AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಗೋವಾವು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದು, ಭಾರತೀಯರು ಮಾತ್ರವಲ್ಲದೇ, ವಿದೇಶಿಗರಿಗೆ ಇದು ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಆದರೆ ಇದೀಗ ಭಾರತದ ಕರಾವಳಿಯುದ್ದಕ್ಕೂ, ಅದರಲ್ಲಿಯೂ ಈ ಗೋವಾದಲ್ಲಿ ಐಷಾರಾಮಿ ಹೋಟೆಲ್‌ಗಳು ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೆಚ್ಚು ದುಬಾರಿಯಾಗಿವೆ. ಹೀಗಾಗಿ ಪ್ರವಾಸಿಗರನ್ನು ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ವಿದೇಶಿ ಬೀಚ್ ತಾಣಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 21, 2024 | 3:21 PM

Share

ಬೀಚ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಗೋವಾ. ಹೀಗಾಗಿ ಹೆಚ್ಚಿನವರು ಟ್ರಿಪ್ ಪ್ಲಾನ್ ಮಾಡುವಾಗ ಗೋವಾ ಮೊದಲ ಆಯ್ಕೆಯಾಗಿರುತ್ತದೆ. ಈ ಹಿಂದೆ ಬೀಚ್, ಸಮುದ್ರಾಹಾರ, ಕೈಗೆಟುಕುವ ದರದಲ್ಲಿ ಸಿಗುವ ಮದ್ಯ ಸೇರಿದಂತೆ ಹಲವು ಕಾರಣಗಳಿಂದ ಒಂದು ಕಾಲದಲ್ಲಿ ಗೋವಾವು ಪ್ರವಾಸಿಗರ ಸ್ವರ್ಗವಾಗಿತ್ತು. ಆದರೆ ಇದೀಗ ಬೆಂಗಳೂರಿಗರು ಗೋವಾ ಪ್ರವಾಸಕ್ಕೆ ವಿದಾಯ ಹೇಳುತ್ತಿದ್ದಾರೆ. ವಿಮಾನ ಪ್ರಯಾಣ ಮತ್ತು ವಸತಿ ವೆಚ್ಚಗಳು ಗೋವಾವನ್ನು ದುಬಾರಿಯಾಗಿ ಕಾಣುವಂತೆ ಮಾಡುತ್ತಿದೆ. ಹೀಗಾಗಿ ಕೆಲವು ಪ್ರವಾಸಿಗರು ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಹಣದುಬ್ಬರವು ಪ್ರಯಾಣ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಬೆಂಗಳೂರಿನ ಪ್ರವಾಸಿಗರು ಕರಾವಳಿ ಸ್ಥಳಗಳಿಗೆ ಚಳಿಗಾಲದಲ್ಲಿ ಪ್ರವಾಸಕ್ಕೆ ಯೋಜನೆ ರೂಪಿಸುವಾಗ ಹೋಟೆಲ್‌ಗಳು ಮತ್ತು ವಿಮಾನಯಾನ ಸಂಸ್ಥೆಗಳು ಕೈಗೆಟುಕುವ ದರದಲ್ಲಿಯೇ ಎಂದು ನೋಡುತ್ತಿದ್ದಾರೆ. ಇದೆಲ್ಲವನ್ನು ಲೆಕ್ಕ ಹಾಕಿ ಕಡಿಮೆ ವೆಚ್ಚದ ಸ್ಥಳಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ ಗೋವಾ ಪ್ರವಾಸ ದುಬಾರಿಯಾಗಿರುವುದರಿಂದ ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ವಿದೇಶಿ ಬೀಚ್ ತಾಣಗಳನ್ನು ಆಯ್ಕೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸುತ್ತದೆ ಎನ್ನಲಾಗಿದೆ. ಬೆಂಗಳೂರು ಮೂಲದ ಟೂರ್ ಆಪರೇಟರ್‌ಗಳು ಪ್ರವಾಸಿಗರ ಆಯ್ಕೆಗಳ ಬದಲಾವಣೆಗೆ ಏರುತ್ತಿರುವ ಬೆಲೆಗಳು ಮತ್ತು ಜನಪ್ರಿಯ ಭಾರತೀಯ ಕಡಲತೀರಗಳಲ್ಲಿ ಜನದಟ್ಟಣೆ ಕಾರಣ ಎಂದಿದ್ದಾರೆ.

ಸ್ಕೈವೇ ಟೂರ್ಸ್‌ನ ಟ್ರಾವೆಲ್ ಕನ್ಸಲ್ಟೆಂಟ್ ಮತ್ತು ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯದರ್ಶಿ ಎಸ್ ಮಹಾಲಿಂಗಯ್ಯ, ಹಣದುಬ್ಬರವು ಆಗ್ನೇಯ ಏಷ್ಯಾದಲ್ಲಿ ಹೆಚ್ಚು ಬಜೆಟ್ ಸ್ನೇಹಿ ಆಯ್ಕೆಗಳತ್ತ ಪ್ರವಾಸಿಗರು ಮನಸ್ಸು ಮಾಡುತ್ತಿದ್ದಾರೆ. ಗೋವಾದಂತಹ ಜನಪ್ರಿಯ ಭಾರತೀಯ ಕರಾವಳಿ ತಾಣಗಳಲ್ಲಿನ ಐಷಾರಾಮಿ ಹೋಟೆಲ್‌ಗಳ ವೆಚ್ಚವು ಆಗ್ನೇಯ ಏಷ್ಯಾಕ್ಕೆ ರೌಂಡ್‌ಟ್ರಿಪ್ ವಿಮಾನಗಳ ವೆಚ್ಚಕ್ಕಿಂತ ಹೆಚ್ಚಾಗಿದೆ. ಗೋವಾದಿಂದ ಕೊಚ್ಚಿಯ ಪಂಚತಾರಾ ಹೋಟೆಲ್‌ಗಳು ಪ್ರತಿ ರಾತ್ರಿಗೆ ಸುಮಾರು 20,000 ರಿಂದ 25,000 ರೂ. ಜೊತೆಗೆ 18% ಜಿಎಸ್‌ಟಿಯನ್ನು ವಿಧಿಸುತ್ತವೆ. ಈ ಬೆಲೆಗೆ ವಿದೇಶದಲ್ಲಿ ಉತ್ತಮ ಅನುಭವವನ್ನು ಪಡೆಯಲು ಸಾಧ್ಯವಾಗುವ ಕಾರಣ ವಿದೇಶಿ ತಾಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬ್ಯಾಂಕಾಕ್, ಬಾಲಿ, ಸಿಂಗಾಪುರ್ ಹಾಗೂ ಕೊಲಂಬೊ ಸೇರಿದಂತೆ ಹೀಗೆ ಹಲವು ಆಗ್ನೇಯ ಏಷ್ಯಾದ ತಾಣಗಳಿಗೆ ಕಡಿಮೆ ಬೆಲೆಯಲ್ಲಿ ಪ್ರವಾಸ ಕೈಗೊಳ್ಳಬಹುದು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಈ ಅಂತರಾಷ್ಟ್ರೀಯ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು ಮೂಲದ ಪ್ರಯಾಣಿಕರಾದ ಧುಬೋ ಪುರ್ಕಾಯಸ್ಥ ಅವರು ಗೌಪ್ಯತೆಹಾಗೂ ವಿಶ್ರಾಂತಿಗಾಗಿ ನಿಶ್ಯಬ್ದ ಕಡಲತೀರಗಳನ್ನು ಆದ್ಯತೆ ನೀಡುತ್ತಾರೆ. ಆದರೆ ಈ ಭಾರತೀಯ ಕಡಲತೀರಗಳು ವಿಶೇಷವಾಗಿ ಪಶ್ಚಿಮ ಕರಾವಳಿಯೂ ವರ್ಷಪೂರ್ತಿ ಜನಸಂದಣಿಯಿಂದ ಕೂಡಿರುತ್ತವೆ ಎಂದಿದ್ದಾರೆ. ಒಂದು ಕಾಲದಲ್ಲಿ ಏಕಾಂತವಾಗಿದ್ದ ಗೋಕರ್ಣದ ಕೆಲವು ಬೀಚ್‌ಗಳು ಈಗ ಜನದಟ್ಟಣೆಯಿಂದ ಕೂಡಿದೆ. ಇದಕ್ಕೆ ತದ್ವಿರುದ್ಧ ಎನ್ನುವಂತೆ ಥೈಲ್ಯಾಂಡ್ ಅಥವಾ ವಿಯೆಟ್ನಾಂನಲ್ಲಿರುವ ಕಡಲತೀರಗಳು ಇವೆ. ಇಲ್ಲಿ ಮುಂಗಡವಾಗಿ ಕಾಯ್ದಿರಿಸಿದರೆ, ಪಶ್ಚಿಮ ಕರಾವಳಿಯಿಂದ 10,000 ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬ್ಯಾಂಕಾಕ್‌ಗೆ ವಿಮಾನದಲ್ಲಿ ತೆರಳಬಹುದು. ಇದು ಅಂತಾರಾಷ್ಟ್ರೀಯ ಪ್ರಯಾಣವನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ತತ್ವಶಾಸ್ತ್ರ ಎಷ್ಟು ಅಗತ್ಯ? ಇಲ್ಲಿದೆ ಮಾಹಿತಿ

ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಏನಿದೆ?

ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯು 2024-29ರ ಹೊಸ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ರಾಜ್ಯದ 320 ಕಿಮೀ ಕರಾವಳಿಯನ್ನು ಪ್ರಮುಖ ಕಡಲತೀರದ ತಾಣವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಲಾಖೆಯು ಕರಾವಳಿಯಲ್ಲಿ 40 ಸ್ಥಳಗಳನ್ನು ಗುರುತಿಸಿದೆ. ಕರಾವಳಿ ಕರ್ನಾಟಕವು 2023 ರಲ್ಲಿ 8 ಕೋಟಿಗೂ ಹೆಚ್ಚು ಸಂದರ್ಶಕರನ್ನು ಕಂಡಿದ್ದು, ಇದು ರಾಜ್ಯದ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ 12-15% ರಷ್ಟಿದೆ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ