AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಹುಡುಗರೇ, ಈ ಗುಣಗಳು ನಿಮ್ಮಲ್ಲಿದ್ದರೆ ಸಂಗಾತಿಯು ದೂರವಾಗ್ತಾರೆ

ಸಂಬಂಧವು ಚೆನ್ನಾಗಿರಬೇಕೆಂದರೆ ಪ್ರೀತಿ ಕಾಳಜಿಯಿದ್ದರೆ ಸಾಲದು. ಒಬ್ಬರಿಗೆ ಇನ್ನೊಬ್ಬರ ಗುಣ ಸ್ವಭಾವಗಳು ಇಷ್ಟವಾಗಬೇಕು. ಪ್ರಾರಂಭದಲ್ಲಿ ಅತಿಯಾದ ಪ್ರೀತಿಸುತ್ತಿದ್ದ ಹುಡುಗಿಯು ನಿಮ್ಮನ್ನು ದ್ವೇಷಿಸಲು ಆರಂಭಿಸಿದ್ದಾರೆಂದರೆ ನಿಮ್ಮಲ್ಲಿ ಅವರಿಗಿಷ್ಟವಾಗದ ಗುಣಗಳು ಇವೆ ಎಂದರ್ಥ. ಹಾಗಾದ್ರೆ ಹುಡುಗಿಯರಿಗೆ ಇಷ್ಟವಾಗದ ಹುಡುಗರ ಗುಣ ಸ್ವಭಾವವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Relationship Tips : ಹುಡುಗರೇ, ಈ ಗುಣಗಳು ನಿಮ್ಮಲ್ಲಿದ್ದರೆ ಸಂಗಾತಿಯು ದೂರವಾಗ್ತಾರೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jul 11, 2024 | 5:00 PM

Share

ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗುವುದು ಸುಲಭದ ಮಾತಲ್ಲ. ಸಂಬಂಧದಲ್ಲಾಗುವ ಸಣ್ಣ ಪುಟ್ಟ ತಪ್ಪುಗಳೇ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ಸಂಗಾತಿಗಳಿಬ್ಬರೂ ಅಥವಾ ಪ್ರೇಮಿಗಳಿಬ್ಬರೂ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡರೂ ಸಾಲುವುದಿಲ್ಲ. ಕೆಲವೊಮ್ಮೆ ಹುಡುಗರ ಈ ಗುಣಗಳಿಂದ ಹುಡುಗಿಯರು ದೂರವಾಗುವ ಸಂದರ್ಭವೇ ಹೆಚ್ಚು. ಹುಡುಗರೇ, ಈ ವಿಚಾರಗಳು ಇಬ್ಬರ ಬಂಧವನ್ನು ಹಾಳು ಮಾಡುತ್ತಿದ್ದರೆ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುವುದು ಮುಖ್ಯ.

* ಖಾಸಗಿ ಅಂತರವನ್ನು ಕಸಿದುಕೊಳ್ಳುವುದು : ಸಂಬಂಧವು ಎಷ್ಟೇ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದರೂ, ಖಾಸಗಿ ಅಂತರವೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ದಿನವಿಡಿ ತನ್ನೊಂದಿಗೆ ಮಾತನಾಡಬೇಕು, ಎಲ್ಲಿ ಹೋಗುವುದಾದರೂ ತನ್ನ ಅನುಮತಿ ಪಡೆದುಕೊಂಡು ಹೋಗಬೇಕು ಎನ್ನುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಒಂದು ವೇಳೆ ಇಂತಹ ಹುಡುಗರ ಪ್ರೀತಿಯಲ್ಲಿ ಹುಡುಗಿಯರು ಬಿದ್ದಿದ್ದರೆ ತಾನು ಬಂಧಿಯಲ್ಲಿದ್ದೇವೆ ತನಗೆ ಸ್ವಾತಂತ್ರವಿಲ್ಲ ಎನ್ನುವ ಭಾವ ಮೂಡಬಹುದು. ಈ ಗುಣಗಳು ಬ್ರೇಕಪ್ ಹಂತಕ್ಕೂ ತಲುಪಬಹುದು.

* ಸಣ್ಣ ಪುಟ್ಟ ವಿಷಯಗಳಿಗೂ ರೇಗಾಡುವ ವ್ಯಕ್ತಿ : ಪ್ರತಿಯೊಬ್ಬ ಹುಡುಗಿಯು ತನ್ನ ಸಂಗಾತಿಯು ತನ್ನ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳಲಿ ಎಂದು ಬಯಸುವುದು ಸಹಜ. ಆದರೆ ಸಣ್ಣ ಪುಟ್ಟ ವಿಷಯಗಳಿಗೂ ಕಿರುಚಾಡುತ್ತಾ ರೇಗಾಡುತ್ತಿದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಕೂಡ ಇಷ್ಟವಾಗುವುದಿಲ್ಲ. ಕೆಲವು ಸೂಕ್ಷ್ಮ ವಿಚಾರಗಳನ್ನು ಪ್ರೀತಿಯಿಂದ ಹೇಳಿದರೇನೇ ಒಳ್ಳೆಯದು. ಏರು ಧ್ವನಿಯಲ್ಲಿ ಹೇಳುವುದರಿಂದ ಸಂಬಂಧವು ಹಾಳಾಗುತ್ತದೆ. ಅಂತಹ ಗುಣವು ತನ್ನ ಸಂಗಾತಿ ಅಥವಾ ಹುಡುಗನಲ್ಲಿದ್ದರೆ ಆತನನ್ನು ಆದಷ್ಟು ದೂರವಿಡುತ್ತಾಳೆ.

* ಪದೇ ಪದೇ ಅನುಮಾನಿಸುವುದು : ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಹಾಗೂ ಆತ್ಮಗೌರವ ಎನ್ನುವುದಿರುತ್ತದೆ. ಫೋನ್ ಬ್ಯುಸಿ ಬಂದಾಗ ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದರೆ ಯಾವ ಹುಡುಗಿಯು ಇದನ್ನು ಇಷ್ಟ ಪಡುವುದಿಲ್ಲ. ಹೀಗಾಗಿ ಅನಮಾನಿಸುವ ಹುಡುಗರೆಂದರೆ ಹುಡುಗಿಯರಿಗೆ ಅಷ್ಟಕಷ್ಟೆ. ಪ್ರಾರಂಭದಲ್ಲಿ ಇದು ಪೊಸೆಸಿವ್‌ ನೆಸ್‌ ಎಂದು ಭಾವಿಸಿದರೂ ಕ್ರಮೇಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ: ಆಷಾಢ ಮಾಸಕ್ಕೆ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ ಯಾಕೆ?

* ಹಳೆಯ ಸಂಬಂಧದ ಬಗ್ಗೆ ಪದೇ ಪದೇ ಚುಚ್ಚಿ ಮಾತನಾಡುವ ಸ್ವಭಾವ : ಸಾಮಾನ್ಯವಾಗಿ ಸಂಬಂಧವು ಚೆನ್ನಾಗಿರಬೇಕೆಂದರೆ ಯಾವುದೇ ಮುಚ್ಚುಮರೆ ಇರಬಾರದು. ಹೀಗಾಗಿ ಹುಡುಗಿ ತನ್ನ ಹುಡುಗ ಅಥವಾ ಸಂಗಾತಿಯ ಬಳಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡಿರಬಹುದು. ಆದರೆ ಹಳೆಯ ಸಂಬಂಧದ ವಿಷಯವನ್ನೇ ಇಟ್ಟುಕೊಂಡು ಚುಚ್ಚಿ ಮಾತನಾಡುವ ಹುಡುಗನನ್ನು ಹುಡುಗಿಯು ಇಷ್ಟ ಪಡುವುದೇ ಇಲ್ಲ. ಪ್ರಾರಂಭದಲ್ಲಿ ಸಹಿಸಿಕೊಂಡು ಹೋದರೂ ತದನಂತರದಲ್ಲಿ ದ್ವೇಷಿಸಲು ಪ್ರಾರಂಭಿಸುವುದಂತೂ ಖಂಡಿತ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!