AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮನೆಯಲ್ಲಿರುವ ಒಂದೇ ಗಿಡದಲ್ಲಿ ವಿವಿಧ ತಳಿಯ ಮಾವಿನ ಹಣ್ಣು, ಹೂವುಗಳನ್ನು ಬೆಳೆಸಬೇಕೇ? ಈ ವಿಧಾನ ಅನುಸರಿಸಿ 

ಮನೆಯ ಸುತ್ತಮುತ್ತಲಿನ ಅರಳಿ ನಿಂತ ಬಣ್ಣ ಬಣ್ಣದ ಹೂವುಗಳು ಮನಸ್ಸಿಗೆ ಹಿತವೆನಿಸುತ್ತದೆ. ರುಚಿಕರವಾದ ಮಾವಿನಹಣ್ಣುಗಳನ್ನು ಕಂಡಾಗ ಬಾಯಲ್ಲಿ ನೀರೂರುತ್ತದೆ. ಈ ಎಲ್ಲಾ ರೀತಿಯ ಮಾವು ಮತ್ತು ದಾಸವಾಳ ಹೂವುಗಳನ್ನು ಬೆಳೆಯಬೇಕಾದರೆ ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ. ಆದರೆ ಈ ರೀತಿಯ ವಿಧಾನಗಳನ್ನು ಅನುಸರಿಸುವ ಮೂಲಕ ಒಂದೇ ಗಿಡದಲ್ಲಿ ಹಲವು ಬಗೆಯ ದಾಸವಾಳ ಹೂವುಗಳು ಹಾಗೂ ಮಾವಿನ ಹಣ್ಣನ್ನು ಬೆಳೆಯಲು ಸಾಧ್ಯವಂತೆ, ಅದೇಗೆ ಎನ್ನುವುದನ್ನು ತಿಳಿಯಲು ಈ ಮಾಹಿತಿಯನ್ನು ಓದಿ.

ನಿಮ್ಮ ಮನೆಯಲ್ಲಿರುವ ಒಂದೇ ಗಿಡದಲ್ಲಿ ವಿವಿಧ ತಳಿಯ ಮಾವಿನ ಹಣ್ಣು, ಹೂವುಗಳನ್ನು ಬೆಳೆಸಬೇಕೇ? ಈ ವಿಧಾನ ಅನುಸರಿಸಿ 
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Nov 21, 2024 | 5:23 PM

Share

ಮನೆಯ ಹಿತ್ತಲಲ್ಲಿ ಇರುವ ಜಾಗದಲ್ಲಿ ವಿವಿಧ ಬಗೆಬಗೆಯ ಹೂಗಳು, ಇಷ್ಟವಾದ ಹಣ್ಣುಗಳ ಸಸ್ಯಗಳನ್ನು ಬೆಳೆಯಬೇಕು ಎಂದುಕೊಳ್ಳುತ್ತಾರೆ. ಆದರೆ, ಜಾಗದ ಕೊರತೆಯಿಂದ ಹೆಚ್ಚಿನ ತಳಿಯ ಸಸ್ಯಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಈ ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಮನೆಯಲ್ಲೇ ಹೂವಿನ ತೋಟ ಮಾಡಲು ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಆದರೆ ಇದೀಗ ಹಳ್ಳಿಯಲ್ಲಾದರೂ ಸರಿಯೇ, ನಗರದಲ್ಲಾದರೂ ಸರಿಯೇ, ಸ್ವಲ್ಪ ಜಾಗ ಇದ್ದವರು ಕೂಡ ಎಲ್ಲ ಬಗೆಯ ಮಾವು, ದಾಸವಾಳದ ಹೂಗಳನ್ನು ನೆಡಬಹುದು.

ಹೌದು, ಪಾರ್ವತಿಪುರಂ ಮಾನ್ಯಂ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂತಸದ ಸುದ್ದಿ ನೀಡಿದ್ದಾರೆ. ವಿನೂತನ ರೀತಿಯಲ್ಲಿ ಸಸ್ಯಗಳನ್ನು ಬೆಳೆಸಬಹುದಾಗಿದೆ. ಒಂದೇ ಗಿಡದಲ್ಲಿ ಇಪ್ಪತ್ತು ಬಗೆಯ ಹಣ್ಣುಗಳು ಮತ್ತು ಇಪ್ಪತ್ತು ಬಗೆಯ ದಾಸವಾಳ ಹೂವುಗಳನ್ನು ಬೆಳೆಸಲು ತರಬೇತಿ ನೀಡಲಾಗುತ್ತದೆ. ಈ ರೀತಿಯ ಸಸ್ಯಗಳನ್ನು ನೆಡಲು ಮನೆಯ ಸುತ್ತಮುತ್ತಲೂ ಸ್ವಲ್ಪ ಜಾಗವಿದ್ದರೂ ಸಾಕಂತೆ.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಈ ಕೃಷಿ ಪದ್ಧತಿಯಲ್ಲಿ ಒಂದೇ ಮಾವಿನ ಗಿಡಕ್ಕೆ ವಿವಿಧ ಮಾವಿನ ಗಿಡಗಳ ಸಣ್ಣ ಕೊಂಬೆಗಳನ್ನು ಕಸಿ ಮಾಡಲಾಗುತ್ತದೆ. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಕಾಯಿ ಬಿಡುವ ಸಮಯಕ್ಕೆ ಬಂದಾಗ ಯಾವ ರೀತಿಯ ಗಿಡಗಳನ್ನು ಕಸಿ ಮಾಡಿದ್ದಿರೋ ಅದೇ ರೀತಿಯ ಮಾವು ಉತ್ಪಾದನೆಯಾಗುತ್ತದೆ. ಅಲ್ಲದೆ ದಾಸವಾಳ ಗಿಡಕ್ಕೂ ಈ ರೀತಿಯ ಕಸಿ ಮಾಡುವ ವಿಧಾನದ ಮೂಲಕ ಒಂದೇ ಗಿಡದಲ್ಲಿ ಇಪ್ಪತ್ತು ಬಗೆಯ ದಾಸವಾಳದ ತಳಿಗಳನ್ನು ಬೆಳೆಸಬಹುದು. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೈದೋಟದಲ್ಲಿ ಆಸಕ್ತಿ ಇರುವವರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ