AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು

ಮೋಟಾರ್ ರೇಸಿಂಗ್ ಅಂದ್ರೇನೇ ಹಾಗೆ.. ಅಲ್ಲಿ ಥ್ರಿಲ್ ಇರುತ್ತೆ.. ಮೈ ಜುಮ್ಮೆನ್ನಿಸೋ ರೋಚಕತೆ ಇರುತ್ತೆ.. ಹೀಗಂತಾ ಬರೀ ಪುರುಷರು ಮಾತ್ರ ರೇಸಿಂಗ್ ಮಜಾ ಮಾಡ್ತಾರೆ ಅನ್ಕೋಬೇಡಿ. ಲೇಡಿ ಡ್ರೈವರ್​ಗಳು ಸಹ ತಮ್ಮ ಕೈ ಚಳಕ ತೋರಿಸ್ತಾರೆ.

ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್.. ತಮ್ಮ ಪ್ರತಿಭೆಯಿಂದ ಜನರಿಗೆ ಥ್ರಿಲ್​ಕೊಟ್ಟ ಮಹಿಳಾ ಮಣಿಗಳು
ಮೋಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳ ಕಮಾಲ್
ಆಯೇಷಾ ಬಾನು
ಆಯೇಷಾ ಬಾನು|

Updated on: Mar 22, 2021 | 8:38 AM

Share

ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಮೊಟಾರ್ ರೇಸ್​ನಲ್ಲಿ ಲೇಡಿ ಡ್ರೈವರ್​ಗಳು ಕಮಾಲ್ ಮಾಡಿದ್ದಾರೆ. ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ ಱಲಿಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ರು.

ಕೊಡಗಿನ ಬೆಡಗಿಯರಾದ ಮೀನಾ, ನಿರ್ಮಲಾ, ಸಕಲೇಶಪುರದ ಜಾಸ್ಮಿನ್ ಮೊಟಾರ್ ರೇಸ್​ ಮೂಲಕ ಜನರನ್ನು ಸಖತ್ ರಂಜಿಸಿದ್ರು. ಡರ್ಟ್​ ಟ್ರ್ಯಾಕ್​ನಲ್ಲಿ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ರೆ. ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಕಮಾಲ್ ಮಾಡಿದ್ರು. ಮಾಮೂಲಿಯಾಗಿ ರೇಸ್ ನೋಡಿ ಖುಷಿ ಪಡ್ತಿದ್ದ ಮಹಿಳಾ ಮಣಿಗಳು ತಾವೇ ಖುದ್ದಾಗಿ ರೇಸಿಗಿಳಿದು ಗಮನಸೆಳೆದ್ರು.

ಮೋಟಾರ್ ಸ್ಪೋರ್ಟ್ಸ್​​ಗೆ ಉತ್ತೇಜನ ನೀಡೋ ಸಲುವಾಗಿ ಸಕಲೇಶಪುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ಱಲಿಯಲ್ಲಿ ಮೊದಲಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ರು. ಡರ್ಟ್ ಟ್ರ್ಯಾಕ್​ನಲ್ಲಿ ರೇಸರ್​ಗಳು ಮಿಂಚಿನ ವೇಗದಲ್ಲಿ ಕಾರು ಚಲಾಯಿಸಿದ್ರು. ಱಲಿಗೆ ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 90 ಸ್ಪರ್ಧಿಗಳು ಆಗಮಿಸಿದ್ರು. ಕಳೆದ ಒಂದು ವರ್ಷ ಕೊರೊನಾ ಭೀತಿಯಿಂದ ಮನರಂಜನೆಯಿಲ್ಲದೆ ಮಂಕಾಗಿದ್ದ ಜನರಿಗೆ ಮೋಟಾರ್ ರೇಸ್ ರೋಮಾಂಚನಕಾರಿ ಅನುಭವ ನೀಡಿದೆ.

ಇದನ್ನೂ ಓದಿ: ರಾಕೆಟ್ ವೇಗದಲ್ಲಿ ಮಿಂಚಿ ಮಾಯವಾಗುವ ಕಾರುಗಳು: ರೋಚಕತೆ ಸೃಷ್ಟಿಸಿದ ಹೊಯ್ಸಳರ ನಾಡಿನ ಮೋಟಾರ್ ಸ್ಪೋರ್ಟ್ಸ್!

Follow Us
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ