AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Difficult Situations: ಕಷ್ಟಕರ ಸಂದರ್ಭಗಳೇ ನಿಮ್ಮ ಜೀವನದ ನಿಜವಾದ ಪರೀಕ್ಷೆಗಳು, ತಲೆ ಬಿಸಿ ದೂರವಿಟ್ಟು ನಡೆಯುವುದು ಹೇಗೆ?

ಕಷ್ಟಗಳು ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ ಎಂದು ಹೇಳುವುದುಂಟು, ನೀವು ಜೀವನ ತುಂಬಾ ಸುಲಭ ಎಂದುಕೊಳ್ಳಬಹುದು ಮೂರು ಹೊತ್ತು ಊಟ, ಇರಲು ಜಾಗ, ತೊಡಲು ಬಟ್ಟೆ ಇಷ್ಟಿದ್ದರೆ ಸಾಕಲ್ಲವೇ ಎಂದು ಪ್ರಶ್ನೆ ಕೇಳಬಹುದು.

Difficult Situations: ಕಷ್ಟಕರ ಸಂದರ್ಭಗಳೇ ನಿಮ್ಮ ಜೀವನದ ನಿಜವಾದ ಪರೀಕ್ಷೆಗಳು, ತಲೆ ಬಿಸಿ ದೂರವಿಟ್ಟು ನಡೆಯುವುದು ಹೇಗೆ?
ನಗುImage Credit source: Healthshots.com
Follow us
ನಯನಾ ರಾಜೀವ್
|

Updated on: Jun 20, 2023 | 9:00 AM

ಕಷ್ಟಗಳು ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ ಎಂದು ಹೇಳುವುದುಂಟು, ನೀವು ಜೀವನ ತುಂಬಾ ಸುಲಭ ಎಂದುಕೊಳ್ಳಬಹುದು ಮೂರು ಹೊತ್ತು ಊಟ, ಇರಲು ಜಾಗ, ತೊಡಲು ಬಟ್ಟೆ ಇಷ್ಟಿದ್ದರೆ ಸಾಕಲ್ಲವೇ ಎಂದು ಪ್ರಶ್ನೆ ಕೇಳಬಹುದು. ಆದರೆ ಮನುಷ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಡುತ್ತಾನೆಯೇ ಖಂಡಿತವಾಗಿಯೂ ಇಲ್ಲ. ಏನೇನೋ ಆಸೆ, ಕನಸುಗಳು ಅದನ್ನು ಸಾಕಾರ ಮಾಡಲು ಕೆಲವೊಮ್ಮೆ ಒಳ್ಳೆಯ ದಾರಿ ಇನ್ನೂ ಕೆಲವೊಮ್ಮೆ ತಪ್ಪು ದಾರಿ ಹಿಡಿಯುತ್ತಾನೆ. ಅಥವಾ ಆತ ಮಾಡದೇ ಇರುವ ತಪ್ಪುಗಳಿಂದಲೂ ಆತ ಸಂಕಷ್ಟಕ್ಕೆ ಸಿಲುಕುತ್ತಾನೆ.

ಕಷ್ಟ ಬಂದಾಗ ಕುಗ್ಗದೆ ಸುಖ ಬರುವವರೆಗೂ ಶಾಂತಿಯನ್ನು ಕಾಪಾಡಿಕೊಂಡಿದ್ದರೆ ಜೀವನ ಸುಖಮಯವಾಗಿರುವುದು. ಜೀವನದಲ್ಲಿ ಪ್ರತಿದಿನ ವಿವಿಧ ಸಮಸ್ಯೆಗಳಿರಬಹುದು. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ಸಮಯಗಳು ಬರುತ್ತವೆ. ಕೆಲವೊಮ್ಮೆ ವೈಫಲ್ಯವು ಕಾಡುತ್ತದೆ.

ಕಷ್ಟಕರ ಸಂದರ್ಭಗಳಲ್ಲಿ ಬಲಶಾಲಿಯಾಗಿರುವುದು ಏಕೆ ಮುಖ್ಯ? ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಡಿಯನ್ ಸೈಕಾಲಜಿ ಪ್ರಕಾರ, ಕಠಿಣ ಪರಿಸ್ಥಿತಿಯ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕು. ಇದು ಕಠಿಣ ದಿನಗಳಲ್ಲಿ ನಿಲ್ಲಲು ಸಹಾಯ ಮಾಡುತ್ತದೆ. ವೈಫಲ್ಯ ಮತ್ತು ಅದರ ಕಾರಣಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅರ್ಥಮಾಡಿಕೊಳ್ಳಿ. ಇದು ಆಂತರಿಕ ಶಕ್ತಿಯನ್ನು ಬಲಪಡಿಸುತ್ತದೆ.

ಕಠಿಣ ಪರಿಸ್ಥಿತಿಯಲ್ಲಿ ನಿಮ್ಮನ್ನು ಬಲಶಾಲಿಯಾಗಿಸಲು  ಮಾರ್ಗಗಳಿವೆ 1. ಯೋಚಿಸಲು ನಿಮಗೆ ಅವಕಾಶವನ್ನು ನೀಡಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಇಂಡಿಯನ್ ಸೈಕಾಲಜಿ ಪ್ರಕಾರ, ಯಾವುದೇ ನಷ್ಟ – ವೃತ್ತಿಜೀವನದಲ್ಲಿ ಅಥವಾ ಸಾಕುಪ್ರಾಣಿಗಳ ನಷ್ಟವು ಅಪಾರ ದುಃಖವನ್ನು ಉಂಟುಮಾಡುತ್ತದೆ. ಆದರೆ ಇದಕ್ಕಾಗಿ ನಿಮ್ಮ ಆರೋಗ್ಯದ ಮೇಲೆ ಬೀರದಂತೆ ನೋಡಿಕೊಳ್ಳಬೇಕು. ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ಈ ಜಗತ್ತಿನಲ್ಲಿ ನಾವು ನಿಯಂತ್ರಿಸಲಾಗದ ಅನೇಕ ವಿಷಯಗಳಿವೆ ಅವುಗಳನ್ನು ಎದುರಿಸಬೇಕಷ್ಟೇ.

2. ಸಹಾಯ ಕೇಳಿ ಕೆಲವೊಮ್ಮೆ ನಾವು ಏಕಾಂಗಿಯಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ, ಇತರ ಜನರ ಸಹಾಯದ ಅಗತ್ಯವಿದೆ. ನಿಮಗೆ ಯಾವುದೇ ರೀತಿಯ ದುಃಖವಿದ್ದರೆ, ಅದನ್ನು ಖಂಡಿತವಾಗಿಯೂ ಇತರರೊಂದಿಗೆ ಹಂಚಿಕೊಳ್ಳಿ. ಕೆಲವೊಮ್ಮೆ ನಮಗೆಲ್ಲರಿಗೂ ಸಹಾಯ ಬೇಕಾಗುತ್ತದೆ. ಇದು ನಿಮಗೆ ಪರಿಹಾರವನ್ನು ನೀಡಬಹುದು. ಹೊಸ ಆಲೋಚನೆಗಳನ್ನು ಕಾಣಬಹುದು. ಕಠಿಣ ಗಟ್ಟಿಯಾಗಿರಲು ಅತ್ಯುತ್ತಮ ಮಾರ್ಗಗಳಲ್ಲಿ ಇದು ಕೂಡ ಒಂದು.

3. ಸಾಧ್ಯವಾದಾಗಲೆಲ್ಲಾ ಅಗತ್ಯವಿರುವವರಿಗೆ ಸಹಾಯ ಮಾಡಿ ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುವುದು ನಿಮಗೆ ಒಳ್ಳೆಯದು. ನಿಮ್ಮನ್ನು ಗಟ್ಟಿಯಾಗಿರಿಸಲು ಇದು ಉತ್ತಮ ಮಾರ್ಗವಾಗಿದೆ. ಅಸೋಸಿಯೇಷನ್ ​​ಫಾರ್ ಸೈಕಲಾಜಿಕಲ್ ಸೈನ್ಸ್‌ನ ಅಧ್ಯಯನಗಳು ಸ್ನೇಹಿತರು, ಕುಟುಂಬ ಅಥವಾ ಅಪರಿಚಿತರಿಗೆ ಸಹಾಯ ಮಾಡುವುದು ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತೋರಿಸುತ್ತದೆ. ಇದು ಒತ್ತಡದ ಪರಿಣಾಮವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ದೊಡ್ಡ ಸಹಾಯವಲ್ಲ, ಸಣ್ಣ ಸಹಾಯವೂ ಮಾಡಬಹುದು.

4 ಸಂತೋಷವಾಗಿರಿ ನೀವು ಕಷ್ಟದ ಸಮಯದಲ್ಲಿ ಗಟ್ಟಿಯಾಗಿರಲು ಬಯಸಿದರೆ, ನೀವು ಚಿಕ್ಕ ಸಂತೋಷಗಳನ್ನು ಆನಂದಿಸಲು ಕಲಿಯಬೇಕು. ನಕ್ಷತ್ರದ ರಾತ್ರಿ, ಪ್ರಕಾಶಮಾನವಾದ ಹೂವು, ಹಕ್ಕಿಯ ಹಾಡು, ಮಗುವಿನ ನಗುವಿನಲ್ಲಿ ಸಹ ಸಂತೋಷವನ್ನು ಕಾಣಬಹುದು. ನಕಾರಾತ್ಮಕ ವೈಬ್‌ಗಳಿಂದ ದೂರವಿರಿ ನಕಾರಾತ್ಮಕ ಆಲೋಚನೆಗಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ. ಸೋಲಿನ ಬಗ್ಗೆ ಯೋಚಿಸಬೇಡಿ. ವರ್ತಮಾನದಲ್ಲಿ ಜೀವಿಸಿ ಭವಿಷ್ಯಕ್ಕಾಗಿ ಸಿದ್ಧರಾಗಿ .

5. ತಯಾರಿ ಯಾರನ್ನೂ ಅವಲಂಬಿಸಬೇಡಿ, ಒಮ್ಮೆ ನೀವು ಭೂತಕಾಲ ಮತ್ತು ಭವಿಷ್ಯವನ್ನು ಸರಿಯಾಗಿ ಪರಿಗಣಿಸಿದ ನಂತರ, ನಿಮ್ಮನ್ನು ವರ್ತಮಾನಕ್ಕೆ ಕರೆದೊಯ್ಯಿರಿ. ಜೀವನದ ಅತ್ಯಂತ ಕಷ್ಟಕರ ಕ್ಷಣಗಳಿಂದ ಹೊರಬರಲು ಒಂದೇ ಒಂದು ಮಾರ್ಗವಿದೆ, ಇರುವುದರಲ್ಲಿ ಖುಷಿಯಿಂದಿರುವುದನ್ನು ಕಲಿತರೆ ಯಾವುದೂ ಕಷ್ಟವೆನಿಸುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!