Father’s Day 2023: ಅಪ್ಪಂದಿರ ದಿನದಂದು ನಿಮ್ಮ ತಂದೆಗೆ ರುಚಿಕರವಾದ ಪಾಕಗಳನ್ನು ತಯಾರಿಸಿ!

ತಂದೆಯ ದಿನದ ಪ್ರಯುಕ್ತ ನಾವು ಮನೆಯಲ್ಲಿ ತಯಾರಿಸಬಹುದಾದ ರುಚಿಕರ ಸಿಹಿತಿಂಡಿಗಳನ್ನು ಮಾಡಿ ಅವರನ್ನು ಆಶ್ಚರ್ಯಗೊಳಿಸಬಹುದಾಗಿದೆ. ಪಾಕ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

Father's Day 2023: ಅಪ್ಪಂದಿರ ದಿನದಂದು ನಿಮ್ಮ ತಂದೆಗೆ ರುಚಿಕರವಾದ ಪಾಕಗಳನ್ನು ತಯಾರಿಸಿ!
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2023 | 7:23 AM

ಅಪ್ಪಂದಿರ ದಿನದ ಪ್ರಯುಕ್ತ ಏನಾದರೂ ವಿಶೇಷ ಉಡುಗೊರೆ ಕೊಡಲು ಇಚ್ಛಿಸುತ್ತಿರುವ ಮಕ್ಕಳು, ತಮ್ಮ ಪ್ರೀತಿಯ ತಂದೆಗೆ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸಬಹುದು. ಅಪ್ಪಂದಿರು ನೀವು ಪ್ರೀತಿಯಿಂದ ಮಾಡಿಕೊಟ್ಟ ತಿಂಡಿಯನ್ನು ಇಷ್ಟ ಪಡದಿರಲು ಸಾಧ್ಯವೇ ಇಲ್ಲ. ಪ್ರತಿಯೊಂದು ಸಮಯದಲ್ಲಿಯೂ ಮಕ್ಕಳನ್ನು ಕೈ ಹಿಡಿದು ನಡೆಸಿದ, ಕಷ್ಟದಲ್ಲಿ ಬಿನ್ನ ಹಿಂದೆ ನಿಂತ ಎಲ್ಲ ತಂದೆಯರ ಋಣ ತೀರಿಸಲು ಸಾಧ್ಯವಿಲ್ಲ ಹಾಗಾಗಿ ಉಡುಗೊರೆ ಎನ್ನುವುದು ಯಾವ ಲೆಕ್ಕವೂ ಅಲ್ಲ. ಆದರೆ ಆ ದಿನವನ್ನು ಆಚರಣೆ ಮಾಡುವುದು ತಪ್ಪೇನಲ್ಲ. ಹಾಗಾಗಿ ನಿಮ್ಮ ತಂದೆಗೆ ಇಷ್ಟವಾಗುವಂತ ತಿಂಡಿ ತಿನಿಸುಗಳನ್ನು ಮಾಡಬಹುದು. ಅಥವಾ ಹೊಸ ರೀತಿಯ ಪಾಕ ವಿಧಾನಗಳು ಬೇಕೆಂದಲ್ಲಿ ಇಲ್ಲಿದೆ ವಿವರವಾದ ಮಾಹಿತಿ.

ಪನೀರ್ ಕಟ್ಲೆಟ್ಗೆ ಬೇಕಾಗುವ ಸಾಮಾಗ್ರಿಗಳು:

ಎಣ್ಣೆ – 4 ಚಮಚ

ಜೀರಿಗೆ – 1/2 ಚಮಚ

ಹೆಚ್ಚಿದ ಶುಂಠಿ – 1 ಟೀ ಚಮಚ

ಹಸಿಮೆಣಸಿನಕಾಯಿ, (ಖಾರ ಬೇಕಾದಷ್ಟು)

ಕತ್ತರಿಸಿದ ಈರುಳ್ಳಿ – 2

ಬಟಾಣಿ – 1 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಖಾರದ ಪುಡಿ – 2 ಚಮಚ

ಜೀರಿಗೆ ಪುಡಿ – 1 ಟೀ ಚಮಚ

ಕಪ್ಪು ಉಪ್ಪು – 1 ಟೀ ಚಮಚ

ಬೇಯಿಸಿ ಜಜ್ಜಿದ ಆಲೂಗಡ್ಡೆ – 1 ಕಪ್

ಪುಡಿ ಮಾಡಿದ ಪನೀರ್ – 400 ಗ್ರಾಂ / 21/2 ಕಪ್

ಕತ್ತರಿಸಿದ ಕೊತ್ತಂಬರಿ ಸೊಪ್ಪು – ಬೆರಳೆಣಿಕೆಯಷ್ಟು

ಸಾಸಿವೆ ಎಲೆಗಳು – 2 ಟೀ ಚಮಚ

ಬ್ರೆಡ್ ಚೂರುಗಳು – 4

ಮಿಶ್ರಣಕ್ಕೆ ಬೇಕಾಗುವ ಸಾಮಗ್ರಿಗಳು

ಕಡಲೆ ಹಿಟ್ಟು – 1/2 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ನೀರು – 1/2 ಕಪ್

ಎಣ್ಣೆ – ಡೀಪ್ ಫ್ರೈ ಮಾಡಲು

ಬ್ರೆಡ್ ಚೂರುಗಳು – 2 ಕಪ್

ತುಪ್ಪ – 1 ಕಪ್

ಮಾಡುವ ವಿಧಾನ:

ಮಿಶ್ರಣವನ್ನು ತಯಾರಿಸಲು, ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಕಲಕಿ. ಹಸಿರು ಬಟಾಣಿ, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ, ಚಾಟ್ ಮಸಾಲಾ ಮತ್ತು ಕಪ್ಪು ಉಪ್ಪನ್ನು ಸೇರಿಸಿ. ನಂತರ ಬೇಯಿಸಿ ಜಜ್ಜಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಇದನ್ನು ತಣ್ಣಗಾಗಿಸಿ, ನಂತರ ಜಜ್ಜಿದ ಪನೀರ್, ಕಸೂರಿ ಮೆಥಿ, ಉಪ್ಪು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ. ಮೊದಲೇ ತಯಾರಿಸಿ ಇಟ್ಟುಕೊಂಡ ಕೆಲವು ಬ್ರೆಡ್ ಚೂರುಗಳನ್ನು ಸೇರಿಸಿ ಮತ್ತು ಮಿಶ್ರಣವನ್ನು ಒಟ್ಟಿಗೆ ಸೇರಿಸಿ. ಲೇಪನ ಮಾಡಲು, ಕಡಲೆ ಹಿಟ್ಟು, ಉಪ್ಪು ಮತ್ತು ನೀರನ್ನು ಸೇರಿಸಿ. ಕಟ್ಲೆಟ್ ಗಳನ್ನು ಮಿಶ್ರಣದಲ್ಲಿ ಮುಳುಗಿಸಿ ಮತ್ತು ಬ್ರೆಡ್ ಚೂರುಗಳಿಂದ ಲೇಪಿಸಿ. ನಂತರ ಅವುಗಳನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ ಮತ್ತು ಬಿಸಿಯಾಗಿ ಬಡಿಸಿ.

ಇದನ್ನೂ ಓದಿ: Fathers Day 2023: ನಿಮ್ಮ ತಂದೆಗೆ ಈ ವಿಶೇಷ ಉಡುಗೊರೆ ಕೊಡಲು ಮರೆಯದಿರಿ

ಶಾಹಿ ಫಿರ್ನಿ ಮಾಡಲು ಬೇಕಾಗುವ ಸಾಮಗ್ರಿಗಳು:

4 ಕಪ್ ಹಾಲು

1/2 ಟೀ ಸ್ಪೂನ್ ಕೇಸರಿ ಎಳೆಗಳು

1/4 ಕಪ್ ಸಣ್ಣ ಧಾನ್ಯದ ಅಕ್ಕಿ(ಸಣ್ಣಕ್ಕಿ), 30 ನಿಮಿಷಗಳ ಕಾಲ ನೆನೆಸಿ ಒಣಗಿಸಿಟ್ಟು ಕೊಳ್ಳಿ

15-20 ಪಿಸ್ತಾ, ಸಿಪ್ಪೆ ಸುಲಿದಿರುವುದು

1/2 ಟೀ ಸ್ಪೂನ್ ಏಲಕ್ಕಿ ಪುಡಿ

2-3 ಟೀ ಸ್ಪೂನ್ ಒಣಗಿದ ಗುಲಾಬಿ ದಳಗಳು.

1/2 ಟೀ ಸ್ಪೂನ್ ರೋಸ್ ವಾಟರ್

12 ಶುಗರ್ ಫ್ರೀ ಗ್ರೀನ್

ಸಿಂಪಡಿಸಲು ಸ್ಲೈವರ್ಡ್ ಪಿಸ್ತಾ

ಅಲಂಕಾರಕ್ಕಾಗಿ ಸಿಲ್ವರ್ ವಾರ್ಕ್(ಸಿಲ್ವರ್ ಪೇಪರ್)

ಶಾಹಿ ಫಿರ್ನಿ ಮಾಡುವ ವಿಧಾನ:

ನಾನ್ ಸ್ಟಿಕ್ ಬಾಣಲೆಯನ್ನು ಬಿಸಿ ಮಾಡಿ ಬಳಿಕ ಅದಕ್ಕೆ ಹಾಲು, ಅರ್ಧ ಕೇಸರಿ ಸೇರಿಸಿ ಕುದಿಯಲು ಬಿಡಿ. ಅಕ್ಕಿಯನ್ನು ಪಿಸ್ತಾ, ಉಳಿದ ಕೇಸರಿಯನ್ನು ರುಬ್ಬಿಕೊಳ್ಳಿ. ನಿಮಗೆ ಬೇಕಾದಷ್ಟು ನೀರು ಹಾಕಿ ಕೊಳ್ಳಬಹುದು ಆದರೆ ಜಾಸ್ತಿಯಾಗಬಾರದು. ನಂತರ ಅಕ್ಕಿ ಮಿಶ್ರಣವನ್ನು ಹಾಲಿಗೆ ಸೇರಿಸಿ, ಏಲಕ್ಕಿ ಪುಡಿ, ಒಣಗಿದ ಗುಲಾಬಿ ದಳಗಳು, ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸುಮಾರು 10 ನಿಮಿಷಗಳ ಕಾಲ ಮಂದ ಉರಿಯಲ್ಲಿ ನಿಧಾನವಾಗಿ ಬೇಯಿಸಿಕೊಳ್ಳಿ. ಶುಗರ್ ಫ್ರೀ ಗ್ರೀನ್ ನೊಂದಿಗೆ ಮಿಶ್ರಣ ಮಾಡಿ. ಕೊನೆಯದಾಗಿ, ಗುಲಾಬಿ ದಳಗಳು, ಬ್ಲಾಂಚ್ಡ್ ಪಿಸ್ತಾ ಮತ್ತು ಸಿಲ್ವರ್ ವಾರ್ಕ್ ನಿಂದ ಅಲಂಕರಿಸಿ ಮತ್ತು ಸರ್ವ್ ಮಾಡಿ.

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು