AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡೆದ ತೆಂಗಿನಕಾಯಿಯನ್ನು ಕೆಡದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್

ಅಡುಗೆಗಾಗಿ ಒಡೆದ ತೆಂಗಿನ ಕಾಯಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕೆಡದಂತೆ ಕಾಪಾಡಿಕೊಳ್ಳಲು ಟಿಪ್ಸ್​ಗಳು ಇಲ್ಲಿವೆ.

ಒಡೆದ ತೆಂಗಿನಕಾಯಿಯನ್ನು ಕೆಡದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
Coconut
TV9 Web
| Updated By: ನಯನಾ ರಾಜೀವ್|

Updated on: Jul 25, 2022 | 5:02 PM

Share

ಅಡುಗೆಗಾಗಿ ಒಡೆದ ತೆಂಗಿನ ಕಾಯಿಯನ್ನು ಒಂದೇ ದಿನಕ್ಕೆ ಖಾಲಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕೆಡದಂತೆ ಕಾಪಾಡಿಕೊಳ್ಳಲು ಟಿಪ್ಸ್​ಗಳು ಇಲ್ಲಿವೆ. ಸಾಮಾನ್ಯವಾಗಿ ಇಂದು ಒಡೆದ ಕಾಯಿಯನ್ನು ನಾಳೆಗೆ ಬಳಸುತ್ತೇವೆ, ಆದರೆ ಹಬ್ಬ, ಅಥವಾ ನೆಂಟರು ಬಂದ ಸಂದರ್ಭದಲ್ಲಿ ಅನಿವಾರ್ಯವಾಗಿ ಹೆಚ್ಚು ಕಾಯಿಗಳನ್ನು ಒಡೆಯಬೇಕಾಗುತ್ತದೆ. ಆಗ ಅಡುಗೆ ಮುಗಿದ ಮೇಲೂ ಕೆಲವು ಕಾಯಿಗಳು ಬಳಕೆಯಾಗದೆ ಹಾಗೆಯೇ ಉಳಿದಿರುತ್ತದೆ. ಅದನ್ನು ಕೆಡದಂತೆ ಕಾಪಾಡುವುದು ಕೂಡ ಸವಾಲಿನ ಕೆಲಸವೇ.

ಬಿಸಿಲಿದ್ದರೆ ಒಣಗಿಸಿ: ಬಿಸಿಲಿದ್ದರೆ ಕಾಯಿಯನ್ನು ಒಣಗಿಸಿ ಮರುದಿನ ಅಡುಗೆಗೆ ಬಳಸಬಹುದು.

ಕಾಯಿ ತುರಿಯನ್ನು ಬೆಚ್ಚಗೆ ಮಾಡಿ ಇರಿಸಬಹುದು: ಕಾಯಿ ತುರಿಯನ್ನು ಫ್ರಿಜ್​ನಲ್ಲಿ ಇಡಬಹುದು, ಇಲ್ಲವಾದಲ್ಲಿ ಕಾಯಿ ತುರಿಯನ್ನು ಪಾತ್ರೆಗಾಗಿ ಒಲೆಯ ಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿಟ್ಟರೆ ನಂತರ ಅಡುಗೆಗೆ ಬಳಸಬಹುದು.

ಉಪ್ಪಿನ ಪಾತ್ರೆಯಲ್ಲಿ ಹಾಕಿಡಬಹುದು: ಒಡೆದ ಕಾಯಿಯನ್ನು ಉಪ್ಪಿನ ಪಾತ್ರೆಯಲ್ಲಿ ಇಟ್ಟರೆ ಒಂದೆರಡು ದಿನಗಳು ಕೆಡುವುದಿಲ್ಲ.

ಅರಿಶಿನ ಹಚ್ಚಿಡಿ: ಒಡೆದ ಕಾಯಿಗೆ ಸ್ವಲ್ಪ ಅರಿಶಿನವನ್ನು ಹಚ್ಚಿಡುವುದರಿಂದ ಹಾಳಾಗದಂತೆ ತಡೆಯಬಹುದಾಗಿದೆ.

ಭತ್ತದ ಹುಲ್ಲಿನೊಳಗೆ ಇಡಬಹುದು: ಭತ್ತದ ಹುಲ್ಲಿನೊಳಗೆ ಕಾಯಿಯನ್ನು ಇಡುವುದರಿಂದ ಹುಲ್ಲಿನಲ್ಲಿರುವ ಉಷ್ಣಾಂಶವು ಕಾಯಿ ಹಾಳಾಗದಂತೆ ನೋಡಿಕೊಳ್ಳುತ್ತದೆ.

ಅಂಗಡಿಯಲ್ಲಿ ತೆಂಗಿನ ಕಾಯಿ ರಕ್ಷಣೆ ಹೇಗೆ ?  ಅಂಗಡಿಗಳಲ್ಲಿ ತೆಂಗಿನಕಾಯಿಯನ್ನು  ತುಂಬಾ ಜಾಗ್ರತೆಯಲ್ಲಿ ಇಡುತ್ತಾರೆ. ಇಲ್ಲಿ ತೆಂಗಿನ ಕಾಯಿಗಳನ್ನು ನೈಸರ್ಗಿಕ ಗುಣಮಟ್ಟಕ್ಕೆ ಅನುಗುಣಕ್ಕಾಗಿ ಸರಿಯಾಗಿ ಶೇಖರಣೆ ಮಾಡುತ್ತಾರೆ. ಅಂದರೆ ತೆಂಗಿನ ಕಾಯಿಯನ್ನು ಹೆಚ್ಚು  ಬಿಸಿಯು ಅಲ್ಲದ ತಂಪು ಅಲ್ಲದ ಪ್ರದೇಶದಲ್ಲಿ ಇಡುತ್ತಾರೆ.

ಕಾಯಿಯ ಕಣ್ಣಿನ ಬಳಿ ಸುಣ್ಣವನ್ನು ಹಚ್ಚಿಡುತ್ತಾರೆ ಕಾಯಿಯ ಕಣ್ಣಿನ ಸಮೀಪ ಸುಣ್ಣವನ್ನು ಹಚ್ಚಿಡುತ್ತಾರೆ, ಇದರಿಂದ ಹಲವು ಸಮಯದವರೆಗೆ ಕಾಯಿ ಹಾಳಾಗುವುದಿಲ್ಲ.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?