AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ

ಕಾಲ ಬದಲಾಗಿದೆ, ಈಗಿನ ಕಾಲದಲ್ಲಿ ದುಡ್ಡಿದರೆ ಮಾತ್ರ ಖುಷಿಯಾಗಿರಲು ಸಾಧ್ಯ ಎನ್ನುವ ಮನಸ್ಥಿತಿ ಬಂದೋದಗಿದೆ. ಹೀಗಾಗಿ ಪ್ರತಿಯೊಬ್ಬ ಪುರುಷನು ತನ್ನ ಕುಟುಂಬ ಹೆಂಡತಿ ಮಕ್ಕಳು ಖುಷಿಯಾಗಿರಿಸಲು ಕಷ್ಟ ಪಟ್ಟು ದುಡಿದು ಐಷಾರಾಮಿ ಬದುಕನ್ನು ಕಟ್ಟಿ ಕೊಳ್ಳಲು ಒದ್ದಾಡುತ್ತಾರೆ. ಆದರೆ ಚಾಣಕ್ಯ ಹೇಳುವ ಈ ಪ್ರಾಣಿಗಳು ಗಂಡಿಗೆ ಇರಲೇಬೇಕಂತೆ. ಹೌದು, ಒಂಟೆಯ ಈ ಗುಣಗಳು ಗಂಡಿನಲ್ಲಿದ್ದರೆ ಪತ್ನಿಯು ಸಂತೋಷವಾಗಿರುತ್ತಾಳಂತೆ.

Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Sep 24, 2024 | 3:57 PM

Share

ಏನೇ ಮಾಡಿದರೂ ಎಷ್ಟೇ ಮಾಡಿದರೂ ಖುಷಿ ಪಡಿಸಲು ಸಾಧ್ಯವಿಲ್ಲದ ವ್ಯಕ್ತಿಯೆಂದರೆ ಅದುವೇ ಹೆಂಡತಿ ಮಾತ್ರ ಎನ್ನುವ ಮಾತನ್ನು ಗಂಡಸರ ಬಾಯಿಂದ ಕೇಳಿರಬಹುದು. ಆದರೆ ಆಚಾರ್ಯ ಚಾಣಕ್ಯನು ಒಬ್ಬ ಪುರುಷನಲ್ಲಿ ಒಂಟೆಯಲ್ಲಿರುವ ಈ ಕೆಲವು ಗುಣಗಳನ್ನು ಮೈಗೂಡಿಸಿಕೊಂಡರೆ ಪತ್ನಿ ಹಾಗೂ ಆತನ ಕುಟುಂಬದವರು ಸದಾ ಸಂತೋಷವಾಗಿರುತ್ತಾರೆ. ಅದಲ್ಲದೇ ಹೀಗಿದ್ದರೆ ಪತ್ನಿಯನ್ನು ಖುಷಿಯಾಗಿಟ್ಟುಕೊಳ್ಳುವುದು ಕಷ್ಟವೇನಲ್ಲವಂತೆ.

* ಶ್ರಮವಹಿಸಿ ಕೆಲಸ ಮಾಡುವ ಗುಣ : ಪ್ರತಿಯೊಬ್ಬ ಪುರುಷನು ಸಾಧ್ಯವಾದಷ್ಟು ಶ್ರಮವಹಿಸಿ ಕೆಲಸ ಮಾಡಬೇಕು. ಕಷ್ಟ ಪಟ್ಟು ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗಲು ಸಾಧ್ಯ. ಆಗಿದ್ದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಿರಲು ಸಾಧ್ಯ. ಕೈಯಯಲ್ಲಿ ಹಣವಿದ್ದರೆ ಮಾತ್ರ ಕುಟುಂಬದ ಸದಸ್ಯನ್ನು ಖುಷಿ ಪಡಿಸಬಹುದು. ಒಂಟೆಯ ಈ ಗುಣವನ್ನು ಪುರುಷನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ.

* ಎಚ್ಚರಿಕೆಯಿಂದಿರುವ ಗುಣ : ಚಾಣಕ್ಯನು ಹೇಳುವಂತೆ ಒಂಟೆ ಗಾಢ ನಿದ್ದಯಲ್ಲಿದ್ದರೂ ಕೂಡ ಸದಾ ಅಲರ್ಟ್ ಆಗಿರುತ್ತದೆ. ಅದೇ ರೀತಿಯ ಪುರುಷನು ಕುಟುಂಬದ ಬಗ್ಗೆ ಸದಾ ಕಾಳಜಿ ವಹಿಸುವುದರ ಜೊತೆಗೆ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗಬೇಕು. ಒಂದು ವೇಳೆ ಕುಟುಂಬದ ಸದಸ್ಯರಿಗೆ ತೊಂದರೆಯಾದಾಗ ಅವರನ್ನು ರಕ್ಷಣೆ ಮಾಡಬೇಕು. ಹೀಗಾಗಿ ಸದಾ ಎಚ್ಚರಿಕೆಯಿಂದ ಇದ್ದರೆ ಮಾತ್ರ ಆ ವ್ಯಕ್ತಿಯನ್ನು ಮದುವೆಯಾಗಿರುವ ಹೆಣ್ಣು ಸುರಕ್ಷಿತ ಹಾಗೂ ಖುಷಿಯಿಂದ ಇರಲು ಸಾಧ್ಯ.

* ಸಮಯ ಮೀಸಲಿಡುವುದು : ಪುರುಷನು ಕುಟುಂಬಕ್ಕಾಗಿ ಸಮಯ ನೀಡುವ ಗುಣವನ್ನು ಹೊಂದಿರುವುದು ಬಹಳ ಮುಖ್ಯ. ಆಗಿದ್ದಾಗ ಮಾತ್ರ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಸಂತೋಷವನ್ನು ನೀಡಲು ಸಾಧ್ಯ. ಹೀಗಾಗಿ ಸಂಗಾತಿಯನ್ನು ಹೊಂದಿರುವ ಪುರುಷನ ಮೊದಲ ಜವಾಬ್ದಾರಿಯಾಗಿದ್ದು, ಹೀಗಿದ್ದರೆ ಮಾತ್ರ ಮಡದಿ ಹಾಗೂ ಕುಟುಂಬದ ಸದಸ್ಯರು ನೆಮ್ಮದಿ ಹಾಗೂ ಸಂತೋಷದಿಂದರಲು ಸಾಧ್ಯ.

ಇದನ್ನೂ ಓದಿ: ನೀವು ಮಾತನಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

* ಪ್ರಾಮಾಣಿಕತೆ : ಒಂಟೆಯೂ ತನ್ನ ಮಾಲೀಕನಿಗೆ ಪ್ರಾಮಾಣಿಕವಾಗಿರುವಂತೆ ಪ್ರತಿಯೊಬ್ಬ ಪುರುಷನಲ್ಲಿ ಪ್ರಾಮಾಣಿಕತೆ ಗುಣವಿರಬೇಕು. ಪರ ಮಹಿಳೆಯರ ಸಹವಾಸ ಮಾಡಿ ಪತ್ನಿಯಾದವಳಿಗೆ ಮೊದ ಮಾಡುವ ಗುಣವು ಆತನಲ್ಲಿ ಇರಬಾರದು. ಆತನು ಈ ಒಂಟೆಯ ಗುಣವನ್ನು ಅಳವಡಿಸಿಕೊಂಡರೆ ಪ್ರಾಮಾಣಿಕ ಪತಿಯಿಂದ ಸಂಗಾತಿಯು ಸಂತೋಷದಿಂದ ಜೀವನ ನಡೆಸುತ್ತಾಳೆ.

* ಶೌರ್ಯವಂತ : ಯಾವುದೇ ಪುರುಷರಲ್ಲಿ ಧೈರ್ಯವಿದ್ದರೆ ಆತನು ಜೀವನದಲ್ಲಿ ಏನೇ ಸಂಕಷ್ಟ ಸವಾಲುಗಳು ಎದುರಾದರೂ ನಿಭಾಯಿಸಿಕೊಂಡು ಹೋಗಬಲ್ಲನು. ಹೀಗಾಗಿ ಒಂಟೆಗೆ ಇರುವ ಧೈರ್ಯಶಾಲಿ ಗುಣವು ಗಂಡಸರಲ್ಲಿ ಇರಬೇಕು. ಈ ಮೂಲಕ ಪತ್ನಿ ಹಾಗೂ ಮಕ್ಕಳನ್ನು ಸಂಕಷ್ಟದ ಸನ್ನಿವೇಶದಲ್ಲಿಯು ರಕ್ಷಣೆ ಮಾಡಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?