AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಜ್ಞರು ಹೇಳುತ್ತಾರೆ ಯಾವ ಹುಡ್ಗಿಗೂ ಹುಡುಗರ ಈ ಗುಣಗಳು ಇಷ್ಟವಾಗುವುದಿಲ್ಲವಂತೆ

ಹೆಚ್ಚಿನ ಹುಡುಗರು, ಯುವಕರು ತಮಗೆ ಇಷ್ಟವಾಗುವಂತಹ ಹುಡುಗಿಯ ಜೊತೆ ಹೆಚ್ಚು ಹೆಚ್ಚು ಮಾತನಾಡಲು ಪ್ರಯತ್ನಿಸುತ್ತಿರುತ್ತಾರೆ. ಹುಡುಗಿಗೆ ಇನ್ನಷ್ಟು ಹತ್ತಿರವಾಗಲು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ತೋರ್ಪಡಿಸುವ ಈ ಕೆಲವೊಂದು ಗುಣಗಳು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಹುಡುಗಿಯರಿಗೆ ಕೋಪ ತರಿಸುವಂತಹ ಹುಡುಗರ ಆ ಗುಣಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ತಜ್ಞರು ಹೇಳುತ್ತಾರೆ ಯಾವ ಹುಡ್ಗಿಗೂ ಹುಡುಗರ ಈ ಗುಣಗಳು ಇಷ್ಟವಾಗುವುದಿಲ್ಲವಂತೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Sep 09, 2025 | 4:51 PM

Share

ಹೆಚ್ಚಾಗಿ ಹುಡುಗರು ತಮಗೆ ಇಷ್ಟವಾಗುವಂತ ಹುಡುಗಿಯೊಂದಿಗೆ ಫ್ಲರ್ಟ್‌ ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವಕಾಶ ಸಿಕ್ಕಾಗೆಲ್ಲಾ ತಾವು ಇಷ್ಟಪಟ್ಟ ಹುಡುಗಿಯೊಂದಿಗೆ ಮಾತನಾಡಲು ಪ್ರಯತ್ನಿಸುವಂತಹದ್ದು, ಆಕೆಗೆ ಮೆಸೇಜ್ ಮಾಡುವಂತಹದ್ದನ್ನು ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಹುಡುಗರು ತೋರ್ಪಡಿಸುವ ಕೆಲವೊಂದು ಗುಣಗಳು ಹುಡುಗಿಯರಿಗೆ  (girls don’t like these qualities in guys) ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತದೆ, ಅವರಿಗೆ ತುಂಬಾನೇ ಸಿಟ್ಟುತರಿಸುತ್ತದೆ ಹಾಗಾಗಿ ಪ್ರತಿಯೊಬ್ಬ ಹುಡುಗನೂ ತಾನು ಒಬ್ಬ ಹುಡುಗಿಯ ಜೊತೆ ಮಾತನಾಡುವಾಗ ಈ ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು  ಎಂಬ ವಿಚಾರವನ್ನು ರಿಲೇಷನ್‌ಶಿಪ್‌ ಕೋಚ್‌ ಜವಾಲ್‌ ಭಟ್‌ (Javal Bhat) ತಿಳಿಸಿದ್ದಾರೆ. ಜವಾಲ್‌ ಹೇಳಿರುವಂತೆ, ಹುಡುಗಿಯರಿಗೆ ಹುಡುಗರ ಯಾವ ಗುಣಗಳು ಇಷ್ಟವಾಗುವುದಿಲ್ಲ ಎಂಬುದನ್ನು ನೋಡೋಣ ಬನ್ನಿ.

ಹುಡ್ಗಿರಿಗೆ ಹುಡುಗರ ಈ ಗುಣಗಳು ಖಂಡಿತವಾಗಿಯೂ ಇಷ್ಟವಾಗುವುದಿಲ್ಲ:

ಫೋನ್‌ ನಂಬರ್‌ ಕೇಳುವುದು: ಕೆಲವು ಹುಡುಗರು ಒಬ್ಬ ಹುಡುಗಿ ತಮಗೆ ಪರಿಚಯವಾದರೆ ಸಾಕು ಆಕೆಯ ಬಳಿ ಫೋನ್‌ ನಂಬರ್‌ ಕೇಳುತ್ತಾರೆ. ಹೀಗೆ ಪದೇ ಪದೇ ಫೋನ್‌ ನಂಬರ್‌ ಕೇಳುವುದು, ಕಿರಿಕಿರಿ ಮಾಡುವುದು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲವೆಂದು ಜವಾಲ್‌ ಹೇಳುತ್ತಾರೆ.

ಇದನ್ನೂ ಓದಿ
Image
ನಿಮ್ಮ ಜೀವನದಲ್ಲಿ ಇಂತಹ ಜನರಿದ್ದರೆ ಅವರಿಂದ ಆದಷ್ಟು ದೂರವಿರಿ
Image
ಸಂಗಾತಿಗಳ ಈ ಅಭ್ಯಾಸಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
Image
ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು
Image
ಇಂತಹ ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು

ಹಿಂದಿನ ಕಥೆಗಳನ್ನು ಕೇಳುವುದು: ತಮ್ಮ ಹಿಂದಿನ ಪ್ರೇಮಕಥೆ, ಬ್ರೇಕಪ್‌ ಬಗ್ಗೆ ಯಾರು ಕೂಡ ಯಾರೊಂದಿಗೂ ಹಂಚಿಕೊಳ್ಳಲು ಅಷ್ಟಾಗಿ ಇಷ್ಟಪಡುವುದಿಲ್ಲ. ತಮಗೆ ತೀರಾ ಹತ್ತಿರದವರ ಬಳಿ ಮಾತ್ರ ಇಂತಹ ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಒಬ್ಬ ಹುಡುಗ ಒಂದು ಹುಡುಗಿಯ ಬಳಿ ಆಕೆಯ ಪಾಸ್ಟ್‌ ಲೈಫ್‌ ಸ್ಟೋರಿ ಬಗ್ಗೆ ಕೇಳಿದರೆ ಅದು ಆಕೆಗೆ ಇಷ್ಟವಾಗುವುದಿಲ್ಲ. ಇದರಿಂದ ಆಕೆಗೆ ನೋವಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಈ ವಿಷಯದ ಬಗ್ಗೆ ಮಾತನಾಡಬಾರದು ಎನ್ನುತ್ತಾರೆ ಜವಾಲ್.

ವಿಡಿಯೋ ಇಲ್ಲಿದೆ ನೋಡಿ:

ಫೋಟೋ ಕೇಳುವುದು: ಕೆಲ ಹುಡುಗರು ತಮಗೆ ಇಷ್ಟವಾಗುವಂತಹ ಹುಡುಗಿಯ ಬಳಿ ಪದೇ ಪದೇ ಆಕೆಯ ಫೋಟೋವನ್ನು ಕೇಳುತ್ತಾರೆ. ಫೋಟೋ ಕಳಿಸು ಎಂದು ಕಿರಿಕಿರಿ ಮಾಡುತ್ತಾರೆ. ಖಂಡಿತವಾಗಿಯೂ ಹುಡುಗರ ಈ ಗುಣ ಯಾವ ಹುಡುಗಿಗೂ ಇಷ್ಟವಾಗುವುದಿಲ್ಲವಂತೆ. ಈ ಗುಣ ಹುಡುಗಿಯರಿಗೆ ಕೋಪ ತರಿಸುವ ಸಾಧ್ಯತೆ ಇರುತ್ತದೆ ಎಂದು ಜವಾಲ್‌ ಹೇಳುತ್ತಾರೆ.

ಇದನ್ನೂ ಓದಿ: ಅಭ್ಯಾಸಗಳೇ ಹಾಲು ಜೇನಿನಂತಹ ಸಂಬಂಧ ಹಾಳಾಗಲು ಮುಖ್ಯ ಕಾರಣ

ಅತಿಯಾಗಿ ಹೊಗಳುವುದು: ಕೆಲವು ಹುಡುಗರು ತಮಗೆ ಇಷ್ಟವಾಗುವ ಹುಡುಗಿಯ ಸೌಂದರ್ಯದ ಬಗ್ಗೆ ಪದೇ ಪದೇ ಹೊಗಳುತ್ತಿರುತ್ತಾರೆ. ನೀನು ತುಂಬಾ ಸುಂದರವಾಗಿದ್ದೀಯಾ, ಬೋಲ್ಡ್‌ ಆಗಿದ್ದೀಯಾ ಅಂತೆಲ್ಲಾ ಹೇಳುತ್ತಿರುತ್ತಾರೆ. ಈ ಗುಣ ಕೂಡಾ ಹುಡುಗಿಯರಿಗೆ ಇಷ್ಟವಾಗುವುದಿಲ್ಲ, ಇಂತಹ ಹೊಗಳಿಕೆಗಳು ಅವರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಜವಾಲ್‌ ಹೇಳುತ್ತಾರೆ.

ಏನ್‌ ಮಾಡ್ತಿದ್ದೀಯಾ ಅನ್ನೋದು: ಕೆಲವರು ಹುಡುಗಿಯರಿಗೆ ಪದೇ ಪದೇ ಮೆಸೇಜ್‌ ಮಾಡುತ್ತಾ, ಏನ್‌ ಮಾಡ್ತಿದ್ದೀಯಾ, ನನ್‌ ಜೊತೆ ಮಾತಾಡು ಅಂತೆಲ್ಲಾ ಹೇಳುತ್ತಿರುತ್ತಾರೆ. ಈ ಮಾತುಗಳು ಹುಡುಗಿಯರಿಗೆ ಹಿಂಸೆ, ಕಿರಿಕಿರಿಯನ್ನು ಉಂಟು ಮಾಡುತ್ತದೆ. ಅದರಿಂದ ಅವರು ನಿಮ್ಮಿಂದ ಆದಷ್ಟು ದೂರವಿರಲು ಬಯಸುತ್ತಾರೆ. ಹಾಗಾಗಿ ಇಂತಹ ಪ್ರಶ್ನೆಗಳನ್ನು ಯಾವುದೇ ಹುಡುಗಿಯ ಬಳಿಯೂ ಕೇಳಬೇಡಿ ಎಂದು ಜವಾಲ್‌ ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ