AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mid Night Thirst: ಮಧ್ಯರಾತ್ರಿ ಏಕಾಏಕಿ ಬಾಯಾರಿಕೆಯಾಗುತ್ತಾ, ಗಂಟಲು ಒಣಗುವಿಕೆಯನ್ನು ತಪ್ಪಿಸುವುದು ಹೇಗೆ ಇಲ್ಲಿದೆ ಮಾಹಿತಿ

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ದಿನದಲ್ಲಿ 7 ರಿಂದ 8 ಗಂಟೆಗಳ ಕಾಲ ಮಲಗಬೇಕು. ನಿಮ್ಮ ನಿದ್ರೆ ಉತ್ತಮವಾಗಬೇಕೆಂದರೆ ಮಧ್ಯೆ ಮಧ್ಯೆ ಎಚ್ಚರವಾಗುವುದನ್ನು ತಪ್ಪಿಸಬೇಕು.

Mid Night Thirst: ಮಧ್ಯರಾತ್ರಿ ಏಕಾಏಕಿ ಬಾಯಾರಿಕೆಯಾಗುತ್ತಾ, ಗಂಟಲು ಒಣಗುವಿಕೆಯನ್ನು ತಪ್ಪಿಸುವುದು ಹೇಗೆ ಇಲ್ಲಿದೆ ಮಾಹಿತಿ
ಬಾಯಾರಿಕೆ
ನಯನಾ ರಾಜೀವ್
|

Updated on: Feb 02, 2023 | 11:42 AM

Share

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ದಿನದಲ್ಲಿ 7 ರಿಂದ 8 ಗಂಟೆಗಳ ಕಾಲ ಮಲಗಬೇಕು. ನಿಮ್ಮ ನಿದ್ರೆ ಉತ್ತಮವಾಗಬೇಕೆಂದರೆ ಮಧ್ಯೆ ಮಧ್ಯೆ ಎಚ್ಚರವಾಗುವುದನ್ನು ತಪ್ಪಿಸಬೇಕು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಾಯಾರಿಕೆಯ ಭಾವನೆ ಉಂಟಾಗುತ್ತದೆ, ಇದು ನಿದ್ರೆಗೆ ಭಂಗ ತರುತ್ತದೆ. ನೀವು ಬೆವರುತ್ತೀರಿ, ನಿಮ್ಮ ಗಂಟಲು ಒಣಗಲು ಶುರುವಾಗುತ್ತದೆ.

ದಿನವಿಡೀ ಕಡಿಮೆ ನೀರು ಕುಡಿದಿರಬಹುದು ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಬೇಕು ಎಂದು ಹೇಳುತ್ತಾರೆ. ನೀವು ಹಗಲಿನಲ್ಲಿ ಕಡಿಮೆ ನೀರನ್ನು ಸೇವಿಸಿದರೆ, ರಾತ್ರಿಯಲ್ಲಿ ದೇಹವು ನೀರಿನ ಕೊರತೆಯಿದೆ ಎಂದು ನಮಗೆ ಸಂಕೇತಿಸುತ್ತದೆ. ಅದಕ್ಕಾಗಿ ನೀವು ನೀರು ಕುಡಿಯುವುದನ್ನು ಹೆಚ್ಚಿಸಬೇಕು.

ಮತ್ತಷ್ಟು ಓದಿ: ನಿದ್ರೆ ಬರುತ್ತಿಲ್ಲವೇ? ಆಯಾಸದ ಅನುಭವವೇ ನಿಮ್ಮ ದೇಹದಲ್ಲಿ ಚೈತನ್ಯ ತುಂಬುವ ಕೆಲವು ಸಲಹೆಗಳು ಇಲ್ಲಿವೆ

ಚಹಾ ಮತ್ತು ಕಾಫಿ ಸೇವನೆ ಭಾರತದಲ್ಲಿ ಟೀ ಮತ್ತು ಕಾಫಿ ಪ್ರಿಯರಿಗೆ ಕೊರತೆಯಿಲ್ಲ, ಆದರೆ ಇದು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಈ ಪಾನೀಯಗಳಲ್ಲಿ ಕೆಫೀನ್ ಪ್ರಮಾಣವು ಅಧಿಕವಾಗಿರುವುದರಿಂದ, ದೇಹದಲ್ಲಿನ ನೀರಿನ ಅಂಶವು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದು ರಾತ್ರಿಯಲ್ಲಿ ತೊಂದರೆಗೊಳಗಾಗುತ್ತದೆ. ಕೆಫೀನ್‌ನಿಂದಾಗಿ ಮೂತ್ರ ಬಂದಂತಾಗುತ್ತದೆ, ಇದು ದೇಹದಲ್ಲಿನ ನೀರನ್ನು ಕಡಿಮೆ ಮಾಡುತ್ತದೆ.

ಹೆಚ್ಚು ಖಾರ ಪದಾರ್ಥಗಳನ್ನು ತಿನ್ನುವುದು ಆರೋಗ್ಯಕರವಾಗಿರಲು, ದಿನವಿಡೀ ಕೇವಲ 5 ಗ್ರಾಂ ಉಪ್ಪನ್ನು ತಿನ್ನಬೇಕು. ನೀವು ಇದಕ್ಕಿಂತ ಹೆಚ್ಚು ಸೇವಿಸಿದರೆ, ಅದು ಖಂಡಿತವಾಗಿಯೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉಪ್ಪು ಸೋಡಿಯಂ ಅನ್ನು ಹೊಂದಿರುತ್ತದೆ, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಹಾಗಾಗಿ ರಾತ್ರಿ ಬಾಯಾರಿಕೆ ಹೆಚ್ಚುತ್ತದೆ.

ಗಂಟಲು ಒಣಗದಂತೆ ರಕ್ಷಿಸುವುದು ಹೇಗೆ? ರಾತ್ರಿ ಪದೇ ಪದೇ ನಿಮ್ಮ ಗಂಟಲು ಒಣಗದಂತೆ ತಡೆಯಬೇಕು ಎಂದು ನೀವು ಬಯಸಿದರೆ ಹೀಗೆ ಮಾಡಿ.

ದಿನವಿಡೀ ಸಾಕಷ್ಟು ನೀರನ್ನು ಕುಡಿಯಬೇಕು – ಚಹಾ-ಕಾಫಿಯನ್ನು ಕುಡಿಯಬೇಡಿ ಅಥವಾ ಅದರ ಸೇವನೆಯನ್ನು ಮಿತಿಗೊಳಿಸಿ – ಸೋಡಾ ಪಾನೀಯಗಳನ್ನು ಕಡಿಮೆ ಮಾಡಿ -ನಿಂಬೆ ನೀರು, ಮಜ್ಜಿಗೆ, ಹಣ್ಣಿನ ರಸದಂತಹ ದ್ರವ ಆಹಾರವನ್ನು ತೆಗೆದುಕೊಳ್ಳಿ – ಫ್ರೆಂಚ್ ಫ್ರೈಸ್ ಮತ್ತು ಚಿಪ್ಸ್‌ನಂತಹ ಉಪ್ಪು ಪದಾರ್ಥಗಳನ್ನು ಸಹ ಸೇವಿಸಬೇಡಿ. ಇವುಗಳೆಲ್ಲವೂ ಬಾಯಾರಿಕೆಯನ್ನು ಹೆಚ್ಚಿಸುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!