AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ವೃದ್ಧಿಸುವ ನಿಂಬು-ಶುಂಠಿ ರಸಂ ಮಾಡಿ ಸೇವಿಸಿ; ಇಲ್ಲಿದೆ ರೆಸಿಪಿ

ಮನೆಯಲ್ಲಿರುವ ಕಾಳು ಮೆಣಸು, ತೊಗರಿ ಬೇಳೆ, ಶುಂಠಿ, ಟೊಮೇಟೋದಂತಹ ಪದಾರ್ಥಗಳ ಮೂಲಕ ಸರಳವಾಗಿ ರುಚಿಯಾದ ಪದಾರ್ಥ ತಯಾರಿಸಬಹುದು. ಇಲ್ಲಿದೆ ನೋಡಿ ಸಿಂಪಲ್​ ಆಗಿ ಶುಂಠಿ, ನಿಂಬು ಸೇರಿಸಿ ರಸಂ ಮಾಡುವ ವಿಧಾನ.

ಆರೋಗ್ಯ ವೃದ್ಧಿಸುವ ನಿಂಬು-ಶುಂಠಿ ರಸಂ ಮಾಡಿ ಸೇವಿಸಿ; ಇಲ್ಲಿದೆ ರೆಸಿಪಿ
ರಸಂ (ಪ್ರಾತಿನಿಧಿಕ ಚಿತ್ರ)
TV9 Web
| Updated By: Pavitra Bhat Jigalemane|

Updated on:Feb 08, 2022 | 1:33 PM

Share

ಪ್ರತಿನಿತ್ಯ ಒಂದೇ ರೀತಿಯ ಸಾಂಬಾರ್​ ಅಥವಾ ಅಡುಗೆ (Cooking) ಮಾಡಿ ಬೇಸರವಾದಾಗ ಹೊಟೇಲ್​ಗೆ ಹೋಗೋಣ ಎನ್ನಿಸುವುದು ಸಹಜ. ಆದರೆ ಈಗ ಕೊರೊನಾ ಕಾಲ ಹೊಟೆಲ್​ಗಳಿಗೆ ಹೋಗಿ ತಿನ್ನುವುದು ಅಷ್ಟು ಸುರಕ್ಷಿತವಲ್ಲ ಹೀಗಾಗಿ  ಆದಷ್ಟು ಮನೆಯಲ್ಲಿಯೇ ಹೊಸ ರುಚಿಯ ಆಹಾರ (Food) ತಯಾರಿಸಿ ಸೇವಿಸಿ. ಅದು ಶುದ್ಧವಾಗಿಯೂ ಪೌಷ್ಟಿಕವಾಗಿಯೂ ಇರುತ್ತದೆ. ಮನೆಯಲ್ಲಿರುವ ಕಾಳು ಮೆಣಸು, ನಿಂಬು (Lemon) ತೊಗರಿ ಬೇಳೆ, ಶುಂಠಿ, ಟೊಮೇಟೋದಂತಹ ಪದಾರ್ಥಗಳ ಮೂಲಕ ಸರಳವಾಗಿ ರುಚಿಯಾದ ಪದಾರ್ಥ ತಯಾರಿಸಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಸಿಂಪಲ್​ ಆಗಿ ಶುಂಠಿ, ನಿಂಬು ಸೇರಿಸಿ ರಸಂ ಮಾಡುವ ವಿಧಾನ…

ಬೇಕಾಗುವ ಸಾಮಗ್ರಿ

2 ಕಪ್​ ತೊಗರಿಬೇಳೆ

2 ಚಮಚ ತುಪ್ಪ ಮತ್ತು ಕರಿಮೆಣಸು

1 ಚಮಚ ಸಾಸಿವೆ, ಜೀರಿಗೆ

1 ನಿಂಬೆ ಹಣ್ಣು, ಟೊಮೇಟೋ

3 ಚುಂಠಿ ಚೂರುಗಳು

6 ಹಸಿಮೆಣಸಿನಕಾಯಿ

ಅಗತ್ಯಕ್ಕೆ ತಕ್ಕಷ್ಟು ಅರಿಶಿನ, ಉಪ್ಪು

ಮಾಡುವ ವಿಧಾನ

ಮೊದಲು ಅರ್ಧಗಂಟೆ ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಕುಕ್ಕರ್​ಗೆ ಹಾಕಿ, ಚಿಟಿಕೆ ಅರಿಶಿನ ಸೇರಿಸಿ 5 ಸೀಟಿ ಕೂಗಿಸಿ, ಮೃದುವಾಗಿ ಬೇಯಿಸಿಕೊಳ್ಳಿ. ಇನ್ನೊಂದೆಡೆ ಕರಿಮೆಣಸು, ಜೀರಿಗೆ ಸೇರಿಸಿ ಹುರಿದು ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಸಾಸಿವೆ, ಜೀರಿಗೆ ಕತ್ತರಿಸಿಕೊಂಡ ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ಅದಕ್ಕೆ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ  ಬೇಯಿಸಿಟ್ಟ ತೊಗರಿಬೇಳೆಯನ್ನು ಹಾಕಿ ಮಿಶ್ರಣ ಮಾಡಿ ನಂತರ ಅದಕ್ಕೆ ಒರಟಾಗಿ ರುಬ್ಬಿಕೊಂಡ ಜೀರಿಗೆ, ಕರಿಮೆಣಸಿನ ಕಾಳನ್ನು ಹಾಕಿ ಕುದಿಸಿ. 5 ನಿಮಿಷ ಕುದಿಸಿದ ಬಳಿಕ ಉಪ್ಪು, ನಿಂಬೆ ರಸ ಹಾಕಿ 5  ನಿಮಿಷ ಲೋ ಪ್ಲೇಮ್​ನಲ್ಲಿಡಿ. ನಂತರ ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ನಿಂಬೆ ಶುಂಠಿ ರಸಂ ಸವಿಯಲು ಸಿದ್ಧ.

ಇದನ್ನೂ ಓದಿ:

ಅಡುಗೆ ಮಾಡುವಾಗ ಎಣ್ಣೆಯ ಆಯ್ಕೆ ಸರಿಯಾಗಿರಲಿ

Published On - 1:28 pm, Tue, 8 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ