AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್​ಟ್ಯಾನ್ ಆದ ಚರ್ಮಕ್ಕೆ ನೈಸರ್ಗಿಕವಾಗಿ ಹೊಳಪು ನೀಡುವುದು ಹೇಗೆ?

ಮುಖ ಮತ್ತು ತ್ವಚೆಯಿಂದ ಸನ್ ಟ್ಯಾನ್ ತೆಗೆಯುವುದು ಹೇಗೆ? ನಿಮ್ಮ ಚರ್ಮದಿಂದ ಸೂರ್ಯನ ಸುಡುವಿಕೆಯಿಂದ ಉಂಟಾಗುವ ಕಪ್ಪು ಕಲೆಗಳನ್ನು ತಪ್ಪಿಸಲು ಮತ್ತು ತೆಗೆದುಹಾಕಲು ಆಯುರ್ವೇದದ ಕೆಲವು ಸಲಹೆಗಳು ಮತ್ತು ಪರಿಹಾರಗಳು ಇಲ್ಲಿವೆ.

ಸನ್​ಟ್ಯಾನ್ ಆದ ಚರ್ಮಕ್ಕೆ ನೈಸರ್ಗಿಕವಾಗಿ ಹೊಳಪು ನೀಡುವುದು ಹೇಗೆ?
ಸನ್​ಟ್ಯಾನ್ Image Credit source: iStock
ಸುಷ್ಮಾ ಚಕ್ರೆ
|

Updated on: Nov 15, 2023 | 7:25 PM

Share

ಬಿಸಿಲಿನಿಂದ ಕೆಲವರ ತ್ವಚೆ ಬಹಳ ಬೇಗ ಟ್ಯಾನ್ ಆಗಿ ಬಿಡುತ್ತದೆ. ಸೂರ್ಯನ ಬಿಸಿಲು ತಾಗಿದ ಜಾಗದಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ. ಬೇಸಿಗೆ ಅಥವಾ ಚಳಿಗಾಲದಲ್ಲಿ ಸೂರ್ಯನ ಬಿಸಿಲು ನಿಮ್ಮ ಚರ್ಮದ ಹೊಳಪನ್ನು ಕಡಿಮೆ ಮಾಡಬಹುದು. ಸೂರ್ಯನ ಬೆಳಕು ಚರ್ಮದ ಮೇಲೆ ಕಠಿಣವಾಗಿರುತ್ತದೆ. ಇದು ನಿಮ್ಮ ಚರ್ಮದಿಂದ ತೇವಾಂಶವನ್ನು ತೆಗೆದುಹಾಕುತ್ತದೆ. ಹಾಗಾದರೆ, ಮುಖ ಮತ್ತು ತ್ವಚೆಯಿಂದ ಸನ್ ಟ್ಯಾನ್ ತೆಗೆಯುವುದು ಹೇಗೆ? ನಿಮ್ಮ ಚರ್ಮದಿಂದ ಸೂರ್ಯನ ಸುಡುವಿಕೆಯಿಂದ ಉಂಟಾಗುವ ಕಪ್ಪು ಕಲೆಗಳನ್ನು ತಪ್ಪಿಸಲು ಮತ್ತು ತೆಗೆದುಹಾಕಲು ಆಯುರ್ವೇದದ ಕೆಲವು ಸಲಹೆಗಳು ಮತ್ತು ಪರಿಹಾರಗಳು ಇಲ್ಲಿವೆ.

ಅಲೋವೆರಾ ಜೆಲ್:

ಅಲೋವೆರಾ ಜೆಲ್ ತ್ವಚೆಯ ಮೇಲಿನ ಕಲೆಯನ್ನು ಶಮನಗೊಳಿಸುವ ಅಂಶವಾಗಿದೆ. ಸೂರ್ಯನಿಂದ ಉಂಟಾಗುವ ಶಾಖ ಮತ್ತು ಸುಡುವ ಸಂವೇದನೆಯನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ರೆಫ್ರಿಜರೇಟರ್ ಅಥವಾ ಐಸ್-ಬಕೆಟ್​ನಲ್ಲಿಟ್ಟು, ಸನ್​ ಬರ್ನ್ ಆದ ಜಾಗಕ್ಕೆ ನಿಧಾನವಾಗಿ ಹಚ್ಚಿಕೊಳ್ಳಿ.

ಇದನ್ನೂ ಓದಿ: ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?

ಆಪಲ್ ಸೈಡರ್ ವಿನೆಗರ್:

ಆಪಲ್ ಸೈಡರ್ ವಿನೆಗರ್ ಸೂಕ್ಷ್ಮಜೀವಿಗಳನ್ನು ಕೊಲ್ಲಲು, ಉರಿಯೂತವನ್ನು ಶಾಂತಗೊಳಿಸಲು ಮತ್ತು ನೋವಿನ, ತುರಿಕೆ ಚರ್ಮವನ್ನು ನಿವಾರಿಸಲು ಸಹಕಾರಿಯಾಗಿದೆ.

ಸೌತೆಕಾಯಿ, ರೋಸ್ ವಾಟರ್ ಮತ್ತು ನಿಂಬೆ ರಸ:

ನಿಂಬೆ ನೈಸರ್ಗಿಕ ಬ್ಲೀಚ್ ಆಗಿದೆ ಮತ್ತು ಸೌತೆಕಾಯಿ ಮತ್ತು ರೋಸ್ ವಾಟರ್ ತಂಪಾಗಿಸುವ ಏಜೆಂಟ್​ಗಳಾಗಿವೆ. ಒಂದು ಬಟ್ಟಲಿನಲ್ಲಿ ನಿಂಬೆ ರಸ, ಸೌತೆಕಾಯಿ ಮತ್ತು ರೋಸ್ ವಾಟರ್ ಅನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಹತ್ತಿ ಪ್ಯಾಡ್ ಬಳಸಿ ಈ ಮಿಶ್ರಣವನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿಕೊಳ್ಳಿ.

ಕಡಲೆ ಹಿಟ್ಟು, ಅರಿಶಿನ ಮತ್ತು ಮೊಸರಿನ ಫೇಸ್ ಪ್ಯಾಕ್:

ಟ್ಯಾನ್ ನಿವಾರಣೆ ಮಾಡಿ, ಹೊಳೆಯುವ ತ್ವಚೆಗಾಗಿ 2 ಚಮಚ ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದು ಚಮಚ ಹಾಲು ಅಥವಾ ಮೊಸರನ್ನು ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛಗೊಳಿಸಿದ ಮುಖದ ಮೇಲೆ ಈ ಮಿಶ್ರಣವನ್ನು ಹಚ್ಚಿಕೊಂಡು, 15-20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ವೃತ್ತಾಕಾರವಾಗಿ ಸ್ಕ್ರಬ್ ಮಾಡುವ ಮೂಲಕ ಅದನ್ನು ತೊಳೆದುಕೊಳ್ಳಿ.

ಇದನ್ನೂ ಓದಿ: ನಿಮ್ಮ ಹಸುಗೂಸಿನ ಎಳೆ ಚರ್ಮದ ಆರೈಕೆ ಮಾಡುವುದು ಹೇಗೆ?

ನಿಂಬೆ ರಸ ಮತ್ತು ಜೇನುತುಪ್ಪದ ಫೇಸ್​ ಮಾಸ್ಕ್:

ಗಾಜಿನ ಬಟ್ಟಲಿನಲ್ಲಿ ತಾಜಾ ನಿಂಬೆ ರಸವನ್ನು ಹಿಂಡಿ. ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಚರ್ಮದ ಮೇಲೆ ಹಚ್ಚಿಕೊಂಡು, 30 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ.

ಜೇನುತುಪ್ಪ ಮತ್ತು ಪಪ್ಪಾಯಿ ಸ್ಕ್ರಬ್ ಪ್ಯಾಕ್:

ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್‌ಗಳು ಮತ್ತು ಮಿನರಲ್‌ಗಳಲ್ಲಿ ಸಮೃದ್ಧವಾಗಿರುವ ಪ್ರೋಟಿಯೋಲೈಟಿಕ್ ಪಪೈನ್ ಕಿಣ್ವ ಹೇರಳವಾಗಿದೆ. ಆಯುರ್ವೇದ ಸೂತ್ರಗಳಲ್ಲಿ ಹೇಳಿರುವಂತೆ ಪಪ್ಪಾಯಿಯು ಕಪ್ಪು ಕಲೆಯನ್ನು ಹೋಗಲಾಡಿಸುವವರಲ್ಲಿ ಮುಖ್ಯವಾದ ಅಂಶವಾಗಿದೆ. ಇದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿದಾಗ ಈ ಸ್ಕ್ರಬ್ ಅದ್ಭುತವಾದ ಎಫ್ಫೋಲಿಯೇಟಿಂಗ್ ಮತ್ತು ಬ್ಲೀಚಿಂಗ್ ಫೇಸ್ ಪ್ಯಾಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸನ್​ಟ್ಯಾನ್ ಅನ್ನು ತೆಗೆದುಹಾಕಲು ಮತ್ತು ನಿಮ್ಮ ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ