Kannada News Lifestyle Chanakya Niti : Do these things if you want happy in your life four secrets of life Kannada News
Chanakya Niti : ನೀವು ಜೀವನದಲ್ಲಿ ಸುಖವಾಗಿರಬೇಕಾದ್ರೆ ಈ ರಹಸ್ಯ ನಿಮಗೆ ತಿಳಿದಿರಲಿ
ಜೀವನದಲ್ಲಿ ಯಾರಿಗೆ ತಾನೇ ಖುಷಿ ಖುಷಿಯಾಗಿ ಇರಬೇಕೆಂದು ಅನ್ನಿಸುವುದಿಲ್ಲ ಹೇಳಿ? ಆದರೆ ಅನೇಕ ವಿಷಯಗಳು ಅನೇಕರನ್ನು ಜೀವನದಲ್ಲಿ ಖುಷಿ ಖುಷಿಯಾಗಿರಲು ಅನುವು ಮಾಡಿಕೊಡುವುದಿಲ್ಲ. ನೀವು ಕೂಡ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಿದ್ದರೆ ಚಾಣಕ್ಯ ಹೇಳುವ ಈ ವಿಷಯ ಗಳನ್ನು ತಪ್ಪದೇ ಪಾಲಿಸಿ. ಇದನ್ನು ಅನುಸರಿಸಿದರೆ ನೀವು ಅಂದುಕೊಂಡದ್ದಕ್ಕಿಂತ ಅದ್ಭುತವಾಗಿ ಬದುಕನ್ನು ನಡೆಸಬಹುದು.
Follow us on
ಜೀವನದಲ್ಲಿ ಎಲ್ಲರೂ ಖುಷಿಯಾಗಿರಲು ಬಯಸುತ್ತಾರೆ. ಇದಕ್ಕಾಗಿ ಜೀವನಪರ್ಯಂತ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸುತ್ತಾರೆ. ಆದರೆ ಹಣದಿಂದಲೇ ಖುಷಿಯಂತೂ ಸಿಗುವುದಿಲ್ಲ. ಬದುಕಿನಲ್ಲಿ ಸದಾ ಖುಷಿಯಾಗಿರಬೇಕೆಂದರೆ ಚಾಣಕ್ಯ ಹೇಳುವ ಈ ಕೆಲವು ಸೂತ್ರಗಳನ್ನು ಪಾಲಿಸಬೇಕು. ಹೀಗಿದ್ದರೆ ಮಾತ್ರ ನೀವು ಅಂದುಕೊಂಡಂತಹ ಸಂತೋಷವನ್ನು ಪಡೆಯಲು ಸಾಧ್ಯ.
ಶಾಂತ ಮನಸ್ಸು : ಚಾಣಕ್ಯನು ಹೇಳುವಂತೆ ಎಷ್ಟೇ ದೊಡ್ಡ ಸಮಸ್ಯೆಯಾದರೂ ಎಲ್ಲದಕ್ಕೂ ಶಾಂತ ಮನಸ್ಸಿದ್ದರೆ ಪರಿಹಾರ ಸಾಧ್ಯ. ಈಗಿನ ಕಾಲದಲ್ಲಿ ಹಣವಿದ್ದರೂ ಮನಸ್ಸಿಗೆ ನೆಮ್ಮದಿ ಸಿಗುತ್ತಿಲ್ಲ. ಎಲ್ಲಾ ಸೌಕರ್ಯಗಳಿದ್ದಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ. ಆದರೆ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಂಡರೆ ಖುಷಿಯಾಗಿರಲು ಸಾಧ್ಯ. ಜೀವನದಲ್ಲಿ ಕಷ್ಟದ ಸಂದರ್ಭವು ಎದುರಾದಾಗ ಶಾಂತ ಮನಸ್ಸಿನಲ್ಲಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ತೃಪ್ತಿ ಕಾಣುವುದು : ಈಗಿನ ಕಾಲದಲ್ಲಿ ಎಷ್ಟೇ ಇದ್ದರೂ ಸಾಕಾಗುವುದಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸುವ ಮನೋಭಾವವೇ ಇರುವುದಿಲ್ಲ. ಮೊದಲು ಬದುಕಿನಲ್ಲಿ ತೃಪ್ತಿ ಕಾಣುವುದು ಮುಖ್ಯ. ಬೇರೆಯವರನ್ನು ಹೋಲಿಕೆ ಮಾಡಿ ನಮ್ಮಲ್ಲಿರುವ ಕೊರತೆಗಳ ಬಗ್ಗೆ ಚಿಂತಿಸುವುದು ಸರಿಯಲ್ಲ. ವ್ಯಕ್ತಿ ಯಾವಾಗಲೂ ಸ್ವಂತ ಮನಸ್ಸಿನಲ್ಲಿ ತೃಪ್ತಿಯನ್ನು ಅನುಭವಿಸುವುದೇ ಯಶಸ್ಸು ಆಗಿರುತ್ತದೆ. ಆ ತೃಪ್ತ ಭಾವ ಎಲ್ಲರಿಗೂ ಬಂದರೆ ಮಾತ್ರ ಜೀವನದಲ್ಲಿ ಸಂತೋಷವಾಗಿರುತ್ತಾನೆ.
ದುರಾಸೆ ಪಡದಿರುವುದು : ಮನುಷ್ಯನಲ್ಲಿರುವ ಕೆಟ್ಟ ಗುಣವೆಂದರೆ ದುರಾಸೆ. ಅತಿಯಾಗಿ ಆಸೆ ಪಡುವುದನ್ನು ಬಿಟ್ಟು ಸಿಕ್ಕಿದ್ದನ್ನು ಗೌರವದಿಂದ ಸ್ವೀಕರಿಸುವುದನ್ನು ಕಲಿಯಿರಿ. ಈ ಮನೋಭಾವವು ಇಲ್ಲದೇ ಹೋದರೆ ನೆಮ್ಮದಿ ಯು ಮರೀಚಿಕೆಯಾಗುತ್ತದೆ. ಸಿಗಲಿಲ್ಲ ಎನ್ನುವ ನೋವು ಕಾಡುವುದಲ್ಲದೆ, ದುಃಖಕ್ಕೆ ಕಾರಣವಾಗುತ್ತದೆ ಎನ್ನುತ್ತಾನೆ ಚಾಣಕ್ಯ.
ಯಶಸ್ಸಿನತ್ತ ಗಮನ ಕೊಡಿ : ನೀವು ಜೀವನದಲ್ಲಿ ಪ್ರಗತಿ ಹೊಂದಬೇಕಾದರೆ ಸದಾ ತನ್ನ ಗುರಿಯ ಬಗ್ಗೆ ಯೋಚಿಸಬೇಕು, ಅದರತ್ತ ಕೆಲಸ ಮಾಡಬೇಕು. ಇದರೊಂದಿಗೆ, ಲಾಭಕ್ಕಾಗಿ ಏನು ಮಾಡಬೇಕೆಂದು ನಿಮಗೆ ಯಾವಾಗಲೂ ತಿಳಿದಿರುವುದು ಮುಖ್ಯ. ಯಶಸ್ಸಿನಿಂದ ಜೀವನದಲ್ಲಿ ಸಂತೋಷವು ದೊರೆಯುತ್ತದೆ.
ದಾನ ಮಾಡುವುದು : ದಾನ ಮಾಡಿದಷ್ಟೂ ನಮ್ಮಲ್ಲಿರುವ ಸಂಪತ್ತು ಕಡಿಮೆಯಾಗುತ್ತದೆ ಎಂದು ಭಾವಿಸುತ್ತೇವೆ. ದಾನ ಮಾಡುವುದರಿಂದ, ಆತ್ಮವು ಯಾವಾಗಲೂ ಪರಿಶುದ್ಧವಾಗಿರುತ್ತದೆ. ದೇವರ ಆಶೀರ್ವಾದವು ಇರುತ್ತದೆ. ದಾನ ಮಾಡುವ ಪ್ರವೃತ್ತಿಯು ಆರ್ಥಿಕ ಲಾಭದ ಜೊತೆಗೆ ಸಂತೋಷ ಹಾಗೂ ಮನಸ್ಸು ಶಾಂತವಾಗಿರಲು ಕಾರಣವಾಗುತ್ತದೆ.