Sign In

By signing in or creating an account, you agree with Associated Broadcasting Company's Terms & Conditions and Privacy Policy.

Loneliness: ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?

ಒಂಟಿಯಾಗಿ ಕುಳಿತು ಕೊರಗುವುದು, ನನ್ನ ಬಗ್ಗೆ ಕಾಳಜಿ ಮಾಡುವವರು ಯಾರೂ ಇಲ್ಲ ಎಂದು ಚಿಂತೆ ಮಾಡುವುದು ಇದೆಲ್ಲವನ್ನೂ ಬಿಟ್ಟುಬಿಡಿ.

Loneliness: ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?
ಒಂಟಿತನ
Follow us
TV9 Web
| Updated By: ನಯನಾ ರಾಜೀವ್

Updated on:Jun 10, 2022 | 10:02 AM

ಒಂಟಿಯಾಗಿ ಕುಳಿತು ಕೊರಗುವುದು, ನನ್ನ ಬಗ್ಗೆ ಕಾಳಜಿ ಮಾಡುವವರು ಯಾರೂ ಇಲ್ಲ ಎಂದು ಚಿಂತೆ ಮಾಡುವುದು ಇದೆಲ್ಲವನ್ನೂ ಬಿಟ್ಟುಬಿಡಿ. ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?. ಸಾಕಷ್ಟು ಮಂದಿ ಒಂಟಿಯಾಗಿದ್ದರೂ ಎಂಜಾಯ್ ಮಾಡುತ್ತಾರೆ, ಇನ್ನೂ ಕೆಲವರು ಸ್ನೇಹಿತರಿದ್ದರೂ ಒಂಟಿಯೆಂಬಂತೆ ಒಬ್ಬರೇ ಕುಳಿತಿರುತ್ತಾರೆ. ನಿಮ್ಮ ಕಂಪನಿಯನ್ನು ನೀವೇ ಎಂಜಾಯ್ ಮಾಡಿ.

ಸಾಮಾನ್ಯವಾಗಿ ಎರಡು ರೀತಿಯ ಮನಸ್ಥಿತಿಯವರಿರುತ್ತಾರೆ ಅವರನ್ನು ಎಕ್ಟ್ರಾವರ್ಟ್​​ ಹಾಗೂ ಇಂಟ್ರಾವರ್ಟ್​ಗಳೆಂದು ಕರೆಯಲಾಗುತ್ತದೆ, ಎಕ್ಟ್ರಾವರ್ಟ್​ಗಳು ಸಮಾಜದ ಜತೆ ಬೆರೆಯುತ್ತಾರೆ, ಸ್ನೇಹಿತರ ಜತೆ ಸಮಯ ಕಳೆಯುತ್ತಾರೆ, ಇನ್​ಟ್ರಾವರ್ಟ್​ಗಳು ಯಾರ ಜತೆಯೂ ಬೆರೆಯುವುದಿಲ್ಲ ಒಂಟಿಯಾಗಿರಲು ಇಷ್ಟಪಡುತ್ತಾರೆ.

ನಿಮ್ಮ ಜತೆಗೆ ನೀವೇ ಹೆಚ್ಚು ಸಮಯ ಕಳೆಯಿರಿ, ನಿಮ್ಮ ಬಗ್ಗೆ ನೀವು ಅರಿಯುವುದು ತುಂಬಾ ಇದೆ, ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ನಿಮ್ಮ ಜತೆ ನಿಮ್ಮ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ.

ಹೊಸ ಕೌಶಲ್ಯವನ್ನು ಅಳವಡಿಸಿಕೊಳ್ಳಿ: ಸಾಕಷ್ಟು ಮಂದಿ ಒಂಟಿಯಾಗಿರಲು ಇಷ್ಟಪಡುವುದಿಲ್ಲ, ಆದರೆ ಸಂದರ್ಭಗಳು ಎಂದೂ ನಾವಂದುಕೊಂಡಂತೆ ಇರುವುದಿಲ್ಲ, ಒಂಟಿಯಾಗಿರುವ ಸಾಕಷ್ಟು ಸಂದರ್ಭಗಳು ಒದಗಿಬರಬಹುದು. ಹೀಗಾಗಿ ನೀವು ಹೊಸ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ, ಹೊಸತನ್ನು ಕಲಿಯಲು ಪ್ರಯತ್ನಿಸಿ, ಓದುವುದು, ಕುಕಿಂಗ್, ನೃತ್ಯ, ಫೋಟೊಗ್ರಫಿ ಸೇರಿದಂತೆ ಇತರೆ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಒಂಟಿಯಾಗಿದ್ದೇನೆ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳಿ.

ಬೇರೆಯವರ ಜೊತೆ ಹೋಲಿಕೆ ಬೇಡ: ನೀವು ನಿಮ್ಮನ್ನು ಬೇರೆಯವರ ಜತೆ ಹೋಲಿಕೆ ಮಾಡಿಕೊಂಡಾಗ ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಜೀವನ ಹಾಗೂ ಸ್ನೇಹಿತರ ಜೀವನ ಅಥವಾ ಇನ್ಯಾರದೇ ಜೀವನವನ್ನು ಹೋಲಿಕೆ ಮಾಡಬೇಡಿ. ಯಾಕೆಂದರೆ ಪ್ರತಿಯೊಬ್ಬರೂ ಭಿನ್ನ ಮನಸ್ಥಿತಿಯನ್ನು ಹೊಂದಿರುತ್ತಾರೆ. ಜೀವನವೆಂದ ಮೇಲೆ ಸಾಕಷ್ಟು ಅಡೆತಡೆಗಳಿರುವುದು ಸಾಮಾನ್ಯ.

ದೈಹಿಕ ಚಟುವಟಿಕೆ: ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ, ನಿಮಗೆ ಹೋಟೆಲ್​ನಲ್ಲಿ ನಿಮಗಿಷ್ಟವಾದ ಆಹಾರವನ್ನು ತಿನ್ನಿ, ನಿತ್ಯವೂ ವ್ಯಾಯಾಮ ಮಾಡಿ ಸದಾ ಹ್ಯಾಪಿಯಾಗಿರಿ.

ಟ್ರಿಪ್​ಗಳಿಗೆ ತೆರಳಿ: ಮನೆಯಿಂದ ಆಚೆಬನ್ನಿ ಪರಿಸರದಲ್ಲಿ ಹೆಚ್ಚು ಸಮಯ ಕಳೆಯಿರಿ, ಪಾರ್ಕ್, ಹೆಚ್ಚು ಸಮಯ ನೀವು ಗಿಡ, ಮರಗಳ ಜತೆ ಕಳೆಯುವುದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಜತೆಗೆ ಖಿನ್ನತೆಯಿಂದ ದೂರವಾಗುತ್ತೀರಿ ಹಾಗೂ ರಕ್ತದೊತ್ತಡವೂ ನಿಯಂತ್ರಣದಲ್ಲಿರಲಿದೆ.

ನೀವು ನೀವಾಗಿರಿ: ನೀವು ನಿಮ್ಮ ಜತೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯಿರಿ, ಸದಾ ಖುಷಿಯಿಂದಿರಿ. ಎಂದೂ ನಿಮ್ಮ ತನವನ್ನು ಬಿಟ್ಟುಕೊಡಬೇಡಿ. ಎಂದೂ ನೀವು ಒಬ್ಬಂಟಿ ಎಂದುಕೊಳ್ಳಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 am, Fri, 10 June 22

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ