AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ

ಕೈಗಳಿಗೆ ಹಚ್ಚಿದ ಮೆಹೆಂದಿ ಗಾಢ ಬಣ್ಣ ಬರದಿದ್ದರೆ ಬೇಸರವಾಗುವುದು ಕೂಡ ಉಂಟು. ಆದರೆ ಇನ್ನೂ ಮುಂದೆ ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಈ ಸುಲಭವಾದ ಮಾರ್ಗಗಳನ್ನು ಪ್ರಯತ್ನಿಸಿ.

ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಸುಲಭವಾದ ಮಾರ್ಗಗಳು ಇಲ್ಲಿವೆ
MehandiImage Credit source: Pinterest
ಅಕ್ಷತಾ ವರ್ಕಾಡಿ
|

Updated on: Oct 31, 2023 | 12:41 PM

Share

ಮೆಹಂದಿ ಕೈಗಳ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಕೂಡ ಇವೆ. ಹಬ್ಬಗಳ ಸಮಯದಲ್ಲಿ ಅಥವಾ ಮದುವೆ ಸಮಾರಂಭಗಳಲ್ಲಿ ಕೈಗಳಿಗೆ ಮೆಹೆಂದಿಯನ್ನು ಹಚ್ಚಲಾಗುತ್ತದೆ. ಆದರೆ ಕೈಗಳಿಗೆ ಹಚ್ಚಿದ ಮೆಹೆಂದಿ ಗಾಢ ಬಣ್ಣ ಬರದಿದ್ದರೆ ಬೇಸರವಾಗುವುದು ಕೂಡ ಉಂಟು. ಆದರೆ ಇನ್ನೂ ಮುಂದೆ ಕೈಗಳಲ್ಲಿ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ಈ ಸುಲಭವಾದ ಮಾರ್ಗಗಳನ್ನು ಪ್ರಯತ್ನಿಸಿ.

ನವೆಂಬರ್ 1 ರಂದು ಹಿಂದೂಗಳ ಪ್ರಮುಖ ಹಬ್ಬವಾದ ಕರ್ವಾ ಚೌತ್ ಹಬ್ಬವನ್ನು ಆಚರಿಸಲಾಗುತ್ತದೆ.  ಆದರೆ ಈ ಹಬ್ಬವನ್ನು ಜಮ್ಮು, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಆಚರಿಸಲಾಗುತ್ತದೆ. ಇದನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಮೆಹಂದಿಯನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೆಹೆಂದಿಯ ಬಣ್ಣವು ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿಯ ಆಳವನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ.

ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು  ಸುಲಭ ಮಾರ್ಗಗಳು:

ಮೊದಲು ಕೈ ತೊಳೆಯಿರಿ:

ಮೆಹೆಂದಿ ಹಚ್ಚುವ ಮೊದಲು, ಕೈಗಳನ್ನು ಸಾಬೂನು ಅಥವಾ ಹ್ಯಾಂಡ್‌ವಾಶ್‌ನಿಂದ ಸರಿಯಾಗಿ ಸ್ವಚ್ಛಗೊಳಿಸಿ. ಕೆಲವೊಮ್ಮೆ ಕೈಯಲ್ಲಿರುವ ಬೆವರು ಹಾಗೂ ಕೊಳೆಯಿಂದಾಗಿ ಮೆಹೆಂದಿಯ ಬಣ್ಣ ಗಾಢವಾಗದಿರಲು ಕಾರಣವಾಗಬಹುದು.

ಇದನ್ನೂ ಓದಿ: ಹಚ್ಚೆ ಹಾಕುವ ಮುನ್ನ ಜಾಗ್ರತೆ ಹೆಜ್ಜೆಗಳು; ಡಾ ರವಿಕಿರಣ ಪಟವರ್ಧನ ಶಿರಸಿ

ಮಾಯಿಶ್ಚರೈಸರ್ ಹಚ್ಚಬೇಡಿ:

ನಿಮ್ಮ ಕೈಗಳನ್ನು ತೊಳೆದ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ. ಆದರೆ ಮೆಹೆಂದಿಯನ್ನು ಹಚ್ಚುವ ಮೊದಲು ಮಾಯಿಶ್ಚರೈಸರ್ ಹಚ್ಚಬೇಡಿ. ಇವುಗಳಲ್ಲಿರುವ ರಾಸಾಯನಿಕಗಳು ಮೆಹಂದಿಯ ಬಣ್ಣವನ್ನು ಮಂದಗೊಳಿಸುತ್ತವೆ. ಆದ್ದರಿಂದ ಮಾಯಿಶ್ಚರೈಸರ್ ಅಥವಾ ಕ್ರೀಮ್ ಅನ್ನು ಮೆಹೆಂದಿಯನ್ನು ಹಚ್ಚುವ ಮೊದಲು ಅನ್ವಯಿಸುವುದನ್ನು ತಪ್ಪಿಸಿ.

ನಿಂಬೆ ಮತ್ತು ಸಕ್ಕರೆ:

ನಿಂಬೆ ರಸ ಮತ್ತು ಸಕ್ಕರೆಯ ಮನೆಮದ್ದನ್ನು ಸಹ ನೀವು ಪ್ರಯತ್ನಿಸಬಹುದು. ಇದು ತುಂಬಾ ಹಳೆಯ ಮನೆಮದ್ದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಂಡು ಅದರಲ್ಲಿ ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಈಗ ಅದನ್ನು ಮೆಹೆಂದಿಯ ಮೇಲೆ ಸಿಂಪಡಿಸಿ. ಮೆಹೆಂದಿ ಒಣಗಿದ ನಂತರವೇ ನೀವು ರಸವನ್ನು ಅನ್ವಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ನೈಸರ್ಗಿಕವಾಗಿ ಒಣಗಲು ಬಿಡಿ:

ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು ನೀವು ಬಯಸಿದರೆ, ಅದನ್ನು ನೈಸರ್ಗಿಕವಾಗಿ ಒಣಗಲು ಬಿಡಿ. ಹೇರ್​​ ಡ್ರೈಯರ್​​ ಬಳಸಿ ಮೆಹೆಂದಿಯನ್ನು ಒಣಗಿಸುವುದರಿಂದ ಬಣ್ಣ ಮಾಸುವುದಲ್ಲದೆ ವಿನ್ಯಾಸವೂ ಹಾಳಾಗುತ್ತದೆ.

ಲವಂಗ ಹೊಗೆ:

ನಿಮ್ಮ ಕೈಯಲ್ಲಿರುವ ಮೆಹೆಂದಿಯ ಬಣ್ಣವನ್ನು ಗಾಢವಾಗಿಸಲು, ಲವಂಗ ಹೊಗೆಯ ವಿಧಾನವನ್ನು ಪ್ರಯತ್ನಿಸಬಹುದು. ಒಂದು ಬಾಣಲೆಯ ಮೇಲೆ ಲವಂಗದ ಕೆಲವು ತುಂಡುಗಳನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಹುರಿಯಿರಿ. ಹೊಗೆ ಬಂದ ತಕ್ಷಣ ಮೆಹೆಂದಿ ಕೈಗಳನ್ನು ಸ್ವಲ್ಪ ಹೊತ್ತು ಹೊಗೆ ತಾಗುವಂತೆ ಹಿಡಿಯಿರಿ. ಈ ಮನೆಮದ್ದು ತುಂಬಾ ಪರಿಣಾಮಕಾರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?