AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ. BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, […]

BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..
ಆಯೇಷಾ ಬಾನು
| Edited By: |

Updated on: Oct 01, 2020 | 5:05 PM

Share

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ.

BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, ವಿದ್ಯಾ, ರಂಜಿತಾ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು BBMP ಯವರು ಮನವಿ ಮಾಡಿದ್ದಾರೆ. ಆದರೆ ವಾಣಿ, ವಿದ್ಯಾ, ರಂಜಿತಾ ಟೆಸ್ಟಿಂಗ್​ಗೆ ನಿರಾಕರಿಸಿದ್ದಾರೆ. ಕೊನೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಮೊಬೈಲ್​ಗೆ ಬಂದ ಓಟಿಪಿಯನ್ನೂ ಪಡೆದಿದ್ದಾರೆ. ನಂತರ ಸೆಪ್ಟೆಂಬರ್ 26 ರಂದು ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಟೆಸ್ಟ್ ಮಾಡಿಸದೆ ಪಾಸಿಟಿವ್ ಹೇಗೆ ಬಂತೆಂಬ ಪ್ರಶ್ನೆ ಈ ಮೂವರೂ ಮಹಿಳೆಯರಿಗೆ ಕಾಡುತ್ತಿದೆ. ಹಾಗಾದ್ರೆ ಪಾಸಿಟಿವ್ ಲೆಕ್ಕ ತೋರಿಸಿ ಹಣ ನುಂಗುವ ಪ್ಲ್ಯಾನ್​? ಮಾಡಲಾಗುತ್ತಿದೆಯಾ. ಈ ರೀತಿ ಅದೆಷ್ಟು ಮಂದಿಗೆ ಸುಳ್ಳು ಹೇಳಿ ಚಿಕಿತ್ಸೆ ನೆಪದಲ್ಲಿ ಹಣ ಕೀಳುತ್ತಿದ್ದಾರೆ ಎಂಬ ಅನುಮಾನಗಳು ಬರುತ್ತಿವೆ. ಸರ್ಕಾರವೇ ಹೀಗೆ ಸುಲಿಗೆ ಮಾಡಲು ನಿಂತರೆ ಬಡ ಜನ ಎಲ್ಲಿಗೆ ಹೋಗಬೇಕು. ರಾಜ್ಯ ಸರ್ಕಾರ ಈಗಲಾದರೂ ಈ ಬಗ್ಗೆ ಗಮನ ಹರಿಸಿ ಜನರನ್ನು ಕಾಪಾಡಬೇಕಿದೆ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್