ಲೆಡೆ ರಸ್ತೆಗಳ ನಿರ್ಮಾಣಗೊಂಡ ಕಾರಣ ನೀವು ಕಾರಲ್ಲಿ ತಿರುಗುವುದು ಸಾಧ್ಯವಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳುತ್ತಾರೆ.

ಅದಕ್ಕೆ ಸಿದ್ದರಾಮಯ್ಯನವರು ಅವರ ಕಾಲದಲ್ಲಿ ಭಾರತ ಶೈನ್ ಆಗುತ್ತಿದ್ದರೆ ರೈತರು ಯಾಕೆ ಬಡತನದಲ್ಲಿದ್ದರು, ಅವರನ್ನು ಕಷ್ಟದ ಸಂಕೋಲೆಗಳಿಗೆ ಸಿಲುಕಿಸುವಂತಿದ್ದ ಮೂರು ಕೃಷಿ ವಿಧೇಯಕಗಳನ್ನು ಜಾರಿ ಮಾಡಿ ಅವರ ಬದುಕು ನರಕಮಯ ಮಾಡಬೇಕು ಎಂಬ ಹುನ್ನಾರದಲ್ಲಿದ್ದಿರಿ, ಎಂದು ಹೇಳುತ್ತಾರೆ.

ಸಿದ್ದರಾಮಯ್ಯ ಮುಂದುವರಿದು, ನಮ್ಮ ಕಾಲದಲ್ಲೇ ಆಣೆಕಟ್ಟುಗಳನ್ನು ಕಟ್ಟಲಾಯಿತು, ನಾವು ಸ್ಥಾಪಿಸದ್ದನ್ನು ನೀವು ಒಂದೊಂದಾಗಿ ಮಾರಿಕೊಳ್ಳುತ್ತಾ ಇರುವಿರಿ ಎಂದು ಹೇಳುತ್ತಾರೆ. ಅದಕ್ಕೆ ಬೊಮ್ಮಾಯಿ ಅವರು ಆಣೆಕಟ್ಟುಗಳನ್ನು ನೀವು ಕಟ್ಟಿದ್ದು ಯಾವಾಗ? ಒಂದು ಆಣೆಕಟ್ಟು ನಿರ್ಮಿಸಲು 40-50 ವರ್ಷಗಳು ಬೇಕಾಗುತ್ತವೆ, ಅವುಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ನಮ್ಮ ಆಡಳಿತದ ಸಮಯದಲ್ಲಿ ಎನ್ನುತ್ತಾರೆ.

ಮುಂದುವರಿದು ಮಾತಾಡಿದ ಬೊಮ್ಮಾಯಿ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಜಾಗತೀಕರಣ, ಉದಾರೀಕರಣ, ಲೂಟೀಕರಣ ಅಂತ ದೇಶವನ್ನೇ ಬರ್ಬಾದ್ ಮಾಡಿದಿರಿ, ನಮ್ಮ ಬಡ ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಪೈಪೋಟಿ ನಡೆಸುವಂಥ ಪರಿಸ್ಥಿತಿ ನಿರ್ಮಾಣ ಮಾಡಿದಿರಿ, ಅಮೇರಿಕಾದ ಕೆಲಸಕ್ಕೆ ಬಾರದ ಗೋಧಿಯನ್ನು ನಮ್ಮ ದೇಶದ ಜನ ತಿನ್ನುವಂತೆ ಮಾಡಿದಿರಿ ಎಂದಾಗ ಸಿದ್ದರಾಮಯ್ಯನವರು, ದೇಶವನ್ನು ಹಾಳು ಮಾಡಿದ್ದು ನಾವಲ್ಲ ನೀವು, ಸಬ್ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಾ ಸರ್ವನಾಶ್ ಮಾಡುತ್ತಿರುವಿರಿ. ಖಾಸಗೀಕರಣದ ಹೆಸರಲ್ಲಿ ಎಲ್ಲ ಸಂಸ್ಥೆಗಳನ್ನು ಮಾರಿಕೊಳ್ಳುತ್ತಾ ಇದ್ದೀರಿ, ನಿಮ್ಮ ಕೆಟ್ಟ ನೀತಿಗಳಿಂದಾಗಿ 4.5 ಕೋಟಿ ಜನ ನೌಕರಿ ಕಳೆದುಕೊಂಡಿದ್ದಾರೆ ಎಂದು ಹೇಳುತ್ತಾರೆ.

ನಿಮ್ಮ ಆಡಳಿತದಿಂದಾಗಿ ಪರಿಸ್ಥಿತಿ ಕೈಜಾರಿ ಹೋಗಿತ್ತು ಅದನ್ನು ನಾವು ಹತೋಟಿಗೆ ತರುತ್ತಿದ್ದೇವೆ, ನವರತ್ನಗಳು ಮಾರಾಟವಾಗಿದ್ದು ನಿಮ್ಮ ಕಾಲದಲ್ಲಿ ಅಂತ ಬೊಮ್ಮಾಯಿ ಅವರು ಹೇಳುತ್ತಿರುವಂತೆಯೇ ಎರಡೂ ಪಕ್ಷದ ಸದಸ್ಯರು ಕೂಗಾಡುವುದು ಹೆಚ್ಚಾಗುತ್ತದೆ.

ಇದನ್ನೂ ಓದಿ: ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ