International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಜೊತೆಗೆ ಖಾಲಿ ಹೊಟ್ಟೆಯಲ್ಲಿರಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)
Follow us
|

Updated on:Jun 20, 2023 | 12:27 PM

ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗಾಸನ ತುಂಬಾ ಸಹಕಾರಿ. ಆದರೆ ಈ ಯೋಗಾಸನವನ್ನು ಕ್ರಮಬದ್ಧವಾಗಿ ಮಾಡಬೇಕು. ಯೋಗ ಅಂದರೆ ಅಷ್ಟಾಂಗ ಯೋಗ. ಪ್ರಸ್ತುತ ಎಲ್ಲರೂ ಅನುಸರಿಸುತ್ತಿರುವುದು ಯೋಗಾಸನ ಮಾತ್ರ. ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಯೋಗಾಭ್ಯಾಸ ಮಾಡಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು:

  • ಯೋಗಸನ ಮಾಡಿದ ತಕ್ಷಣ ಸ್ನಾನ ಬೇಡ.
  • ಯೋಗಾಸನದ ನಿಶ್ಚಿತವಾದ ಅಂತಹ ಭಂಗಿಗಳಿಗೆ ಬಲಪ್ರಯೋಗದ ಮೂಲಕ ಅವಸ್ತೆಯನ್ನು ತಲುಪುವುದು ಬೇಡ.
  • ನಿಯಮಿತವಾದಂತಹ ರೂಢಿಯ ಮೂಲಕ ನಿಶ್ಚಿತವಾದಂತಹ ಯೋಗಾಸನದ ಅವಸ್ಥೆ ತಲುಪುವುದು ಸೂಕ್ತ.
  • ಯೋಗಾಸನವನ್ನು ಸಮತಟ್ಟಾದ ನೆಲದ ಮೇಲೆ ಮಾಡಬೇಕು. ಯೋಗಾಸನ ಮಾಡುವ ಕೊಠಡಿ ಯಲ್ಲಿ ಗಾಳಿ ಬೆಳಕು ಆಡುವಂತೆ ಇರಬೇಕು.
  • ಯೋಗಾಭ್ಯಾಸವನ್ನು ಶಾಂತ ಮನಸ್ಸಿನಿಂದ ಮಾಡಬೇಕು. ದೇಹವನ್ನು ದಂಡಿಸಬಾರದು.
  • ಯೋಗ ಮಾಡುವಾಗ ಸುಸ್ತಾದರೆ ಮುಂದುವರೆಸದೆ ವಿಶ್ರಾಂತಿ ತಗೊಂಡು ಯೋಗಾಭ್ಯಾಸ ಮುಂದುವರೆಸಬೇಕು. ಯೋಗಸನ ಮಾಡಲು ನಿಯಮಿತ ಸಮಯವನ್ನು ಪಾಲಿಸುವುದು ಒಳ್ಳೆಯದು.
  • ಯೋಗಾಸನ ಮಾಡುವಾಗ ಬೇಡದ ವಿಚಾರಗಳು ಮತ್ತು ನಕಾರಾತ್ಮಕ ವಿಚಾರಗಳಿಂದ ದೂರ ಇರಬೇಕು . ಅಲ್ಲದೆ ಕೆಮ್ಮು, ಸೀನು ಬಂದಾಗ ತಡೆಹಿಡಿಯಬಾರದು.
  • ಯೋಗಾಸನ ಮಾಡಿದ ಬಳಿಕ ಧ್ಯಾನ ಮತ್ತು ಪ್ರಾಣಯಾಮ ಮಾಡಬೇಕು.
  • ಯೋಗಾಸನ ಮಾಡಿದ ಬಳಿಕ ಶವಾಸನ ಮಾಡಬೇಕು .
  • ಮಹಿಳೆಯರು ಮುಟ್ಟಿನ ಸಮಯದಲ್ಲಿ ಎಲ್ಲಾ ಬಗೆಯ ಯೋಗಾಸನ ಮಾಡುವಂತಿಲ್ಲ.
  • ಗರ್ಭಾವಸ್ಥೆಯಲ್ಲಿ ಸೂಕ್ತ ವೈದ್ಯರ ಮತ್ತು ಅನುಭವಿ ಯೋಗಾಸನ ತರಬೇತುದಾರರ ಮಾರ್ಗದರ್ಶನ ಪಡೆಯಿರಿ.
  • ಯೋಗಾಸನ ಮಾಡುವಾಗ ಹೊಟ್ಟೆ ಖಾಲಿ ಇರಬೇಕು. ಊಟವಾದ ಬಳಿಕ ಯೋಗಾಸನ ಮಾಡಲು ಕನಿಷ್ಠ 3 ಗಂಟೆಯ ಅಂತರವಿರಬೇಕು. ಅನಾರೋಗ್ಯದ ಸಮಯದಲ್ಲಿ ಯೋಗಸನ ಮಾಡಬೇಡಿ.
  • ಯೋಗಾಸನ ಮಾಡಿದ ಬಳಿಕ ವ್ಯಾಯಾಮ ಮಾಡಬೇಡಿ. ವ್ಯಾಯಾಮ ಮಾಡಿದ ಬಳಿಕ ಯೋಗಾಸನ ಮಾಡಬಹುದು.

ಲೇಖನ: ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:25 pm, Tue, 20 June 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ