AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Health Tips: ಆರೋಗ್ಯಕರ ಕಡಲೆ ಕ್ಯಾರೆಟ್ ಸೂಪ್ ರೆಸಿಪಿ ಇಲ್ಲಿದೆ

ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಒಂದು ಆರೋಗ್ಯವಾಗಿರುವ ಸೂಪ್​​ ನೀವು ಹುಡುಕುತ್ತಿದ್ದರೆ, ನೀವು ಮನೆಯಲ್ಲಿಯೇ ಸುಲಭವಾಗಿ ಆರೋಗ್ಯಕರ ಸೂಪ್​​ ತಯಾರಿಸಬಹುದು.

Winter Health Tips: ಆರೋಗ್ಯಕರ ಕಡಲೆ ಕ್ಯಾರೆಟ್ ಸೂಪ್ ರೆಸಿಪಿ ಇಲ್ಲಿದೆ
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 28, 2023 | 7:30 AM

Share

ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಒಂದು ಆರೋಗ್ಯವಾಗಿರುವ ಸೂಪ್​​ ನೀವು ಹುಡುಕುತ್ತಿದ್ದರೆ, ನೀವು ಮನೆಯಲ್ಲಿಯೇ ಸುಲಭವಾಗಿ ಆರೋಗ್ಯಕರ ಸೂಪ್​​ ತಯಾರಿಸಬಹುದು. ಕಡಿಮೆ ಕ್ಯಾಲೋರಿ ಹೊಂದಿರುವ ಈ ಪ್ರೊಟೀನ್ ಭರಿತ ಸೂಪ್ ನಿಮ್ಮನ್ನು ದೀರ್ಘಕಾಲದವರೆಗೆ ತೃಪ್ತಿಪಡಿಸುತ್ತದೆ ಮತ್ತು ಸ್ನಾಯುಗಳು, ಮೂಳೆಗಳ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾರೆಟ್ ಮತ್ತು ಕಡಲೆಗಳಲ್ಲಿ ಅಗತ್ಯವಾದ ಪೋಷಕಾಂಶಗಳ ಆರೋಗ್ಯಕರ ಸೇವನೆಯಿಂದಾಗಿ ಜೀವಕೋಶಗಳ ಪುನರುತ್ಪಾದನೆಯನ್ನು ಸುಧಾರಿಸುತ್ತದೆ. ಇದು ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ಚಳಿಗಾಲದಲ್ಲಿ ಹರಡುವ ಸೋಂಕಿನಿಂದ ನಿಮ್ಮನ್ನು ದೂರವಿಡುತ್ತದೆ.

ಕಡಲೆ ಕ್ಯಾರೆಟ್ ಸೂಪ್ ರೆಸಿಪಿ :

ಬೇಕಾಗುವ ಸಾಮಾಗ್ರಿಗಳು:

2 ಕಪ್ ಕಡಲೆ ಅಗತ್ಯಕ್ಕೆ ತಕ್ಕಂತೆ ನೀರು ಅಗತ್ಯಕ್ಕೆ ತಕ್ಕಂತೆ ಕರಿಮೆಣಸು 1 ಈರುಳ್ಳಿ 2 ಟೇಬಲ್ಸ್ಪೂನ್ ಬೆಣ್ಣೆ 2 ಕ್ಯಾರೆಟ್ ಅಗತ್ಯವಿರುವಷ್ಟು ಉಪ್ಪು 4 ಲವಂಗ ಬೆಳ್ಳುಳ್ಳಿ 1/2 ಟೀಚಮಚ ಕೆಂಪುಮೆಣಸು

ಇದನ್ನೂ ಓದಿ: ಟ್ವಿಟರ್​​​ನಲ್ಲಿ ಟ್ರೆಂಡ್​​ ಆಗುತ್ತಿದೆ ಬೆಂಗಳೂರಿನ ಸ್ಟಿಕ್ ಇಡ್ಲಿ

ಕಡಲೆ ಕ್ಯಾರೆಟ್ ಸೂಪ್ ಮಾಡುವ ವಿಧಾನ:

ಹಂತ 1 ಕಡಲೆಯನ್ನು ನೆನೆಸಿಡಿ:

ಈ ಸುಲಭವಾದ ಪಾಕವಿಧಾನವನ್ನು ಮಾಡಲು, ಕಡಲೆಯನ್ನು ರಾತ್ರಿಯಿಡೀ ನೆನೆಸಿಡಿ. ನಂತರ ಕಡಲೆ ಮತ್ತು ಕ್ಯಾರೆಟ್ ಚೆನ್ನಾಗಿ ಬೇಯಿಸಿ.

ಹಂತ 2 ಮಿಶ್ರಣ:

ಕಡಲೆ ಹಾಗೂ ಕ್ಯಾರೆಟ್​ ಬೇಯಿಸಿದ ನಂತರ, ಅದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ನಂತರ ಸೂಪ್ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 3 ಬಿಸಿಯಾಗಿ ಸವಿಯಿರಿ:

ಒಂದು ಪ್ಯಾನ್ ತೆಗೆದುಕೊಂಡು ಬೆಣ್ಣೆ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಈಗಾಗಲೇ ಮಾಡಿಟ್ಟ ಕಡಲೆ ಹಾಗೂ ಕ್ಯಾರೆಟ್ ಬೇಯಿಸಿದ, ನೀರು ಸಮೇತ ಸೂಪ್​ ಹಾಕಿ. ಉಪ್ಪು, ಮೆಣಸು ಮತ್ತು ಕಾಳು ಮೆಣಸುಗಳೊಂದಿಗೆ ಮಸಾಲೆ ಹಾಕಿ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ