AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಎಷ್ಟೇ ಕ್ಲೋಸ್‌ ಆಗಿದ್ರೂ ಸರಿ, ಇಂತಹ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ

ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಚಾರಗಳನ್ನು ಸಹ ಈ ಕೆಲವೊಂದು ಜನರಿಗೆ ಹೇಳುವುದರಿಂದ ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಆದ್ದರಿಂದ ಈ ಸ್ವಭಾವದ ಜನರಿಗೆ ನಿಮ್ಮ ಮನೆಯ ವಿಚಾರಗಳನ್ನು ಹೇಳಬೇಡಿ ಮತ್ತು ಅಂತಹ ಜನರನ್ನು ನಿಮ್ಮ ಮನೆಯ ವಿಷಯಗಳಿಗೆ ತಲೆ ಹಾಕಲು ಬಿಡಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.

Chanakya Niti: ಎಷ್ಟೇ ಕ್ಲೋಸ್‌ ಆಗಿದ್ರೂ ಸರಿ, ಇಂತಹ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jul 30, 2026 | 7:52 PM

Share

ಪ್ರತಿ ಮನೆಯಲ್ಲೂ ನೋವು-ನಲಿವು ಇದ್ದೇ ಇರುತ್ತದೆ. ಮನೆಯವರು ಸಂತೋಷದಿಂದ (Happiness) ಇರುವಂತೆ ಮನೆಯವರ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಸಹ ಏರ್ಪಡುತ್ತಿರುತ್ತವೆ. ನಿಮ್ಮನೆ ಕೌಟುಂಬಿಕ ವಿವಾದಗಳು, ಹಣಕಾಸಿನ ವಹಿವಾಟುಗಳು ಮತ್ತು ಭವಿಷ್ಯದ ಯೋಜನೆಗಳನ್ನು ಕುಟುಂಬ ಸದಸ್ಯರೊಳಗೆ ಮಾತ್ರ ಸೀಮಿತಗೊಳಿಸಬೇಕು. ಹೊರಗಿನ ಯಾರನ್ನೂ ಕುಟುಂಬದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅನುಮತಿಸಬಾರದು. ಫ್ಯಾಮಿಲಿ ಮ್ಯಾಟರ್‌ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಗಾಸಿಪ್ ಮಾಡುವವರು, ಅಸೂಯೆ ಪಡುವವರು, ಸ್ವಾರ್ಥಿಗಳು ಈ ರೀತಿಯ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಗಳನ್ನು ಹೇಳಿದರೆ, ಸಂಬಂಧಗಳಲ್ಲಿ ಬಿರುಕು ಮೂಡಬಹುದು ಮತ್ತು ಮನೆಯ ನೆಮ್ಮದಿ ಸಂತೋಷವೇ ಹಾಳಾಗಬಹುದು.

ನಿಮ್ಮ ಫ್ಯಾಮಿಲಿ ಮ್ಯಾಟರ್‌ಗಳನ್ನು ಈ ಕೆಲವು ಜನರಿಗೆ ಹೇಳಬೇಡಿ:

ಗಾಸಿಪ್‌ ಮಾಡುವ ಜನ: ಕೆಲವರಿಗೆ ಗಾಸಿಪ್‌ ಮಾಡುವ ಸ್ವಭಾವವಿರುತ್ತದೆ. ಇಂತಹ ಜನರ ಬಳಿ ಏನಾದ್ರೂ ನಿಮ್ಮ ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪಗಳ ಬಗ್ಗೆ ಹೇಳಿದರೆ, ಅವರು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಗಾಸಿಪ್‌ ಮಾಡಿ ನಿಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಮತ್ತು ನಿಮ್ಮ ಕುಟುಂಬದ ಸೀಕ್ರೆಟ್‌ ತಿಳಿದುಕೊಂಡು ಇತರರ ಬಳಿ ಇಲ್ಲಸಲ್ಲದ್ದನ್ನು ಹೇಳುತ್ತಾರೆ. ಹಾಗಾಗಿ ಗಾಸಿಪ್‌ ಮಾಡುವ ಜನರ ಬಳಿ ನಿಮ್ಮ ಫ್ಯಾಮಿಲಿ ಮ್ಯಾಟರ್‌ ಹೇಳಬೇಡಿ.

ನಿಮ್ಮ ಬಗ್ಗೆ ಅಸೂಯೆ ಪಡುವ ಜನರು: ನಾವು ಎಷ್ಟೇ ಕ್ಲೋಸ್‌ ಆಗಿದ್ರೂ ಸಹ ನಮ್ಮ ಪ್ರಗತಿ, ಮನೆಯ ಸಂತೋಷವನ್ನು ನೋಡಿ ಕೆಲವು ಸಿಕ್ಕಾಪಟ್ಟೆ ಅಸೂಯೆ ಪಡುತ್ತಾರೆ. ಅಂತಹ ಜನರು ಹೊರನೋಟಕ್ಕೆ ನಿಮ್ಮ ಹಿತೈಷಿಗಳಂತೆ ಕಂಡರೂ ಅವರು ಯಾವಾಗಲೂ ನಿಮಗೆ ಕೆಟ್ಟಗಾಬೇಕು ಎಂದು ಬಯಸುತ್ತಾರೆ ಎನ್ನುತ್ತಾರೆ ಚಾಣಕ್ಯ. ನಿಮ್ಮ ಕುಟುಂಬದ ಸಮಸ್ಯೆಗಳ ಬಗ್ಗೆ ಅವರ ಬಳಿ ಹೇಳಿ, ಅದಕ್ಕೆ ಪರಿಹಾರವನ್ನು ಕೇಳಿದರೆ, ಅವರು ಬೇಕು ಬೇಕಂತಲೇ ತಪ್ಪು ಸಲಹೆಗಳನ್ನು ನೀಡಿ ಕುಟುಂಬಕ್ಕೆ, ಸಂಬಂಧಕ್ಕೆ ಹಾನಿ ಮಾಡುತ್ತಾರೆ. ಹಾಗಾಗಿ ಅಸೂಯೆ ಪಡುವ  ಜನರಿಂದ ಯಾವಾಗಲೂ ಅಂತರವನ್ನು ಕಾಯ್ದುಕೊಳ್ಳಬೇಕು.

ಇದನ್ನೂ ಓದಿ: ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ

ಸ್ವಾರ್ಥ ಮತ್ತು ದುರಾಸೆಯ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಕೇವಲ ತಮ್ಮ ಲಾಭಕ್ಕಾಗಿ ನಿಮ್ಮೊಂದಿಗೆ ಸಹವಾಸದಲ್ಲಿರುವ ಜನರಿಗೆ ಯಾವುದೇ ಕಾರಣಕ್ಕೂ ನಿಮ್ಮನೆ ವಿಚಾರಗಳನ್ನು ಹೇಳಬೇಡಿ. ಏಕೆಂದರೆ ಇವರು ತಮ್ಮ ಸ್ವಾರ್ಥ ಮತ್ತು ದುರಾಸೆಗಾಗಿ ನಿಮ್ಮ ಕುಟುಂಬಕ್ಕೆ ತೊಂದರೆಯನ್ನು ಉಂಟು ಮಾಡುತ್ತಾರೆ. ಹಾಗಾಗಿ ಇಂತಹ ಜನರನ್ನು  ನಿಮ್ಮ ಮನೆಯ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ.

ದುರಹಂಕಾರಿ ಮತ್ತು ಪಶ್ಚಾತ್ತಾಪವಿಲ್ಲದ ಜನರು: ಯಾವಾಗಲೂ ತಮ್ಮನ್ನು ತಾವು ಸರಿ ಮತ್ತು ಉಳಿದವರೆಲ್ಲರೂ ತಪ್ಪು ಎಂದು ಪರಿಗಣಿಸುವ ಜನರನ್ನು ನಿಮ್ಮ ಮನೆಯ ವ್ಯವಹಾರಗಳಿಂದ ದೂರವಿಡಬೇಕು ಎನ್ನುತ್ತಾರೆ ಚಾಣಕ್ಯ. ಅವರ ಪ್ರಕಾರ, ಇಂತಹ ಜನರುಬ ಮನೆಯ ವಿವಾದ ಅಥವಾ ಭಿನ್ನಾಭಿಪ್ರಾಯವನ್ನು ಪರಿಹರಿಸುವ ಬದಲು, ಅವರು ತಮ್ಮ ಅಹಂಕಾರದಿಂದಾಗಿ ಅದನ್ನು ಮತ್ತಷ್ಟು ಉಲ್ಬಣಗೊಳಿಸುತ್ತಾರೆ. ಹಾಗಾಗಿ ಈ ಸ್ವಭಾವದ ಜನರನ್ನು ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us