AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ

ಕಾಲ ಬದಲಾಗಿದೆ, ಈಗಿನ ಕಾಲದಲ್ಲಿ ದುಡ್ಡಿದರೆ ಮಾತ್ರ ಖುಷಿಯಾಗಿರಲು ಸಾಧ್ಯ ಎನ್ನುವ ಮನಸ್ಥಿತಿ ಬಂದೋದಗಿದೆ. ಹೀಗಾಗಿ ಪ್ರತಿಯೊಬ್ಬ ಪುರುಷನು ತನ್ನ ಕುಟುಂಬ ಹೆಂಡತಿ ಮಕ್ಕಳು ಖುಷಿಯಾಗಿರಿಸಲು ಕಷ್ಟ ಪಟ್ಟು ದುಡಿದು ಐಷಾರಾಮಿ ಬದುಕನ್ನು ಕಟ್ಟಿ ಕೊಳ್ಳಲು ಒದ್ದಾಡುತ್ತಾರೆ. ಆದರೆ ಚಾಣಕ್ಯ ಹೇಳುವ ಈ ಪ್ರಾಣಿಗಳು ಗಂಡಿಗೆ ಇರಲೇಬೇಕಂತೆ. ಹೌದು, ಒಂಟೆಯ ಈ ಗುಣಗಳು ಗಂಡಿನಲ್ಲಿದ್ದರೆ ಪತ್ನಿಯು ಸಂತೋಷವಾಗಿರುತ್ತಾಳಂತೆ.

Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 24, 2024 | 3:57 PM

Share

ಏನೇ ಮಾಡಿದರೂ ಎಷ್ಟೇ ಮಾಡಿದರೂ ಖುಷಿ ಪಡಿಸಲು ಸಾಧ್ಯವಿಲ್ಲದ ವ್ಯಕ್ತಿಯೆಂದರೆ ಅದುವೇ ಹೆಂಡತಿ ಮಾತ್ರ ಎನ್ನುವ ಮಾತನ್ನು ಗಂಡಸರ ಬಾಯಿಂದ ಕೇಳಿರಬಹುದು. ಆದರೆ ಆಚಾರ್ಯ ಚಾಣಕ್ಯನು ಒಬ್ಬ ಪುರುಷನಲ್ಲಿ ಒಂಟೆಯಲ್ಲಿರುವ ಈ ಕೆಲವು ಗುಣಗಳನ್ನು ಮೈಗೂಡಿಸಿಕೊಂಡರೆ ಪತ್ನಿ ಹಾಗೂ ಆತನ ಕುಟುಂಬದವರು ಸದಾ ಸಂತೋಷವಾಗಿರುತ್ತಾರೆ. ಅದಲ್ಲದೇ ಹೀಗಿದ್ದರೆ ಪತ್ನಿಯನ್ನು ಖುಷಿಯಾಗಿಟ್ಟುಕೊಳ್ಳುವುದು ಕಷ್ಟವೇನಲ್ಲವಂತೆ.

* ಶ್ರಮವಹಿಸಿ ಕೆಲಸ ಮಾಡುವ ಗುಣ : ಪ್ರತಿಯೊಬ್ಬ ಪುರುಷನು ಸಾಧ್ಯವಾದಷ್ಟು ಶ್ರಮವಹಿಸಿ ಕೆಲಸ ಮಾಡಬೇಕು. ಕಷ್ಟ ಪಟ್ಟು ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗಲು ಸಾಧ್ಯ. ಆಗಿದ್ದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಿರಲು ಸಾಧ್ಯ. ಕೈಯಯಲ್ಲಿ ಹಣವಿದ್ದರೆ ಮಾತ್ರ ಕುಟುಂಬದ ಸದಸ್ಯನ್ನು ಖುಷಿ ಪಡಿಸಬಹುದು. ಒಂಟೆಯ ಈ ಗುಣವನ್ನು ಪುರುಷನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ.

* ಎಚ್ಚರಿಕೆಯಿಂದಿರುವ ಗುಣ : ಚಾಣಕ್ಯನು ಹೇಳುವಂತೆ ಒಂಟೆ ಗಾಢ ನಿದ್ದಯಲ್ಲಿದ್ದರೂ ಕೂಡ ಸದಾ ಅಲರ್ಟ್ ಆಗಿರುತ್ತದೆ. ಅದೇ ರೀತಿಯ ಪುರುಷನು ಕುಟುಂಬದ ಬಗ್ಗೆ ಸದಾ ಕಾಳಜಿ ವಹಿಸುವುದರ ಜೊತೆಗೆ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗಬೇಕು. ಒಂದು ವೇಳೆ ಕುಟುಂಬದ ಸದಸ್ಯರಿಗೆ ತೊಂದರೆಯಾದಾಗ ಅವರನ್ನು ರಕ್ಷಣೆ ಮಾಡಬೇಕು. ಹೀಗಾಗಿ ಸದಾ ಎಚ್ಚರಿಕೆಯಿಂದ ಇದ್ದರೆ ಮಾತ್ರ ಆ ವ್ಯಕ್ತಿಯನ್ನು ಮದುವೆಯಾಗಿರುವ ಹೆಣ್ಣು ಸುರಕ್ಷಿತ ಹಾಗೂ ಖುಷಿಯಿಂದ ಇರಲು ಸಾಧ್ಯ.

* ಸಮಯ ಮೀಸಲಿಡುವುದು : ಪುರುಷನು ಕುಟುಂಬಕ್ಕಾಗಿ ಸಮಯ ನೀಡುವ ಗುಣವನ್ನು ಹೊಂದಿರುವುದು ಬಹಳ ಮುಖ್ಯ. ಆಗಿದ್ದಾಗ ಮಾತ್ರ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಸಂತೋಷವನ್ನು ನೀಡಲು ಸಾಧ್ಯ. ಹೀಗಾಗಿ ಸಂಗಾತಿಯನ್ನು ಹೊಂದಿರುವ ಪುರುಷನ ಮೊದಲ ಜವಾಬ್ದಾರಿಯಾಗಿದ್ದು, ಹೀಗಿದ್ದರೆ ಮಾತ್ರ ಮಡದಿ ಹಾಗೂ ಕುಟುಂಬದ ಸದಸ್ಯರು ನೆಮ್ಮದಿ ಹಾಗೂ ಸಂತೋಷದಿಂದರಲು ಸಾಧ್ಯ.

ಇದನ್ನೂ ಓದಿ: ನೀವು ಮಾತನಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

* ಪ್ರಾಮಾಣಿಕತೆ : ಒಂಟೆಯೂ ತನ್ನ ಮಾಲೀಕನಿಗೆ ಪ್ರಾಮಾಣಿಕವಾಗಿರುವಂತೆ ಪ್ರತಿಯೊಬ್ಬ ಪುರುಷನಲ್ಲಿ ಪ್ರಾಮಾಣಿಕತೆ ಗುಣವಿರಬೇಕು. ಪರ ಮಹಿಳೆಯರ ಸಹವಾಸ ಮಾಡಿ ಪತ್ನಿಯಾದವಳಿಗೆ ಮೊದ ಮಾಡುವ ಗುಣವು ಆತನಲ್ಲಿ ಇರಬಾರದು. ಆತನು ಈ ಒಂಟೆಯ ಗುಣವನ್ನು ಅಳವಡಿಸಿಕೊಂಡರೆ ಪ್ರಾಮಾಣಿಕ ಪತಿಯಿಂದ ಸಂಗಾತಿಯು ಸಂತೋಷದಿಂದ ಜೀವನ ನಡೆಸುತ್ತಾಳೆ.

* ಶೌರ್ಯವಂತ : ಯಾವುದೇ ಪುರುಷರಲ್ಲಿ ಧೈರ್ಯವಿದ್ದರೆ ಆತನು ಜೀವನದಲ್ಲಿ ಏನೇ ಸಂಕಷ್ಟ ಸವಾಲುಗಳು ಎದುರಾದರೂ ನಿಭಾಯಿಸಿಕೊಂಡು ಹೋಗಬಲ್ಲನು. ಹೀಗಾಗಿ ಒಂಟೆಗೆ ಇರುವ ಧೈರ್ಯಶಾಲಿ ಗುಣವು ಗಂಡಸರಲ್ಲಿ ಇರಬೇಕು. ಈ ಮೂಲಕ ಪತ್ನಿ ಹಾಗೂ ಮಕ್ಕಳನ್ನು ಸಂಕಷ್ಟದ ಸನ್ನಿವೇಶದಲ್ಲಿಯು ರಕ್ಷಣೆ ಮಾಡಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ