AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ

ಪ್ರೇಮಿಗಳ ಮಧ್ಯೆ ಜಗಳಗಳು ನಡೆಯುತ್ತವೆ. ಈ ಜಗಳಗಳಿಂದಲೇ ಬ್ರೇಕಪ್‌ಗೆ ಆಗುತ್ತೆ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಏನು ಗೊತ್ತಾ, ಸಂಗಾತಿಯಲ್ಲಿನ ಕೆಲವೊಂದು ಬದಲಾವಣೆಗಳು ಸಹ ಪ್ರೇಮ ವೈಫಲ್ಯಕ್ಕೆ ಕಾರಣವಾಗಬಹುದು. ಇದ್ದಕ್ಕಿದ್ದಂತೆ ಪ್ರೀತಿಯಲ್ಲಿ ಅಂತರ ಸೃಷ್ಟಿಯಾಗುವುದಿಲ್ಲ ಬದಲಾಗಿ ಬ್ರೇಕಪ್‌ಗೂ ಮುನ್ನ ಈ ಕೆಲವು ಬದಲಾವಣೆಗಳು ಸಂಗಾತಿಯಲ್ಲಿ ಗೋಚರಿಸುತ್ತವಂತೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Feb 04, 2026 | 6:22 PM

Share

ಎಲ್ಲರ ಪ್ರೀತಿ ಸಕ್ಸಸ್‌ ಆಗೋದಿಲ್ಲ, ಕೆಲವೊಬ್ಬರು ಪದೇ ಪದೇ ಪ್ರೀತಿಯಲ್ಲಿ (love) ಮೋಸ ಹೋಗ್ತಾರೆ. ಜಗಳಗಳೇ ಬ್ರೇಕಪ್‌ಗೆ ಮೂಲ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಬ್ರೇಕಪ್‌ ಆಗೋದಿಲ್ಲ, ಬ್ರೇಕಪ್‌ಗೂ ಸ್ವಲ್ಪ ಸಮಯ ಮುನ್ನ ಸಂಗಾತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ. ಈ ಬದಲಾವಣೆಗಳು ನಿಮ್ಮ ಸಂಗಾತಿಗೆ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ. ಈ ಬದಲಾವಣೆ, ಎಚ್ಚರಿಕೆಯ ಸಂಕೇತವನ್ನು ನಿರ್ಲಕ್ಷಿಸಿದರೆ ಖಂಡಿತವಾಗಿಯೂ ಮುಂದೊಂದು ದಿನ ಪ್ರೇಮ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಿದ್ರೆ ಯಾವ ಬದಲಾವಣೆಗಳು ಬ್ರೇಕಪ್‌ನ ಸಂಕೇತ ಎಂಬುದನ್ನು ನೋಡೋಣ ಬನ್ನಿ.

ಸಂಗಾತಿಯಲ್ಲಿನ ಈ ಬದಲಾವಣೆಗಳು ಬ್ರೇಕಪ್‌ಗೆ ಕಾರಣವಾಗಬಹುದು‌:

  • ಸಂಗಾತಿ ಪ್ರೇಮ ಸಂಬಂಧದಿಂದ ದೂರ ಸರಿಯಲು ಪ್ರಾರಂಭಿಸಿದಾಗ, ನೀವು ಮೊದಲು ಗಮನಿಸುವುದು ಆಕೆ/ಆತ ಮಾತನಾಡುವ ವಿಧಾನದಲ್ಲಿನ ಬದಲಾವಣೆ. ಪ್ರೀತಿಯಿಂದ ಕೂಡಿದ್ದ ಸಂಭಾಷಣೆಗಳು ಕ್ರಮೇಣ ಔಪಚಾರಿಕವಾಗುತ್ತದೆ, ಪ್ರತಿಯೊಂದು ಸಂಭಾಷಣೆಯಲ್ಲೂ ಚುಚ್ಚು ಮಾತುಗಳಿರುತ್ತವೆ. ಈ ಬದಲಾವಣೆ ಖಂಡಿತವಾಗಿಯೂ ಬ್ರೇಕಪ್‌ಗೆ ಕಾರಣವಾಗುತ್ತದೆ.
  • ಮೊದಲೆಲ್ಲಾ ನಿಮ್ಮ ಬಳಿ ಗಂಟೆಗಟ್ಟಲೆ ಮಾತನಾಡುತ್ತಿದ್ದ ನಿಮ್ಮ ಪ್ರೇಮಿ ಇದ್ದಕ್ಕಿದ್ದಂತೆ ಮಾತನಾಡುವುದು ಕಡಿಮೆ ಮಾಡಿದರೆ ಅಥವಾ ನೀವು ಕರೆ ಮಾಡಿದಾಗಲೆಲ್ಲಾ ನಾನು ಬ್ಯುಸಿ ಇದ್ದೇನೆ, ಫೋನ್‌ನಲ್ಲಿ ಮಾತನಾಡಲು ಸಮಯವಿಲ್ಲ ಎಂದೆಲ್ಲಾ ಉಡಾಫೆಯ ಮಾತನಾಡಿದರೆ, ನಿಮ್ಮ ಪ್ರೇಮಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ.
  • ವ್ಯಂಗ್ಯ, ಚುಚ್ಚುವ ಮಾತುಗಳು ಮತ್ತು ನಿಮ್ಮ ಭಾವನೆಗಳನ್ನು ಲಘುವಾಗಿ ಪರಿಗಣಿಸುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗಿದೆ ಎಂಬುದರ ಸಂಕೇತವಾಗಿದೆ.
  • ಸಮಯವಿಲ್ಲ, ಕೆಲಸ ಇದೆ ಹೀಗೆಲ್ಲಾ ಪದೇ ಪದೇ ನೆಪಗಳನ್ನು ಹೇಳಿ ನಿಮ್ಮಿಂದ ದೂರ ಸರಿಯಲು ಪ್ರಾಯಂಭಿಸಿದರೆ, ನಿಮಗೆ ಟೈಮ್‌ ಕೊಡುವುದನ್ನು ನಿಲ್ಲಿಸಿದರೆ ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಪ್ರೀತಿ ಕಡಿಮೆಯಾಗುತ್ತಿದೆ ಎಂದರ್ಥ. ನಿಮ್ಮಿಂದ ದೂರ ಸರಿಯುವ ಸಲುವಾಗಿಯೇ ಈ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ.  ಅದನ್ನು ಬಹಿರಂಗವಾಗಿ ಹೇಳುವುದಿಲ್ಲ.
  • ಪದೇ ಪದೇ ಸುಳ್ಳು ಹೇಳಲು ಪ್ರಾರಂಭಿಸುವುದು, ಜೀವನಶೈಲಿಯಲ್ಲಿನ ಬದಲಾವಣೆಗಳು, ವಿಷಯಗಳನ್ನು ನಿಮ್ಮಿಂದ ಮುಚ್ಚಿಡುವುದು ಇವೆಲ್ಲವೂ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಇಂಟರೆಸ್ಟ್‌ ಕಡಿಮೆಯಾಗಿದೆ ಎಂಬುದರ ಸೂಚನೆಯಾಗಿದೆ.
  • ಸಂಗಾತಿ ಎಲ್ಲದರ ಬಗ್ಗೆಯೂ ಅಸಡ್ಡೆ ತೋರಲು ಪ್ರಾರಂಭಿಸಿದಾ, ನಿಮ್ಮ ಮೇಲಿನ ಕಾಳಜಿ ಕಡಿಮೆಯಾಗುವುದು, ಸ್ವಾರ್ಥಿ ನಡವಳಿಕೆಗಳನ್ನು ಪ್ರದರ್ಶಿಸುವುದು ಈ ಎಲ್ಲಾ ನಡವಳಿಕೆಗಳು ಬ್ರೇಕಪ್‌ನ ಮುನ್ಸೂಚನೆಯಾಗಿದೆ. ಮುಂದೊಂದು ದಿನ ಈ ಬದಲಾವಣೆಗಳು ಬ್ರೇಕಪ್‌ಗೆ ಮೂಲ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್