Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ದಾಂಪತ್ಯ ಜೀವನ ಖುಷಿಯಾಗಿರಬೇಕಾದ್ರೆ ಈ ವಿಷಯಗಳತ್ತ ಗಮನ ಕೊಡಿ

ಯಾವ ಸಂಸಾರದಲ್ಲಿ ಜಗಳವಿಲ್ಲ ಹೇಳಿ, ಪ್ರೀತಿಯಿದ್ದ ಮೇಲೆ ಜಗಳಗಳು ಹುಸಿಮುನಿಸು ಸರ್ವೇ ಸಾಮಾನ್ಯ. ಆದರೆ ದಾಂಪತ್ಯ ಜೀವನದಲ್ಲಿ ಜಗಳವೇ ಹೆಚ್ಚಾದರೆ ನೆಮ್ಮದಿಯು ಹಾಳಾಗುತ್ತದೆ. ಹೀಗಾಗಿ ಸಾಂಸಾರಿಕ ಜೀವನವು ಖುಷಿಯಾಗಿರಬೇಕಾದರೆ ಸಂಗಾತಿಗಳಿಬ್ಬರೂ ಈ ಕೆಲವು ವಿಷಯಗಳನ್ನು ದೊಡ್ಡದು ಮಾಡದೇ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಅದಲ್ಲದೇ ಈ ಕೆಲವು ಸಲಹೆಗಳನ್ನು ಅನುಸರಿಸಿಕೊಂಡರೆ ವೈವಾಹಿಕ ಜೀವನವು ಸುಮಧುರವಾಗಿರಲು ಸಾಧ್ಯ.

Relationship Tips : ದಾಂಪತ್ಯ ಜೀವನ ಖುಷಿಯಾಗಿರಬೇಕಾದ್ರೆ ಈ ವಿಷಯಗಳತ್ತ ಗಮನ ಕೊಡಿ
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Jul 16, 2024 | 6:19 PM

ಸಂಸಾರವೆಂದ ಮೇಲೆ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಅದನ್ನೇ ದೊಡ್ಡದು ಮಾಡುತ್ತಿದ್ದರೆ ಇಂದು ಸಂಗಾತಿಗಳಿಬ್ಬರೂ ಜೊತೆಯಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಸಂಗಾತಿಗಳಿಬ್ಬರ ನಡುವೆ ಪ್ರೀತಿ ಹಾಗೂ ನಂಬಿಕೆಯೇ ಸಂಬಂಧದ ತಳಹದಿಯಾದರೆ, ಕೋಪಿಸಿಕೊಳ್ಳುವುದು ಪ್ರೀತಿಯನ್ನು ವ್ಯಕ್ತಪಡಿಸುವ ಇನ್ನೊಂದು ರೀತಿಯಾಗಿದೆ. ಕೆಲವರು ಎಷ್ಟೇ ಹೊಂದಾಣಿಕೆ ಮಾಡಿಕೊಂಡರೂ ವೈವಾಹಿಕ ಜೀವನದಲ್ಲಿ ಖುಷಿಯೇ ಇರುವುದಿಲ್ಲ. ಅಂತಹವರು ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಒಳಿತು.

  • ಸಂಗಾತಿಯ ಜೊತೆಗಿನ ಮಾತುಕತೆ ಕೆಲವೊಮ್ಮೆ ಕಿರಿಕಿರಿ ಅನಿಸಬಹುದು. ಆದರೆ ಈ ವೇಳೆ ಕೋಪದಿಂದ ಪ್ರತಿಕ್ರಿಯಿಸದೇ ಶಾಂತವಾಗಿಯೇ ಮರು ಉತ್ತರ ನೀಡುವುದು ಒಳ್ಳೆಯ ಅಭ್ಯಾಸ. ಇದರಿಂದ ಇಬ್ಬರ ನಡುವಿನ ಸಂಬಂಧವು ಗಟ್ಟಿಯಾಗಿರುತ್ತದೆ. ಮಾತು ಮಾತಿಗೂ ಸಿಟ್ಟುಮಾಡಿಕೊಂಡರೆ ಎದುರುಗಿರುವ ವ್ಯಕ್ತಿಯು ಅತಿರೇಕವಾಗಿ ವರ್ತಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಆದಷ್ಟು ಮನಸ್ಸನ್ನು ಶಾಂತವಾಗಿರಿಸುವುದು ಒಳ್ಳೆಯದು.
  • ಎದುರಿಗಿರುವ ವ್ಯಕ್ತಿಯ ಮಾತನ್ನು ಆಲಿಸುವುದು ಕೂಡ ಒಂದು ಕಲೆ. ಹೀಗಾಗಿ ಸಂಗಾತಿಗಳಿಬ್ಬರಲ್ಲಿ ಒಬ್ಬರು ಮಾತನಾಡಿದಾಗ ಇನ್ನೊಬ್ಬರು ಆಲಿಸುವುದನ್ನು ಕಲಿತುಕೊಳ್ಳಬೇಕು. ಇದು ಸಂಸಾರದಲ್ಲಿ ಜಗಳವಾಗುವುದನ್ನು ತಪ್ಪಿಸುತ್ತದೆ. ಅದಲ್ಲದೇ, ತಪ್ಪಾಗಿ ಅರ್ಥೈಸಿಕೊಳ್ಳುವುದು ತಪ್ಪುತ್ತದೆ. ಇದರಿಂದ ಸಂಸಾರದಲ್ಲಿ ಸದಾ ಪ್ರೀತಿ ನೆಲೆಸಲು ಸಾಧ್ಯ.
  • ವೈವಾಹಿಕ ಜೀವನದಲ್ಲಿ ಸಂಗಾತಿಗಳಿಬ್ಬರ ನಡುವೆ ಸಿಹಿಯಾದ ಮಾತುಕತೆಯಿರಲೇಬೇಕು. ಆಗಿದ್ದರೆ ಮಾತ್ರ ಪ್ರೀತಿ ಹೆಚ್ಚಾಗಿ ಸಂಬಂಧವು ಗಟ್ಟಿಯಾಗುವುದು. ಮನಸ್ಸಿಗೆ ಹಿತವೆನಿಸುವ ಸಿಹಿ ಸಿಹಿಯಾದ ಮಾತುಗಳನ್ನೆ ಆಡುವುದನ್ನು ಕಲಿತರೆ ಸಂಗಾತಿಗಳಿಬ್ಬರೂ ಖುಷಿಯಿಂದಿರಬಹುದು.
  • ಸಂಬಂಧವು ಗಟ್ಟಿಯಾಗಿರಬೇಕಾದರೆ ನಂಬಿಕೆಯೆನ್ನುವುದು ಗಟ್ಟಿಯಾಗಿರಬೇಕು. ಹೀಗಾಗಿ ಪತಿ ಪತ್ನಿಯರಿಬ್ಬರೂ ಮಾತನಾಡುವಾಗ ನಂಬಿಕೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಅದಲ್ಲದೇ, ಸಂಗಾತಿ ಜೊತೆಗೆ ತುಂಬಾ ನಯ ವಿನಯದಿಂದ ಗೌರವದಿಂದ ಇರುವುದು ಕೂಡ ಸಂಗಾತಿಗೆ ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.
  • ಜೀವನವು ಸುಲಲಿತವಾಗಿ ಸಾಗಬೇಕಾದರೆ ಆರ್ಥಿಕ ಸ್ಥಿತಿಯು ಚೆನ್ನಾಗಿರಬೇಕು. ಎಷ್ಟೋ ಸಂಸಾರಗಳಲ್ಲಿ ಇದೇ ವಿಚಾರವಾಗಿ ಮನಸ್ತಾಪಗಳಾಗುತ್ತದೆ. ಹಣದ ವಿಚಾರವಾಗಿ ಸಂಗಾತಿಗಳಿಬ್ಬರೂ ಪರಸ್ಪರ ಮಾತನಾಡಿಕೊಳ್ಳಬೇಕು. ಇಬ್ಬರೂ ಉದ್ಯೋಗದಲ್ಲಿದ್ದರೆ ಆರ್ಥಿಕವಾಗಿ ಕೆಲವು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಇದರಿಂದ ಒಬ್ಬರ ಮೇಲಿರುವ ಭಾರವು ಕಡಿಮೆಯಾಗಿ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರಲು ಸಾಧ್ಯ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ