AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips : ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಲು ಸಾಲುವುದಿಲ್ಲ. ಈ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ದು ಶುಚಿಗೊಳಿಸುವುದು ತುಂಬಾನೇ ಕಷ್ಟದ ಕೆಲಸ. ಒಂದು ವೇಳೆ ಶುಚಿಗೊಳಿಸದೇ ಇದ್ದರೆ ಈ ಕಲೆಗಳು ಅಡುಗೆ ಮನೆಯ ಅಂದವನ್ನು ಹಾಳು ಮಾಡುತ್ತದೆ. ಹೀಗಾಗಿ ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಗೋಡೆಯ ಮೇಲಿರುವ ಜಿಡ್ಡಿನ ಕಲೆಗಳನ್ನು ತೆಗೆದುಹಾಕಬಹುದು.

Kitchen Tips : ಅಡುಗೆ ಮನೆಯ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 12, 2024 | 3:23 PM

Share

ಮಹಿಳೆಯರಿಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ತಲೆನೋವಿನ ಕೆಲಸ. ಎಷ್ಟೇ ಸ್ವಚ್ಛತೆಯನ್ನು ಕಾಪಾಡಿಕೊಂಡರೂ ಮತ್ತೆ ಮೊದಲಿನಂತೆ ಆಗುತ್ತದೆ. ಈ ಅಡುಗೆ ಮಾಡುವ ಸಮಯದಲ್ಲಿ ಎಣ್ಣೆಗಳು ಹಾಗೂ ಸಾಂಬಾರು ಪದಾರ್ಥವು ಗೋಡೆಯ ಮೇಲೆ ಚಿಮ್ಮುವುದಿದೆ. ಇದನ್ನು ಆ ತಕ್ಷಣವೇ ಸ್ವಚ್ಛಗೊಳಿಸಿದೇ ಹೋದರೆ ಜಿಡ್ಡಿನ ಕಲೆಯಾಗಿ ಉಳಿದು ಬಿಡುತ್ತದೆ.

  • ಅಡುಗೆ ಮನೆಯ ಗೋಡೆಯ ಮೇಲೆ ಎಣ್ಣೆಯ ಕಲೆಗಳಿದ್ದರೆ ಉಪ್ಪು ನೀರಿನಿಂದ ತಿಕ್ಕಿದರೆ ಕಲೆಗಳು ಮಾಯವಾಗಿ ಬಿಡುತ್ತದೆ.
  • ಅಡುಗೆ ಮನೆಯ ಗೋಡೆಯ ಮೇಲಿರುವ ಕಲೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾವು ಉತ್ತಮ. ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಜಿಡ್ಡಿನ ಕಲೆಗಳು ಇಲ್ಲವಾಗಿಸಬಹುದು.
  • ಬಿಳಿ ಟೂತ್ ಪೇಸ್ಟ್ ಬಳಸಿ ಕಲೆಯನ್ನು ಹೋಗಲಾಡಿಸುವುದು ಸುಲಭ. ಎಣ್ಣೆಯ ಕಲೆಯಿರುವ ಜಾಗಕ್ಕೆ ಟೂತ್ಪೇಸ್ಟ್ ಅನ್ವಯಿಸಿ, ಐದು ನಿಮಿಷಗಳವರೆಗೆ ಹಾಗೆಯೇ ಬಿಡಬೇಕು. ಆ ಬಳಿಕ ಉಜ್ಜಿ ತೊಳೆದರೆ ಕಲೆಯು ಹೋಗುತ್ತದೆ.
  • ಜಿಡ್ಡಿನ ಕಲೆಗಳನ್ನು ತೊಡೆದು ಹಾಕಲು ಒಂದೊಳ್ಳೆ ಉಪಾಯ ಎಂದರೆ ಹೇರ್ ಡ್ರೈಯರ್ಗಳು. ಎಣ್ಣೆಯುಕ್ತ ಕಲೆಗಳ ಮೇಲೆ ಕಾಗದವನ್ನು ಇರಿಸಿ ಹೇರ್ ಡ್ರೈಯರ್ ಅನ್ನು ಉಜ್ಜುತ್ತ ಬಂದರೆ, ಜಿಗುಟಾದ ಎಣ್ಣೆಯನ್ನು ಕರಗಿಸಲು ಸಹಕಾರಿಯಾಗಿದೆ.
  • ನಿಂಬೆ ಮತ್ತು ವಿನೆಗರ್ ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ, ಈ ನೀರಿನಿಂದ ತಿಕ್ಕಿ ತೊಳೆದರೆ ಕಲೆಯು ಹೋಗಿ, ಫಳ ಫಳನೇ ಹೊಳೆಯುತ್ತದೆ.
  • ಟೈಲ್ಸ್ ಅಥವಾ ಗೋಡೆಗಳ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಲಿಕ್ವಿಡ್ ಡಿಶ್ ವಾಶ್ ಬಳಸಬಹುದು. ದ್ರವರೂಪದ ಡಿಶ್ ವಾಶ್ ಗೋಡೆಯ ಮೇಲೆ ಸ್ಪ್ರೇ ಮಾಡಿ ಒಂದು ಗಂಟೆಗಳ ಕಾಲ ಬಿಡಿ. ಆ ಬಳಿಕ ಬಟ್ಟೆಗೆ ಡಿಶ್ ವಾಶ್ ಹಾಕಿ ಒರೆಸಿದರೆ ಎಲ್ಲಾ ಕಲೆಯು ಮಾಯಾವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ