
ತುಮಕೂರು: ಕೊರೊನಾ ಕಂಟಕ ಎದುರಾದ ಮೇಲೆ ಎಲ್ಲೂ ಹೊರಗೇ ಹೋಗಿಲ್ಲ ಅನ್ನೋ ಕೊರಗು ನಿಮ್ಮನ್ನ ಕಾಡ್ತಾ ಇದೆಯಾ? ಅದರಲ್ಲೂ ನೀವು ತುಮಕೂರಿಗೆ ಹತ್ತಿರದಲ್ಲೇ ಇದ್ದೀರ? ಹಾಗಿದ್ರೆ ಚಿಂತೆ ಬಿಡಿ, ಈ ಸ್ಟೋರಿ ಓದಿ.
ಎತ್ತ ನೋಡಿದರು ಹಸಿರು. ನೋಡ ನೋಡುತ್ತಲೇ ಕಳೆದುಹೋಗುವಂತಹ ಸೌಂದರ್ಯ. ಇಂತಹ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ನೀವು ಬೇರೆಲ್ಲೂ ಹೋಗಬೇಕಿಲ್ಲ ಜಸ್ಟ್ ತುಮಕೂರಿನತ್ತ ಹೊರಟುಬಿಟ್ಟರೆ ಸಾಕು. ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯ ವಾತಾವರಣ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಒಟ್ನಲ್ಲಿ ಕೊರೊನಾ ಜಂಜಾಟದ ನಡುವೆ ಟೂರ್, ಟ್ರಕ್ಕಿಂಗ್, ಪಿಕ್ನಿಕ್ ಅನ್ನೋದನ್ನೇ ಮರೆತಿದ್ದವರಿಗೆ ಮತ್ತೆ ಹಳೇ ಲೈಫ್ ನೆನಪಾಗಿದೆ. ಅದರಲ್ಲೂ ವೀಕೆಂಡ್ ಅಂತಾ ನಿನ್ನೆ ದೇವರಾಯನದುರ್ಗಕ್ಕೆ ಎಂಟ್ರಿಕೊಟ್ಟಿದ್ದ ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ರು.
Published On - 7:54 am, Mon, 7 September 20