AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

Mental Health:ನೀವು ಮಾನಸಿಕವಾಗಿ ಎಷ್ಟು ಆರೋಗ್ಯವಾಗಿರುತ್ತೀರೋ ನಿಮ್ಮ ದೇಹವೂ ಕೂಡ ಅಷ್ಟೇ ಆರೋಗ್ಯವಾಗಿರುತ್ತದೆ. ನಿಮ್ಮ ದೇಹ( Body) ದಣಿದಂತೆ ಮೆದುಳು ಕೂಡ ದಣಿದಿರುತ್ತದೆ. ಈ ಆಯಾಸದಿಂದ ಮೆದುಳು( Brain) ಭಾರವಾದಂತೆ ಭಾಸವಾಗುತ್ತದೆ.

Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ
ಮಾನಸಿಕ ಆರೋಗ್ಯ
Follow us
TV9 Web
| Updated By: ನಯನಾ ರಾಜೀವ್

Updated on: May 18, 2022 | 3:57 PM

ನೀವು ಮಾನಸಿಕವಾಗಿ ಎಷ್ಟು ಆರೋಗ್ಯವಾಗಿರುತ್ತೀರೋ ನಿಮ್ಮ ದೇಹವೂ ಕೂಡ ಅಷ್ಟೇ ಆರೋಗ್ಯವಾಗಿರುತ್ತದೆ. ನಿಮ್ಮ ದೇಹ( Body) ದಣಿದಂತೆ ಮೆದುಳು ಕೂಡ ದಣಿದಿರುತ್ತದೆ. ಈ ಆಯಾಸದಿಂದ ಮೆದುಳು( Brain) ಭಾರವಾದಂತೆ ಭಾಸವಾಗುತ್ತದೆ. ನಿಮಗೆ ಆಯಾಸವಾದಾಗ ತಲೆಯಲ್ಲಿ ಭಾರ, ಮಾನಸಿಕ ಆಯಾಸ,ಸಿಟ್ಟು, ಉದ್ವೇಗ, ಯಾರೊಂದಿಗೂ ಮಾತನಾಡುವ ಆಸೆ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ನಿಮ್ಮ ಮೆದುಳಿನ ಆರೋಗ್ಯಕ್ಕೆ ಗಮನ ಕೊಡಬೇಕೆಂದು ಸೂಚಿಸುತ್ತವೆ. ಇದಲ್ಲದೆ ಭಾವನಾತ್ಮಕ ಆರೋಗ್ಯದ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಇಲ್ಲಿವೆ ಸಲಹೆಗಳು.

ಮಾನಸಿಕ ಆಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು ಮಾನಸಿಕ ಆಯಾಸವೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು, ಮಾನಸಿಕ ಆಯಾಸದ ಕಾರಣಗಳು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿರಬಹುದು. ಉದಾಹರಣೆಗೆ ದೀರ್ಘಕಾಲದ ಅನಾರೋಗ್ಯ, ಔಷಧಿಗಳ ದೀರ್ಘಕಾಲದ ಬಳಕೆ, ಹೆಚ್ಚು ಒತ್ತಡ ತೆಗೆದುಕೊಳ್ಳುವುದು. ಈ ಎಲ್ಲಾ ಕಾರಣಗಳು ಮಾನಸಿಕ ಆಯಾಸದಿಂದ ಉಂಟಾಗಬಹುದು.

ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಿ ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಕ್ಕಳು ವಿಶೇಷವಾಗಿ ತಮ್ಮ ಆರೋಗ್ಯದ ಮೇಲೆ ಗಮನಹರಿಸಬೇಕು ಮತ್ತು ಒಳಾಂಗಣ ಆಟಗಳು, ವ್ಯಾಯಾಮ ಇತ್ಯಾದಿಗಳ ಮೇಲೆ ಕೇಂದ್ರೀಕರಿಸಬೇಕು” ಎಂದು ಮನೋವೈದ್ಯರು ಹೇಳುತ್ತಾರೆ.

ಈ ಆಯುರ್ವೇದ ಔಷಧಗಳಿಂದ ಮಾನಸಿಕ ಆಯಾಸಕ್ಕೆ ಪರಿಹಾರ ಮಾನಸಿಕ ಆಯಾಸವನ್ನು ತಪ್ಪಿಸಲು ನೀವು 3 ಆಯುರ್ವೇದ ಔಷಧಿಗಳನ್ನು ಸಹ ಬಳಸಬಹುದು. ಇದು ಖಂಡಿತವಾಗಿಯೂ ನಿಮಗೆ ಪರಿಹಾರವನ್ನು ನೀಡುತ್ತದೆ. ಇದು ಅಶ್ವಗಂಧ, ಶಂಖಪುಷ್ಪಿ ಮತ್ತು ಬ್ರಾಹ್ಮಿಗಳನ್ನು ಒಳಗೊಂಡಿದೆ.

ಬ್ರಾಹ್ಮಿ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಲ್ಲದು. ಇದರೊಂದಿಗೆ ಇದು ಮಾನಸಿಕ ಆಯಾಸವನ್ನು ನಿವಾರಿಸಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಸಮಸ್ಯೆ ಇದ್ದರೆ ನೀವು ಬ್ರಾಹ್ಮಿಯನ್ನು ಸೇವಿಸಬೇಕು.

ಅಶ್ವಗಂಧವು ದೈವಿಕ ಔಷಧವಾಗಿದೆ, ಇದು ನಿಮ್ಮನ್ನು ಮಾನಸಿಕ ಒತ್ತಡದಿಂದ ರಕ್ಷಿಸುತ್ತದೆ. ಈ ಔಷಧಿಯನ್ನು ಅನಾರೋಗ್ಯದ ಸಮಯದಲ್ಲಿ ಮಾತ್ರ ಸೇವಿಸಬೇಕೆಂದೆನಿಲ್ಲ, ಸಕ್ರಿಯವಾಗಿರಲು ನೀವು ಇದನ್ನು ಬಳಸಬಹುದು. ಅದೇ ರೀತಿ ಮೂರನೇ ಔಷಧವು ಮನಸ್ಸನ್ನು ಚುರುಕುಗೊಳಿಸಲಿದೆ. ಇದನ್ನು ಶಂಖಪುಷ್ಪಿ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ತಾಜಾತನವನ್ನು ಪಡೆಯುತ್ತದೆ.

ಸ್ವಯಂ ಕಾಳಜಿಯ ಮೇಲೆ ಕೇಂದ್ರೀಕರಿಸಿ ನಮ್ಮ ಬಗ್ಗೆ ನಾವು ಹೆಚ್ಚು ಕಾಳಜಿವಹಿಸುವುದು ಮುಖ್ಯವಾಗುತ್ತದೆ. ಈ ಕಾಳಜಿಯು ಹಲವಾರು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಒಬ್ಬ ಉತ್ತಮ ವ್ಯಕ್ತಿಯಾಗಲು ಸ್ವಯಂ-ಅರಿವು ಬೆಳೆಸಿಕೊಳ್ಳುವಲ್ಲಿ ಸಹ ಕೆಲಸ ಮಾಡಬೇಕು ಏಕೆಂದರೆ ನೀವು ಉತ್ತಮ ವ್ಯಕ್ತಿಯಾಗಿದ್ದಾಗ, ನಿಮ್ಮ ಸುತ್ತಲಿನ ವಿಷಯಗಳು ಉತ್ತಮವಾಗುತ್ತದೆ. ಹಾಗಅಗಿ ನಿಮ್ಮ ವ್ಯಕ್ತಿತ್ವ ಬೆಳವಣಿಗೆಯ ಕುರಿತು ಹೆಚ್ಚು ಗಮನ ನೀಡುವುದು ಉತ್ತಮ.

ಧ್ಯಾನ ಮಾಡಿ: ನೀವು ಧ್ಯಾನ ಮಾಡುವುದರಿಂದ ಮನಸ್ಸಿಗೆ ಸಂಬಂಧಿಸಿದ ಹಲವು ಕಾಯಿಲೆಗಳಿಂದ ದೂರ ಇರಬಹುದಾಗಿದೆ. ಮೊದಲು ಧ್ಯಾನ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಳ್ಳಿ, ಧ್ಯಾನಕ್ಕೆ ಕುಳಿತಾಗ ಕಷ್ಟ, ನೋವು ಎಲ್ಲವನ್ನೂ ಕ್ಷಣಕಾಲ ಬದಿಗಿಡಬೇಕು.

ಆರೋಗ್ಕ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ