AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Better Sleep: ಉತ್ತಮ ನಿದ್ರೆ ಪಡೆಯಲು ನೀವು ಅನುಸರಿಸಬೇಕಾದ ಆಯುರ್ವೇದ ನಿಯಮಗಳೇನು?

ಒಂದೊಮ್ಮೆ ತಕ್ಷಣ ನಿದ್ರೆ ಬಂದಿಲ್ಲವೆಂದರೆ ನಿದ್ರೆ ಬರುವ ಔಷಧಗಳ ಮೊರೆ ಹೋಗಬೇಕಿಲ್ಲ,  ನಿದ್ರಾಹೀನತೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. 

Better Sleep: ಉತ್ತಮ ನಿದ್ರೆ ಪಡೆಯಲು ನೀವು ಅನುಸರಿಸಬೇಕಾದ ಆಯುರ್ವೇದ ನಿಯಮಗಳೇನು?
Sleep
TV9 Web
| Edited By: |

Updated on: Aug 14, 2022 | 12:59 PM

Share

ಒಂದೊಮ್ಮೆ ತಕ್ಷಣ ನಿದ್ರೆ ಬಂದಿಲ್ಲವೆಂದರೆ ನಿದ್ರೆ ಬರುವ ಔಷಧಗಳ ಮೊರೆ ಹೋಗಬೇಕಿಲ್ಲ,  ನಿದ್ರಾಹೀನತೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.  ರಾತ್ರಿ ನಿದ್ರೆ ಸರಿಯಾಗಿ ಆದರೆ ಇಡೀ ದಿನವನ್ನು ನೀವು ಲವಲವಿಕೆಯಿಂದ ಕಳೆಯುತ್ತೀರಿ. ಒಂದು ವೇಳೆ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ದೀರ್ಘಕಾಲದವರೆಗೆ ಕಾಡುತ್ತಿದ್ದರೆ, ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದರ್ಥ.

ನಿದ್ರೆ ಎಲ್ಲಾ ಜೀವಿಗಳಿಗೆ ಅವಶ್ಯಕವಾಗಿದೆ. ಮಲಗುವ ಮುನ್ನ ಕೆಫೀನ್ ಅಂಶವಿರುವ ಪದಾರ್ಥಗಳ ಸೇವನೆ ಬೇಡ, ಮಲಗುವ ಮುನ್ನ ಧೂಮಪಾನ ಹಾಗೂ ಮದ್ಯಪಾನ ಬೇಡ, ಹೊಟ್ಟೆ ತುಂಬಾ ಊಟ ಬೇಡ, ನಿದ್ರೆ ಬಾರದಿದ್ದರೆ ಆಲೋಚನೆ ಮಾಡುವ ಬದಲು ಒಳ್ಳೆಯ ಸಂಗೀತವನ್ನು ಆಲಿಸಿ. ನಿದ್ರೆ ಸಮಯದಲ್ಲಿ ಕೊಠಡಿಯನ್ನು ಕತ್ತಲಾಗಿರುವಂತೆ ನೋಡಿಕೊಳ್ಳಿ, ಸಾಧ್ಯವಾದಷ್ಟು ಹಗಲು ನಿದ್ರೆ ಮಾಡುವುದನ್ನು ತಪ್ಪಿಸಿ.

ನಿಯಮ 1 ನಿಮ್ಮ ದೇಹವು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸಲು ರಾತ್ರಿ 10:00 ರಿಂದ 11:00 ಗಂಟೆಯೊಳಗೆ ಮಲಗುವುದು ಮುಖ್ಯ.

ನಿಯಮ 2 ನಿದ್ರೆಗೆಡಬೇಡಿ ಏಕೆಂದರೆ ಇದು ಕರುಳಿನ ಅಸಮತೋಲನ, ಆಲಸ್ಯ ಅಥವಾ ತಲೆನೋವುಗಳಿಗೆ ಕಾರಣವಾಗಬಹುದು.

ನಿಯಮ 3 ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಬೆಚ್ಚಗಿನ ಅಥವಾ ಕೋಣೆಯ ಉಷ್ಣಾಂಶದ ಎಳ್ಳಿನ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿ. ಇದನ್ನು “ಪದಾಭ್ಯಂಗಂ” ಎನ್ನುತ್ತಾರೆ. ಇದು ನಮ್ಮ ದೇಹವನ್ನು ಭೂಮಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.

ನಿಯಮ 4 ಮಲಗಲು ಹೋಗುವಾಗ ಯಾವಾಗಲೂ ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ, ಇದು ವೇಗವಾಗಿ ಮತ್ತು ಉತ್ತಮವಾಗಿ ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ವಾತಾವರಣದಲ್ಲಿ ನಿದ್ರಿಸಿ, ನಿಮ್ಮ ಸಿರ್ಕಾಡಿಯನ್ ರಿದಮ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಕತ್ತಲೆಯಲ್ಲಿ ಮಲಗುವುದು ಉತ್ತಮ.

ನಿಯಮ 5 ಉತ್ತಮ ರಾತ್ರಿಯ ನಿದ್ರೆಯು ಸಂತೋಷ ಮತ್ತು ಉತ್ತಮ ಶಕ್ತಿಯ ಮೂಲವಾಗಿದೆ. ನೀವು ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಿದರೆ, ನೀವು ಕಿರಿಕಿರಿ, ಚಿಂತೆ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಆದರೆ, ಇದನ್ನು ಪ್ರತಿದಿನ ಮತ್ತು ಸತತವಾಗಿ ಅಭ್ಯಾಸ ಮಾಡಬೇಕು.

ನಿಯಮ 6 ವಾರದ ನಿದ್ರೆಯ ಕೊರತೆಯನ್ನು ಹೋಗಲಾಡಿಸಲು ವಾರಾಂತ್ಯ ಸಿಗುವ ರಜೆಯ ದಿನ ಇಡೀ ದಿನ ಮಲಗಿಬಿಡಬೇಡಿ.

ಈ ಮೇಲಿನ ಲೇಖನವು ಟಿವಿ09ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌