AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನಿಮ್ಮ ಈ ಗುಣಗಳು ಸಂಬಂಧದಲ್ಲಿ ಸದಾ ಸಂತೋಷ ತುಂಬಿರುವಂತೆ ಮಾಡುತ್ತೆ

ಸಂಬಂಧದಲ್ಲಿ ಪ್ರೀತಿಯ ಜತೆಗೆ ಸ್ವಲ್ಪ ಮುನಿಸು ಇರುವುದು ಸಾಮಾನ್ಯ, ಕೆಲವು ವಿಷಯಗಳಲ್ಲಿ ಬೇಧವೂ ಕೂಡ ಇರುತ್ತದೆ. ಆದರೆ ಈ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಮುನ್ನಡೆದರೆ ಸಂಬಂಧದಲ್ಲಿ ಸದಾ ಖುಷಿ ಇರುತ್ತದೆ.

Relationship Tips: ನಿಮ್ಮ ಈ ಗುಣಗಳು  ಸಂಬಂಧದಲ್ಲಿ ಸದಾ ಸಂತೋಷ ತುಂಬಿರುವಂತೆ ಮಾಡುತ್ತೆ
Happy Couple
TV9 Web
| Edited By: |

Updated on: Nov 11, 2022 | 8:00 AM

Share

ಸಂಬಂಧದಲ್ಲಿ ಪ್ರೀತಿಯ ಜತೆಗೆ ಸ್ವಲ್ಪ ಮುನಿಸು ಇರುವುದು ಸಾಮಾನ್ಯ, ಕೆಲವು ವಿಷಯಗಳಲ್ಲಿ ಬೇಧವೂ ಕೂಡ ಇರುತ್ತದೆ. ಆದರೆ ಈ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಮುನ್ನಡೆದರೆ ಸಂಬಂಧದಲ್ಲಿ ಸದಾ ಖುಷಿ ಇರುತ್ತದೆ. ಪ್ರತಿ ದಂಪತಿಯು ತಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರಬೇಕೆಂದು ಬಯಸುತ್ತಾರೆ, ಆದರೆ ಬ್ಯುಸಿ ಲೈಫ್ ನಲ್ಲಿ ಎಷ್ಟೋ ಸಲ ಒಬ್ಬರಿಗೊಬ್ಬರು ಸಮಯ ಕೊಡಲು ಆಗುವುದಿಲ್ಲ. ಈ ಕಾರಣದಿಂದಾಗಿ ಸಂಬಂಧದಲ್ಲಿ ದೂರ ನಿರ್ಮಾಣವಾಗುತ್ತದೆ.

ಪ್ರತಿ ದಂಪತಿ ನಡುವೆ ಸಣ್ಣ ಜಗಳಗಳು ನಡೆಯುತ್ತವೆ, ಆದರೆ ಕೆಲವರು ಈ ಸಣ್ಣ ವಿಷಯಗಳನ್ನು ಮರೆತು ತಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.

ಕೆಲವು ವಿಷಯಗಳನ್ನು ನೀವು ಕೂಡ ಅಳವಡಿಸಿಕೊಳ್ಳಬೇಕು. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಆ ಅಭ್ಯಾಸಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸುತ್ತೇವೆ.

ಸಂತೋಷವಾಗಿರುವ ದಂಪತಿ ಯಾವಾಗಲೂ ಪರಸ್ಪರ ಬೆಂಬಲಿಸುತ್ತಾರೆ. ಮತ್ತೊಂದೆಡೆ, ನಿಮ್ಮ ಸಂಬಂಧವು ಸಂತೋಷವಾಗಿರಲು ನೀವು ಬಯಸಿದರೆ, ನಿಮ್ಮ ಸಂಗಾತಿಯ ಉತ್ತಮ ಸ್ನೇಹಿತರಾಗಿರಿ.

ಸ್ವಾತಂತ್ರ್ಯ ಮತ್ತು ಸ್ಥಾನ ನೀಡಿ ನಿಮ್ಮ ಸಂಗಾತಿಗೆ ಸ್ವಾತಂತ್ರ್ಯ ಹಾಗೂ ಸ್ಥಾನವನ್ನು ನೀಡಿ. ಸಂತೋಷದಿಂದಿರು ದಂಪತಿ ಪರಸ್ಪರರ ವೈಯಕ್ತಿಕ ಜಾಗವನ್ನು ಗೌರವಿಸುತ್ತಾರೆ, ಅಡ್ಡಿಪಡಿಸುವುದು, ಫೋನ್ ಪರಿಶೀಲಿಸುವುದು ಅಥವಾ ಅನುಮಾನಿಸುವುದು ಈ ಎಲ್ಲಾ ಲಕ್ಷಣಗಳು ಉತ್ತಮ ಸಂಗಾತಿಯಲ್ಲಿರುವುದಿಲ್ಲ. ಎಲ್ಲಿ ನಂಬಿಕೆ ಇರುತ್ತೋ ಅಲ್ಲಿ ಸಂಬಂಧಗಳು ಕೂಡ ಗಟ್ಟಿಯಾಗಿರುತ್ತದೆ.

ಅಹಂಕಾರವನ್ನು ದೂರವಿಡಿ ನೀವು ನಿಮ್ಮ ಸಂಗಾತಿಯೊಂದಿಗೆ ಸದಾ ಖುಷಿಯಾಗಿರಬೇಕು ಎಂದಾದರೆ ಅಹಂಕಾರವನ್ನು ಬಿಡಿ. ಮತ್ತೊಂದೆಡೆ ಜಗಳ ನಡೆದರೂ ಜಗಳವಾದ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ನೀವು ಹ್ಯಾಪಿ ಕಪಲ್ ಆಗಬಹುದು. ಇನ್ನೊಂದೆಡೆ, ನೀವು ಯಾವುದಾದರೂ ವಿಷಯದ ಬಗ್ಗೆ ಕೆಟ್ಟದಾಗಿ ಭಾವಿಸಿದರೆ, ನಿಮ್ಮ ಸಂಗಾತಿಯೊಂದಿಗೆ ನೀವು ಮುಕ್ತವಾಗಿ ಮಾತನಾಡಬೇಕು.

ಒಬ್ಬರಿಗೊಬ್ಬರು ಸಮಯ ಕೊಡಿ ಯಾವುದೇ ಸಂಬಂಧದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡುವುದು ಬಹಳ ಮುಖ್ಯ.ಒಟ್ಟಿಗೆ ಸಮಯ ಕಳೆಯುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಅದೇ ಸಮಯದಲ್ಲಿ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ದಿನವಿಡೀ ಕಾರ್ಯನಿರತರಾಗಿದ್ದಾರೆ, ಆದ್ದರಿಂದ ನಿಮ್ಮ ಸಂಗಾತಿಗಾಗಿ ನೀವು ಸಮಯವನ್ನು ಕಂಡುಕೊಂಡರೆ, ನಿಮ್ಮ ಸಂಬಂಧವು ಸಂತೋಷವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್