AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ego:ಇಗೋವನ್ನು ಬದಿಗಿಟ್ಟು ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?

ಇಗೋವಿಗೆ ಎಂತಹ ಗಟ್ಟಿ ಬಂಧವನ್ನಾದರೂ ಅಲುಗಾಡಿಸುವ ಶಕ್ತಿ ಇದೆ. ಯಾರ್ಯಾರು ತಮ್ಮ ಮನಸ್ಸಿನಲ್ಲಿ ಇಗೋವನ್ನಿಟ್ಟುಕೊಂಡಿರುತ್ತಾರೋ ಅಂತವರು ಬಹುಬೇಗ ಎಲ್ಲಾ ಬಂಧವನ್ನು ಕಳೆದುಕೊಳ್ಳುತ್ತಾರೆ. ನಿಮ್ಮಲ್ಲಿರುವ ಇಗೋ ನಿಮ್ಮ ನೂರು ಒಳ್ಳೆಯತನವನ್ನು ಇಲ್ಲವಾಗಿಸುತ್ತದೆ.

Ego:ಇಗೋವನ್ನು ಬದಿಗಿಟ್ಟು ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?
ಅಹಂಕಾರ
TV9 Web
| Edited By: |

Updated on: Jun 10, 2022 | 8:00 AM

Share

ಅಹಂಕಾರಕ್ಕೆ ಎಂತಹ ಗಟ್ಟಿ ಬಂಧವನ್ನಾದರೂ ಅಲುಗಾಡಿಸುವ ಶಕ್ತಿ ಇದೆ. ಯಾರ್ಯಾರು ತಮ್ಮ ಮನಸ್ಸಿನಲ್ಲಿ ಇಗೋವನ್ನಿಟ್ಟುಕೊಂಡಿರುತ್ತಾರೋ ಅಂತವರು ಬಹುಬೇಗ ಎಲ್ಲಾ ಬಂಧವನ್ನು ಕಳೆದುಕೊಳ್ಳುತ್ತಾರೆ. ನಿಮ್ಮಲ್ಲಿರುವ ಇಗೋ ನಿಮ್ಮ ನೂರು ಒಳ್ಳೆಯತನವನ್ನು ಇಲ್ಲವಾಗಿಸುತ್ತದೆ.

ಅಹಂಕಾರ ಎಂಬುದು ಜನರಿಂದ ನೀವು ದೂರವಾಗುವಂತೆ ಮಾಡುತ್ತದೆ. ಇಗೋ ಇಟ್ಟುಕೊಂಡರೆ ಯಾರೂ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ, ಇಗೋ ಎಂಬುದು ಆ ಕ್ಷಣಕ್ಕೆ ಉತ್ತಮವೆನಿಸಿದರೂ ಬಳಿಕ ನೋವು ನೀಡುತ್ತದೆ. ಕೋಪವನ್ನೂ ತರಿಸುತ್ತದೆ.

ಗೆಲ್ಲಲೇಬೇಕು ಎಂಬ ಮನೋಭಾವ ಬಿಡಿ: ನೀವು ಗೆಲ್ಲಬೇಕು ಹಾಗೂ ಮತ್ತೊಬ್ಬರನ್ನು ತಪ್ಪು ಎಂದು ಸಾಬೀತುಪಡಿಸಲು ಹೋಗಬೇಡಿ, ಯಾವಾಗಲೂ ನೀವೇ ಗೆಲ್ಲಬೇಕು ಎನ್ನುವ ಹಠವನ್ನು ಬಿಡಿ.

ಹಳೆಯ ವಿಷಯಗಳನ್ನು ಕೆದಕಬೇಡಿ: ಯಾವುದೇ ವಿಷಯ ಮಾತನಾಡುತ್ತಿದ್ದರೆ, ನೀವು ಎಲ್ಲೋ ಸೋಲುತ್ತೀರಿ ಎನಿಸಿದರೆ ಹಳೆಯ ವಿಷಯವನ್ನು ಕೆದಕುವುದನ್ನು ಬಿಡಿ, ಅಹಂಕಾರ ಬದಿಗಿಟ್ಟು ಮಾತನಾಡಿ.

ಇಗೋ ಬಗ್ಗೆ ಗಮನವಿರಲಿ: ಇಗೋ ಯಾವ ಸಂದರ್ಭದಲ್ಲಿ ನಿಮ್ಮನ್ನು ಆವರಿಸುತ್ತದೆ ಎಂಬುದರ ಬಗ್ಗೆ ಗಮನವಿರಲಿ, ಆ ಸಂದರ್ಭದಲ್ಲಿ ಇಗೋ ಬಿಟ್ಟು ಜನರ ಜೊತೆ ಬೆರೆಯಿರಿ, ನಿಮ್ಮ ಭಾವನೆಗಳನ್ನು ಶೇರ್ ಮಾಡಿ. ನಿಮ್ಮ ಅಹಂಕಾರದ ಮಾತುಗಳು ಬೇರೆಯವರನ್ನು ನೋವಿನ ಕೂಪಕ್ಕೆ ತಳ್ಳಬಹುದು.

ಬೇರೆಯವರ ಭಾವನೆಗಳಿಗೂ ಗೌರವ ಕೊಡಿ: ಕೇವಲ ನಿಮ್ಮ ದೃಷ್ಟಿಯಿಂದ ಮಾತ್ರ ನೋಡುವುದಲ್ಲ ಬೇರೆಯವರ ಭಾವನೆಗಳಿಗೂ ಬೆಲೆ ಕೊಡಿ. ಹಾಗೆಂದ ಮಾತ್ರಕ್ಕೆ ಬೇರೆಯವರ ಗುಣವನ್ನು ನೀವು ಅಳವಡಿಸಿಕೊಳ್ಳಬೇಕೆಂದೇನಿಲ್ಲ ಆದರೆ ಯಾರಾದರೂ ಯಾವ ವಿಷಯವನ್ನಾದರೂ ಪ್ರಸ್ತಾಪಿಸುತ್ತಿದ್ದರೆ ಅವರ ಮಾತುಗಳನ್ನು ಆಲಿಸಿ.

ಬೇರೊಬ್ಬರು ಅಹಂಕಾರ ತೋರಿಸಿದರೆ?: ಒಂದೊಮ್ಮೆ ಬೇರೊಬ್ಬರು ಇಗೋದಲ್ಲಿದ್ದರೆ ನೀವು ಅವರ ಬಳಿ ಹೆಚ್ಚು ಹೊತ್ತು ಮಾತನಾಡುವ ಅಗತ್ಯವಿಲ್ಲ, ನೀವು ಸರಿಯಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಬೇರೆಯವರ ಮಾತುಗಳು ಕೂಡ ನಾನು ಸರಿ ಎಂಬಂತಿದ್ದರೆ ಮಾತು ನಿಲ್ಲಿಸಿಬಿಡಿ.

ಇಬ್ಬರೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ: ಒಂದೊಮ್ಮೆ ಇಬ್ಬರಲ್ಲೂ ಅಹಂಕಾರವಿದ್ದರೆ ಅಥವಾ ನಿಮಗೆ ಇಗೋ ಇದೆ ಎಂದು ಅನಿಸಿದರೆ, ಭಿನ್ನಾಭಿಪ್ರಾಯವಿದ್ದರೆ ಆ ವಿಷಯದಲ್ಲಿ ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಇಬ್ಬರೂ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?