AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ತೂಕ ನಿರ್ವಹಣೆಗೆ ಆಯುರ್ವೇದ: ಬಾಬಾ ರಾಮದೇವ್ ಅವರ ಯೋಗ ಮತ್ತು ಆಹಾರ ಕ್ರಮಗಳು

Baba Ramdev's Ayurveda Tips: Weight Gain & Loss Solutions - ಬಾಬಾ ರಾಮದೇವ್ ಅವರು ಆಯುರ್ವೇದ ಮತ್ತು ಯೋಗದ ಮೂಲಕ ಆರೋಗ್ಯಕರ ತೂಕ ನಿರ್ವಹಣೆಯ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಕಡಿಮೆ ತೂಕ ಹಾಗೂ ಅಧಿಕ ತೂಕದ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಅಶ್ವಗಂಧ, ಶತಾವರಿ ಮುಂತಾದ ಆಯುರ್ವೇದ ಔಷಧಗಳು ಹಾಗೂ ಯೋಗಾಸನಗಳನ್ನು ಸೂಚಿಸಲಾಗಿದೆ. ತೂಕ ಇಳಿಸಿಕೊಳ್ಳಲು ಮಂಡೂಕಾಸನ, ವಕ್ರಾಸನ ಮುಂತಾದ ಯೋಗಾಸನಗಳನ್ನು ಮಾಡಲು ಸಲಹೆ ನೀಡಲಾಗಿದೆ.

Patanjali: ತೂಕ ನಿರ್ವಹಣೆಗೆ ಆಯುರ್ವೇದ: ಬಾಬಾ ರಾಮದೇವ್ ಅವರ ಯೋಗ ಮತ್ತು ಆಹಾರ ಕ್ರಮಗಳು
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 21, 2025 | 6:20 PM

Share

ಭಾರತದಲ್ಲಿ ಆಯುರ್ವೇದವು ವೇದಗಳ ಕಾಲದಿಂದಲೂ ಇದೆ ಎನ್ನುತ್ತಾರೆ. ಜನರು ತಮ್ಮ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯಾಗಿ ಗಿಡಮೂಲಿಕೆಗಳನ್ನು ಬಳಸುತ್ತಿದ್ದರು. ಕಾಲಾನಂತರದಲ್ಲಿ, ಜನರು ಇಂಗ್ಲಿಷ್ ಔಷಧಿಗಳ ಮೇಲೆ ಅವಲಂಬಿತರಾಗತೊಡಗಿದರು. ಈ ಮಧ್ಯೆ ಪತಂಜಲಿ ಸಂಸ್ಥೆ ಮತ್ತೊಮ್ಮೆ ಆಯುರ್ವೇದದ ಜನಪ್ರಿಯತೆ ಮತ್ತು ಪ್ರಸ್ತುತತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಆಯುರ್ವೇದ ಔಷಧಗಳಿಂದ ಹಿಡಿದು ವಿವಿಧ ದಿನಬಳಕೆಯ ಆಹಾರವಸ್ತುಗಳವರೆಗೆ ಪತಂಜಲಿ ಉತ್ಪನ್ನಗಳನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಪತಂಜಲಿ ಸಂಸ್ಥಾಪಕರಲ್ಲಿ ಒಬ್ಬರಾದ ಬಾಬಾ ರಾಮದೇವ್ (Baba Ramdev), ಪತಂಜಲಿ ಕಂಪನಿ ಹುಟ್ಟುವ ಉನ್ನವೇ ಜನಪ್ರಿಯವಾದ ವ್ಯಕ್ತಿ. ತಮ್ಮ ಯೋಗ ಪ್ರದರ್ಶನದ ಮೂಲಕ ಹೆಸರುವಾಸಿಯಾದವರು. ಈಗಲೂ ಅವರು ಯೋಗ ಮತ್ತು ಆಯುರ್ವೇದದಿಂದ ಆರೋಗ್ಯ ಹೇಗೆ ಪಾಲನೆ ಮಾಡಬೇಕೆಂದು ವಿವಿಧ ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತಾರೆ.

ಇಂದಿನ ಕಾಲದಲ್ಲಿ ಬೊಜ್ಜು ಬಹಳ ಗಂಭೀರ ಸಮಸ್ಯೆ. ಕಳಪೆ ಆಹಾರ ಪದ್ಧತಿಯಿಂದಾಗಿ, ತೂಕ ವೇಗವಾಗಿ ಹೆಚ್ಚಾಗುತ್ತದೆ ಮತ್ತು ಜನರು ಅದರ ಬಗ್ಗೆ ಗಮನ ಹರಿಸದಿದ್ದಾಗ, ಅದು ಬೊಜ್ಜಾಗಿ ಪರಿಣಮಿಸುತ್ತದೆ ಮತ್ತು ನಿಮ್ಮನ್ನು ಅನೇಕ ರೋಗಗಳಿಗೆ ಬಲಿಯಾಗಿಸುತ್ತದೆ. ಅದೇ ರೀತಿ, ಕಡಿಮೆ ತೂಕವು ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿಮ್ಮ ಎತ್ತರ, ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ಆರೋಗ್ಯಕರ ತೂಕವನ್ನು ಹೊಂದಿರುವುದು ಬಹಳ ಮುಖ್ಯ. ನೀವು ವಿನಾಕಾರಣ ತುಂಬಾ ತೆಳ್ಳಗಾಗುತ್ತಿದ್ದೀರಿ, ನಿಮಗೆ ಏನನ್ನೂ ತಿನ್ನಲು ಅಥವಾ ಕುಡಿಯಲು ಇಷ್ಟವಾಗುತ್ತಿಲ್ಲ ಎಂದು ಚಿಂತಿಸುತ್ತಿದ್ದರೆ, ಬಾಬಾ ರಾಮದೇವ್ ತಿಳಿಸುವ ಸಲಹೆಗಳನ್ನು ಪಾಲಿಸಿರಿ.

ಇದನ್ನೂ ಓದಿ
Image
ದಿನಾ ಒಂದು ಕೆಜಿ ತೂಕ ಇಳಿಸಲು ರಾಮದೇವ್ ಟಿಪ್ಸ್
Image
ಹೊಟ್ಟೆ ಕರಗಿಸಬೇಕಾ? ಹಾಗಿದ್ರೆ ಚಹಾ ಜೊತೆ ಈ ತಿಂಡಿಗಳನ್ನು ಸೇವಿಸಬೇಡಿ
Image
ಮಲಬದ್ಧತೆ ಸಮಸ್ಯೆಗೆ ಪತಂಜಲಿ ಪರಿಹಾರ
Image
ವಾತ ದೋಷದ ಪರಿಣಾಮ ಏನು? ತಿಳಿಯಿರಿ ಪರಿಹಾರ

ಇದನ್ನೂ ಓದಿ: Patanjali Weight Loss: ನಿತ್ಯವೂ ಒಂದು ಕಿಲೋ ತೂಕ ಇಳಿಕೆ ಸಾಧ್ಯ: ಬಾಬಾ ರಾಮದೇವ್ ತಂತ್ರ ತಿಳಿಯಿರಿ

ತೂಕ ಕಡಿಮೆ ಇದ್ದರೆ ಏನು ಮಾಡಬೇಕು?

ಬಾಬಾ ರಾಮದೇವ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್​​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕೃಶ ಮಹಿಳೆಯೊಬ್ಬರನ್ನು ತೋರಿಸಿದ್ದಾರೆ. ಆ ಮಹಿಳೆ ಒಂದೊಮ್ಮೆ 28 ಕಿಲೋ ತೂಕಕ್ಕೆ ಇಳಿದು ಹೋಗಿದ್ದರಂತೆ. ಮನೆಯ ದೈನಂದಿನ ಕೆಲಸಗಳನ್ನು ಮಾಡಲೂ ಆಗುತ್ತಿರಲಿಲ್ಲ. ಆದರೆ, ಪತಂಜಲಿ ಹೇಳಿದ ಸಲಹೆ ಪಾಲಿಸಿದ ಬಳಿಕ ಆಕೆಯ ತೂಕ 28ರಿಂದ 38 ಕಿಲೋಗೆ ಏರಿದೆಯಂತೆ.

ಬಾಬಾ ರಾಮದೇವ್ ಇನ್​ಸ್ಟಾ ವಿಡಿಯೋ

View this post on Instagram

A post shared by Swami Ramdev (@swaamiramdev)

ಆರೋಗ್ಯಯುತವಾಗಿ ತೂಕ ಹೆಚ್ಚಿಸಿಕೊಳ್ಳಲು ಅಶ್ವಗಂಧ, ಶತಾವರಿ, ಬಾಳೆಹಣ್ಣು, ಮಾವು, ಖರ್ಜೂರ, ಹಾಲು ಇತ್ಯಾದಿಗಳನ್ನು ಸೇವಿಸಬೇಕು. ಇದರ ಜೊತೆಗೆ ಯೋಗ ಮಾಡಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ.

ತೂಕ ಇಳಿಸಿಕೊಳ್ಳಲು ಈ ಯೋಗಾಸನಗಳನ್ನು ಮಾಡಿ

ಬಾಬಾ ರಾಮದೇವ್ ತೂಕ ಇಳಿಸಿಕೊಳ್ಳಲು ಯೋಗಾಸನಗಳನ್ನು ಸೂಚಿಸಿದ್ದಾರೆ, ಇದನ್ನು ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಅನುಸರಿಸಬಹುದು. ಇದು ಹೊಟ್ಟೆಯ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ. ಈ ಎಲ್ಲಾ ಆಸನಗಳು ಮಧುಮೇಹದಿಂದ ಬಳಲುತ್ತಿರುವವರಿಗೂ ಪ್ರಯೋಜನಕಾರಿ. ಮೊದಲ ಆಸನವೆಂದರೆ ಮಂಡೂಕಾಸನ, ಇದರಲ್ಲಿ ನೀವು ವಜ್ರಾಸನದಲ್ಲಿ ಕುಳಿತು ನಿಮ್ಮ ಕೈಗಳನ್ನು ನಿಮ್ಮ ಹೊಟ್ಟೆಯ ಮೇಲೆ ಇಟ್ಟುಕೊಂಡು ಮುಂದಕ್ಕೆ ಬಾಗಿರಬೇಕು. ಇದರ ಜೊತೆಗೆ, ನೀವು ವಕ್ರಾಸನವನ್ನು ಮಾಡಬಹುದು. ಪವನಮುಕ್ತಾಸನವು ಸುಲಭವಾದ ಆದರೆ ಪರಿಣಾಮಕಾರಿ ಯೋಗಾಸನವಾಗಿದೆ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ. ಬಾಬಾ ರಾಮದೇವ್ ತೂಕ ಇಳಿಸಲು ಈ ಯೋಗ ಭಂಗಿ ಸರಣಿಯಲ್ಲಿ ಉತ್ತಾನಪಾದಾಸನ, ಸರ್ವಾಂಗಾಸನ, ಹಲಾಸನ, ಚಕ್ಕಿಚಲನಾಸನ, ಅರ್ಧನ್ವಾಸನ, ಶಲಭಾಸನಗಳನ್ನು ಮಾಡಲು ಸೂಚಿಸಿದ್ದಾರೆ.

ಬಾಬಾ ರಾಮದೇವ್ ವಿಡಿಯೋ

View this post on Instagram

A post shared by Swami Ramdev (@swaamiramdev)

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಯಾ? ಯಾವ ಆಹಾರ ಸೂಕ್ತ? ಇಲ್ಲಿದೆ ಪತಂಜಲಿ ಸಲಹೆ

ಬೊಜ್ಜಿನಿಂದ ಉಂಟಾಗುವ ಸಮಸ್ಯೆಗಳು

ತೂಕ ಹೆಚ್ಚಾದರೆ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಸಾಧ್ಯತೆ ಹೆಚ್ಚಾಗುತ್ತದೆ. ತೂಕ ಹೆಚ್ಚುತ್ತಿದ್ದರೆ, ಮೊದಲು ನೀವು ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಇದರಲ್ಲಿ ಆಹಾರಕ್ರಮವನ್ನು ಸಮತೋಲನಗೊಳಿಸುವುದು ಮತ್ತು ದೈನಂದಿನ ದಿನಚರಿಯಲ್ಲಿ ಯೋಗ ಅಥವಾ ವ್ಯಾಯಾಮ ಮಾಡುವುದು ಸೇರಿದೆ. ಆದರೆ ಇದರ ಹೊರತಾಗಿಯೂ, ತೂಕ ಹೆಚ್ಚುತ್ತಲೇ ಇದ್ದರೆ, ತಜ್ಞರನ್ನು ಸಂಪರ್ಕಿಸುವುದು ಅವಶ್ಯಕ.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ