AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ನೀವು ನಿಮ್ಮ ಸಂಗಾತಿಯ ಜತೆ ಹೆಚ್ಚು ವಾದ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

ಪ್ರತೀ ಬಾರಿ ನಿಮ್ಮ ಸಂಗಾಂತಿಯೊಂದಿಗೆ ಮನಸ್ತಾಪಗಳು ಆದ ನಂತರ ನೀವು ಮಾಡುವ ಕೆಲವೊಂದು ವಿಷಯಗಳು ನಿಮ್ಮ ಸಂಬಂಧಗಳು ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾಂತಿಯ ಜೊತೆಗಿನ ವಾದದ ನಂತರ ಮಾಡಬೇಕಾದ ಸಲಹೆಗಳು ಇಲ್ಲಿವೆ.

Relationship: ನೀವು ನಿಮ್ಮ ಸಂಗಾತಿಯ ಜತೆ ಹೆಚ್ಚು ವಾದ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು
Relationship FightsImage Credit source: Reader's Digest
TV9 Web
| Updated By: ನಯನಾ ರಾಜೀವ್|

Updated on: Nov 12, 2022 | 8:00 AM

Share

ಸಂಬಂಧಗಳೇ ಹಾಗೆ ಒಂದಿಷ್ಟು ಪ್ರೀತಿ, ಜಗಳ, ಕೋಪ, ಮನಸ್ತಾಪ, ಅನಿರೀಕ್ಷಿತ ಉಡುಗೊರೆಗಳು, ನೋವು ನಲಿವಿನಿಂದ ತುಂಬಿರುತ್ತದೆ. ಪ್ರತಿ ಬಾರಿ ಜಗಳ ಮನಸ್ತಾಪಗಳ ನಂತರ ನಿಮ್ಮ ಸಂಗಾಂತಿಯನ್ನು ಖುಷಿ ಪಡಿಸಲು ಅದೆಷ್ಟೋ ಸಾಹಸಗಳನ್ನು ಮಾಡುವುದು ಸಾಮಾನ್ಯ.

ಪ್ರತೀ ಬಾರಿ ನಿಮ್ಮ ಸಂಗಾಂತಿಯೊಂದಿಗೆ ಮನಸ್ತಾಪಗಳು ಆದ ನಂತರ ನೀವು ಮಾಡುವ ಕೆಲವೊಂದು ವಿಷಯಗಳು ನಿಮ್ಮ ಸಂಬಂಧಗಳು ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾಂತಿಯ ಜೊತೆಗಿನ ವಾದದ ನಂತರ ಮಾಡಬೇಕಾದ ಸಲಹೆಗಳು ಇಲ್ಲಿವೆ.

ಇಬ್ಬರು ವ್ಯಕ್ತಿಗಳು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ತೊಡಗಿಸಿಕೊಂಡಾಗ, ಕೆಲವೊಂದು ಸಂದರ್ಭದಲ್ಲಿ ಅಭಿಪ್ರಾಯಗಳು ಸಂಘರ್ಷವನ್ನು ಉಂಟುಮಾಡುತ್ತದೆ.

ವಾದಗಳು ಮತ್ತು ಘರ್ಷಣೆಗಳು ಪರಸ್ಪರರ ಬಗ್ಗೆ ಹಾಗೂ ಅವರ ಆಲೋಚನೆಗಳೇನು? ಎಂಬುದನ್ನು ತಿಳಿಯಲು ಸಹಾಯ ಮಾಡುತ್ತವೆ. ಸಂಘರ್ಷಗಳ ಮೂಲಕ ಪರಸ್ಪರರ ವಿಭಿನ್ನ ದೃಷ್ಟಿಕೋನಗಳು, ವಿಭಿನ್ನ ಮೌಲ್ಯ, ನಂಬಿಕೆ ವ್ಯವಸ್ಥೆಗಳನ್ನು ತಿಳಿದುಕೊಳ್ಳಬಹುದು ಮತ್ತು ಪರಸ್ಪರರ ಬಗ್ಗೆ ಕೂಲಂಕಷವಾಗಿ ಕಲಿಯಬಹುದು.

ಪ್ರತಿ ಬಾರಿ ವಾದದ ನಂತರ ನಿಮ್ಮ ಸಮಸ್ಯೆ ಎನು? ಹಾಗೂ ನಿಮ್ಮವರ ಅಭಿಪ್ರಾಯವೇನು? ಎಂಬುದನ್ನು ಸರಿಯಾಗಿ ಕೇಳಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಯಾಕೆಂದರೆ ಇದು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಇನ್ನಷ್ಟು ತಿಳಿಯಲು ಕಾರಣವಾಗುತ್ತದೆ.

ನಿಮ್ಮ ಸಂಗಾಂತಿಯೊಂದಿಗಿನ ವಾದ ವಿವಾದಗಳನ್ನು ಯಾವತ್ತಿಗೂ ಹೆಚ್ಚಿಸಲು ಹೋಗದಿರಿ. ಯಾಕೆಂದರೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಾ ಹೋದಂತೆ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಒಬ್ಬರಾದರೂ ಮೌನವಾಗಿದ್ದು , ಸಮಸ್ಯೆಯನ್ನು ಪರಿಹರಿಸುವುದು ಅಗತ್ಯವಾಗಿದೆ.

ವಾದ ವಿವಾದಗಳು ಕೇವಲ ಒಬ್ಬರಿಂದ ಉಂಟಾಗಲು ಸಾಧ್ಯವಿಲ್ಲ. ಆದ್ದರಿಂದ ವಾದ ವಿವಾದಗಳು ಮುಗಿದ ನಂತರ ಇಬ್ಬರು ತಮ್ಮ ತಪ್ಪುಗಳಿಗೆ ಪಾಲುದಾರರಾಗಿ ಕ್ಷಮೆಯಾಚಿಸುವುದು ಅಗತ್ಯವಾಗಿದೆ. ಇದು ನಿಮ್ಮಿಬ್ಬರ ಮೇಲಿನ ನಂಬಿಕೆ ಮತ್ತು ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ; ನಿಮ್ಮ ಈ ಗುಣಗಳು ಸಂಬಂಧದಲ್ಲಿ ಸದಾ ಸಂತೋಷ ತುಂಬಿರುವಂತೆ ಮಾಡುತ್ತೆ

ನಿಮ್ಮ ಕೋಪವನ್ನು ಆದಷ್ಟು ಕಡಿಮೆಗೊಳಿಸಿ ಯಾಕೆಂದರೆ ನಿಮ್ಮ ಸಂಗಾಂತಿಯೊಂದಿಗೆ ವಾದ ವಿವಾದಗಳು ಸೃಷ್ಟಿಯಾದಂತಹ ಸಂದರ್ಭದಲ್ಲಿ ಕೋಪದಲ್ಲಿ ಹೇಳಿದ ಮಾತುಗಳು ಸಂಬಂಧ ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನಿಮ್ಮ ಸಂಗಾಂತಿ ಮೇಲಿನ ಪ್ರೀತಿಯ ಜೊತೆಗೆ ತಾಳ್ಮೆ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ