AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ

ಅದು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸೋ ಏರ್ಪೋರ್ಟ್. ಇಷ್ಟು ದಿನ ಉತ್ತಮ ಸೌಲಭ್ಯಗಳಿಂದ ಹೆಸರು ವಾಸಿಯಾಗಿದ್ದ ಆ ಏರ್ಪೋರ್ಟ್​ನಲ್ಲಿ ಈಗ ಹೊಸ ಆತಂಕ ಸೃಷ್ಟಿಯಾಗಿದೆ. ಜನ ಏರ್ಪೋಟ್ ಆವರಣದಲ್ಲಿ ಭಯ ಇಲ್ಲದೆ ಓಡಾಡೋಕು ಆಗ್ತಿಲ್ಲ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ
ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ
ಆಯೇಷಾ ಬಾನು
|

Updated on:Dec 09, 2020 | 10:19 AM

Share

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣ ಅಂದ್ರೆ ಮೊದ್ಲು ನೆನಪಾಗೋದೆ ಹಚ್ಚ ಹಸಿರಿನ ವಾತವಾರಣ. ಇದ್ರ ಜೊತೆಗೇ ಸ್ವಚ್ಛಂದ ಟರ್ಮಿನಲ್. ಆದ್ರೆ ಇದೇ ಏರ್ ಪೋರ್ಟ್ ಮಾನ ಅಂತರಾಷ್ಟ್ರಿಯಾ ಮಟ್ಟದಲ್ಲಿ ಹರಾಜಾಗುತ್ತಾ ಅನ್ನೋ ಅನುಮಾನ ಪ್ರಯಾಣಿಕರಲ್ಲಿ ಕಾಡುತ್ತಿದೆ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಿಂಡು: ಇದಕ್ಕೆ ಕಾರಣ ಬೀದಿನಾಯಿಗಳ ಹಾವಳಿ. ಅಂದಹಾಗೆ ಲಾಕ್​ಡೌನ್ ನಂತರದಲ್ಲಿ, ದಿನದಿಂದ ದಿನಕ್ಕೆ ಏರ್ ಪೋರ್ಟ್​ನಿಂದ ಸಂಚರಿಸೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿ ಹಾವಳಿ ಸಹ ಹೆಚ್ಚಾಗಿದ್ದು, ಏರ್ ಪೋರ್ಟ್ ಟರ್ಮಿನಲ್ ಸೇರಿದಂತೆ ಪಾರ್ಕಿಂಗ್ ಏರಿಯಾಗಳಲೆಲ್ಲಾ ಹಿಂಡಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಜತೆಯಲ್ಲೇ ಏರ್ ಪೋರ್ಟ್​ಗೆ ಬರೋ ಪ್ರಯಾಣಿಕರ ಮಧ್ಯೆ ರಾಜಾರೋಷವಾಗಿ ನಾಯಿಗಳು ಹಿಂಡು ಹಿಂಡಾಗಿ ಒಡಾಡ್ತಿದ್ದು, ಯಾವಾಗ ಯಾವ ಪ್ರಯಾಣೀಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡ್ತಾವೋ ಅನ್ನೋ ಆತಂಕ ಪ್ರಯಾಣಿಕರಲ್ಲಿ ಮೂಡಿದೆ.

ಟರ್ಮಿನಲ್​ನ ಹೋಟೆಲ್ ಸೇರಿದಂತೆ ಅಂಗಡಿಗಳ ಮುಂದೆ ಆಹಾರ ಸೇವಿಸೋ ಪ್ರಯಾಣಿಕರ ಮುಂದೆಯೇ ನಿಲ್ಲೋ ನಾಯಿಗಳು ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡ್ತಿವೆ. ದೇಶ ವಿದೇಶದಿಂದ್ಲೂ ಪ್ರಯಾಣೀಕರು ಬಂದು ಹೋಗೊ ಏರ್ಪೋಟ್ ಅತಿಸೂಕ್ಷ್ಮ ಪ್ರದೇಶವಾಗಿದೆ. ಟರ್ಮಿನಲ್ ಒಳಭಾಗದಲ್ಲಿ ಸಾಕಷ್ಟು ಭದ್ರತೆ ನೀಡಿರೋ ಏರ್ಪೋಟ್ ಆಡಳಿತ ಮಂಡಳಿ, ಟರ್ಮಿನಲ್ ಆವರಣದಲ್ಲೂ ಬೀದಿ ನಾಯಿಗಳ ಹಾವಾಳಿಗೆ ಬ್ರೇಕ್ ಹಾಕಬೇಕಿದೆ. ಈ ಮೂಲಕ ಪ್ರಯಾಣಿಕರ ಆತಂಕ ದೂರ ಮಾಡಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ಒಟ್ಟಾರೆ ಹೈ-ಫೈ ಸೌಲಭ್ಯಗಳ ಮೂಲಕ ಹೆಸರುವಾಸಿಯಾಗಿರೋ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಈಗ ಬೀದಿ ನಾಯಿ ಹಾವಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾಯಿಗಳು ಏರ್ಪೋರ್ಟ್​ಗೆ ಬರೋ ಪ್ರಯಾಣಿಕರ ಮೇಲೆ ದಾಳಿ ಮಾಡಿ ಬೆಂಗಳೂರಿನ ಮಾನ ಜಾಗತಿಕವಾಗಿ ಹರಾಜು ಹಾಕುವ ಮುನ್ನ ಏರ್ಪೋರ್ಟ್ ಆಡಳಿತ ಮಂಡಳಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದೆ.

Published On - 7:59 am, Wed, 2 December 20

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ