AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲೂಗಡ್ಡೆ ಕಟ್ಲೇಟ್ ಹೇಗೆ ಮಾಡ್ತಾರೆ ಗೊತ್ತಾ? ತುಂಬಾ ಸುಲಭ

ಸಾಮಾನ್ಯವಾಗಿ ಎಲ್ಲರೂ ಅಲೂಗಡ್ಡೆ ಸಾಂಬಾರ್, ಅಲೂಗಡ್ಡೆ ಪಲ್ಯ, ಅಲೂಗಡ್ಡೆ ಬೋಂಡಾ ಮಾಡಿ ತಿಂದಿದ್ದೀರಾ. ಆದ್ರೆ ಆಲೂಗಡ್ಡೆಯಿಂದ ಮಾಡಿದ ಕಟ್ಲೇಟ್ ತಿಂದರೆ ವಾರಕ್ಕೊಮ್ಮೆಯಾದರೂ ತಿನ್ನುತ್ತಿರಬೇಕು ಅಂತ ಅನಿಸದೆ ಇರದು.

ಆಲೂಗಡ್ಡೆ ಕಟ್ಲೇಟ್ ಹೇಗೆ ಮಾಡ್ತಾರೆ ಗೊತ್ತಾ? ತುಂಬಾ ಸುಲಭ
ಆಲೂಗಡ್ಡೆ ಕಟ್ಲೇಟ್
TV9 Web
| Edited By: |

Updated on:Jun 22, 2021 | 5:57 PM

Share

ಯಾವುದೇ ತರಕಾರಿ ಸಾಂಬರ್ ಮಾಡಿದ್ರೂ ಅದಕ್ಕೆ ಒಂದು ಅಥವಾ ಎರಡು ಆಲೂಗಡ್ಡೆ ಹಾಕಿದ್ರೆ ಆ ಸಾಂಬಾರಿನ ರುಚಿಯೇ ಬೇರೆ. ಮಕ್ಕಳಂತೂ ಸಾಂಬಾರಿನಲ್ಲಿ ಆಲೂಗಡ್ಡೆಯನ್ನು ಆರಿಸಿ ಆರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಅಲೂಗಡ್ಡೆ ಸಾಂಬಾರ್, ಅಲೂಗಡ್ಡೆ ಪಲ್ಯ, ಅಲೂಗಡ್ಡೆ ಬೋಂಡಾ ಮಾಡಿ ತಿಂದಿದ್ದೀರಾ. ಆದ್ರೆ ಆಲೂಗಡ್ಡೆಯಿಂದ ಮಾಡಿದ ಕಟ್ಲೇಟ್ ತಿಂದರೆ ವಾರಕ್ಕೊಮ್ಮೆಯಾದರೂ ತಿನ್ನುತ್ತಿರಬೇಕು ಅಂತ ಅನಿಸದೆ ಇರದು. ಹೊರಗೆ ಜೋರಾಗಿ ಮಳೆ ಸುರಿಯುತ್ತಿದೆ. ಚಳಿಗೆ ಬಿಸಿ ಬಿಸಿ ತಿಂಡಿ ತಿನ್ನಬೇಕು ಅಂತ ಅನಿಸುತ್ತೆ. ಹೀಗಾಗಿ ಈ ಮಳೆಗಾಲದಲ್ಲಿ ಕಾಫಿಯೊಂದಿಗೆ ಆಲೂ ಕಟ್ಲೇಟ್ ಮಾಡಿ ತಿನ್ನಿ.

ಮಾಡಲು ಬೇಕಾಗುವ ಸಾಮಾಗ್ರಿಗಳು 6 ಅಲೂಗಡ್ಡೆ 2 ಹಸಿ ಮೆಣಸಿನಕಾಯಿ ಅರ್ಧ ಚಮಚ ಖಾರದ ಪುಡಿ ಗರಂ ಮಸಾಲ ಎಣ್ಣೆ 3 ಬ್ರೆಡ್ (loaves) ಕೊತ್ತಂಬರಿ ಸೊಪ್ಪು ಚಾಟ್ ಮಸಾಲ ಉಪ್ಪು

ಮಾಡುವ ವಿಧಾನ ಮೊದಲು ಆಲೂಗಡ್ಡೆಯನ್ನು ಬೇಯಿಸಬೇಕು. ಬೆಂದ ನಂತರ ಸಿಪ್ಪೆ ತೆಗೆಯಿರಿ. ಒಂದು ಬೌಲ್ ಒಳಗೆ ಹಾಕಿ ಚೆನ್ನಾಗಿ ಪುಡಿಮಾಡಿ. ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ, ಪುಡಿ ಮಾಡಿದ ಆಲೂಗಡ್ಡೆಗೆ ಹಾಕಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಚಾಟ್ ಮಸಾಲ ಮತ್ತು ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ಬ್ರೆಡ್​ಗೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿ. ಬ್ರೆಡ್ ಮತ್ತು ಆಲೂಗಡ್ಡೆ ಮಿಶ್ರಣವನ್ನು ಒಂದೇ ಬೌಲ್​ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆಯಿಡಿ. ಎಣ್ಣೆ ಕಾದ ನಂತರ, ಸಿದ್ಧವಾಗಿರುವ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಕೈಯಿಂದ ಚಿಕ್ಕದಾಗಿ ತಟ್ಟಿ. ಬಿಲ್ಲೆಗಳನ್ನು ಕಾದ ಎಣ್ಣೆಗೆ ಹಾಕಿ. ಗೋಲ್ಡನ್ ಬ್ರೌನ್ ಬರುವವರೆಗೂ ತಿಂಡಿಯನ್ನು ಕರಿಯಿರಿ. ರೆಡಿಯಾದ ಆಲೂಗಡ್ಡೆ ಕಟ್ಲೇಟ್​ನ ಚಣ್ನಿಯೊಂದಿಗೆ ಸವಿಯಿರಿ.

ಇದನ್ನೂ ನೋಡಿ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು

(How to make Potato Cutlet in home with tasty)

Published On - 5:55 pm, Tue, 22 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ