AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು

ಮೋಟಾರ್ ರೇಸಿಂಗ್ ಅಂದ್ರೇನೇ ಹಾಗೆ.. ಅಲ್ಲಿ ಥ್ರಿಲ್ ಇರುತ್ತೆ.. ಮೈ ಜುಮ್ಮೆನ್ನಿಸೋ ರೋಚಕತೆ ಇರುತ್ತೆ.. ಹೀಗಂತಾ ಬರೀ ಪುರುಷರು ಮಾತ್ರ ರೇಸಿಂಗ್ ಮಜಾ ಮಾಡ್ತಾರೆ ಅನ್ಕೋಬೇಡಿ. ಲೇಡಿ ಡ್ರೈವರ್​ಗಳು ಸಹ ತಮ್ಮ ಕೈ ಚಳಕ ತೋರಿಸ್ತಾರೆ.

ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು
ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್
ಆಯೇಷಾ ಬಾನು
|

Updated on: Mar 22, 2021 | 8:38 AM

Share

ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಮೊಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳು ಕಮಾಲ್ ಮಾಡಿದ್ದಾರೆ. ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ ಱಲಿಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ರು.

ಕೊಡಗಿನ ಬೆಡಗಿಯರಾದ ಮೀನಾ, ನಿರ್ಮಲಾ, ಸಕಲೇಶಪುರದ ಜಾಸ್ಮಿನ್ ಮೊಟಾರ್ ರೇಸ್​ ಮೂಲಕ ಜನರನ್ನು ಸಖತ್ ರಂಜಿಸಿದ್ರು. ಡರ್ಟ್​ ಟ್ರ್ಯಾಕ್​ನಲ್ಲಿ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ರೆ. ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಕಮಾಲ್ ಮಾಡಿದ್ರು. ಮಾಮೂಲಿಯಾಗಿ ರೇಸ್ ನೋಡಿ ಖುಷಿ ಪಡ್ತಿದ್ದ ಮಹಿಳಾ ಮಣಿಗಳು ತಾವೇ ಖುದ್ದಾಗಿ ರೇಸಿಗಿಳಿದು ಗಮನಸೆಳೆದ್ರು.

ಮೋಟಾರ್ ಸ್ಪೋರ್ಟ್ಸ್​​ಗೆ ಉತ್ತೇಜನ ನೀಡೋ ಸಲುವಾಗಿ ಸಕಲೇಶಪುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ಱಲಿಯಲ್ಲಿ ಮೊದಲಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ರು. ಡರ್ಟ್ ಟ್ರ್ಯಾಕ್​ನಲ್ಲಿ ರೇಸರ್​ಗಳು ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿದ್ರು. ಱಲಿಗೆ ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 90 ಸ್ಪರ್ಧಿಗಳು ಆಗಮಿಸಿದ್ರು. ಕಳೆದ ಒಂದು ವರ್ಷ ಕೊರೊನಾ ಭೀತಿಯಿಂದ ಮನರಂಜನೆಯಿಲ್ಲದೆ ಮಂಕಾಗಿದ್ದ ಜನರಿಗೆ ಮೋಟಾರ್ ರೇಸ್ ರೋಮಾಂಚನಕಾರಿ ಅನುಭವ ನೀಡಿದೆ.

ಇದನ್ನೂ ಓದಿ: ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು: ರೋಚಕತೆ ಸೃಷ್ಟಿಸಿದ ಹೊಯ್ಸಳರ ನಾಡಿನ ಮೋಟಾರ್ ಸ್ಪೋರ್ಟ್ಸ್!

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ