AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಜೊತೆಗೆ ಖಾಲಿ ಹೊಟ್ಟೆಯಲ್ಲಿರಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

International Yoga Day 2023: ಯೋಗಾಸನ ಮಾಡುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)
ಅಕ್ಷತಾ ವರ್ಕಾಡಿ
|

Updated on:Jun 20, 2023 | 12:27 PM

Share

ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗಾಸನ ತುಂಬಾ ಸಹಕಾರಿ. ಆದರೆ ಈ ಯೋಗಾಸನವನ್ನು ಕ್ರಮಬದ್ಧವಾಗಿ ಮಾಡಬೇಕು. ಯೋಗ ಅಂದರೆ ಅಷ್ಟಾಂಗ ಯೋಗ. ಪ್ರಸ್ತುತ ಎಲ್ಲರೂ ಅನುಸರಿಸುತ್ತಿರುವುದು ಯೋಗಾಸನ ಮಾತ್ರ. ಯೋಗಾಸನವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಯೋಗಾಭ್ಯಾಸ ಮಾಡಬೇಕು. ಆದ್ದರಿಂದ ನೀವು ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು:

  • ಯೋಗಸನ ಮಾಡಿದ ತಕ್ಷಣ ಸ್ನಾನ ಬೇಡ.
  • ಯೋಗಾಸನದ ನಿಶ್ಚಿತವಾದ ಅಂತಹ ಭಂಗಿಗಳಿಗೆ ಬಲಪ್ರಯೋಗದ ಮೂಲಕ ಅವಸ್ತೆಯನ್ನು ತಲುಪುವುದು ಬೇಡ.
  • ನಿಯಮಿತವಾದಂತಹ ರೂಢಿಯ ಮೂಲಕ ನಿಶ್ಚಿತವಾದಂತಹ ಯೋಗಾಸನದ ಅವಸ್ಥೆ ತಲುಪುವುದು ಸೂಕ್ತ.
  • ಯೋಗಾಸನವನ್ನು ಸಮತಟ್ಟಾದ ನೆಲದ ಮೇಲೆ ಮಾಡಬೇಕು. ಯೋಗಾಸನ ಮಾಡುವ ಕೊಠಡಿ ಯಲ್ಲಿ ಗಾಳಿ ಬೆಳಕು ಆಡುವಂತೆ ಇರಬೇಕು.
  • ಯೋಗಾಭ್ಯಾಸವನ್ನು ಶಾಂತ ಮನಸ್ಸಿನಿಂದ ಮಾಡಬೇಕು. ದೇಹವನ್ನು ದಂಡಿಸಬಾರದು.
  • ಯೋಗ ಮಾಡುವಾಗ ಸುಸ್ತಾದರೆ ಮುಂದುವರೆಸದೆ ವಿಶ್ರಾಂತಿ ತಗೊಂಡು ಯೋಗಾಭ್ಯಾಸ ಮುಂದುವರೆಸಬೇಕು. ಯೋಗಸನ ಮಾಡಲು ನಿಯಮಿತ ಸಮಯವನ್ನು ಪಾಲಿಸುವುದು ಒಳ್ಳೆಯದು.
  • ಯೋಗಾಸನ ಮಾಡುವಾಗ ಬೇಡದ ವಿಚಾರಗಳು ಮತ್ತು ನಕಾರಾತ್ಮಕ ವಿಚಾರಗಳಿಂದ ದೂರ ಇರಬೇಕು . ಅಲ್ಲದೆ ಕೆಮ್ಮು, ಸೀನು ಬಂದಾಗ ತಡೆಹಿಡಿಯಬಾರದು.
  • ಯೋಗಾಸನ ಮಾಡಿದ ಬಳಿಕ ಧ್ಯಾನ ಮತ್ತು ಪ್ರಾಣಯಾಮ ಮಾಡಬೇಕು.
  • ಯೋಗಾಸನ ಮಾಡಿದ ಬಳಿಕ ಶವಾಸನ ಮಾಡಬೇಕು .
  • ಮಹಿಳೆಯರು ಮುಟ್ಟಿನ ಸಮಯದಲ್ಲಿ ಎಲ್ಲಾ ಬಗೆಯ ಯೋಗಾಸನ ಮಾಡುವಂತಿಲ್ಲ.
  • ಗರ್ಭಾವಸ್ಥೆಯಲ್ಲಿ ಸೂಕ್ತ ವೈದ್ಯರ ಮತ್ತು ಅನುಭವಿ ಯೋಗಾಸನ ತರಬೇತುದಾರರ ಮಾರ್ಗದರ್ಶನ ಪಡೆಯಿರಿ.
  • ಯೋಗಾಸನ ಮಾಡುವಾಗ ಹೊಟ್ಟೆ ಖಾಲಿ ಇರಬೇಕು. ಊಟವಾದ ಬಳಿಕ ಯೋಗಾಸನ ಮಾಡಲು ಕನಿಷ್ಠ 3 ಗಂಟೆಯ ಅಂತರವಿರಬೇಕು. ಅನಾರೋಗ್ಯದ ಸಮಯದಲ್ಲಿ ಯೋಗಸನ ಮಾಡಬೇಡಿ.
  • ಯೋಗಾಸನ ಮಾಡಿದ ಬಳಿಕ ವ್ಯಾಯಾಮ ಮಾಡಬೇಡಿ. ವ್ಯಾಯಾಮ ಮಾಡಿದ ಬಳಿಕ ಯೋಗಾಸನ ಮಾಡಬಹುದು.

ಲೇಖನ: ಡಾ ರವಿಕಿರಣ ಪಟವರ್ಧನ (ಆಯುರ್ವೇದ ವೈದ್ಯರು, ಶಿರಸಿ.)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:25 pm, Tue, 20 June 23

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ