AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti

Chanakya Niti

ಚಾಣಕ್ಯ ನೀತಿ, ಪ್ರಾಚೀನ ಭಾರತೀಯ ವಿದ್ವಾಂಸ ಚಾಣಕ್ಯರಿಂದ ಕ್ರಿ.ಪೂ. 300 ರ ಸುಮಾರಿಗೆ ಸಂಯೋಜಿಸಲ್ಪಟ್ಟಿದೆ, ಇದು ಪೂರ್ಣವಾದ ಜೀವನಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡುವ ಸಲಹೆಗಳ ಸಂಗ್ರಹವಾಗಿದೆ. ರಾಜ ಚಂದ್ರಗುಪ್ತ ಮೌರ್ಯನಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚಾಣಕ್ಯನ ಬೋಧನೆಗಳು ಜೀವನ, ಆಡಳಿತ ಮತ್ತು ತಂತ್ರದ ವಿವಿಧ ಅಂಶಗಳನ್ನು ಒಳಗೊಂಡಿದೆ. ಮಾನವ ಸ್ವಭಾವ, ರಾಜಕೀಯ ಮತ್ತು ಅರ್ಥಶಾಸ್ತ್ರದ ಬಗ್ಗೆ ಅವರ ಒಳನೋಟಗಳು ಈ ಪಠ್ಯದಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಚಾಣಕ್ಯರನ್ನು ಮ್ಯಾಕಿಯಾವೆಲ್ಲಿ, ಅರಿಸ್ಟಾಟಲ್ ಮತ್ತು ಪ್ಲೇಟೋನಂತಹ ಚಿಂತಕರಿಗೆ ಹೋಲಿಸಲಾಗುತ್ತದೆ. ಚಾಣಕ್ಯನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ, ಆಧುನಿಕ ಜಗತ್ತಿನಲ್ಲಿ ಯಶಸ್ಸು, ನಾಯಕತ್ವ ಮತ್ತು ನೈತಿಕ ಜೀವನವನ್ನು ಬಯಸುವವರಿಗೆ ಸ್ಫೂರ್ತಿ ಮತ್ತು ಪ್ರಾಯೋಗಿಕ ಸಲಹೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

Chanakya Niti: ಹೆಣ್ಮಕ್ಳು ತಾವು ಮದುವೆಯಾಗುವ ಹುಡುಗನ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು

ಮದುವೆಯಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚಿನ ಹುಡುಗಿಯರು ತಾವು ಮದುವೆಯಾಗುವ ಹುಡುಗನ ಮುಖ ಲಕ್ಷಣ, ಆದಾಯ, ಆಸ್ತಿ ಅಂತಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಇದು ಸರಿಯಾದ ನಿರ್ಧಾರವಲ್ಲ, ಪುರುಷನ ಬಾಹ್ಯ ನೋಟಕ್ಕಿಂತ ಹೆಚ್ಚಾಗಿ ಆತನ ಗುಣ ಹೇಗಿದೆ ಎಂಬುದನ್ನು ಪರೀಕ್ಷಿಸಬೇಕು. ಉತ್ತಮ ಗುಣವಂತನನ್ನು ಮಾದುವೆಯಾದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಮದುವೆಗೂ ಮುನ್ನ ಹುಡುಗಿಯರು ಹುಡುಗ ಬಗ್ಗೆ ಯಾವೆಲ್ಲಾ ವಿಚಾರಗಳನ್ನು ತಿಳಿದಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ನಡೆಸಲು ಈ ಸಲಹೆಗಳನ್ನು ಪಾಲಿಸಿ

ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ, ಸಂಬಂಧ ಮತ್ತು ಕುಟುಂಬದಲ್ಲಿ ಉಂಟಾಗುವ ಮನಸ್ತಾಪ, ಜಗಳ, ಇತರರರಿಂದ ಅತಿಯಾಗಿ ನಿರೀಕ್ಷಿಸುವುದು ಇವೆಲ್ಲದರ ಕಾರಣದಿಂದ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ನೆಮ್ಮದಿಗಾಗಿ ಹಂಬಲಿಸುತ್ತಿದ್ದಾರೆ. ಇದೇ ರೀತಿ ನೀವು ಕೂಡ ಯಾವುದೇ ಮಾನಸಿಕ ಒತ್ತಡವಿಲ್ಲದೆ ನೆಮ್ಮದಿಯ ಜೀವನ ನಡೆಸಲು ಬಯಸುತ್ತೀರಾ? ಹಾಗಿದ್ರೆ ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.

Chanakya Niti: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಷಯಗಳನ್ನು ನೆನಪಿಡಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮಂತಿಕೆ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಸಂಬಂಧಿಕರ ಮನೆಗೆ ಭೇಟಿ ನೀಡುವಾಗ ಕೆಲವೊಂದು ವಿಷಯಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದ್ದಾರೆ. ಸಂಬಂಧಿಕರ ಮನೆಗೆ ಹೋಗುವಾಗ ನಾವು ಮಾಡುವ ಒಂದು ಸಣ್ಣ ತಪ್ಪು ಸಹ ನಮ್ಮ ಗೌರವ ಮತ್ತು ಸಂಬಂಧ ಎರಡನ್ನೂ ಹಾಳು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಂಬಂಧಿಕರ ಮನೆಗೆ ಹೋದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ನೋಡೋಣ.

Chanakya Niti On Marriage: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ

ಮದುವೆ ಎನ್ನುವುದು ಜೀವವನ ನಿರ್ಣಾಯಕ ನಿರ್ಧಾರ ಮತ್ತು ವೈವಾಹಿಕ ಜೀವನ ಎನ್ನುವುದು ಜೀವನದ ಪ್ರಮುಖ ಹಂತ. ಈ ವೈವಾಹಿಕ ಜೀವನ ಸುಂದರವಾಗಿರಬೇಕೆಂದರೆ ಸೂಕ್ತವಾದ ಜೀವನ ಸಂಗಾತಿಯನ್ನು ಅಯ್ಕೆ ಮಾಡುವುದು ತುಂಬಾನೇ ಮಖ್ಯ. ಸಣ್ಣ ತಪ್ಪು ನಿರ್ಧಾರ ಸಹ ಜೀವನ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಲೈಫ್‌ ಪಾರ್ಟ್ನರ್‌ ಆಯ್ಕೆ ಮಾಡುವಾಗ ಅಂದ ಚೆಂದಕ್ಕೆ ಪ್ರಾಮುಖ್ಯತೆ ನೀಡುವ ಬದಲು ಅವರಲ್ಲಿ ಆಚಾರ್ಯ ಚಾಣಕ್ಯರು ಹೇಳಿರುವ ಈ ಗುಣಗಳಿವೆಯೇ ಎಂಬುದನ್ನು ಪರಿಗಣಿಸಿ.

Chanakya Niti: ಈ ಸಂದರ್ಭಗಳಲ್ಲಿ ನಿಮ್ಮ ಜೊತೆ ನಿಲ್ಲುವವರೇ ನಿಜವಾದ ಸ್ನೇಹಿತ

ಇಂದಿನ ಕಾಲದಲ್ಲಿ, ನಿಜವಾದ ಸ್ನೇಹಿತನನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಹೌದು ಪ್ರೀತಿ ಮಾತ್ರವಲ್ಲ ಅನೇಕರು ಸ್ನೇಹದ ವಿಷಯದಲ್ಲೂ ತುಂಬಾನೇ ಮೋಸ ಹೋಗುತ್ತಾರೆ. ಆದರೆ ಎಲ್ಲರೂ ಹೀಗೆ ಮೋಸ ಮಾಡುವುದಿಲ್ಲ, ಕೆಲವರು ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಜೊತೆಗೆ ನಿಂತಿರುತ್ತಾರೆ. ಅವರೇ ನಿಜವಾದ ಸ್ನೇಹಿತರು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿರುವಂತೆ ಎಂತಹ ಪರಿಸ್ಥಿತಿಯಲ್ಲಿ ಜೊತೆಗೆ ನಿಲ್ಲುವವನು ನಿಜವಾದ ಸ್ನೇಹಿತ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ತಮ್ಮ ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಮಹಿಳೆಯರು ಸಾಮಾನ್ಯವಾಗಿ ತಮ್ಮೆಲ್ಲಾ ವಿಚಾರಗಳನ್ನು ಇತರರ ಬಳಿ ಹೇಳಿ ಬಿಡುತ್ತಾರೆ. ಹೌದು ತಮ್ಮ ಮನಸ್ಸಿನ ಭಾವನೆ, ಮನೆಯ ವಿಷಯಗಳು ಎಲ್ಲವನ್ನೂ ಯಾರ ಬಳಿಯಾದರೂ ಹಂಚಿಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಎಲ್ಲಾ ಸೀಕ್ರೆಟ್‌ಗಳನ್ನು ಬೇರೆಯವರ ಬಳಿ ಶೇರ್‌ ಮಾಡಿದಾಗ, ಅವರು ಅದರ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಏನೇ ಆದರೂ ಮಹಿಳೆಯರು ಈ ಕೆಲವು ವಿಚಾರಗಳನ್ನು ಇತರರಿಗೆ ಹೇಳಬಾರದು.

Chanakya Niti: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?

ಸಾಮಾನ್ಯವಾಗಿ ಮಹಿಳೆಯರ ಬಳಿ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ, ಹೆಚ್ಚಿನ ಮಹಿಳೆಯರು ಆ ಬಗ್ಗೆ ಸರಿಯಾಗಿ ಹೇಳೋದಿಲ್ಲ. ಅದೇ ರೀತಿ ಪುರುಷರು ಸಹ ತಮ್ಮ ಸಂಬಳ ಎಷ್ಟೆಂದು ಯಾರಿಗೂ ನಿಖರವಾಗಿ ಹೇಳೋದಿಲ್ಲ. ಇದರ ಹಿಂದೆಯೂ ಒಂದಷ್ಟು ಕಾರಣವಿದೆಯೆಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ, ಹೆಣ್ಮಕ್ಳು ತಮ್ಮ ವಯಸ್ಸು ಹಾಗೂ ಗಂಡ್ಮಕ್ಳು ತಮ್ಮ ಸಂಬಳದ ವಿಷಯವನ್ನು ಮರೆಮಾಡೋದೇಕೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಹಿಳೆಯರು ಅಡುಗೆ ಮಾಡೋ ಸಂದರ್ಭದಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನು ಸಹ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ಒಬ್ಬ ಮಹಿಳೆ ಈ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಿದರೆ, ಇದು ಕುಟುಂಬದ ಸಂತೋಷ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿದ್ದರೆ ಅಡುಗೆ ಮಾಡುವಾಗ ಯಾವ ವಿಷಯದ ಮೇಲೆ ಗಮನ ಹರಿಸಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ವ್ಯಕ್ತಿಯ ಜೀವನವನ್ನು ನಾಶ ಮಾಡುವ ನಾಲ್ಕು ಪ್ರಮುಖ ಕೆಟ್ಟ ಅಭ್ಯಾಗಳು

ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅವರು ಯಶಸ್ಸು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು, ಸುಖಕರ ದಾಂಪತ್ಯ ಜೀವನ ನಡೆಸುವುದು ಹೇಗೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿರುವಂತೆ ಕೆಲವೊಂದು ಅಭ್ಯಾಸಗಳಿಂದ ವ್ಯಕ್ತಿಯ ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬುದನ್ನು ಸಹ ಎಚ್ಚರಿದ್ದಾರೆ. ಹಾಗಿದ್ದರೆ ಯಾವ ಅಭ್ಯಾಸಗಳು ವ್ಯಕ್ತಿಯೊಬ್ಬನ ಜೀವನವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಪ್ರತಿಯೊಬ್ಬರೂ ಸಹ ನಮ್ಮ ಮನೆಯಲ್ಲಿ ಶಾಂತಿ ನೆಲೆಸಬೇಕು, ಮನೆ ಇನ್ನಷ್ಟು ಸಮೃದ್ಧಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಕೆಲವೊಂದು ಮನೆಗಳಲ್ಲಿ ಯಾವಾಗ ನೋಡಿದರೂ ಜಗಳಗಳು, ಮನಸ್ತಾಪಗಳು ನಡೆಯುತ್ತಿರುತ್ತವೆ. ಆ ಮನೆಯಲ್ಲಿ ಶಾಂತಿಯೇ ಇರೋದಿಲ್ಲ. ಇದಕ್ಕೆ ಮುಖ್ಯ ಕಾರಣವೇ ದೈನಂದಿನ ಜೀವನದಲ್ಲಿ ಮಾಡುವ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಈ ತಪ್ಪುಗಳನ್ನು ಸರಿಪಡಿಸುವ ಮೂಲಕ ಖಂಡಿತವಾಗಿಯೂ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಬಹುದು.

Chanakya Niti: ಎಷ್ಟೇ ಕ್ಲೋಸ್‌ ಆಗಿದ್ರೂ ಸರಿ, ಇಂತಹ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ

ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಚಾರಗಳನ್ನು ಸಹ ಈ ಕೆಲವೊಂದು ಜನರಿಗೆ ಹೇಳುವುದರಿಂದ ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಆದ್ದರಿಂದ ಈ ಸ್ವಭಾವದ ಜನರಿಗೆ ನಿಮ್ಮ ಮನೆಯ ವಿಚಾರಗಳನ್ನು ಹೇಳಬೇಡಿ ಮತ್ತು ಅಂತಹ ಜನರನ್ನು ನಿಮ್ಮ ಮನೆಯ ವಿಷಯಗಳಿಗೆ ತಲೆ ಹಾಕಲು ಬಿಡಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.

Chanakya Niti: ಈ ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ

ನಾವು ನಮ್ಮ ಜೀವನದಲ್ಲಿ ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ಅದಕ್ಕಾಗಿಯೇ ಒಳ್ಳೆಯವರ ಸಹವಾಸದಲ್ಲಿರಬೇಕು, ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಕೊಳ್ಳಬೇಕು ಎಂದು ಹಿರಿಯರು ಕಿವಿಮಾತು ಹೇಳೋದು. ಹೀಗೆ ಒಳ್ಳೆಯ ಅಭ್ಯಾಸಗಳು ನಮ್ಮ ಜೀವನ ವನ್ನು ಬೆಳಗುವಂತೆ ಕೆಲವೊಂದು ಅಭ್ಯಾಸಗಳು ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!