AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ. BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, […]

BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..
ಆಯೇಷಾ ಬಾನು
| Edited By: |

Updated on: Oct 01, 2020 | 5:05 PM

Share

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ.

BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, ವಿದ್ಯಾ, ರಂಜಿತಾ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು BBMP ಯವರು ಮನವಿ ಮಾಡಿದ್ದಾರೆ. ಆದರೆ ವಾಣಿ, ವಿದ್ಯಾ, ರಂಜಿತಾ ಟೆಸ್ಟಿಂಗ್​ಗೆ ನಿರಾಕರಿಸಿದ್ದಾರೆ. ಕೊನೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಮೊಬೈಲ್​ಗೆ ಬಂದ ಓಟಿಪಿಯನ್ನೂ ಪಡೆದಿದ್ದಾರೆ. ನಂತರ ಸೆಪ್ಟೆಂಬರ್ 26 ರಂದು ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಟೆಸ್ಟ್ ಮಾಡಿಸದೆ ಪಾಸಿಟಿವ್ ಹೇಗೆ ಬಂತೆಂಬ ಪ್ರಶ್ನೆ ಈ ಮೂವರೂ ಮಹಿಳೆಯರಿಗೆ ಕಾಡುತ್ತಿದೆ. ಹಾಗಾದ್ರೆ ಪಾಸಿಟಿವ್ ಲೆಕ್ಕ ತೋರಿಸಿ ಹಣ ನುಂಗುವ ಪ್ಲ್ಯಾನ್​? ಮಾಡಲಾಗುತ್ತಿದೆಯಾ. ಈ ರೀತಿ ಅದೆಷ್ಟು ಮಂದಿಗೆ ಸುಳ್ಳು ಹೇಳಿ ಚಿಕಿತ್ಸೆ ನೆಪದಲ್ಲಿ ಹಣ ಕೀಳುತ್ತಿದ್ದಾರೆ ಎಂಬ ಅನುಮಾನಗಳು ಬರುತ್ತಿವೆ. ಸರ್ಕಾರವೇ ಹೀಗೆ ಸುಲಿಗೆ ಮಾಡಲು ನಿಂತರೆ ಬಡ ಜನ ಎಲ್ಲಿಗೆ ಹೋಗಬೇಕು. ರಾಜ್ಯ ಸರ್ಕಾರ ಈಗಲಾದರೂ ಈ ಬಗ್ಗೆ ಗಮನ ಹರಿಸಿ ಜನರನ್ನು ಕಾಪಾಡಬೇಕಿದೆ.

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ