Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Recipe: ಮಳೆಗಾಲಕ್ಕೆ ಹೇಳಿ ಮಾಡಿಸಿದ ಘರಂ ಕಾಳುಮೆಣಸಿನ ಸಾರು; ರೆಸಿಪಿ ಇಲ್ಲಿದೆ

ಕೇವಲ 5 ನಿಮಿಷಗಳಲ್ಲಿ ಕಡಿಮೆ ಪದಾರ್ಥಗಳೊಂದಿಗೆ ನೀವು ಈ ರುಚಿಕರ ಹಾಗೂ ಆರೋಗ್ಯಕರ ಘರಂ ಕಾಳುಮೆಣಸಿನ ಸಾರನ್ನು ತಯಾರಿಸಬಹುದು. ಪಾಕ ವಿಧಾನ ಇಲ್ಲಿದೆ.

Monsoon Recipe: ಮಳೆಗಾಲಕ್ಕೆ ಹೇಳಿ ಮಾಡಿಸಿದ ಘರಂ ಕಾಳುಮೆಣಸಿನ ಸಾರು; ರೆಸಿಪಿ ಇಲ್ಲಿದೆ
ಕಾಳುಮೆಣಸಿನ ಸಾರುImage Credit source: instagram/Bhat‘n'Bhat
Follow us
ಅಕ್ಷತಾ ವರ್ಕಾಡಿ
|

Updated on: Jul 25, 2023 | 6:08 PM

ಮಳೆಗಾಲ ಪ್ರಾರಂಭವಾಯಿತೆಂದರೆ  ಸಾಕು, ಜೊತೆಗೆ ಶೀತ, ಕೆಮ್ಮು, ನೆಗಡಿ ಮುಂತಾದ ಸಾಕಷ್ಟು ಸೋಂಕುಗಳು ಬಂದು ಬಿಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಮನೆಯಲ್ಲಿಯೇ ರುಚಿಕರ ಕಾಳುಮೆಣಸಿನ ಸಾರು ತಯಾರಿಸಿ. ಕೇವಲ 5 ನಿಮಿಷಗಳಲ್ಲಿ ಕಡಿಮೆ ಪದಾರ್ಥಗಳೊಂದಿಗೆ ನೀವು ಈ ರುಚಿಕರ ಹಾಗೂ ಆರೋಗ್ಯಕರ ಘರಂ ಕಾಳುಮೆಣಸಿನ ಸಾರನ್ನು ತಯಾರಿಸಬಹುದು. ಯಾವ ರೀತಿ ತಯಾರಿಸುವುದು ಎಂಬುದರ ಕುರಿತು ಭಟ್​​ ಆ್ಯಂಡ್​​​ ಭಟ್​​​ ಇನ್ಟ್ಸಾಗ್ರಾಮ್​​​ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಕೇವಲ 5 ನಿಮಿಷಗಳಲ್ಲಿ ಈ ಆರೋಗ್ಯಕರ ಸಾರು ತಯಾರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.

ಘರಂ ಕಾಳುಮೆಣಸಿನ ಸಾರು:

ಬೇಕಾಗುವ ಪದಾರ್ಥಗಳು:

  • ಕಾಳು ಮೆಣಸು
  • ಜೀರಿಗೆ
  • ಉಪ್ಪು
  • ಬೆಲ್ಲ
  • ಹುಳಿ
  • ಸಾಸಿವೆ
  • ಒಗ್ಗರಣೆ ಸೊಪ್ಪು(ಕರಿಬೇವು)

ಇದನ್ನೂ ಓದಿ: ಮಕ್ಕಳಿಗೆ ಮಾತ್ರವಲ್ಲ ಹಿರಿಯರ ಬಾಯಲ್ಲೂ ನೀರು ಬರಿಸುತ್ತದೆ ಈ ಲೌಕಿ ಚಿಲ್ಲಾ! ಮಾಡುವ ವಿಧಾನ ಇಲ್ಲಿದೆ

ಘರಂ ಕಾಳುಮೆಣಸಿನ ಸಾರು ಮಾಡುವ ವಿಧಾನ:

  • ಮೊದಲಿಗೆ ಕಾಳುಮೆಣಸು, ಜೀರಿಗೆಯಲ್ಲಿ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಇದಾದ ಬಳಿಕ ಇವೆರಡನ್ನು ಕುಟ್ಟಾನಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ.
  • ನಂತರ ಒಂದು ಪಾತ್ರೆಯಲ್ಲಿ ಸಾರಿಗೆ ಬೇಕಾದಷ್ಟು ನೀರು ಹಾಕಿ, ನೀರನ್ನು ಕುದಿಯಲು ಬಿಡಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಹುಳಿ, ಬೆಲ್ಲ ಸೇರಿಸಿ. ನಂತರ ಈಗಾಗಲೇ ಪುಡಿ ಮಾಡಿ ಇಟ್ಟ ಕಾಳುಮೆಣಸು, ಜೀರಿಗೆಯ ಪುಡಿಯನ್ನು ಹಾಕಿ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.
  • ಇದೀಗಾ ಘರಂ ಕಾಳುಮೆಣಸಿನ ಸಾರು ರೆಡಿಯಾಗಿದೆ. ಕೊನೆಯಲ್ಲಿ ಇದಕ್ಕೆ ಸಾಸಿವೆ, ಒಣ ಮೆಣಸು ಹಾಗೂ ಕರಿಬೇವು ಎಲೆಗಳ ಒಗ್ಗರಣೆ ಹಾಕಿ.

ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಹೇಳಿ ಮಾಡಿಸಿದ ಜೋಡಿ. ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಘರಂ ಕಾಳುಮೆಣಸಿನ ಸಾರನ್ನು ನೀವು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ