AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಥ ಅಭಿಮಾನಿಗಳಿಗಾದ್ರೂ ಐಪಿಎಲ್ ಟ್ರೋಫಿ ಒಮ್ಮೆ ಗೆಲ್ರಯ್ಯ! | This hotelier is a diehard fan of RCB

ಅಭಿಮಾನವೆಂದರೆ ಪ್ರಾಯಶಃ ಇದೇ ಇರಬೇಕು. ಇಲ್ಲಿರುವ ಬ್ಯಾನರ್ ಮೇಲೆ ಬರೆದಿರುವುದನ್ನು ಓದಿದರೆ ನಾವು ಏನು ಹೇಳಲು ಪ್ರಯತ್ನಿಸುತ್ತಿದ್ದೇವೆನ್ನುವುದು ನಿಮಗೆ ಅರ್ಥವಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ಕೋಟ್ಯಾಂತರ ಅಭಿಮಾನಿಗಳಿರಬಹುದು, ಅದರೆ ಇವರಂಥ ಅಭಿಮಾನಿ ಪ್ರಾಯಶಃ ಇರಲಾರರು. ಮೈಸೂರಿನವರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ಈ ಅಭಿಮಾನಿ ಅಲ್ಲಿ ‘ನಾಟಿ ಹಟ್’ ಹೆಸರಿನ ಮಾಂಸಾಹಾರಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಆರ್​ಸಿಬಿ ಟೀಮನ್ನು ಇವರು (ಹೆಸರು ಹೇಳಿಕೊಂಡಿಲ್ಲ) ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್​ಸಿಬಿಯ ಪಂದ್ಯ ನಡೆಯುವ ದಿನಗಳಂದು ತಮ್ಮ […]

ಇಂಥ ಅಭಿಮಾನಿಗಳಿಗಾದ್ರೂ ಐಪಿಎಲ್ ಟ್ರೋಫಿ ಒಮ್ಮೆ ಗೆಲ್ರಯ್ಯ! | This hotelier is a diehard fan of RCB
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2020 | 8:43 PM

Share

ಅಭಿಮಾನವೆಂದರೆ ಪ್ರಾಯಶಃ ಇದೇ ಇರಬೇಕು.

ಇಲ್ಲಿರುವ ಬ್ಯಾನರ್ ಮೇಲೆ ಬರೆದಿರುವುದನ್ನು ಓದಿದರೆ ನಾವು ಏನು ಹೇಳಲು ಪ್ರಯತ್ನಿಸುತ್ತಿದ್ದೇವೆನ್ನುವುದು ನಿಮಗೆ ಅರ್ಥವಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ಕೋಟ್ಯಾಂತರ ಅಭಿಮಾನಿಗಳಿರಬಹುದು, ಅದರೆ ಇವರಂಥ ಅಭಿಮಾನಿ ಪ್ರಾಯಶಃ ಇರಲಾರರು.

ಮೈಸೂರಿನವರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ಈ ಅಭಿಮಾನಿ ಅಲ್ಲಿ ‘ನಾಟಿ ಹಟ್’ ಹೆಸರಿನ ಮಾಂಸಾಹಾರಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಆರ್​ಸಿಬಿ ಟೀಮನ್ನು ಇವರು (ಹೆಸರು ಹೇಳಿಕೊಂಡಿಲ್ಲ) ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್​ಸಿಬಿಯ ಪಂದ್ಯ ನಡೆಯುವ ದಿನಗಳಂದು ತಮ್ಮ ಹೊಟೇಲಿನಲ್ಲಿ ದೊರೆಯುವ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಮಟನ್ ಚಾಪ್ಸ್ ಮತ್ತಿತರ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಅರ್ಧದಷ್ಟು ಬೆಲೆಗೆ ನೀಡುತ್ತಾರೆ. ಅವತ್ತಿನ ದಿನ ಹೊಟೇಲ್ ಮುಂದೆ, ‘ಆರ್​ಸಿಬಿ ಪಂದ್ಯದ ಪ್ರಯುಕ್ತ ನಮ್ಮಲ್ಲಿ ದೊರೆಯುವ ಆಹಾರ ಪದಾರ್ಥಗಳನನ್ನು ಕೇವಲ ಅರ್ಧ ಬೆಲೆಯಲ್ಲಿ ಸವಿಯಿರಿ’ ಎಂದು ಸೂಚಿಸುವ ಬ್ಯಾನರನ್ನು ನೇತು ಹಾಕುತ್ತಾರೆ.

ವಿರಾಟ್ ಕೊಹ್ಲಿಯ ಟೀಮು ಪಂದ್ಯ ಗೆದ್ದರೆ ಇತರ ಅಭಿಮಾನಿಗಳು ಸಂತೋಷಪಡುವಂತೆ ಅವರು ಸಹ ಆಕಾಶದಲ್ಲಿ ತೇಲಾಡುತ್ತಾರೆ. ಅದರೆ ಸೋತರೆ ಉಳಿದವರಿಗಿಂತ ಜಾಸ್ತಿ ಬೇಜಾರು ಮಾಡಿಕೊಳ್ಳುತ್ತಾರೆ. ಶುಕ್ರವಾರದಂದು ಎಲಿಮಿನೇಟರ್ ಸುತ್ತಿನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್​ಗೆ ಸೋತು ಟೂರ್ನಿಯಿಂದ ನಿರ್ಗಮಿಸಿದ ನಂತರ ಇವರು ಯಾವ ಪರಿ ಬೇಜಾರು ಮಾಡಿಕೊಂಡಿದ್ದಾರೆಂದರೆ ಆ ನಿರಾಶೆಯಲ್ಲಿ ತಮ್ಮ ಹೊಟೇಲನ್ನೇ ಮುಚ್ಚಿಬಿಟ್ಟು ಹೊಟೇಲಿನ ಮುಂದೆ ಈ ಬ್ಯಾನರನ್ನು ಇಳಿಬಿಟ್ಟಿದ್ದಾರೆ! ಕೊನೆಯಲ್ಲಿ ಅವರು ‘ಈಗಲೂ ಆರ್​ಸಿಬಿ ಅಭಿಮಾನಿ’ ಅಂತ ಹೇಳಿರುವುದು ಮನಮುಟ್ಟುವಂತಿದೆ.

ಐಪಿಎಲ್ ಟೂರ್ನಿಯಿಂದ ಆರ್​ಸಿಬಿ ತಂಡ ಹೊರಬಿದ್ದ ಹಿನ್ನೆಲೆಯಲ್ಲಿ ಇಂದು ಹೊಟೇಲ್​ಗೆ ರಜೆ ಘೋಷಿಸಲಾಗಿದೆ.

ಇಂತಿ ಮಾಲಿಕರು (ಈಗಲೂ ಆರ್​ಸಿಬಿ ಅಭಿಮಾನಿ)……

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ