
Chanakya Niti
ಚಾಣಕ್ಯ ನೀತಿ, ಪ್ರಾಚೀನ ಭಾರತೀಯ ವಿದ್ವಾಂಸ ಚಾಣಕ್ಯರಿಂದ ಕ್ರಿ.ಪೂ. 300 ರ ಸುಮಾರಿಗೆ ಸಂಯೋಜಿಸಲ್ಪಟ್ಟಿದೆ, ಇದು ಪೂರ್ಣವಾದ ಜೀವನಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡುವ ಸಲಹೆಗಳ ಸಂಗ್ರಹವಾಗಿದೆ. ರಾಜ ಚಂದ್ರಗುಪ್ತ ಮೌರ್ಯನಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚಾಣಕ್ಯನ ಬೋಧನೆಗಳು ಜೀವನ, ಆಡಳಿತ ಮತ್ತು ತಂತ್ರದ ವಿವಿಧ ಅಂಶಗಳನ್ನು ಒಳಗೊಂಡಿದೆ. ಮಾನವ ಸ್ವಭಾವ, ರಾಜಕೀಯ ಮತ್ತು ಅರ್ಥಶಾಸ್ತ್ರದ ಬಗ್ಗೆ ಅವರ ಒಳನೋಟಗಳು ಈ ಪಠ್ಯದಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಚಾಣಕ್ಯರನ್ನು ಮ್ಯಾಕಿಯಾವೆಲ್ಲಿ, ಅರಿಸ್ಟಾಟಲ್ ಮತ್ತು ಪ್ಲೇಟೋನಂತಹ ಚಿಂತಕರಿಗೆ ಹೋಲಿಸಲಾಗುತ್ತದೆ. ಚಾಣಕ್ಯನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ, ಆಧುನಿಕ ಜಗತ್ತಿನಲ್ಲಿ ಯಶಸ್ಸು, ನಾಯಕತ್ವ ಮತ್ತು ನೈತಿಕ ಜೀವನವನ್ನು ಬಯಸುವವರಿಗೆ ಸ್ಫೂರ್ತಿ ಮತ್ತು ಪ್ರಾಯೋಗಿಕ ಸಲಹೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಈ ಗುಣಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ
ಯಾರೇ ಆದರೂ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಮಾತ್ರವಲ್ಲ ಕೆಲವೊಂದು ಗುಣಗಳು ಕೂಡಾ ಅವಶ್ಯಕವಾಗಿರುತ್ತದೆ. ಅದೇ ರೀತಿ ಇನ್ನೊಂದು ಬೇಡದ ಗುಣಗಳನ್ನು ತ್ಯಜಿಸುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಾದರೆ ಜೀವನದಲ್ಲಿ ಆಗಿರಬಹುದು ಅಥವಾ ವೃತ್ತಿ ಜೀವನದಲ್ಲಿಯೇ ಆಗಿರಬಹುದು ಯಶಸ್ಸನ್ನು ಸಾಧಿಸಲು ನಾವು ಯಾವ ಕೆಟ್ಟ ಗುಣವನ್ನು ಬಿಟ್ಟುಬಿಡಬೇಕು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: May 9, 2025
- 6:20 pm
Chanakya Niti: ಓ ಗಂಡಸರೇ… ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ವೃತ್ತಿ ಜೀವನ, ಖಾಸಗಿ ಜೀವನ, ದಾಂಪತ್ಯ ಜೀವನ, ಆರೋಗ್ಯದ ಬಗ್ಗೆಯೂ ಜನರಿಗೆ ಉಪಯುಕ್ತವಾದ ಹಲವಾರು ಸಲಹೆಗಳನ್ನು ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಇವರು ಗಂಡಸರು, ಜೀವನವು ನರಕವಾಗಬಾರದು ಎಂದಾದರೆ ಎಂತಹ ಮಹಿಳೆಯರನ್ನು ಮದುವೆಯಾಗಬಾರದು, ಜೀವನ ಸಂಗಾತಿಯ ಆಯ್ಕೆ ಹೇಗಿರಬೇಕು ಎಂಬುದನ್ನು ಕೂಡಾ ಹೇಳಿಕೊಟ್ಟಿದ್ದಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಗಂಡಸರು ಎಂತಹ ಮಹಿಳೆಯರನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: May 5, 2025
- 3:49 pm
Chanakya Niti : ಚಾಣಕ್ಯ ಹೇಳುವಂತೆ ಪಹಲ್ಗಾಮ್ ದಾಳಿಯಂತೆ ದೇಶದ ಮೇಲೆ ದಾಳಿ ನಡೆದಾಗ ನಾಗರಿಕನು ಈ ಕೆಲಸ ಮೊದ್ಲು ಮಾಡಬೇಕಂತೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ದಾಳಿಯ ಬಗ್ಗೆಯೇ ಎಲ್ಲರಿಗೂ ತಿಳಿದೇ ಇದೆ. ಅದೆಷ್ಟೋ ಮುಗ್ಧ ಜೀವಗಳು ಈ ದಾಳಿಗೆ ಬಲಿಯಾಗಿದೆ. ಆದರೆ ಆಚಾರ್ಯ ಚಾಣಕ್ಯರು ಇಂತಹ ದಾಳಿಗಳು ನಡೆದಾಗ ಏನು ಮಾಡಬೇಕು ಎನ್ನುವ ಬಗ್ಗೆ ಈ ಮೊದಲೇ ತಮ್ಮ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಚಾಣಕ್ಯರು ಹೇಳುವ ಯುದ್ಧಗಳು, ದಾಳಿ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು ಎಂದಿದ್ದಾರೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
- Sainandha P
- Updated on: Apr 27, 2025
- 6:00 pm
Chanakya Niti: ಸಂಬಂಧಿಕರ ಮುಂದೆ ಬೆಳೆಯಬೇಕು ಅಂದ್ರೆ ಚಾಣಕ್ಯನ ಈ ಸಲಹೆ ಪಾಲಿಸಿ
ಹೆಚ್ಚಿನ ಸಂಬಂಧಿಕರು ನಮಗೆ ಒಳ್ಳೆಯದನ್ನು ಬಯಸುವುದಕ್ಕಿಂತ ಕೆಟ್ಟದ್ದನ್ನು ಬಯಸುವುದೇ ಜಾಸ್ತಿ. ಪ್ರತಿಯೊಂದು ವಿಚಾರಕ್ಕೂ ಅವರು ನಮ್ಮನ್ನು ಆಡಿಕೊಳ್ಳುವುದೇ ಹೆಚ್ಚು. ಬಹುಶಃ ಎಲ್ಲರಿಗೂ ಸಂಬಂಧಿಕರಿಂದ ಈ ರೀತಿಯ ಅನುಭವ ಆಗಿರಬಹುದು. ಹೀಗೆ ಆಡಿಕೊಂಡಂತಹ ಸಂಬಂಧಿಕರ ಮುಂದೆ ಎತ್ತರಕ್ಕೆ ಬೆಳೆದು ನಿಲ್ಲಬೇಕು ಎಂದು ಬಯಸಿದರೆ ನೀವು ಆಚಾರ್ಯ ಚಾಣಕ್ಯರ ಈ ಕೆಲವು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
- Malashree anchan
- Updated on: Apr 11, 2025
- 6:14 pm
Chanakya Niti : ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳು ಇವೆಯಂತೆ
ಸಂಬಂಧಗಳು ಬಹಳ ಸೂಕ್ಷ್ಮವಾದುದು. ಯಾವುದೇ ಸಂಬಂಧಗಳಿರಲಿ, ಬಹಳ ಕಾಳಜಿಯಿಂದ ಜೋಪಾನವಾಗಿ ನಿಭಾಯಿಸಿಕೊಂಡು ಹೋಗಬೇಕು. ಆದರೆ ಕೆಲವೊಮ್ಮೆ ನಮ್ಮ ವರ್ತನೆ ಹಾಗೂ ನಡವಳಿಕೆಯಿಂದಲೇ ಸಂಬಂಧಕ್ಕೆ ಮುಳುವಾಗುತ್ತದೆ. ದಂಪತಿಗಳಲ್ಲಿ ಹೆಚ್ಚಿನವರು ಸಣ್ಣ ಪುಟ್ಟ ವಿಷಯಗಳನ್ನೆ ದೊಡ್ಡದು ಮಾಡುತ್ತಾರೆ. ಜಗಳವಾಡುತ್ತಲೇ ತಮ್ಮ ಸಮಯ ಹಾಗೂ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಈ ಕೆಲವು ನಡವಳಿಕೆ ಹಾಗೂ ಗುಣಗಳು ದಾಂಪತ್ಯಜೀವನಕ್ಕೆ ಮಾರಕವಾಗುತ್ತದೆ. ಹೀಗಾಗಿ ಚಾಣಕ್ಯನು ದಂಪತಿಗಳಿಗೆ ಈ ಕೆಲವು ವಿಚಾರಗಳ ಬಗ್ಗೆ ಗಮನ ಕೊಡಿ , ಇಲ್ಲದಿದ್ದರೆ ವೈವಾಹಿಕ ಸಂಬಂಧ ಮುರಿದು ಬೀಳುತ್ತದೆ ಎಂದು ಸಲಹೆ ನೀಡಿದ್ದಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Mar 7, 2025
- 8:56 am
Chanakya Niti : ಸಮಯ ನಿರ್ವಹಣೆ ಹೀಗೆ ಮಾಡಿದ್ರೆ ಯಶಸ್ಸು ಖಂಡಿತ ನಿಮ್ಮದಾಗಲು ಸಾಧ್ಯ ಎನ್ನುತ್ತಾರೆ ಚಾಣಕ್ಯ
ಕೆಲವರಿಗೆ ದಿನದ ಇಪ್ಪತ್ತನಾಲ್ಕು ಗಂಟೆ ಇದ್ದರೂ ಸಾಕಾಗುವುದಿಲ್ಲ. ಕೆಲಸದ ಹೊರೆಯಿಂದಾಗಿ ಸಾಕಷ್ಟು ಸಮಯವಿಲ್ಲ ಎಂದು ದೂರುವವರನ್ನು ನೋಡಿದ್ದೇವೆ. ಆದರೆ ಇರುವ ಸಮಯದೊಂದಿಗೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ ಜೀವನದಲ್ಲಿ ಯಶಸ್ಸು ಗಳಿಸುವವರನ್ನು ನೋಡಿದಾಗ ಆಶ್ಚರ್ಯಚಕಿತರಾಗುತ್ತೇವೆ. ಹೀಗಾಗಿ ಚಾಣಕ್ಯರು ಕೆಲಸಕ್ಕೆ ಆದ್ಯತೆ ನೀಡುವ ಬಗ್ಗೆ ತನ್ನ ನೀತಿಯಲ್ಲಿ ತಿಳಿಸಿದ್ದಾರೆ. ಆದ್ಯತೆಯ ಅನುಗುಣವಾಗಿ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಗುರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸುತ್ತರಂತೆ. ಹಾಗಾದ್ರೆ ಚಾಣಕ್ಯ
- Sainandha P
- Updated on: Mar 4, 2025
- 6:06 pm
Chanakya Niti : ಪ್ರೀತಿಯಲ್ಲಿ ಮೋಸ ಹೋಗದಿರಲು ಚಾಣಕ್ಯ ಹೇಳುವ ಈ ಸಲಹೆ ತಪ್ಪದೇ ಪಾಲಿಸಿ
ಪ್ರೇಮಿಗಳು ಅಥವಾ ದಂಪತಿಗಳ ನಡುವೆ ಪ್ರಾಮಾಣಿಕತೆಯಿದ್ದರೆ ಸಂಬಂಧವು ಸಿಹಿಯಾಗಿಯೇ ಇರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿಯಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ನಂಬಿಕೆ ಉಳಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಹೀಗಾಗಿ ಹೆಚ್ಚಿನವರು ನಂಬಿದವರಿಂದಲೇ ಮೋಸ ಹೋಗುತ್ತಾರೆ. ಆದರೆ ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದು, ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟು ಕೊಂಡರೆ ಯಾರು ನಿಮಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಕಹಿಯಾದ ನೋವು ಆಗದಂತೆ ತಡೆಯಲು ಚಾಣಕ್ಯ ಸಲಹೆಗಳನ್ನು ನೀಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Feb 27, 2025
- 3:46 pm
Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ
ಈ ಕಾಲದಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ತಿಳಿಯುವುದಿಲ್ಲ. ನಾವು ಅತಿಯಾಗಿ ನಂಬಿದ ವ್ಯಕ್ತಿಗಳೇ ನಮಗೆ ಮೋಸ ಮಾಡುತ್ತಾರೆ. ಆದರೆ ಎಷ್ಟೋ ಸಲ ಆ ಕಹಿ ನೆನಪಿನಲ್ಲಿ ಕೊರಗುತ್ತೇವೆ. ಹೀಗಾಗಿ ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ ನಂಬಿಕೆ ದ್ರೋಹವಾದಾಗ ಏನು ಮಾಡಬೇಕು ಎನ್ನುವ ಸಲಹೆಗಳನ್ನು ನೀಡಿದ್ದಾನೆ ಆ ಕುರಿತಾದ ಮಾಹಿತಿ ಇಲ್ಲಿದೆ.
- Sainandha P
- Updated on: Jan 4, 2025
- 6:26 pm
Chanakya Niti : ಈ ವ್ಯಕ್ತಿಗಳು ಎಷ್ಟೇ ಓದಿದ್ದರೂ ಶತಮೂರ್ಖರಂತೆ, ಇವರ ಸಹವಾಸ ಮಾಡ್ಲೇಬೇಡಿ
ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವ ವ್ಯಕ್ತಿಗಳು ಹೇಗೆ ಇರುತ್ತಾರೆ ಎಂದು ಊಹೆ ಮಾಡುವುದಕ್ಕೂ ಕಷ್ಟ. ಹೀಗಾಗಿ ಅವರೊಂದಿಗೆ ವ್ಯವಹರಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ. ಆದರೆ ಆಚಾರ್ಯ ಚಾಣಕ್ಯನು ಈ ಐದು ವ್ಯಕ್ತಿಗಳ ಜೊತೆಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವ್ಯಕ್ತಿಗಳು ಯಾವಾಗಲೂ ಮೂರ್ಖರಾಗಿರುತ್ತಾರೆ ಎಂದಿದ್ದಾರೆ. ಹಾಗಾದ್ರೆ ಆ ಐದು ಮೂರ್ಖ ವ್ಯಕ್ತಿಗಳು ಯಾರೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
- Sainandha P
- Updated on: Dec 9, 2024
- 6:05 pm
Chanakya Niti : ಚಾಣಕ್ಯನ ಪ್ರಕಾರ ಯಶಸ್ಸಿನ ಗುಟ್ಟು ಇದೆ ನೋಡಿ
ಯಶಸ್ಸು ಇದನ್ನು ಕೇಳಿದರೆ ಮನಸ್ಸಿಗೆ ಎಷ್ಟು ಖುಷಿಯಾಗುತ್ತದೆಯೋ, ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವು ಅಷ್ಟೇ ಅಗತ್ಯ. ಅದಲ್ಲದೇ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅದೆಷ್ಟೋ ಸಲ ಗುರಿಯತ್ತ ಹೆಜ್ಜೆ ಹಾಕುವಾಗ ಸೋಲು ಬೆಂಬಿಡದೇ ಕಾಡಬಹುದು. ಈ ವೇಳೆಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರಲೇಬೇಕು. ಅದರೊಂದಿಗೆ ಈ ಮೂರು ವಿಷಯಗಳನ್ನು ತಿಳಿದವರಿಗೆ ಮಾತ್ರ ಯಶಸ್ಸು ಗಳಿಸುತ್ತಾರಂತೆ. ಆಚಾರ್ಯ ಚಾಣಕ್ಯನ ಈ ಮಾತುಗಳು ಶಸ್ವಿ ವ್ಯಕ್ತಿಯಾಗಲು ಕಾರಣವಾಗುತ್ತದೆ. ಇದರಿಂದ ಸುಲಭವಾಗಿ ಗುರಿಯನ್ನು ಸಾಧಿಸಬಹುದು.
- Sainandha P
- Updated on: Dec 2, 2024
- 3:00 pm