AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ

ಒಮ್ಮೆ ಮಕ್ಕಳು ಮೊಬೈಲ್​ ಬಳಸಲು ಹಿಡಿದರೆ ಮನೆಯ ಎಲ್ಲಾ ಭಾಗಗಳಲ್ಲಿ ಕುಳಿತು ಮೊಬೈಲ್​ ನೋಡುತ್ತಾರೆ. ಇದರಿಂದ ಫೋನ್​ನ ಬಳಕೆ ಅತಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ನೋ ಸ್ಕ್ರೀನ್ ಝೋನ್​ ರೂಲ್ಸ್​ ಹಾಕಿ.

ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane

Updated on: Feb 06, 2022 | 1:03 PM

Share

ಕೊರೊನಾ (Corona) ಸಾಂಕ್ರಾಮಿಕ ಆರಂಭವಾದ ಮೇಲೆ ಲಾಕ್​ ಡೌನ್​, ಕರ್ಫ್ಯೂ ಎಂದು ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತಾಗಿದೆ. ಆನ್ಲೈನ್​ ಕ್ಲಾಸ್ (Online Class)​ ಆರಂಭವಾದ ಮೇಲೆ ಮೊಬೈಲ್​ ಸ್ಕ್ರೀನ್​ಗಳನ್ನು (Mobile Screen) ಮಕ್ಕಳು ನೋಡುವುದು ಅತಿಯಾಗಿದೆ. ಇದರಿಂದ ಮ್ಕಳ ಕಣ್ಣಿನ ದೃಷ್ಟಿಗೂ ಹಾನಿಕಾರಕ. ಅಲ್ಲದೆ ದೈಹಿಕ, ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಆನ್ಲೈನ್​ ಕ್ಲಾಸ್​ ಅನಿವಾರ್ಯವಾಗಿದೆ. ಹೀಗಾಗಿ ಆ ಸಂದರ್ಭದಲ್ಲಿ ಮೊಬೈಲ್​, ಟ್ಯಾಬ್​ಗಳನ್ನು ಬಳಸಲೇಬೇಕು. ಅದನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಆದಷ್ಟು ಮಕ್ಕಳನ್ನು ಮೊಬೈಲ್​, ಟ್ಯಾಬ್​ನಂತಹ ಗ್ಯಾಜೆಟ್​ಗಳಿಂದ ದೂರವಿಡಿ. ಅಲ್ಲದೆ ಇಡೀ ದಿನ ಮೊಬೈಲ್​ ಅನ್ನು ನೋಡುತ್ತಿರುವುದರಿಂದ ಇತರರೊಂದಿಗೆ ಬೆರೆಯುವ ಮನಸ್ಥಿತಿಯೂ ಮಕ್ಕಳಲ್ಲಿ ಕಡಿಮೆಯಾಗುತ್ತದೆ. ಸಮಾಜದೊಂದಿಗೆ ಬೆರೆಯುವ ಮನಸ್ಥಿತಿ ಕಡಿಮೆಯಾಗಿ ಒಂಟಿಯಾಗಿರುತ್ತಾರೆ. ಕ್ರಮೇಣ ಇದು ಮಾನಸಿಕ ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಮೊಬೈಲ್​ ಟ್ಯಾಬ್​ಗಳ ಅತಿಯಾದ ಬಳಕೆಯನ್ನು ತಪ್ಪಿಸಲು ಈ ಕ್ರಮಗಳನ್ನು ಅಳವಡಿಸಿಕೊಳ್ಳಿ.

ನೋ ಸ್ಕ್ರೀನ್​ ಝೋನ್​ ನಿಯಮ ಹಾಕಿ: ಒಮ್ಮೆ ಮಕ್ಕಳು ಮೊಬೈಲ್​ ಬಳಸಲು ಹಿಡಿದರೆ ಮನೆಯ ಎಲ್ಲಾ ಭಾಗಗಳಲ್ಲಿ ಕುಳಿತು ಮೊಬೈಲ್​ ನೋಡುತ್ತಾರೆ. ಇದರಿಂದ ಫೋನ್​ನ ಬಳಕೆ ಅತಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ನೋ ಸ್ಕ್ರೀನ್ ಝೋನ್​ ರೂಲ್ಸ್​ ಹಾಕಿ. ಅಂದರೆ ಮನೆಯ ಯಾವ ಯಾವ ಸ್ಥಳಗಳಲ್ಲಿ ಮೊಬೈಲ್​ಅನ್ನು ಬಳಸಬಾರದು ಎಂದು ನಿಯಮ ಮಾಡಿ. ಉದಾಹರಣೆಗೆ ಮಲಗುವ ವೇಳೆ, ಊಟ ಮಾಡುವ ಜಾಗದಲ್ಲಿ ಇತ್ಯಾದಿ. ಇದರಿಂದ ಮಕ್ಕಳು ಅತಿ ಹೆಚ್ಚು ಕಾಲ ಮೊಬೈಲ್​ ಬಳಸುವುದು ತಪ್ಪುತ್ತದೆ.

ಮಕ್ಕಳೊಂದಿಗೆ ಸಮಯ ಕಳೆಯಿರಿ: ಬೆಳೆಯುವ ಮಕ್ಕಳಿಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಹಂಬಲವಿರುತ್ತದೆ. ಹೀಗಾಗಿ ಪೋಷಕರಾದ ನೀವು ಅವರೊಂದಿಗೆ ಹೆಚ್ಚು ಸಮಯಕಳೆಯಿರಿ. ಅವರೊಂದಿಗೆ ಆಟವಾಡಿ. ಅವರನ್ನು ಜನರೊಂದಿಗೆ ಬೆರೆಯಲು ಬಿಡಿ. ಇದರಿಂದ ಸಮಾಜದ ಭಯ ಅವರನ್ನು ಕಾಡುವುದಿಲ್ಲ. ಅಲ್ಲದೆ ನೀವು ಅವರೊಂದಿಗೆನೀವು ಹೆಚ್ಚು ಕಾಲ ಕಳೆದಾಗ ಅವರಿಗೆ ನಿಮ್ಮ ಮೇಲಿನ ನಂಬಿಕೆ ಬೆಳೆಯುತ್ತದೆ. ಮೊಬೈಲ್​ ಬಳಕೆ ಕಡಿಮೆಯಾಗುತ್ತದೆ.

ಅಡುಗೆ ಮಾಡುವಾಗ ನಿಮ್ಮೊಂದಿಗೆ ಸೇರಿಸಿಕೊಳ್ಳಿ: ಅಡುಗೆ ಮಾಡುವುದರಿಂದ ಹೊಸ ವಿಷಯಗಳ ಕಲಿಯಾಗುತ್ತದೆ. ಗಂಡು ಮಕ್ಕಳಾಗಲೀ ಹೆಣ್ಣು ಮಕ್ಕಳಾಗಲೀ ಅಡುಗೆ ಮಾಡುವುದನ್ನು ಕಲಿತುಕೊಳ್ಳುವುದು ಈಗಿನ ದಿನಗಳಲ್ಲಿ ಅಗತ್ಯವಾಗಿದೆ. ಒಟ್ಟಿಗೆ ಅಡುಗೆ ಮಾಡುವುದರಿಂದ ಪ್ರೀತಿ ತುಂಬಿದ ಆಹಾರವೂ ತಯಾರಾಗುತ್ತದೆ ಜತೆಗೆ ಬಾಂಧವ್ಯೂ ಬೆಸೆಯುತ್ತದೆ.

ಹೊರಗಿನ ಪ್ರಪಂಚದ ಅರಿವು ಮೂಡಿಸಿ: ಪ್ರಪಂಚ ವಿಶಾಲವಾಗಿದೆ. ನಿಮ್ಮ ಮಕ್ಕಳಿಗೆ ಒಂದಷ್ಟು ವಿಚಾರಗಳನ್ನು ತಿಳಿಸಿಕೊಡಿ. ನಿಮಗಿರುವ ಹವ್ಯಾಸಗಳನ್ನು ಅವರಿಗೂ ಕಲಿಸಿಕೊಡಿ. ಗಾರ್ಡನಿಂಗ್​, ಹೂಗಿಡಗಳನ್ನು ನೆಡೆವುದು ಹೀಗೆ ಮನಸ್ಸಿಗೆ ಖುಷಿ ನೀಡುವ ಅಭ್ಯಾಸಗಳನ್ನು  ರೂಢಿ ಮಾಡಿಸಿ. ಆಗಾಗ ಹೊರಗಿನ ಪ್ರಪಂಚಕ್ಕೆ ಕರೆದೊಯ್ಯಿರಿ ವರ್ಷಕ್ಕೊಂದಾದರೂ ಹೊಸ ಸ್ಥಳಗಳನ್ನು ತೋರಿಸಿ, ಜೀವನ ಪ್ರೀತಿ ಕಲಿಸಿ. ಮೊಬೈಲ್​ಗಳ ಬಳಕೆ ಕಡಿಮೆ ಮಾಡಿ ನಿಮ್ಮೊಂದಿಗೆ ಇರುವಂತೆ ನೋಡಿಕೊಳ್ಳಿ.

ಜೀವನದ ಗುರಿಯ ಬಗ್ಗೆ ಸ್ಪಷ್ಟತೆ  ನೀಡಿ: ಪ್ರತೀ ಮಕ್ಕಳಿಗೆ ತಾನೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎನ್ನುವ ಗುರಿ ಇರಬೇಕು. ಇದನ್ನು ತಂದೆ ತಾಯಿಗಳೇ ಅವರ ಮನಸ್ಸಿನಲ್ಲಿ ಬಿತ್ತಬೇಕು. ಸರಿಯಾದ ಜೀವನದ ಆಯ್ಕೆ ಮಾಡಿಕೊಳ್ಳುವತ್ತ ಅವರಿಗೆ ಸಲಹೆ ನೀಡಬೇಕು.  ಅವರೊಂದಿಗೆ ಕುಳಿತು ಮಾತನಾಡಿ ಆಗ ಮೊಬೈಲ್​ನೆಡೆಗೆ ಅವರ ಗಮನ ಕಡಿಮೆಯಾಗುತ್ತದೆ.

ಇದನ್ನೂ ಓದಿ:

ಪಾಪ್​ಕಾರ್ನ್​ ತಿನ್ನುವುದರಿಂದಲೂ ದೇಹದ ತೂಕ ಇಳಿಸಿಕೊಳ್ಳಬಹುದು; ಇಲ್ಲಿದೆ ಸಂಪೂರ್ಣ ಮಾಹಿತಿ

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು