AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ

ಅದು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸೋ ಏರ್ಪೋರ್ಟ್. ಇಷ್ಟು ದಿನ ಉತ್ತಮ ಸೌಲಭ್ಯಗಳಿಂದ ಹೆಸರು ವಾಸಿಯಾಗಿದ್ದ ಆ ಏರ್ಪೋರ್ಟ್​ನಲ್ಲಿ ಈಗ ಹೊಸ ಆತಂಕ ಸೃಷ್ಟಿಯಾಗಿದೆ. ಜನ ಏರ್ಪೋಟ್ ಆವರಣದಲ್ಲಿ ಭಯ ಇಲ್ಲದೆ ಓಡಾಡೋಕು ಆಗ್ತಿಲ್ಲ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ
ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ
ಆಯೇಷಾ ಬಾನು
|

Updated on:Dec 09, 2020 | 10:19 AM

Share

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣ ಅಂದ್ರೆ ಮೊದ್ಲು ನೆನಪಾಗೋದೆ ಹಚ್ಚ ಹಸಿರಿನ ವಾತವಾರಣ. ಇದ್ರ ಜೊತೆಗೇ ಸ್ವಚ್ಛಂದ ಟರ್ಮಿನಲ್. ಆದ್ರೆ ಇದೇ ಏರ್ ಪೋರ್ಟ್ ಮಾನ ಅಂತರಾಷ್ಟ್ರಿಯಾ ಮಟ್ಟದಲ್ಲಿ ಹರಾಜಾಗುತ್ತಾ ಅನ್ನೋ ಅನುಮಾನ ಪ್ರಯಾಣಿಕರಲ್ಲಿ ಕಾಡುತ್ತಿದೆ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಿಂಡು: ಇದಕ್ಕೆ ಕಾರಣ ಬೀದಿನಾಯಿಗಳ ಹಾವಳಿ. ಅಂದಹಾಗೆ ಲಾಕ್​ಡೌನ್ ನಂತರದಲ್ಲಿ, ದಿನದಿಂದ ದಿನಕ್ಕೆ ಏರ್ ಪೋರ್ಟ್​ನಿಂದ ಸಂಚರಿಸೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿ ಹಾವಳಿ ಸಹ ಹೆಚ್ಚಾಗಿದ್ದು, ಏರ್ ಪೋರ್ಟ್ ಟರ್ಮಿನಲ್ ಸೇರಿದಂತೆ ಪಾರ್ಕಿಂಗ್ ಏರಿಯಾಗಳಲೆಲ್ಲಾ ಹಿಂಡಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಜತೆಯಲ್ಲೇ ಏರ್ ಪೋರ್ಟ್​ಗೆ ಬರೋ ಪ್ರಯಾಣಿಕರ ಮಧ್ಯೆ ರಾಜಾರೋಷವಾಗಿ ನಾಯಿಗಳು ಹಿಂಡು ಹಿಂಡಾಗಿ ಒಡಾಡ್ತಿದ್ದು, ಯಾವಾಗ ಯಾವ ಪ್ರಯಾಣೀಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡ್ತಾವೋ ಅನ್ನೋ ಆತಂಕ ಪ್ರಯಾಣಿಕರಲ್ಲಿ ಮೂಡಿದೆ.

ಟರ್ಮಿನಲ್​ನ ಹೋಟೆಲ್ ಸೇರಿದಂತೆ ಅಂಗಡಿಗಳ ಮುಂದೆ ಆಹಾರ ಸೇವಿಸೋ ಪ್ರಯಾಣಿಕರ ಮುಂದೆಯೇ ನಿಲ್ಲೋ ನಾಯಿಗಳು ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡ್ತಿವೆ. ದೇಶ ವಿದೇಶದಿಂದ್ಲೂ ಪ್ರಯಾಣೀಕರು ಬಂದು ಹೋಗೊ ಏರ್ಪೋಟ್ ಅತಿಸೂಕ್ಷ್ಮ ಪ್ರದೇಶವಾಗಿದೆ. ಟರ್ಮಿನಲ್ ಒಳಭಾಗದಲ್ಲಿ ಸಾಕಷ್ಟು ಭದ್ರತೆ ನೀಡಿರೋ ಏರ್ಪೋಟ್ ಆಡಳಿತ ಮಂಡಳಿ, ಟರ್ಮಿನಲ್ ಆವರಣದಲ್ಲೂ ಬೀದಿ ನಾಯಿಗಳ ಹಾವಾಳಿಗೆ ಬ್ರೇಕ್ ಹಾಕಬೇಕಿದೆ. ಈ ಮೂಲಕ ಪ್ರಯಾಣಿಕರ ಆತಂಕ ದೂರ ಮಾಡಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ಒಟ್ಟಾರೆ ಹೈ-ಫೈ ಸೌಲಭ್ಯಗಳ ಮೂಲಕ ಹೆಸರುವಾಸಿಯಾಗಿರೋ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಈಗ ಬೀದಿ ನಾಯಿ ಹಾವಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾಯಿಗಳು ಏರ್ಪೋರ್ಟ್​ಗೆ ಬರೋ ಪ್ರಯಾಣಿಕರ ಮೇಲೆ ದಾಳಿ ಮಾಡಿ ಬೆಂಗಳೂರಿನ ಮಾನ ಜಾಗತಿಕವಾಗಿ ಹರಾಜು ಹಾಕುವ ಮುನ್ನ ಏರ್ಪೋರ್ಟ್ ಆಡಳಿತ ಮಂಡಳಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದೆ.

Published On - 7:59 am, Wed, 2 December 20

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್