AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti

Chanakya Niti

ಚಾಣಕ್ಯ ನೀತಿ, ಪ್ರಾಚೀನ ಭಾರತೀಯ ವಿದ್ವಾಂಸ ಚಾಣಕ್ಯರಿಂದ ಕ್ರಿ.ಪೂ. 300 ರ ಸುಮಾರಿಗೆ ಸಂಯೋಜಿಸಲ್ಪಟ್ಟಿದೆ, ಇದು ಪೂರ್ಣವಾದ ಜೀವನಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡುವ ಸಲಹೆಗಳ ಸಂಗ್ರಹವಾಗಿದೆ. ರಾಜ ಚಂದ್ರಗುಪ್ತ ಮೌರ್ಯನಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚಾಣಕ್ಯನ ಬೋಧನೆಗಳು ಜೀವನ, ಆಡಳಿತ ಮತ್ತು ತಂತ್ರದ ವಿವಿಧ ಅಂಶಗಳನ್ನು ಒಳಗೊಂಡಿದೆ. ಮಾನವ ಸ್ವಭಾವ, ರಾಜಕೀಯ ಮತ್ತು ಅರ್ಥಶಾಸ್ತ್ರದ ಬಗ್ಗೆ ಅವರ ಒಳನೋಟಗಳು ಈ ಪಠ್ಯದಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಚಾಣಕ್ಯರನ್ನು ಮ್ಯಾಕಿಯಾವೆಲ್ಲಿ, ಅರಿಸ್ಟಾಟಲ್ ಮತ್ತು ಪ್ಲೇಟೋನಂತಹ ಚಿಂತಕರಿಗೆ ಹೋಲಿಸಲಾಗುತ್ತದೆ. ಚಾಣಕ್ಯನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ, ಆಧುನಿಕ ಜಗತ್ತಿನಲ್ಲಿ ಯಶಸ್ಸು, ನಾಯಕತ್ವ ಮತ್ತು ನೈತಿಕ ಜೀವನವನ್ನು ಬಯಸುವವರಿಗೆ ಸ್ಫೂರ್ತಿ ಮತ್ತು ಪ್ರಾಯೋಗಿಕ ಸಲಹೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

Chanakya Niti: ಈ ಸಣ್ಣ ತಪ್ಪುಗಳು ಪುರುಷರ ಜೀವನವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನ ಯಾವಾಗಲೂ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮವನ್ನೂ ಪಡುತ್ತಾರೆ. ಆದರೆ ಕೆಲವೊಮ್ಮೆ ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ, ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕೆಲವೊಂದು ಅಭ್ಯಾಸಗಳೇ ಕಾರಣ. ಅವುಗಳನ್ನು ಆದಷ್ಟು ಬೇಗ ಬದಲಾಯಿಸದಿದ್ದರೆ, ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

Chanakya Niti: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಈ ಐದು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ

ಆಚಾರ್ಯ ಚಾಣಕ್ಯರು ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರು ಯಶಸ್ಸನ್ನು ಸಾಧಿಸಲು ಅನೇಕಾರು ಸಲಹೆಗಳನ್ನು ನೀಡಿದ್ದಾರೆ. ಅದರಲ್ಲೂ ಅವರು ಜೀವನದ ಯಶಸ್ಸಿಗೆ ಐದು ವಿಷಯಗಳನ್ನು ನಿರ್ಣಾಯಕವೆಂದು ಪರಿಗಣಿಸಿದ್ದಾರೆ. ಹಾಗಿದ್ರೆ ಲೈಫಲ್ಲಿ ಸಕ್ಸಸ್‌ ಸಾಧಿಸಲು ಯಾವೆಲ್ಲಾ ನಿಮಯಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಹೆಣ್ಮಕ್ಳು ತಾವು ಮದುವೆಯಾಗುವ ಹುಡುಗನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು

ಮದುವೆಯಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಹುಡುಗಿಯರು ತಾವು ಮದುವೆಯಾಗುವ ಹುಡುಗನ ಮುಖ ಲಕ್ಷಣ, ಆದಾಯ, ಆಸ್ತಿ ಅಂತಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಇದು ಸರಿಯಾದ ನಿರ್ಧಾರವಲ್ಲ, ಪುರುಷನ ಬಾಹ್ಯ ನೋಟಕ್ಕಿಂತ ಹೆಚ್ಚಾಗಿ ಆತನ ಗುಣ ಹೇಗಿದೆ ಎಂಬುದನ್ನು ಪರೀಕ್ಷಿಸಬೇಕು. ಉತ್ತಮ ಗುಣವಂತನನ್ನು ಮಾದುವೆಯಾದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಮದುವೆಗೂ ಮುನ್ನ ಹುಡುಗಿಯರು ಹುಡುಗ ಬಗ್ಗೆ ಯಾವೆಲ್ಲಾ ವಿಚಾರಗಳನ್ನು ತಿಳಿದಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ನಡೆಸಲು ಈ ಸಲಹೆಗಳನ್ನು ಪಾಲಿಸಿ

ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ, ಸಂಬಂಧ ಮತ್ತು ಕುಟುಂಬದಲ್ಲಿ ಉಂಟಾಗುವ ಮನಸ್ತಾಪ, ಜಗಳ, ಇತರರರಿಂದ ಅತಿಯಾಗಿ ನಿರೀಕ್ಷಿಸುವುದು ಇವೆಲ್ಲದರ ಕಾರಣದಿಂದ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ನೆಮ್ಮದಿಗಾಗಿ ಹಂಬಲಿಸುತ್ತಿದ್ದಾರೆ. ಇದೇ ರೀತಿ ನೀವು ಕೂಡ ಯಾವುದೇ ಮಾನಸಿಕ ಒತ್ತಡವಿಲ್ಲದೆ ನೆಮ್ಮದಿಯ ಜೀವನ ನಡೆಸಲು ಬಯಸುತ್ತೀರಾ? ಹಾಗಿದ್ರೆ ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.

Chanakya Niti: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಷಯಗಳನ್ನು ನೆನಪಿಡಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮಂತಿಕೆ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಸಂಬಂಧಿಕರ ಮನೆಗೆ ಭೇಟಿ ನೀಡುವಾಗ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದ್ದಾರೆ. ಸಂಬಂಧಿಕರ ಮನೆಗೆ ಹೋಗುವಾಗ ನಾವು ಮಾಡುವ ಒಂದು ಸಣ್ಣ ತಪ್ಪು ಸಹ ನಮ್ಮ ಗೌರವ ಮತ್ತು ಸಂಬಂಧ ಎರಡನ್ನೂ ಹಾಳು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಂಬಂಧಿಕರ ಮನೆಗೆ ಹೋದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ನೋಡೋಣ.

Chanakya Niti On Marriage: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ

ಮದುವೆ ಎನ್ನುವುದು ಜೀವವನ ನಿರ್ಣಾಯಕ ನಿರ್ಧಾರ ಮತ್ತು ವೈವಾಹಿಕ ಜೀವನ ಎನ್ನುವುದು ಜೀವನದ ಪ್ರಮುಖ ಹಂತ. ಈ ವೈವಾಹಿಕ ಜೀವನ ಸುಂದರವಾಗಿರಬೇಕೆಂದರೆ ಸೂಕ್ತವಾದ ಜೀವನ ಸಂಗಾತಿಯನ್ನು ಅಯ್ಕೆ ಮಾಡುವುದು ತುಂಬಾನೇ ಮಖ್ಯ. ಸಣ್ಣ ತಪ್ಪು ನಿರ್ಧಾರ ಸಹ ಜೀವನ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಲೈಫ್‌ ಪಾರ್ಟ್ನರ್‌ ಆಯ್ಕೆ ಮಾಡುವಾಗ ಅಂದ ಚೆಂದಕ್ಕೆ ಪ್ರಾಮುಖ್ಯತೆ ನೀಡುವ ಬದಲು ಅವರಲ್ಲಿ ಆಚಾರ್ಯ ಚಾಣಕ್ಯರು ಹೇಳಿರುವ ಈ ಗುಣಗಳಿವೆಯೇ ಎಂಬುದನ್ನು ಪರಿಗಣಿಸಿ.

Chanakya Niti: ಈ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ಲುವವರೇ ನಿಜವಾದ ಸ್ನೇಹಿತ

ಇಂದಿನ ಕಾಲದಲ್ಲಿ, ನಿಜವಾದ ಸ್ನೇಹಿತನನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಹೌದು ಪ್ರೀತಿ ಮಾತ್ರವಲ್ಲ ಅನೇಕರು ಸ್ನೇಹದ ವಿಷಯದಲ್ಲೂ ತುಂಬಾನೇ ಮೋಸ ಹೋಗುತ್ತಾರೆ. ಆದರೆ ಎಲ್ಲರೂ ಹೀಗೆ ಮೋಸ ಮಾಡುವುದಿಲ್ಲ, ಕೆಲವರು ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಜೊತೆಗೆ ನಿಂತಿರುತ್ತಾರೆ. ಅವರೇ ನಿಜವಾದ ಸ್ನೇಹಿತರು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವಂತೆ ಎಂತಹ ಪರಿಸ್ಥಿತಿಯಲ್ಲಿ ಜೊತೆಗೆ ನಿಲ್ಲುವವನು ನಿಜವಾದ ಸ್ನೇಹಿತ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ತಮ್ಮ ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಮಹಿಳೆಯರು ಸಾಮಾನ್ಯವಾಗಿ ತಮ್ಮೆಲ್ಲಾ ವಿಚಾರಗಳನ್ನು ಇತರರ ಬಳಿ ಹೇಳಿ ಬಿಡುತ್ತಾರೆ. ಹೌದು ತಮ್ಮ ಮನಸ್ಸಿನ ಭಾವನೆ, ಮನೆಯ ವಿಷಯಗಳು ಎಲ್ಲವನ್ನೂ ಯಾರ ಬಳಿಯಾದರೂ ಹಂಚಿಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಎಲ್ಲಾ ಸೀಕ್ರೆಟ್‌ಗಳನ್ನು ಬೇರೆಯವರ ಬಳಿ ಶೇರ್‌ ಮಾಡಿದಾಗ, ಅವರು ಅದರ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಏನೇ ಆದರೂ ಮಹಿಳೆಯರು ಈ ಕೆಲವು ವಿಚಾರಗಳನ್ನು ಇತರರಿಗೆ ಹೇಳಬಾರದು.

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?

ಸಾಮಾನ್ಯವಾಗಿ ಮಹಿಳೆಯರ ಬಳಿ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ, ಹೆಚ್ಚಿನ ಮಹಿಳೆಯರು ಆ ಬಗ್ಗೆ ಸರಿಯಾಗಿ ಹೇಳೋದಿಲ್ಲ. ಅದೇ ರೀತಿ ಪುರುಷರು ಸಹ ತಮ್ಮ ಸಂಬಳ ಎಷ್ಟೆಂದು ಯಾರಿಗೂ ನಿಖರವಾಗಿ ಹೇಳೋದಿಲ್ಲ. ಇದರ ಹಿಂದೆಯೂ ಒಂದಷ್ಟು ಕಾರಣವಿದೆಯೆಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ, ಹೆಣ್ಮಕ್ಳು ತಮ್ಮ ವಯಸ್ಸು ಹಾಗೂ ಗಂಡ್ಮಕ್ಳು ತಮ್ಮ ಸಂಬಳದ ವಿಷಯವನ್ನು ಮರೆಮಾಡೋದೇಕೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಹಿಳೆಯರು ಅಡುಗೆ ಮಾಡೋ ಸಂದರ್ಭದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನು ಸಹ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ಒಬ್ಬ ಮಹಿಳೆ ಈ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಿದರೆ, ಇದು ಕುಟುಂಬದ ಸಂತೋಷ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿದ್ದರೆ ಅಡುಗೆ ಮಾಡುವಾಗ ಯಾವ ವಿಷಯದ ಮೇಲೆ ಗಮನ ಹರಿಸಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ವ್ಯಕ್ತಿಯ ಜೀವನವನ್ನು ನಾಶ ಮಾಡುವ ನಾಲ್ಕು ಪ್ರಮುಖ ಕೆಟ್ಟ ಅಭ್ಯಾಗಳು

ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅವರು ಯಶಸ್ಸು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು, ಸುಖಕರ ದಾಂಪತ್ಯ ಜೀವನ ನಡೆಸುವುದು ಹೇಗೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿರುವಂತೆ ಕೆಲವೊಂದು ಅಭ್ಯಾಸಗಳಿಂದ ವ್ಯಕ್ತಿಯ ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬುದನ್ನು ಸಹ ಎಚ್ಚರಿದ್ದಾರೆ. ಹಾಗಿದ್ದರೆ ಯಾವ ಅಭ್ಯಾಸಗಳು ವ್ಯಕ್ತಿಯೊಬ್ಬನ ಜೀವನವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಪ್ರತಿಯೊಬ್ಬರೂ ಸಹ ನಮ್ಮ ಮನೆಯಲ್ಲಿ ಶಾಂತಿ ನೆಲೆಸಬೇಕು, ಮನೆ ಇನ್ನಷ್ಟು ಸಮೃದ್ಧಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಕೆಲವೊಂದು ಮನೆಗಳಲ್ಲಿ ಯಾವಾಗ ನೋಡಿದರೂ ಜಗಳಗಳು, ಮನಸ್ತಾಪಗಳು ನಡೆಯುತ್ತಿರುತ್ತವೆ. ಆ ಮನೆಯಲ್ಲಿ ಶಾಂತಿಯೇ ಇರೋದಿಲ್ಲ. ಇದಕ್ಕೆ ಮುಖ್ಯ ಕಾರಣವೇ ದೈನಂದಿನ ಜೀವನದಲ್ಲಿ ಮಾಡುವ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಈ ತಪ್ಪುಗಳನ್ನು ಸರಿಪಡಿಸುವ ಮೂಲಕ ಖಂಡಿತವಾಗಿಯೂ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಬಹುದು.

ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್