AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship

Relationship

ಯಾವುದೇ ವ್ಯಕ್ತಿಯು ಜೀವನದಲ್ಲಿ ಒಂಟಿಯಾಗಿರಲು ಸಾಧ್ಯವಿಲ್ಲ. ಸಂತೋಷದ ಸಮಯವನ್ನು ಒಂಟಿಯಾಗಿ ಸಂಭ್ರಮಿಸಿದರೂ, ದುಃಖವಾದಾಗ ತನ್ನ ನೋವನ್ನು ಹಂಚಿಕೊಳ್ಳಲು ಒಂದಷ್ಟು ಸಂಬಂಧಗಳು ಬೇಕೆನಿಸುತ್ತದೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಸಂಬಂಧವು ಪ್ರಮುಖ ಪಾತ್ರ ವಹಿಸುತ್ತದೆ. ಹುಟ್ಟಿನಿಂದ ಜೊತೆಯಾಗುವ ಅಪ್ಪ ಅಮ್ಮ, ಅಣ್ಣ ತಮ್ಮ, ಅಜ್ಜ ಅಜ್ಜಿ, ಚಿಕ್ಕಮ್ಮ ಚಿಕ್ಕಪ್ಪ, ದೊಡ್ಡಪ್ಪ ದೊಡ್ಡಮ್ಮ ಸಂಬಂಧಗಳು ಒಂದೆಡೆಯಾದರೆ, ಬೆಳೆಯುತ್ತಾ ಹೋದಂತೆಲ್ಲಾ ಸ್ನೇಹ ಸಂಬಂಧಗಳು ಬೆಸೆದು ಕೊಳ್ಳುತ್ತವೆ. ಆದರೆ ಕೆಲವೊಂದು ಸಂಬಂಧಗಳು ಕಾರಣವಿಲ್ಲದೇ ಮುರಿದು ಹೋಗಬಹುದು. ಹಾಗಾದ್ರೆ ಬದುಕಿನ ಭಾಗವಾದ ರಿಲೇಷನ್ಶಿಪ್ ಗೆ ಸಂಬಂಧ ಪಟ್ಟ ಸ್ಟೋರಿಗಳು ಇಲ್ಲಿದೆ.

ಇನ್ನೂ ಹೆಚ್ಚು ಓದಿ

Chanakya Niti: ಪ್ರತಿಯೊಬ್ಬ ಪುರುಷನು ಈ ವಿಚಾರಗಳನ್ನು ತನ್ನ ಹೆಂಡತಿಯಿಂದ ಮರೆಮಾಡಲೇಬೇಕು ಎನ್ನುತ್ತಾರೆ ಚಾಣಕ್ಯ

ಗಂಡ ಹೆಂಡತಿಯ ನಡುವೆ ಯಾವುದೇ ಮುಚ್ಚುಮರೆ ಎನ್ನುವುಂತಹದ್ದು ಇರೋದಿಲ್ಲ, ಇವರಿಬ್ಬರೂ ತಮ್ಮ ಪ್ರತಿಯೊಂದು ಸೀಕ್ರೆಟ್‌ಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಗಂಡನಾದವನು ಹೀಗೆ ಪ್ರತಿಯೊಂದು ವಿಚಾರವನ್ನು ಹೆಂಡತಿಯ ಬಳಿ ಹೇಳಿಕೊಳ್ಳುವುದು ಸರಿಯಲ್ಲ, ಈ ಕೆಲವು ಸಂಗತಿಗಳನ್ನು ಪತ್ನಿಯಿಂದ ಮರೆ ಮಾಡಿದಷ್ಟು ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಗಂಡ ತನ್ನ ಹೆಂಡತಿಯಿಂದ ಯಾವ ವಿಚಾರಗಳನ್ನು ಮರೆ ಮಾಡಬೇಕು ಮತ್ತು ಅದರ ಹಿಂದಿನ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

ಪ್ರೀತಿಯನ್ನು ಹೆಚ್ಚಿಸುವ, ಸಂಬಂಧವನ್ನು ಬಲಪಡಿಸುವ ಮಧುರ ಸುಳ್ಳುಗಳಿವು

ಯಾವುದೇ ಸಂಬಂಧದ ಅಡಿಪಾಯ ನಂಬಿಕೆ ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿದೆ. ಆದ್ದರಿಂದ ಜೀವನ ಸಂಗಾತಿಯ ಬಳಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು, ಸುಳ್ಳು ಹೇಳುವ ಅಭ್ಯಾಸ ಸಂಬಂಧವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಕೆಲವು ಮಧುರ ಸುಳ್ಳುಗಳು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದಂತೆ. ಹಾಗಿದ್ದರೆ ಸಂಬಂಧವನ್ನು ಬಲಪಡಿಸಲು ಸಂಗಾತಿಯ ಬಳಿ ಯಾವೆಲ್ಲಾ ಸುಳ್ಳುಗಳನ್ನು ಹೇಳಬೇಕು ಎಂಬುದನ್ನು ನೋಡೋಣ ಬನ್ನಿ.

ಈ ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ

ಯಾರೇ ಆಗಲಿ ತಾವು ಇಷ್ಟಪಡುವ ವ್ಯಕ್ತಿಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಉಡುಗೊರೆಗಳನ್ನು ನೀಡುತ್ತಾರೆ. ಅದರಲ್ಲೂ ತಮ್ಮ ಸಂಗಾತಿಗೆ ಆಗಾಗ್ಗೆ ಗಿಫ್ಟ್‌ಗಳನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಹೀಗೆ ಉಡುಗೊರೆ ನೀಡುವಾಗ ಈ ಕೆಲವೊಂದು ವಸ್ತುಗಳನ್ನು ಗಿಫ್ಟ್‌ ಮಾಡಿದ್ರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತಂತೆ. ಹಾಗಿದ್ರೆ ಪ್ರೀತಿಪಾತ್ರರಿಗೆ ಯಾವ ವಸ್ತುಗಳನ್ನು ಗಿಫ್ಟ್‌ ಮಾಡುವುದು ಸರಿಯಲ್ಲ ಎಂಬುದನ್ನು ನೋಡೋಣ ಬನ್ನಿ.

ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು

ಮದುವೆ ಅನ್ನೋದು ಜೀವನದ ಪ್ರಮುಖ ಫಟ್ಟವಾಗಿದ್ದು, ಈ ದಾಂಪತ್ಯ ಜೀವನ ಸದಾ ಕಾಲ ಸಂತೋಷವಾಗಿರಲು ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ. ಈ ವಿಷಯದಲ್ಲಿ ಮಾಡುವ ಸಣ್ಣ ತಪ್ಪು ಕೂಡ ಸಂಪೂರ್ಣ ಜೀವನವನ್ನು ಹಾಳು ಮಾಡಬಹುದು. ಹಾಗಾಗಿ ಇಂದಿನ ಈ ದಿನಗಳಲ್ಲಿ ವಿಶೇಷವಾಗಿ ಹುಡುಗರು ಮದುವೆಗೂ ಮುನ್ನ ಸಂಗಾತಿಯ ಬಗೆಗಿನ ಈ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ತಿಳಿಯಲೇಬೇಕು.

ನಿಮ್ಮ ಅತ್ತೆಯ ನೆಚ್ಚಿನ ಸೊಸೆಯಾಗಲು ಬಯಸಿದರೆ ಈ ಗುಣಗಳನ್ನು ಅಳವಡಿಸಿಕೊಳ್ಳಿ

ಹೆಚ್ಚಿನ ಮನೆಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವಿನ ಬಾಂಧವ್ಯ ಅಷ್ಟಕಷ್ಟೆ ಇರುತ್ತದೆ. ಕೆಲವೊಂದು ಬಾರಿ ಅತ್ತೆ ಸೊಸೆಯ ನಡುವೆ ದೊಡ್ಡ ಜಗಳಗಳೇ ನಡೆದು ಬಿಡುತ್ತದೆ. ಇದು ಕುಟುಂಬದ ನೆಮ್ಮದಿ ಮಾತ್ರವಲ್ಲ ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಹೀಗಿರುವಾಗ ಅತ್ತೆಯ ಪ್ರೀತಿ, ವಿಶ್ವಾಸ ಗಳಿಸಲು, ಅತ್ತೆ ನಿಮ್ಮನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳಲು, ನೆಚ್ಚಿನ ಸೊಸೆಯಾಗಲು ಈ ಕೆಲವೊಂದಷ್ಟು ಗುಣಗಳನ್ನು ನಿಮ್ಮಲ್ಲಿ ನೀವು ಅಳವಡಿಸಿಕೊಳ್ಳಿ.

ದಂಪತಿಗಳು ಎಂದಿಗೂ ಬೆಳಬೆಳಗ್ಗೆ ಈ ವಿಚಾರಗಳನ್ನು ಮಾತನಾಡಬಾರದು; ಏಕೆ ಗೊತ್ತಾ?

ಸಂಸಾರ ಚೆನ್ನಾಗಿರಬೇಕೆಂದರೆ ಗಂಡ ಹೆಂಡತಿಯ ನಡುವೆ ಪ್ರೀತಿ ಮಾತ್ರವಲ್ಲದೆ ನಂಬಿಕೆ, ಕಾಳಜಿ, ಪ್ರಾಮಾಣಿಕತೆ ಇವೆಲ್ಲವೂ ಇರಲೇಬೇಕು. ಅದೇ ರೀತಿ ಸಂಸಾರದಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ ಗಂಡ ಹೆಂಡತಿ ಬೆಳಗ್ಗೆ ಎದ್ದ ತಕ್ಷಣವೇ ಈ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಬಾರದಂತೆ. ಈ ರೀತಿ ಮಾತನಾಡುವುದರಿಂದ ಜಗಳಗಳು ಏರ್ಪಡುವ ಸಾಧ್ಯತೆ ಇರುತ್ತದೆ. ಸಂಸಾರ ಚೆನ್ನಾಗಿರಬೇಕೆಂದರೆ ದಂಪತಿಗಳು ಬೆಳಬೆಳಗ್ಗೆ ಯಾವ ವಿಚಾರಗಳ ಬಗ್ಗೆ ಮಾತನಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?

ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಮುಖ್ಯವೋ ಪ್ರಾಮಾಣಿಕತೆ, ನಂಬಿಕೆಯೂ ಅಷ್ಟೇ ಮುಖ್ಯ. ಆದರೆ ಹೆಚ್ಚಿನವರು ತಮ್ಮ ಸಂಗಾತಿಯ ಬಳಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಇದು ಒಳ್ಳೆಯ ಲಕ್ಷಣವಲ್ಲ. ಏನೇ ವಿಚಾರಗಳಿದ್ದರೂ ಮುಕ್ತವಾಗಿ ಮಾತನಾಡಬೇಕಂತೆ. ಇದು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಹೆಂಡತಿ ಮಾಡುವ ಈ ತಪ್ಪುಗಳು ದಾಂಪತ್ಯ ಜೀವನವನ್ನೇ ಹಾಳು ಮಾಡಬಹುದು

ಗಂಡ ಹೆಂಡತಿಯ ಸಂಬಂಧ ತುಂಬಾನೇ ಸುಂದರವಾದುದು. ಈ ಸುಂದರ ಸಂಬಂಧ ಪ್ರೀತಿ ಮಾತ್ರವಲ್ಲ ನಂಬಿಕೆ ಹಾಗೂ ವಿಶ್ವಾಸದ ಮೇಲೂ ನಿಂತಿದೆ. ಹೀಗಿರುವಾದ ಗಂಡ ಅಥವಾ ಹೆಂಡತಿ ಮಾಡುವ ಕೆಲವು ತಪ್ಪುಗಳು ದಾಂಪತ್ಯ ಜೀವನದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. ಅದರಲ್ಲೂ ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನವನ್ನೇ ಹಾಳು ಮಾಡುತ್ತದಂತೆ. ಆದ್ದರಿಂದ ವಿವಾಹಿತ ಮಹಿಳೆಯರು ಈ ಕೆಲವೊಂದು ನಡವಳಿಕೆಗಳ ಬಗ್ಗೆ ಆದಷ್ಟು ಜಾಗೂರಕರಾಗಿರಬೇಕು.

Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ಸುಖ ದಾಂಪತ್ಯಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದ್ದಾರೆ. ಗಂಡನಾದವನು ಹೇಗಿರಬೇಕು, ಎಂತಹ ಸಂಗಾತಿ ಪತಿಗೆ ಅದೃಷ್ಟ ತರುತ್ತಾಳೆ ಹೀಗೆ ಗಂಡ ಹೆಂಡತಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನ ಸಂತೋಷದಿಂದ ಸಾಗಲು ಪತಿ ಪತ್ನಿಯರಲ್ಲಿ ಈ ಮೂರು ಗುಣಗಳು ಇರಲೇಬೇಕು ಎಂಬುದನ್ನು ಸಹ ಹೇಳಿದ್ದಾರೆ. ಅವು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಈ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮತಿಂಕೆ ಮಾತ್ರವಲ್ಲ ಗಂಡ ಹೆಂಡತಿಯ ಸಂಬಂಧದ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನೂ ಸಹ ವಿವರಿಸಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನದಲ್ಲಿ ಮಾತುಗಳು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಗಂಡ ತನ್ನ ಹೆಂಡತಿಯ ಬಳಿ ಈ ಮಾತುಗಳನ್ನು ಎಂದಿಗೂ ಆಡಬಾರದೆಂದಿದ್ದಾರೆ. ಆ ಮಾತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಅತ್ತೆ- ಸೊಸೆಯ ನಡುವಿನ ಜಗಳಕ್ಕೆ ಕಾರಣಗಳೇನು? ಇವರಿಬ್ಬರ ಸಂಬಂಧವನ್ನು ಸರಿಪಡಿಸುವುದು ಹೇಗೆ?

ಕುಟುಂಬದಲ್ಲಿ ಸಣ್ಣಪುಟ್ಟ ಜಗಳಗಳು ಕಾಮನ್.‌ ಅದರಲ್ಲೂ ಪ್ರತಿ ಮನೆಯನ್ನೂ ಅತ್ತೆ ಸೊಸೆ ಮಧ್ಯೆ ಸಣ್ಣಪುಟ್ಟ ಕಿರಿಕ್‌, ಮನಸ್ತಾಪಗಳು ಇದ್ದೇ ಇರುತ್ತದೆ. ಕೆಲವೊಂದು ಬಾರಿ ಈ ಅತ್ತೆ ಸೊಸೆ ಜಗಳಗಳು ತಾರಕಕ್ಕೇರುತ್ತವೆ. ಹೀಗೆ ಅತ್ತೆ-ಸೊಸೆ ಮಧ್ಯೆ ಜಗಳಗಳು ನಡೆಯಲು ಕಾರಣವೇನು, ಇವರಿಬ್ಬರ ಸಂಬಂಧವನ್ನು ಹೇಗೆ ಸರಿಪಡಿಸಬಹುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ

ಗಂಡ ಹೆಂಡತಿಯರ ನಡುವಿನ ಒಗ್ಗಟ್ಟು, ಪ್ರೀತಿ, ವಿಶ್ವಾಸ, ನಂಬಿಕೆಯೇ ಸಂತೋಷಮಯವಾದ ದಾಂಪತ್ಯ ಜೀವನದ ರಹಸ್ಯ. ಆದ್ರೆ ಇಂದಿನ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಮನಸ್ತಾಪ, ಮುನಿಸು, ಜಗಳಗಳೇ ಹೆಚ್ಚಾಗಿದ್ದು, ದಾಂಪತ್ಯ ಜೀವನದಲ್ಲಿ ಸಂತೋಷ ಅನ್ನೋದೇ ಸಿಗುತ್ತಿಲ್ಲ. ಹೀಗಿರುವಾಗ ಪತಿ ಪತ್ನಿಯರು ಈ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ದಾಂಪತ್ಯ ಜೀವನದಲ್ಲಿ ಸದಾಕಾಲ ಸಂತೋಷ ನೆಲೆಸುವಂತೆ ನೋಡಿಕೊಳ್ಳಬಹುದು.