AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marriage: ಮದುವೆಯಾಗದ ಹುಡುಗರಿಗೊಂದು ಕಿವಿ ಮಾತು: ನಿಮ್ಮ ಹೃದಯ ಚೆನ್ನಾಗಿರಬೇಕು ಅಂದ್ರೆ ಬೇಗ ಮದುವೆಯಾಗಿ, ಅಧ್ಯಯನ ಹೇಳ್ತಿದೆ

ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ, ಇದು ನಾವು ಹೇಳ್ತಿರೋದಲ್ಲ ಅಧ್ಯಯನ ಹೇಳ್ತಿರೋದು.

Marriage: ಮದುವೆಯಾಗದ ಹುಡುಗರಿಗೊಂದು ಕಿವಿ ಮಾತು: ನಿಮ್ಮ ಹೃದಯ ಚೆನ್ನಾಗಿರಬೇಕು ಅಂದ್ರೆ ಬೇಗ ಮದುವೆಯಾಗಿ, ಅಧ್ಯಯನ ಹೇಳ್ತಿದೆ
ಮದುವೆ
Follow us
ನಯನಾ ರಾಜೀವ್
|

Updated on: Feb 24, 2023 | 5:30 PM

ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ, ಇದು ನಾವು ಹೇಳ್ತಿರೋದಲ್ಲ ಅಧ್ಯಯನ ಹೇಳ್ತಿರೋದು. ಹೌದು ಬೇಗ ಮದುವೆಯಾಗುವುದರಿಂದ ಪುರುಷರ ಹೃದಯದ ಆರೋಗ್ಯ ಚೆನ್ನಾಗಿರುವುದು ಹಾಗೆಯೇ ಕೆಲವು ರೋಗಗಳಿಂದಲೂ ದೂರವಿರಬಹುದು ಎಂದು ಅಧ್ಯಯನ ಹೇಳಿದೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ.

ಹಿಂದಿನ ಅಧ್ಯಯನಗಳು ಮದುವೆಯಾಗಿರುವುದು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಪುರುಷರಿಗೆ ಎಂದು ಹೇಳಿದೆ. ಜೀವನ ಸಂಗಾತಿಯನ್ನು ಹೊಂದಿರುವುದು ಒಂಟಿತನವನ್ನು ಹೋಗಲಾಡಿಸುತ್ತದೆ, ಆದರೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಮದುವೆಯಾದ ಬಳಿಕ ಎಂಥದ್ದೇ ಕಷ್ಟ ಬಂದರೂ ಸಂಗಾತಿ ಜತೆಗೆ ಸೇರಿ ಎದುರಿಸುತ್ತೇನೆ, ತಾನು ಒಬ್ಬಂಟಿ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಹಾಗಾಗಿ ಹಲವು ಚಿಂತೆಗಳನ್ನು ಬಿಟ್ಟುಬಿಡುತ್ತಾರೆ.

ಮತ್ತಷ್ಟು ಓದಿ:Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

ದಿ ಸನ್ ವರದಿಯ ಪ್ರಕಾರ, ಬ್ರಿಟನ್‌ನಲ್ಲಿ ಮದುವೆ ದರ ಕುಸಿಯುತ್ತಿದೆ. 1893 ರ ನಂತರ, 2019 ರಲ್ಲಿ ಕಡಿಮೆ ಮದುವೆಗಳು ನಡೆದಿವೆ. ಡಾ. ಲೇಬಾ ಅವರ ಅಧ್ಯಯನದಲ್ಲಿ 6800 ಜನರ ಡೇಟಾವನ್ನು ಬಳಸಲಾಗಿದೆ. ನಂತರ ಅವರು ಮತ್ತು ಅವರ ವೈವಾಹಿಕ ಸ್ಥಿತಿಯನ್ನು ಹೋಲಿಸಲಾಯಿತು. ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ಆದಾಗ್ಯೂ, ಮದುವೆಯ ಸ್ಥಿತಿಯು ಹೃದಯಾಘಾತದಿಂದ ಸಾಯುವ ಮಹಿಳೆಯರ ಅಪಾಯದ ಮೇಲೆ ಪರಿಣಾಮ ಬೀರಲಿಲ್ಲ. ಸುಮಾರು 900,000 ಬ್ರಿಟನ್ನರು ಹೃದಯದ ಸಮಸ್ಯೆಗಳನ್ನು ಹೊಂದಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ