Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Breads In The World: ಜಗತ್ತಿನ 50 ಬೆಸ್ಟ್ ಬ್ರೆಡ್​ಗಳಲ್ಲಿ ಭಾರತದ ನಾನ್, ಕುಲ್ಚಾ, ರೋಟಿಗೂ ಸ್ಥಾನ

ಜಗತ್ತಿನ ಬೆಸ್ಟ್​ ಬ್ರೆಡ್​ಗಳ ಪಟ್ಟಿಯನ್ನು ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದೆ. ಬೇರೆ ದೇಶಗಳ ರೋಟಿಗಳಿಗಿಂತ ಭಾರತದ ರೋಟಿಗಳು ವಿವಿಧ ರೂಪ, ಗಾತ್ರ, ರುಚಿಯನ್ನು ಹೊಂದಿರುತ್ತವೆ. ವಿಶ್ವದ 50 ಅತ್ಯುತ್ತಮ ಬ್ರೆಡ್‌ಗಳ ಪೈಕಿ 5 ಭಾರತೀಯ ಬ್ರೆಡ್‌ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

Best Breads In The World: ಜಗತ್ತಿನ 50 ಬೆಸ್ಟ್ ಬ್ರೆಡ್​ಗಳಲ್ಲಿ ಭಾರತದ ನಾನ್, ಕುಲ್ಚಾ, ರೋಟಿಗೂ ಸ್ಥಾನ
ರೋಟಿImage Credit source: pexels.com
Follow us
ಸುಷ್ಮಾ ಚಕ್ರೆ
|

Updated on: Sep 11, 2023 | 11:26 AM

ಉತ್ತರ ಭಾರತೀಯ ಆಹಾರದಲ್ಲಿ ಬ್ರೆಡ್​ಗಳು ಮುಖ್ಯ ಪಾತ್ರ ವಹಿಸಿವೆ. ನಾರ್ತ್​ ಇಂಡಿಯನ್ ರೆಸ್ಟೋರೆಂಟ್​ಗೆ ಹೋದರೆ ರೋಟಿ, ನಾನ್, ಕುಲ್ಚಾ ಬ್ರೆಡ್‌ಗಳನ್ನು ತಿನ್ನದೇ ಬರುವವರು ಬಹಳ ಕಡಿಮೆ. ಈ ಬ್ರೆಡ್​ಗಳಿಗೆ ಸರಿಯಾದ ಕಾಂಬಿನೇಷನ್ ಇದ್ದರೆ ಅದರ ರುಚಿಯೇ ಬೇರೆ. ಭಾರತದ ಈ ರೋಟಿಗಳು ಜಗತ್ತಿನುದ್ದಕ್ಕೂ ತನ್ನ ರುಚಿಯನ್ನು ಪಸರಿಸಿದೆ. ಏಕೆಂದರೆ ಬೇರೆ ದೇಶಗಳ ರೋಟಿಗಳಿಗಿಂತ ಭಾರತದ ರೋಟಿಗಳು ವಿವಿಧ ರೂಪ, ಗಾತ್ರ, ರುಚಿಯನ್ನು ಹೊಂದಿರುತ್ತವೆ.

ಜಗತ್ತಿನ ಬೆಸ್ಟ್​ ಬ್ರೆಡ್​ಗಳ ಪಟ್ಟಿಯನ್ನು ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದೆ. ವಿಶ್ವದ 50 ಅತ್ಯುತ್ತಮ ಬ್ರೆಡ್‌ಗಳ ಪೈಕಿ 5 ಭಾರತೀಯ ಬ್ರೆಡ್‌ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

View this post on Instagram

A post shared by TasteAtlas (@tasteatlas)

ಇದನ್ನೂ ಓದಿ: ನೀವು ಈ ಅನಾರೋಗ್ಯದಿಂದ ಬಳಲುತ್ತಿದ್ದರೆ ರೋಟಿ ಬದಲು ಬಿಳಿ ಅನ್ನ ಸೇವಿಸಿ

ಬಟರ್ ಗಾರ್ಲಿಕ್ ನಾನ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಬಟರ್ ಗಾರ್ಲಿಕ್ ನಾನ್ ಅನ್ನು ಟೇಸ್ಟ್ ಅಟ್ಲಾಸ್ ಈ ಹಿಂದೆ ವಿಶ್ವದ 50 ಅತ್ಯುತ್ತಮ ಫ್ಲಾಟ್‌ಬ್ರೆಡ್‌ಗಳಲ್ಲಿ ಆಯ್ಕೆ ಮಾಡಿತ್ತು. ಆ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಈ ಹಿಂದಿನ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಫ್ಲಾಟ್‌ಬ್ರೆಡ್ ಎಂದು ಹೆಸರಿಸಲಾಗಿದ್ದ ಪ್ಲೇನ್ ನಾನ್ ಈ ಬಾರಿ 8ನೇ ಸ್ಥಾನ ಪಡೆದಿದೆ.

ಪರಾಟ ಕೂಡ ಈ ಎರಡೂ ಪಟ್ಟಿಗಳಲ್ಲಿ ಸ್ಥಾನವನ್ನು ಪಡೆದಿದೆ. ಉತ್ತರ ಭಾರತದ ಬಹುತೇಕ ಕಡೆ ಬೆಳಗಿನ ಉಪಾಹಾರಕ್ಕೆ ಪರಾಟ, ಆಲೂ ಪರಾಟವನ್ನು ಬಳಸಲಾಗುತ್ತದೆ. ಅಮೃತಸರಿ ಕುಲ್ಚಾ ಈ ಬಾರಿಯ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು