AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಥ ಅಭಿಮಾನಿಗಳಿಗಾದ್ರೂ ಐಪಿಎಲ್ ಟ್ರೋಫಿ ಒಮ್ಮೆ ಗೆಲ್ರಯ್ಯ! | This hotelier is a diehard fan of RCB

ಅಭಿಮಾನವೆಂದರೆ ಪ್ರಾಯಶಃ ಇದೇ ಇರಬೇಕು. ಇಲ್ಲಿರುವ ಬ್ಯಾನರ್ ಮೇಲೆ ಬರೆದಿರುವುದನ್ನು ಓದಿದರೆ ನಾವು ಏನು ಹೇಳಲು ಪ್ರಯತ್ನಿಸುತ್ತಿದ್ದೇವೆನ್ನುವುದು ನಿಮಗೆ ಅರ್ಥವಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ಕೋಟ್ಯಾಂತರ ಅಭಿಮಾನಿಗಳಿರಬಹುದು, ಅದರೆ ಇವರಂಥ ಅಭಿಮಾನಿ ಪ್ರಾಯಶಃ ಇರಲಾರರು. ಮೈಸೂರಿನವರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ಈ ಅಭಿಮಾನಿ ಅಲ್ಲಿ ‘ನಾಟಿ ಹಟ್’ ಹೆಸರಿನ ಮಾಂಸಾಹಾರಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಆರ್​ಸಿಬಿ ಟೀಮನ್ನು ಇವರು (ಹೆಸರು ಹೇಳಿಕೊಂಡಿಲ್ಲ) ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್​ಸಿಬಿಯ ಪಂದ್ಯ ನಡೆಯುವ ದಿನಗಳಂದು ತಮ್ಮ […]

ಇಂಥ ಅಭಿಮಾನಿಗಳಿಗಾದ್ರೂ ಐಪಿಎಲ್ ಟ್ರೋಫಿ ಒಮ್ಮೆ ಗೆಲ್ರಯ್ಯ! | This hotelier is a diehard fan of RCB
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 07, 2020 | 8:43 PM

Share

ಅಭಿಮಾನವೆಂದರೆ ಪ್ರಾಯಶಃ ಇದೇ ಇರಬೇಕು.

ಇಲ್ಲಿರುವ ಬ್ಯಾನರ್ ಮೇಲೆ ಬರೆದಿರುವುದನ್ನು ಓದಿದರೆ ನಾವು ಏನು ಹೇಳಲು ಪ್ರಯತ್ನಿಸುತ್ತಿದ್ದೇವೆನ್ನುವುದು ನಿಮಗೆ ಅರ್ಥವಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ಕೋಟ್ಯಾಂತರ ಅಭಿಮಾನಿಗಳಿರಬಹುದು, ಅದರೆ ಇವರಂಥ ಅಭಿಮಾನಿ ಪ್ರಾಯಶಃ ಇರಲಾರರು.

ಮೈಸೂರಿನವರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ಈ ಅಭಿಮಾನಿ ಅಲ್ಲಿ ‘ನಾಟಿ ಹಟ್’ ಹೆಸರಿನ ಮಾಂಸಾಹಾರಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಆರ್​ಸಿಬಿ ಟೀಮನ್ನು ಇವರು (ಹೆಸರು ಹೇಳಿಕೊಂಡಿಲ್ಲ) ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್​ಸಿಬಿಯ ಪಂದ್ಯ ನಡೆಯುವ ದಿನಗಳಂದು ತಮ್ಮ ಹೊಟೇಲಿನಲ್ಲಿ ದೊರೆಯುವ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಮಟನ್ ಚಾಪ್ಸ್ ಮತ್ತಿತರ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಅರ್ಧದಷ್ಟು ಬೆಲೆಗೆ ನೀಡುತ್ತಾರೆ. ಅವತ್ತಿನ ದಿನ ಹೊಟೇಲ್ ಮುಂದೆ, ‘ಆರ್​ಸಿಬಿ ಪಂದ್ಯದ ಪ್ರಯುಕ್ತ ನಮ್ಮಲ್ಲಿ ದೊರೆಯುವ ಆಹಾರ ಪದಾರ್ಥಗಳನನ್ನು ಕೇವಲ ಅರ್ಧ ಬೆಲೆಯಲ್ಲಿ ಸವಿಯಿರಿ’ ಎಂದು ಸೂಚಿಸುವ ಬ್ಯಾನರನ್ನು ನೇತು ಹಾಕುತ್ತಾರೆ.

ವಿರಾಟ್ ಕೊಹ್ಲಿಯ ಟೀಮು ಪಂದ್ಯ ಗೆದ್ದರೆ ಇತರ ಅಭಿಮಾನಿಗಳು ಸಂತೋಷಪಡುವಂತೆ ಅವರು ಸಹ ಆಕಾಶದಲ್ಲಿ ತೇಲಾಡುತ್ತಾರೆ. ಅದರೆ ಸೋತರೆ ಉಳಿದವರಿಗಿಂತ ಜಾಸ್ತಿ ಬೇಜಾರು ಮಾಡಿಕೊಳ್ಳುತ್ತಾರೆ. ಶುಕ್ರವಾರದಂದು ಎಲಿಮಿನೇಟರ್ ಸುತ್ತಿನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್​ಗೆ ಸೋತು ಟೂರ್ನಿಯಿಂದ ನಿರ್ಗಮಿಸಿದ ನಂತರ ಇವರು ಯಾವ ಪರಿ ಬೇಜಾರು ಮಾಡಿಕೊಂಡಿದ್ದಾರೆಂದರೆ ಆ ನಿರಾಶೆಯಲ್ಲಿ ತಮ್ಮ ಹೊಟೇಲನ್ನೇ ಮುಚ್ಚಿಬಿಟ್ಟು ಹೊಟೇಲಿನ ಮುಂದೆ ಈ ಬ್ಯಾನರನ್ನು ಇಳಿಬಿಟ್ಟಿದ್ದಾರೆ! ಕೊನೆಯಲ್ಲಿ ಅವರು ‘ಈಗಲೂ ಆರ್​ಸಿಬಿ ಅಭಿಮಾನಿ’ ಅಂತ ಹೇಳಿರುವುದು ಮನಮುಟ್ಟುವಂತಿದೆ.

ಐಪಿಎಲ್ ಟೂರ್ನಿಯಿಂದ ಆರ್​ಸಿಬಿ ತಂಡ ಹೊರಬಿದ್ದ ಹಿನ್ನೆಲೆಯಲ್ಲಿ ಇಂದು ಹೊಟೇಲ್​ಗೆ ರಜೆ ಘೋಷಿಸಲಾಗಿದೆ.

ಇಂತಿ ಮಾಲಿಕರು (ಈಗಲೂ ಆರ್​ಸಿಬಿ ಅಭಿಮಾನಿ)……

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ